<p><strong>ನವದೆಹಲಿ :</strong> ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಜೈಲಿನಲ್ಲಿರುವ ಬಾರಾಮುಲ್ಲಾದ ಸಂಸದ ಶೇಖ್ ಅಬ್ದುಲ್ ರಶೀದ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ನೀಡಿದೆ. </p>.<p>ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಮಧು ಜೈನ್ ಅವರ ಪೀಠವು ರಶೀದ್ ಅವರ ತಂದೆಯ ಅಂತ್ಯಕ್ರಿಯೆಗಾಗಿ ಜೂನ್ 2ರವರೆಗೆ ಜಾಮೀನು ನೀಡಿದೆ.</p>.<p>ಜಾಮೀನು ಅವಧಿಯಲ್ಲಿ, ರಶೀದ್ ಅವರೊಂದಿಗೆ ನಾಗರಿಕ ದಿರಿಸಿನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಇರುತ್ತಾರೆ. ಅವರು ತಿಹಾರ್ ಜೈಲಿನಿಂದ ಹೊರಟು ಶ್ರೀನಗರದಿಂದ ಹಿಂದಿರುಗುವವರೆಗೆ ಅವರೊಂದಿಗೆ ಇರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.</p>.<p>ರಶೀದ್ ಅವರು ಸ್ಮಶಾನ ಅಥವಾ ಇತರ ಯಾವುದೇ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಲು ಅನುಮತಿ ಇದೆ. ಆದರೆ, ಶ್ರೀನಗರ ಮತ್ತು ಲ್ಯಾಂಗೇಟ್ನಲ್ಲಿರುವ ಅವರ ನಿವಾಸದಿಂದ ಬೇರೆಡೆಗೆ ಹೋಗುವಂತಿಲ್ಲ ಎಂದು ಪೀಠ ಆದೇಶಿಸಿದೆ.</p>.<p>ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಂದೆ ಭಾನುವಾರ ಮತ್ತು ಸೋಮವಾರ ಮಧ್ಯರಾತ್ರಿ ನಿಧನರಾದರು ಎಂಬ ಆಧಾರದ ಮೇಲೆ ರಶೀದ್ ಅವರು ಮಧ್ಯಂತರ ಜಾಮೀನು ಕೋರಿದ್ದರು.</p>.<p>ಏಪ್ರಿಲ್ 28ರಂದು ಶ್ರೀನಗರದಲ್ಲಿರುವ ತನ್ನ ಅನಾರೋಗ್ಯಪೀಡಿತ ತಂದೆಯನ್ನು ಭೇಟಿ ಮಾಡಲು ನ್ಯಾಯಾಲಯವು ಅವರಿಗೆ ಒಂದು ವಾರದ ಮಧ್ಯಂತರ ಜಾಮೀನು ನೀಡಿತ್ತು. ನಂತರ ರಶೀದ್ ತಮ್ಮ ತಂದೆಯನ್ನು ಚಿಕಿತ್ಸೆಗಾಗಿ ಇಲ್ಲಿನ ಏಮ್ಸ್ಗೆ ಸ್ಥಳಾಂತರಿಸಿದ ನಂತರ ಈ ಅವಧಿಯನ್ನು ಮೇ 10ರವರೆಗೆ ವಿಸ್ತರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ :</strong> ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಜೈಲಿನಲ್ಲಿರುವ ಬಾರಾಮುಲ್ಲಾದ ಸಂಸದ ಶೇಖ್ ಅಬ್ದುಲ್ ರಶೀದ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ನೀಡಿದೆ. </p>.<p>ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಮಧು ಜೈನ್ ಅವರ ಪೀಠವು ರಶೀದ್ ಅವರ ತಂದೆಯ ಅಂತ್ಯಕ್ರಿಯೆಗಾಗಿ ಜೂನ್ 2ರವರೆಗೆ ಜಾಮೀನು ನೀಡಿದೆ.</p>.<p>ಜಾಮೀನು ಅವಧಿಯಲ್ಲಿ, ರಶೀದ್ ಅವರೊಂದಿಗೆ ನಾಗರಿಕ ದಿರಿಸಿನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಇರುತ್ತಾರೆ. ಅವರು ತಿಹಾರ್ ಜೈಲಿನಿಂದ ಹೊರಟು ಶ್ರೀನಗರದಿಂದ ಹಿಂದಿರುಗುವವರೆಗೆ ಅವರೊಂದಿಗೆ ಇರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.</p>.<p>ರಶೀದ್ ಅವರು ಸ್ಮಶಾನ ಅಥವಾ ಇತರ ಯಾವುದೇ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಲು ಅನುಮತಿ ಇದೆ. ಆದರೆ, ಶ್ರೀನಗರ ಮತ್ತು ಲ್ಯಾಂಗೇಟ್ನಲ್ಲಿರುವ ಅವರ ನಿವಾಸದಿಂದ ಬೇರೆಡೆಗೆ ಹೋಗುವಂತಿಲ್ಲ ಎಂದು ಪೀಠ ಆದೇಶಿಸಿದೆ.</p>.<p>ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಂದೆ ಭಾನುವಾರ ಮತ್ತು ಸೋಮವಾರ ಮಧ್ಯರಾತ್ರಿ ನಿಧನರಾದರು ಎಂಬ ಆಧಾರದ ಮೇಲೆ ರಶೀದ್ ಅವರು ಮಧ್ಯಂತರ ಜಾಮೀನು ಕೋರಿದ್ದರು.</p>.<p>ಏಪ್ರಿಲ್ 28ರಂದು ಶ್ರೀನಗರದಲ್ಲಿರುವ ತನ್ನ ಅನಾರೋಗ್ಯಪೀಡಿತ ತಂದೆಯನ್ನು ಭೇಟಿ ಮಾಡಲು ನ್ಯಾಯಾಲಯವು ಅವರಿಗೆ ಒಂದು ವಾರದ ಮಧ್ಯಂತರ ಜಾಮೀನು ನೀಡಿತ್ತು. ನಂತರ ರಶೀದ್ ತಮ್ಮ ತಂದೆಯನ್ನು ಚಿಕಿತ್ಸೆಗಾಗಿ ಇಲ್ಲಿನ ಏಮ್ಸ್ಗೆ ಸ್ಥಳಾಂತರಿಸಿದ ನಂತರ ಈ ಅವಧಿಯನ್ನು ಮೇ 10ರವರೆಗೆ ವಿಸ್ತರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>