ಶನಿವಾರ, 16 ಮೇ 2026
×
ADVERTISEMENT

ಬಂಧನ ಆದೇಶ ದಿಢೀರ್‌ ರದ್ದು: ಪರಿಸರ ಹೋರಾಟಗಾರ ಸೊನಂ ವಾಂಗ್ಚೂಕ್ ಬಿಡುಗಡೆ

Published : 14 ಮಾರ್ಚ್ 2026, 15:47 IST
Last Updated : 14 ಮಾರ್ಚ್ 2026, 16:28 IST
ADVERTISEMENT
ಫಾಲೋ ಮಾಡಿ
Comments
ಅದೃಷ್ಟವಶಾತ್ ಸೊನಂ ಅವರಿಗೆ ತಮ್ಮ ಹಕ್ಕು ಸಿಕ್ಕಿದೆ. ಆದರೆ ಯುಎಪಿಎ ಅಡಿಯಲ್ಲಿ ಇನ್ನೂ ಅನೇಕರು ವಿಚಾರಣೆಯಿಲ್ಲದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ಮೆಹಬೂಬಾ ಮುಫ್ತಿ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ
ಚಳವಳಿಗೆ ಅವಕಾಶವಿಲ್ಲ: ಲಡಾಖ್ ಲೆಫ್ಟಿನೆಂಟ್ ಗವರ್ನರ್
ಸೊನಂ ಅವರ ಬಂಧನದ ರದ್ದತಿಯನ್ನು ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಶನಿವಾರ ಸ್ವಾಗತಿಸಿದ್ದು ಈ ನಿರ್ಧಾರವು ಒಂದು ಸಕಾರಾತ್ಮಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ‘ಆದರೆ ಪ್ರದೇಶದಲ್ಲಿ ಚಳವಳಿ ಮತ್ತು ಹಿಂಸಾಚಾರಕ್ಕೆ ಅವಕಾಶ ಇಲ್ಲ’ ಎಂದು ಅವರು ಹೇಳಿದ್ದು ‘ಜನರ ಆಕಾಂಕ್ಷೆ ಮತ್ತು ಕಳವಳವನ್ನು ಸಂವಾದದ ಮೂಲಕ ಪರಿಹರಿಸಲಾಗುವುದು’ ಎಂದು ತಿಳಿಸಿದ್ದಾರೆ.
ಬಿಡುಗಡೆಗೆ ಒತ್ತಾಯಿಸಿದ್ದ ಎಲ್‌ಎಬಿ ಕೆಡಿಎ
ಫೆಬ್ರುವರಿ 4ರಂದು ನಡೆದ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಸಂಘಟನೆಗಳು ಸೊನಂ ಅವರ ಬಿಡುಗಡೆಗಾಗಿ ಒತ್ತಾಯಿಸಿದ್ದವು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿತ್ತು. ಈ ಸಂಘಟನೆಗಳು ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ ಆರನೇ ಪರಿಚ್ಛೇದದ ಅಡಿ ಅದಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಮುನ್ನಡೆಸುತ್ತಿವೆ. ಅಲ್ಲದೆ ಗೃಹ ಸಚಿವಾಲಯದೊಂದಿಗೆ ಉನ್ನತ ಮಟ್ಟದ ಮಾತುಕತೆಗಳಲ್ಲಿ ತೊಡಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT