<p><strong>ನವದೆಹಲಿ:</strong> ‘ಪಲ್ಲಾವು ದೇಶದ ಧ್ವಜ ಹೊಂದಿದ ‘ಎಂಟಿ ಯಿ ಛೆಂಗ್–6’ ವಾಣಿಜ್ಯ ಹಡಗಿನ ಎಂಜಿನ್ನಲ್ಲಿ ಸೋಮವಾರ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ನೆರವಿಗಾಗಿ ಭಾರತೀಯ ನೌಕಾಪಡೆಯ ಹಡಗನ್ನು ನಿಯೋಜಿಸಲಾಗಿದೆ’ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.</p>.<p>ಗುಜರಾತ್ನ ಕಾಂಡ್ಲಾ ಬಂದರಿನ ಮುಖಾಂತರ ಒಮನ್ನ ಶಿನಾಸ್ನತ್ತ ತೆರಳುತ್ತಿದ್ದ ಹಡಗಿನಲ್ಲಿ ಭಾರತೀಯ ಮೂಲದ 14 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. </p>.<p class="title">‘ಭಾನುವಾರ ರಾತ್ರಿ ವೇಳೆ ಹಡಗಿನಿಂದ ನೆರವು ಯಾಚಿಸಿ ಕರೆಬಂದ ತಕ್ಷಣವೇ ಗಲ್ಫ್ ಆಫ್ ಒಮನ್ನಲ್ಲಿ ನಿಯೋಜಿಸಿದ್ದ ‘ಐಎನ್ಎಸ್ ತಬರ್’ ಅನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಯಿತು’ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.</p>.<p class="title">‘ಹಡಗಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಸೇನಾ ನೌಕೆಯಲ್ಲಿದ್ದ ಅಗ್ನಿಶಾಮಕ ತಂಡ ಹಾಗೂ ಹೆಲಿಕಾಪ್ಟರ್ ನೆರವಿನಿಂದ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. 13 ಮಂದಿ ನೌಕಾಪಡೆ ಯೋಧರು ಹಾಗೂ 5 ಮಂದಿ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಪಲ್ಲಾವು ದೇಶದ ಧ್ವಜ ಹೊಂದಿದ ‘ಎಂಟಿ ಯಿ ಛೆಂಗ್–6’ ವಾಣಿಜ್ಯ ಹಡಗಿನ ಎಂಜಿನ್ನಲ್ಲಿ ಸೋಮವಾರ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ನೆರವಿಗಾಗಿ ಭಾರತೀಯ ನೌಕಾಪಡೆಯ ಹಡಗನ್ನು ನಿಯೋಜಿಸಲಾಗಿದೆ’ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.</p>.<p>ಗುಜರಾತ್ನ ಕಾಂಡ್ಲಾ ಬಂದರಿನ ಮುಖಾಂತರ ಒಮನ್ನ ಶಿನಾಸ್ನತ್ತ ತೆರಳುತ್ತಿದ್ದ ಹಡಗಿನಲ್ಲಿ ಭಾರತೀಯ ಮೂಲದ 14 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. </p>.<p class="title">‘ಭಾನುವಾರ ರಾತ್ರಿ ವೇಳೆ ಹಡಗಿನಿಂದ ನೆರವು ಯಾಚಿಸಿ ಕರೆಬಂದ ತಕ್ಷಣವೇ ಗಲ್ಫ್ ಆಫ್ ಒಮನ್ನಲ್ಲಿ ನಿಯೋಜಿಸಿದ್ದ ‘ಐಎನ್ಎಸ್ ತಬರ್’ ಅನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಯಿತು’ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.</p>.<p class="title">‘ಹಡಗಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಸೇನಾ ನೌಕೆಯಲ್ಲಿದ್ದ ಅಗ್ನಿಶಾಮಕ ತಂಡ ಹಾಗೂ ಹೆಲಿಕಾಪ್ಟರ್ ನೆರವಿನಿಂದ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. 13 ಮಂದಿ ನೌಕಾಪಡೆ ಯೋಧರು ಹಾಗೂ 5 ಮಂದಿ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>