<p>ಪ್ರಜಾವಾಣಿ ವಾರ್ತೆ</p>.<p>ಸೋಮನಾಥ (ಗುಜರಾತ್): 1998ರ ಪೋಖರಣ್ ಪರಮಾಣು ಪರೀಕ್ಷೆಗಳನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ‘ಭಾರತವನ್ನು ತಲೆಬಾಗಿಸಲು ಅಥವಾ ಒತ್ತಡಕ್ಕೆ ಮಣಿಯುವಂತೆ ಮಾಡಲು ವಿಶ್ವದ ಯಾವುದೇ ಶಕ್ತಿಗೆ ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.</p>.<p>ದೇವಸ್ಥಾನದ ಪುನರ್ ನಿರ್ಮಾಣದ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಇಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಸೋಮನಾಥ ದೇವಸ್ಥಾನದ ಅಮೃತ ಮಹೋತ್ಸವ ಕೇವಲ ಭೂತಕಾಲದ ಸ್ಮರಣೆಯಲ್ಲ. ಬದಲಾಗಿ ಮುಂದಿನ ಸಾವಿರ ವರ್ಷಗಳ ಕಾಲ ಭಾರತಕ್ಕೆ ಸ್ಫೂರ್ತಿಯ ಹಬ್ಬ’ ಎಂದು ಒತ್ತಿ ಹೇಳಿದರು.</p>.<p>‘ದೇಶದ ಪಾಲಿಗೆ ಮೇ 11 ಮಹತ್ವದ ದಿನ. ಸೋಮನಾಥ ದೇವಸ್ಥಾನದಲ್ಲಿ ಪವಿತ್ರ ಕಾರ್ಯ ನಡೆಯಿತು. ಮಾತ್ರವಲ್ಲದೇ, 1998ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಲಾಯಿತು. ನಮ್ಮ ವಿಜ್ಞಾನಿಗಳು ಭಾರತದ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ಪ್ರದರ್ಶಿಸಿದರು’ ಎಂದು ಮೋದಿ ಹೇಳಿದರು. </p>.<p>‘ಈ ಪರೀಕ್ಷೆಗಳು ಜಗತ್ತಿನಾದ್ಯಂತ ಆಘಾತದ ಅಲೆಗಳನ್ನು ಉಂಟು ಮಾಡಿದವು ಹಾಗೂ ಹಲವಾರು ದೇಶಗಳು ಕೋಪದಿಂದ ಪ್ರತಿಕ್ರಿಯಿಸಿದವು. ಈ ಪರೀಕ್ಷೆಗಳ ನಂತರ ಜಾಗತಿಕ ಶಕ್ತಿಗಳು ನಿರ್ಬಂಧಗಳು ಮತ್ತು ಆರ್ಥಿಕ ಒತ್ತಡದ ಮೂಲಕ ಭಾರತವನ್ನು ಏಕಾಂಗಿಯಾಗಿಸಲು ಪ್ರಯತ್ನಿಸಿದವು. ಆದರೆ, ಭಾರತವು ದೃಢವಾಗಿ ನಿಂತಿತು’ ಎಂದು ಅವರು ತಿಳಿಸಿದರು. </p>.<p>‘ಅಂತರರಾಷ್ಟ್ರೀಯ ಸಮುದಾಯದ ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, ಭಾರತವು ಮೇ 13ರಂದು ಇನ್ನೂ ಎರಡು ಪರಮಾಣು ಪರೀಕ್ಷೆಗಳನ್ನು ನಡೆಸಿತು. ರಾಜಕೀಯ ಇಚ್ಛಾಶಕ್ತಿ ಎಷ್ಟು ಅಚಲವಾಗಿದೆ ಎಂಬುದನ್ನು ಜಗತ್ತಿಗೆ ಭಾರತ ಪ್ರದರ್ಶಿಸಿತು. ಅಟಲ್ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ನಮಗೆ ರಾಷ್ಟ್ರ ಮೊದಲು ಎಂದು ಸಾಬೀತುಪಡಿಸಿತು’ ಎಂದರು. </p>.<p>‘ಯಾವುದೇ ರಾಷ್ಟ್ರವು ತನ್ನ ಬೇರುಗಳೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ ಬಲವಾಗಿ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಸೋಮನಾಥ ನಮಗೆ ನೆನಪಿಸುತ್ತದೆ’ ಎಂದು ಪ್ರಧಾನಿ ಹೇಳಿದರು.</p>.<p>‘ವಿದೇಶಿ ಆಕ್ರಮಣಕಾರರು ಸೋಮನಾಥ ದೇವಾಲಯದ ವೈಭವ ಅಳಿಸಿಹಾಕಲು ಪ್ರಯತ್ನಿಸಿದರು. ಈ ದೇವಾಲಯವನ್ನು ಪದೇ ಪದೇ ಕೆಡವಿ ಹಾಕಿದರು. ಆದರೂ ಜನರು ಪುನರ್ ನಿರ್ಮಿಸಿ ಘನತೆಯನ್ನು ಎತ್ತಿ ಹಿಡಿದರು’ ಎಂದು ಅವರು ನೆನಪಿಸಿಕೊಂಡರು.</p>.<p> ದೇಗುಲ ಅಭಿವೃದ್ಧಿಗೂ ನೆಹರೂ ವಿರೋಧ: ಮೋದಿ ರಾಷ್ಟ್ರೀಯ ಸ್ವಾಭಿಮಾನಕ್ಕಿಂತ ತುಷ್ಟೀಕರಣಕ್ಕೆ ಆದ್ಯತೆ ನೀಡಿದ್ದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರೂ ಅವರು ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಮೋದಿ ಆರೋಪಿಸಿದರು. ‘ನಮಗೆ ಸ್ವಾತಂತ್ರ್ಯ ಸಿಕ್ಕ ಬಳಿಕ ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣ ಮೊದಲ ಕರ್ತವ್ಯವಾಗಿತ್ತು. ಈ ಕಾರಣಕ್ಕಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಅಪಾರ ಪ್ರಯತ್ನಗಳನ್ನು ಮಾಡಿ ಯಶಸ್ಸು ಸಾಧಿಸಿದರು. ಆದರೆ ಈ ಮಹಾನ್ ಕೆಲಸಕ್ಕೆ ನೆಹರೂ ಅವರು ವಿರೋಧ ವ್ಯಕ್ತಪಡಿಸಿದ್ದರು’ ಎಂದರು. ‘ತುಷ್ಟೀಕರಣ ರಾಜಕೀಯವನ್ನು ಉತ್ತೇಜಿಸುವ ಶಕ್ತಿಗಳು ಈಗಲೂ ದೇಶದಲ್ಲಿ ಸಕ್ರಿಯವಾಗಿವೆ. ರಾಮಮಂದಿರ ನಿರ್ಮಾಣಕ್ಕೂ ಈ ಶಕ್ತಿಗಳು ವಿರೋಧ ವ್ಯಕ್ತಪಡಿಸಿದವು. ಅಂತಹ ಸಂಕುಚಿತ ಮನಸ್ಥಿತಿಯ ವಿರುದ್ಧ ನಾವು ಜಾಗರೂಕರಾಗಿರಬೇಕು’ ಎಂದು ಅವರು ಎಚ್ಚರಿಸಿದರು. </p>.<p> ಬಾನಂಗಳದಲ್ಲಿ ಸೂರ್ಯಕಿರಣ ಚಿತ್ತಾರ ಅಮೃತ ಮಹೋತ್ಸವದ ಭಾಗವಾಗಿ ಐತಿಹಾಸಿಕ ದೇವಾಲಯದಲ್ಲಿ ಮೋದಿ ಅವರು ಮಹಾಪೂಜೆ ಹಾಗೂ ಇತರ ಆಚರಣೆಗಳನ್ನು ನೆರವೇರಿಸಿದರು. ದೇವರಿಗೆ ಮಹಾಕುಂಭಾಭಿಷೇಕ ಮಾಡಲಾಯಿತು. ಸುಮಾರು 1.5 ಕಿ.ಮೀ. ರೋಡ್ ಶೋ ನಡೆಸಿದ ಬಳಿಕ ಪ್ರಧಾನಿ ಅವರು ದೇಗುಲದಲ್ಲಿ ವೇದ ಮಂತ್ರಗಳ ಪಠಣದೊಂದಿಗೆ ಶಿವಲಿಂಗದ ಮೇಲೆ ಜಲಾಭಿಷೇಕ ಹಾಗೂ ಮಹಾಪೂಜೆ ಮಾಡಿದರು. ಮೋದಿ ಅವರು ‘ಕುಂಭಾಭಿಷೇಕ’ಕ್ಕೂ ಸಾಕ್ಷಿಯಾದರು. ದೇಶದ 11 ಪ್ರಮುಖ ಯಾತ್ರಾ ಸ್ಥಳಗಳಿಂದ ತಂದಿದ್ದ ಪವಿತ್ರ ನೀರನ್ನು ಕ್ರೇನ್ ಬಳಸಿ ದೇವಸ್ಥಾನದ ಶಿಖರದ ಮೇಲೆ ಅಭಿಷೇಕ ಮಾಡಲಾಯಿತು. ಐದು ಸೂರ್ಯಕಿರಣ ಯುದ್ಧ ವಿಮಾನಗಳು ನೀಲಿಯ ಬಾನಲ್ಲಿ ಓಲಾಡಿ ಸಾಗಿ ಬಂದು ಬಂದು ದೇವ ಮಂದಿರಕ್ಕೆ ಪುಷ್ಪಾರ್ಚನೆ ಮಾಡಿದವು. ಆರ್ಭಟಿಸುತ್ತಾ ಶರವೇಗದಲ್ಲಿ ಸಾಗಿ ಬಂದು ಮುಗಿಲೆತ್ತರಕ್ಕೆ ಕಣ್ಣಳತೆಯಲ್ಲಿ ಮರೆಯಾಗುವ ಯುದ್ಧ ವಿಮಾನಗಳ ರುದ್ರ ನರ್ತನಕ್ಕೆ ತ್ರಿವೇಣಿ ಸಂಗಮ ಸಾಕ್ಷಿಯಾಯಿತು. ಆಕಾಶದಲ್ಲಿಯೇ ಪ್ರೀತಿಯ ಸಂಕೇತದ (ಹೃದಯದ ಚಿತ್ರ) ಚಿತ್ತಾರ ಮೂಡಿಸಿ ನೋಡುಗರ ಮನಸ್ಸಿನಲ್ಲಿ ಪ್ರೀತಿ ಉಕ್ಕಿಸಿದವು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಸೋಮನಾಥ (ಗುಜರಾತ್): 1998ರ ಪೋಖರಣ್ ಪರಮಾಣು ಪರೀಕ್ಷೆಗಳನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ‘ಭಾರತವನ್ನು ತಲೆಬಾಗಿಸಲು ಅಥವಾ ಒತ್ತಡಕ್ಕೆ ಮಣಿಯುವಂತೆ ಮಾಡಲು ವಿಶ್ವದ ಯಾವುದೇ ಶಕ್ತಿಗೆ ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.</p>.<p>ದೇವಸ್ಥಾನದ ಪುನರ್ ನಿರ್ಮಾಣದ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಇಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಸೋಮನಾಥ ದೇವಸ್ಥಾನದ ಅಮೃತ ಮಹೋತ್ಸವ ಕೇವಲ ಭೂತಕಾಲದ ಸ್ಮರಣೆಯಲ್ಲ. ಬದಲಾಗಿ ಮುಂದಿನ ಸಾವಿರ ವರ್ಷಗಳ ಕಾಲ ಭಾರತಕ್ಕೆ ಸ್ಫೂರ್ತಿಯ ಹಬ್ಬ’ ಎಂದು ಒತ್ತಿ ಹೇಳಿದರು.</p>.