<p><strong>ಬುಡೌನ್(ಉತ್ತರ ಪ್ರದೇಶ):</strong> ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ರೈತರೊಬ್ಬರಿಗೆ ₹14.66 ಕೋಟಿಯ ತೆರಿಗೆ ನೋಟಿಸ್ ಬಂದಿದ್ದು, ದೆಹಲಿಯ ಕಂಪನಿಯೊಂದು ರೈತನ ಹೆಸರು ಮತ್ತು ಗುರುತನ್ನು ದುರ್ಬಳಕೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.</p><p>ರೈತನ ದೂರನ್ನು ಆಧರಿಸಿ ತನಿಖೆಗಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಹಣಕಾಸು) ಮತ್ತು ಉಪ ಆಯುಕ್ತರನ್ನು(ಜಿಎಸ್ಟಿ) ಒಳಗೊಂಡ ಇಬ್ಬರು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ಬುಡೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವನೀಶ್ ರೈ ಶನಿವಾರ ತಿಳಿಸಿದ್ದಾರೆ.</p><p>ರೈತನ ಹೆಸರಿನಲ್ಲಿ ದೆಹಲಿಯ ನರೈನಾ ಕೈಗಾರಿಕಾ ಪ್ರದೇಶದಲ್ಲಿ ರಾಮ್ ಸ್ಟೋರ್ ಎಂಬ ಕಂಪನಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಂಪನಿಯು ₹1.02 ಕೋಟಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ನೋಟಿಸ್ ನನಗೆ ಬಂದಿದೆ ಎಂದು ರೈತ ಭೋಲಾ ಸಿಂಗ್ ಹೇಳಿದ್ದಾರೆ.</p><p>ಈ ಮಧ್ಯೆ, ಜಿಎಸ್ಟಿ ಕಚೇರಿಯು ₹13.63 ಕೋಟಿಗಳ ಸರಕು ಮತ್ತು ಸೇವಾ ತೆರಿಗೆ ಉಲ್ಲೇಖಿಸಿ ನೋಟಿಸ್ ನೀಡಿದೆ ಎಂದೂ ಅವರು ತಿಳಿಸಿದ್ದಾರೆ.</p><p>ವಜೀರ್ಗಂಜ್ ಪ್ರದೇಶದ ಖುರ್ರಾಮ್ಪುರ ಭಮೋರಿಯ ನಿವಾಸಿ ಸಿಂಗ್, ನಾನು ಎಂದೂ ದೆಹಲಿಗೆ ಹೋಗಿಲ್ಲ. ದೆಹಲಿಯಲ್ಲಿ ಯಾವುದೇ ಕಂಪನಿ ಆರಂಭಿಸಿಲ್ಲ ಎಂದಿದ್ದಾರೆ.</p><p>ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ಧಾರೆ. ಜಿಎಸ್ಟಿ ಅಧಿಕಾರಿಗಳ ತನಿಖೆಯಲ್ಲಿ ಕಂಪನಿಯು ರೈತನ ಆಧಾರ್ ಮತ್ತು ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬುಡೌನ್(ಉತ್ತರ ಪ್ರದೇಶ):</strong> ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ರೈತರೊಬ್ಬರಿಗೆ ₹14.66 ಕೋಟಿಯ ತೆರಿಗೆ ನೋಟಿಸ್ ಬಂದಿದ್ದು, ದೆಹಲಿಯ ಕಂಪನಿಯೊಂದು ರೈತನ ಹೆಸರು ಮತ್ತು ಗುರುತನ್ನು ದುರ್ಬಳಕೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.</p><p>ರೈತನ ದೂರನ್ನು ಆಧರಿಸಿ ತನಿಖೆಗಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಹಣಕಾಸು) ಮತ್ತು ಉಪ ಆಯುಕ್ತರನ್ನು(ಜಿಎಸ್ಟಿ) ಒಳಗೊಂಡ ಇಬ್ಬರು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ಬುಡೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವನೀಶ್ ರೈ ಶನಿವಾರ ತಿಳಿಸಿದ್ದಾರೆ.</p><p>ರೈತನ ಹೆಸರಿನಲ್ಲಿ ದೆಹಲಿಯ ನರೈನಾ ಕೈಗಾರಿಕಾ ಪ್ರದೇಶದಲ್ಲಿ ರಾಮ್ ಸ್ಟೋರ್ ಎಂಬ ಕಂಪನಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಂಪನಿಯು ₹1.02 ಕೋಟಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ನೋಟಿಸ್ ನನಗೆ ಬಂದಿದೆ ಎಂದು ರೈತ ಭೋಲಾ ಸಿಂಗ್ ಹೇಳಿದ್ದಾರೆ.</p><p>ಈ ಮಧ್ಯೆ, ಜಿಎಸ್ಟಿ ಕಚೇರಿಯು ₹13.63 ಕೋಟಿಗಳ ಸರಕು ಮತ್ತು ಸೇವಾ ತೆರಿಗೆ ಉಲ್ಲೇಖಿಸಿ ನೋಟಿಸ್ ನೀಡಿದೆ ಎಂದೂ ಅವರು ತಿಳಿಸಿದ್ದಾರೆ.</p><p>ವಜೀರ್ಗಂಜ್ ಪ್ರದೇಶದ ಖುರ್ರಾಮ್ಪುರ ಭಮೋರಿಯ ನಿವಾಸಿ ಸಿಂಗ್, ನಾನು ಎಂದೂ ದೆಹಲಿಗೆ ಹೋಗಿಲ್ಲ. ದೆಹಲಿಯಲ್ಲಿ ಯಾವುದೇ ಕಂಪನಿ ಆರಂಭಿಸಿಲ್ಲ ಎಂದಿದ್ದಾರೆ.</p><p>ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ಧಾರೆ. ಜಿಎಸ್ಟಿ ಅಧಿಕಾರಿಗಳ ತನಿಖೆಯಲ್ಲಿ ಕಂಪನಿಯು ರೈತನ ಆಧಾರ್ ಮತ್ತು ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>