ಮೃತ ಮಕ್ಕಳೆಲ್ಲ 9ರಿಂದ 12ರ ವಯೋಮಾನದವರಾಗಿದ್ದಾರೆ. ಮೃತರಲ್ಲಿ ಹುಮಾಯೂನ್ ಶೇಕ್ ಎನ್ನುವರ 12 ವರ್ಷದ ಮಗಳು, 9 ವರ್ಷದ ಮಗ ಹಾಗೂ ಮೆಹಬೂಬ್ ಶೇಕ್ ಎನ್ನುವರ 10 ವರ್ಷದ ಮಗ ಮತ್ತು ಅಶ್ರಫುಲ್ ಶೇಕ್ ಎನ್ನುವರ 9 ವರ್ಷದ ಮಗ ಸೇರಿದ್ದಾರೆ.
ಈ ಬಾಲಕರು ರಜೆ ಪ್ರಯುಕ್ತ ಗ್ರಾಮದ ಸನಿಹದ ಮಾವಿನ ತೋಟವೊಂದರ ಬಳಿ ಆಟವಾಡುತ್ತಿದ್ದರು. ಈ ವೇಳೆ ಮಳೆ ಬರುವ ಮುನ್ಸೂಚನೆ ಅರಿತು ಮಾವಿನ ಗಿಡದ ಕೆಳಗೆ ಆಶ್ರಯ ಪಡೆಯಲು ಹೋಗಿದ್ದರು. ಆಗ ಸಿಡಿಲು ಬಡಿದು ನಾಲ್ವರು ಬಾಲಕರು ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ಎಸ್ಪಿ ಅನುರಂಜನ್ ತಿಳಿಸಿದ್ದಾರೆ.
ಈ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು, ಮೃತ ಬಾಲಕರ ಪಾಲಕರಿಗೆ ಸಾಂತ್ವಾನ ಹೇಳಿದ್ದಾರೆ.