<p><strong>ನವದೆಹಲಿ</strong>: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗ ಮತ್ತು ಚುನಾವಣಾ ಆಯೋಗದ ಜತೆ ಬುಧವಾರ ನಡೆದ ಸಭೆಯು ತೀವ್ರ ವಾಗ್ವಾದದೊಂದಿಗೆ ಕೊನೆಗೊಂಡಿತು. </p><p>‘ಮುಖ್ಯ ಚುನಾವಣಾ ಆಯುಕ್ತರು, ಸಭೆಯಿಂದ ತೊಲಗಿ ಎಂದು ಹೇಳಿ ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು’ ಎಂದು ಟಿಎಂಸಿ ಆರೋಪಿಸಿದ್ದರೆ, ‘ಟಿಎಂಸಿ ನಾಯಕರು ಏರಿದ ಧ್ವನಿಯಲ್ಲಿ ಕೂಗಾಡಿದರು’ ಎಂದು ಚುನಾವಣಾ ಆಯೋಗ ದೂರಿದೆ.</p><p>ಟಿಎಂಸಿ ನಾಯಕ, ರಾಜ್ಯಸಭಾ ಸದಸ್ಯ ಡೆರಿಕ್ ಓಬ್ರಯಾನ್, ಉಪನಾಯಕಿ ಸಾಗರಿಕಾ ಘೋಷ್, ಸಂಸದರಾದ ಸಾಕೇತ್ ಗೋಖಲೆ, ಮೇನಕಾ ಗುರುಸ್ವಾಮಿ ಅವರನ್ನು ಒಳಗೊಂಡ ನಿಯೋಗವು ಆಯೋಗದ ಪೂರ್ಣ ಪೀಠವನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. </p><p>‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರೆದ ಒಂಬತ್ತು ಪತ್ರಗಳನ್ನು ಸಭೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದೇವೆ. ಆದರೆ ಅದಕ್ಕೆ ಸ್ವೀಕೃತಿ ನೀಡಲಿಲ್ಲ’ ಎಂದು ಸಭೆಯ ಬಳಿಕ ಓಬ್ರಯಾನ್ ಅವರು ಸುದ್ದಿಗಾರರಿಗೆ ತಿಳಿಸಿದರು. </p><p><strong>‘ಚುನಾವಣಾ ಅಧಿಕಾರಿಗಳಿಗೆ ಬಿಜೆಪಿ ಸಖ್ಯ’</strong></p><p>‘ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೆಲ ಚುನಾವಣಾ ಅಧಿಕಾರಿಗಳು ಬಿಜೆಪಿ ಜತೆ ಸಖ್ಯ ಹೊಂದಿದ್ದಾರೆ. ಆ ಕುರಿತ ಆರು ನಿದರ್ಶನಗಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ. ಅಲ್ಲದೆ ಆ ಅಧಿಕಾರಿಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿದೆವು’ ಎಂದು ಅವರು ಮಾಹಿತಿ ನೀಡಿದರು. </p><p>ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯು (ಸಿಇಸಿ), ‘ನಂದಿಗ್ರಾಮದ ಸ್ಥಳೀಯ ಬಿಜೆಪಿ ನಾಯಕರ ಜತೆಗಿನ ಸಂಬಂಧದ ಕುರಿತ ಮಾಹಿತಿಯನ್ನೂ ಆಯೋಗಕ್ಕೆ ತಿಳಿಸಿದ್ದೇವೆ’ ಎಂದರು. </p><p>‘ಈ ರೀತಿಯ ಕಳಂಕಿತ ಅಧಿಕಾರಿ ಗಳಿರುವಾಗ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹೇಗೆ ನಡೆಸುತ್ತೀರಿ ಎಂದು ನಾವು ಸಿಇಸಿ ಅನ್ನು ಪ್ರಶ್ನಿಸಿದೆವು’ ಎಂದು ಡೆರಿಕ್ ಹೇಳಿದರು.</p>.<p><strong>ಮತ್ತೆ ನ್ಯಾಯಾಲಯದ ಮೊರೆ: ಮಮತಾ</strong></p><p>ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವೇಳೆ ಪಟ್ಟಿಯಿಂದ ಅಳಿಸಿರುವ ಮತದಾರರ ಪರವಾಗಿ ಮತ್ತೆ ನ್ಯಾಯಾಲಯದ ಮೊರೆಹೋಗುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತಿಳಿಸಿದರು.</p><p>ಎಸ್ಐಆರ್ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿರುವ ಕುರಿತು ಆಯೋಗ ಮಾಹಿತಿ ನೀಡಿದ ಬೆನ್ನಲ್ಲೇ ಮಮತಾ ಅವರಿಂದ ಈ ಹೇಳಿಕೆ ಬಂದಿದೆ. </p><p>ಬಿಜೆಪಿ ಮತ್ತು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಅವರು, ‘ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸುವ ಮೂಲಕ ಟಿಎಂಸಿಯನ್ನು ಸೋಲಿಸಲು ಸಾಧ್ಯವಿಲ್ಲ. ಆಯೋಗದ ಈ ಕ್ರಮವನ್ನು ಪ್ರಶ್ನಿಸಿ ಮತ್ತೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಹೇಳಿದರು</p>.<p><strong>ಕೂಚ್ ಬಿಹಾರ್: ವೀಕ್ಷಕರ ವಿರುದ್ಧ ಕ್ರಮ</strong></p><p>ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ದಕ್ಷಿಣ ಕ್ಷೇತ್ರದ ವೀಕ್ಷಕ ಅನುರಾಗ್ ಯಾದವ್ ಅವರನ್ನು ಚುನಾವಣಾ ಆಯೋಗ ಬುಧವಾರ ವೀಕ್ಷಕ ಹುದ್ದೆಯಿಂದ ತೆರವುಗೊಳಿಸಿದೆ. </p><p>ಅನುರಾಗ್ ಅವರಿಗೆ ಕ್ಷೇತ್ರದ ಮತಗಟ್ಟೆಗಳ ಸಂಖ್ಯೆಯ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂಬುದು ಕಂಡುಬಂದ ಬಳಿಕ ಆಯೋಗ ಈ ಕುರಿತು ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p><p>‘ಕ್ಷೇತ್ರದಲ್ಲಿ ಎಷ್ಟು ಮತಗಟ್ಟೆಗಳಿವೆ ಎಂದು ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಕೇಳಿದಾಗ, ಅನುರಾಗ್ ಅವರು ಗೊಂದಲಕ್ಕೆ ಒಳಗಾದರು. ಮಾಹಿತಿ ನೀಡಲು ಕೆಲ ನಿಮಿಷ ತೆಗೆದುಕೊಂಡರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಿಇಸಿ, ಆ ವೀಕ್ಷಕರನ್ನು ಹುದ್ದೆಯಿಂದ ತೆಗೆಯುವಂತೆ ನಿರ್ದೇಶಿಸಿದರು’ ಎಂದು ಮೂಲಗಳು ತಿಳಿಸಿವೆ.</p>.ಮತದಾರರ ಪಟ್ಟಿಯಿಂದ ಹೆಸರು ಅಳಿಸಿದನ್ನು ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ: ಮಮತಾ.ಎಸ್ಐಆರ್: ಮತುವಾ, ಅಲ್ಪಸಂಖ್ಯಾತರ ಹೆಸರು ಅಳಸಿ ಹಾಕಿದ ಇಸಿ–ಮಮತಾ ಬ್ಯಾನರ್ಜಿ ಕಿಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗ ಮತ್ತು ಚುನಾವಣಾ ಆಯೋಗದ ಜತೆ ಬುಧವಾರ ನಡೆದ ಸಭೆಯು ತೀವ್ರ ವಾಗ್ವಾದದೊಂದಿಗೆ ಕೊನೆಗೊಂಡಿತು. </p><p>‘ಮುಖ್ಯ ಚುನಾವಣಾ ಆಯುಕ್ತರು, ಸಭೆಯಿಂದ ತೊಲಗಿ ಎಂದು ಹೇಳಿ ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು’ ಎಂದು ಟಿಎಂಸಿ ಆರೋಪಿಸಿದ್ದರೆ, ‘ಟಿಎಂಸಿ ನಾಯಕರು ಏರಿದ ಧ್ವನಿಯಲ್ಲಿ ಕೂಗಾಡಿದರು’ ಎಂದು ಚುನಾವಣಾ ಆಯೋಗ ದೂರಿದೆ.</p><p>ಟಿಎಂಸಿ ನಾಯಕ, ರಾಜ್ಯಸಭಾ ಸದಸ್ಯ ಡೆರಿಕ್ ಓಬ್ರಯಾನ್, ಉಪನಾಯಕಿ ಸಾಗರಿಕಾ ಘೋಷ್, ಸಂಸದರಾದ ಸಾಕೇತ್ ಗೋಖಲೆ, ಮೇನಕಾ ಗುರುಸ್ವಾಮಿ ಅವರನ್ನು ಒಳಗೊಂಡ ನಿಯೋಗವು ಆಯೋಗದ ಪೂರ್ಣ ಪೀಠವನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. </p><p>‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರೆದ ಒಂಬತ್ತು ಪತ್ರಗಳನ್ನು ಸಭೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದೇವೆ. ಆದರೆ ಅದಕ್ಕೆ ಸ್ವೀಕೃತಿ ನೀಡಲಿಲ್ಲ’ ಎಂದು ಸಭೆಯ ಬಳಿಕ ಓಬ್ರಯಾನ್ ಅವರು ಸುದ್ದಿಗಾರರಿಗೆ ತಿಳಿಸಿದರು. </p><p><strong>‘ಚುನಾವಣಾ ಅಧಿಕಾರಿಗಳಿಗೆ ಬಿಜೆಪಿ ಸಖ್ಯ’</strong></p><p>‘ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೆಲ ಚುನಾವಣಾ ಅಧಿಕಾರಿಗಳು ಬಿಜೆಪಿ ಜತೆ ಸಖ್ಯ ಹೊಂದಿದ್ದಾರೆ. ಆ ಕುರಿತ ಆರು ನಿದರ್ಶನಗಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ. ಅಲ್ಲದೆ ಆ ಅಧಿಕಾರಿಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿದೆವು’ ಎಂದು ಅವರು ಮಾಹಿತಿ ನೀಡಿದರು. </p><p>ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯು (ಸಿಇಸಿ), ‘ನಂದಿಗ್ರಾಮದ ಸ್ಥಳೀಯ ಬಿಜೆಪಿ ನಾಯಕರ ಜತೆಗಿನ ಸಂಬಂಧದ ಕುರಿತ ಮಾಹಿತಿಯನ್ನೂ ಆಯೋಗಕ್ಕೆ ತಿಳಿಸಿದ್ದೇವೆ’ ಎಂದರು. </p><p>‘ಈ ರೀತಿಯ ಕಳಂಕಿತ ಅಧಿಕಾರಿ ಗಳಿರುವಾಗ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹೇಗೆ ನಡೆಸುತ್ತೀರಿ ಎಂದು ನಾವು ಸಿಇಸಿ ಅನ್ನು ಪ್ರಶ್ನಿಸಿದೆವು’ ಎಂದು ಡೆರಿಕ್ ಹೇಳಿದರು.</p>.<p><strong>ಮತ್ತೆ ನ್ಯಾಯಾಲಯದ ಮೊರೆ: ಮಮತಾ</strong></p><p>ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವೇಳೆ ಪಟ್ಟಿಯಿಂದ ಅಳಿಸಿರುವ ಮತದಾರರ ಪರವಾಗಿ ಮತ್ತೆ ನ್ಯಾಯಾಲಯದ ಮೊರೆಹೋಗುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತಿಳಿಸಿದರು.</p><p>ಎಸ್ಐಆರ್ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿರುವ ಕುರಿತು ಆಯೋಗ ಮಾಹಿತಿ ನೀಡಿದ ಬೆನ್ನಲ್ಲೇ ಮಮತಾ ಅವರಿಂದ ಈ ಹೇಳಿಕೆ ಬಂದಿದೆ. </p><p>ಬಿಜೆಪಿ ಮತ್ತು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಅವರು, ‘ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸುವ ಮೂಲಕ ಟಿಎಂಸಿಯನ್ನು ಸೋಲಿಸಲು ಸಾಧ್ಯವಿಲ್ಲ. ಆಯೋಗದ ಈ ಕ್ರಮವನ್ನು ಪ್ರಶ್ನಿಸಿ ಮತ್ತೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಹೇಳಿದರು</p>.<p><strong>ಕೂಚ್ ಬಿಹಾರ್: ವೀಕ್ಷಕರ ವಿರುದ್ಧ ಕ್ರಮ</strong></p><p>ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ದಕ್ಷಿಣ ಕ್ಷೇತ್ರದ ವೀಕ್ಷಕ ಅನುರಾಗ್ ಯಾದವ್ ಅವರನ್ನು ಚುನಾವಣಾ ಆಯೋಗ ಬುಧವಾರ ವೀಕ್ಷಕ ಹುದ್ದೆಯಿಂದ ತೆರವುಗೊಳಿಸಿದೆ. </p><p>ಅನುರಾಗ್ ಅವರಿಗೆ ಕ್ಷೇತ್ರದ ಮತಗಟ್ಟೆಗಳ ಸಂಖ್ಯೆಯ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂಬುದು ಕಂಡುಬಂದ ಬಳಿಕ ಆಯೋಗ ಈ ಕುರಿತು ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p><p>‘ಕ್ಷೇತ್ರದಲ್ಲಿ ಎಷ್ಟು ಮತಗಟ್ಟೆಗಳಿವೆ ಎಂದು ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಕೇಳಿದಾಗ, ಅನುರಾಗ್ ಅವರು ಗೊಂದಲಕ್ಕೆ ಒಳಗಾದರು. ಮಾಹಿತಿ ನೀಡಲು ಕೆಲ ನಿಮಿಷ ತೆಗೆದುಕೊಂಡರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಿಇಸಿ, ಆ ವೀಕ್ಷಕರನ್ನು ಹುದ್ದೆಯಿಂದ ತೆಗೆಯುವಂತೆ ನಿರ್ದೇಶಿಸಿದರು’ ಎಂದು ಮೂಲಗಳು ತಿಳಿಸಿವೆ.</p>.ಮತದಾರರ ಪಟ್ಟಿಯಿಂದ ಹೆಸರು ಅಳಿಸಿದನ್ನು ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ: ಮಮತಾ.ಎಸ್ಐಆರ್: ಮತುವಾ, ಅಲ್ಪಸಂಖ್ಯಾತರ ಹೆಸರು ಅಳಸಿ ಹಾಕಿದ ಇಸಿ–ಮಮತಾ ಬ್ಯಾನರ್ಜಿ ಕಿಡಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>