<p>‘ದೇಶದ ಪಾಲಿಗೆ ಮೇ 11 ಮಹತ್ವದ ದಿನ. ಸೋಮನಾಥ ದೇವಸ್ಥಾನದಲ್ಲಿ ಪವಿತ್ರ ಕಾರ್ಯ ನಡೆಯಿತು. ಮಾತ್ರವಲ್ಲದೇ, 1998ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಲಾಯಿತು. ನಮ್ಮ ವಿಜ್ಞಾನಿಗಳು ಭಾರತದ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ಪ್ರದರ್ಶಿಸಿದರು’ ಎಂದು ಮೋದಿ ಹೇಳಿದರು. </p>.<p>‘ಈ ಪರೀಕ್ಷೆಗಳು ಜಗತ್ತಿನಾದ್ಯಂತ ಆಘಾತದ ಅಲೆಗಳನ್ನು ಉಂಟು ಮಾಡಿದವು ಹಾಗೂ ಹಲವಾರು ದೇಶಗಳು ಕೋಪದಿಂದ ಪ್ರತಿಕ್ರಿಯಿಸಿದವು. ಈ ಪರೀಕ್ಷೆಗಳ ನಂತರ ಜಾಗತಿಕ ಶಕ್ತಿಗಳು ನಿರ್ಬಂಧಗಳು ಮತ್ತು ಆರ್ಥಿಕ ಒತ್ತಡದ ಮೂಲಕ ಭಾರತವನ್ನು ಏಕಾಂಗಿಯಾಗಿಸಲು ಪ್ರಯತ್ನಿಸಿದವು. ಆದರೆ, ಭಾರತವು ದೃಢವಾಗಿ ನಿಂತಿತು’ ಎಂದು ಅವರು ತಿಳಿಸಿದರು. </p>.<p>‘ಅಂತರರಾಷ್ಟ್ರೀಯ ಸಮುದಾಯದ ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, ಭಾರತವು ಮೇ 13ರಂದು ಇನ್ನೂ ಎರಡು ಪರಮಾಣು ಪರೀಕ್ಷೆಗಳನ್ನು ನಡೆಸಿತು. ರಾಜಕೀಯ ಇಚ್ಛಾಶಕ್ತಿ ಎಷ್ಟು ಅಚಲವಾಗಿದೆ ಎಂಬುದನ್ನು ಜಗತ್ತಿಗೆ ಭಾರತ ಪ್ರದರ್ಶಿಸಿತು. ಅಟಲ್ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ನಮಗೆ ರಾಷ್ಟ್ರ ಮೊದಲು ಎಂದು ಸಾಬೀತುಪಡಿಸಿತು’ ಎಂದರು. </p>.<p>‘ಯಾವುದೇ ರಾಷ್ಟ್ರವು ತನ್ನ ಬೇರುಗಳೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ ಬಲವಾಗಿ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಸೋಮನಾಥ ನಮಗೆ ನೆನಪಿಸುತ್ತದೆ’ ಎಂದು ಪ್ರಧಾನಿ ಹೇಳಿದರು.</p>.<p>‘ವಿದೇಶಿ ಆಕ್ರಮಣಕಾರರು ಸೋಮನಾಥ ದೇವಾಲಯದ ವೈಭವ ಅಳಿಸಿಹಾಕಲು ಪ್ರಯತ್ನಿಸಿದರು. ಈ ದೇವಾಲಯವನ್ನು ಪದೇ ಪದೇ ಕೆಡವಿ ಹಾಕಿದರು. ಆದರೂ ಜನರು ಪುನರ್ ನಿರ್ಮಿಸಿ ಘನತೆಯನ್ನು ಎತ್ತಿ ಹಿಡಿದರು’ ಎಂದು ಅವರು ನೆನಪಿಸಿಕೊಂಡರು.</p>.<p> ದೇಗುಲ ಅಭಿವೃದ್ಧಿಗೂ ನೆಹರೂ ವಿರೋಧ: ಮೋದಿ ರಾಷ್ಟ್ರೀಯ ಸ್ವಾಭಿಮಾನಕ್ಕಿಂತ ತುಷ್ಟೀಕರಣಕ್ಕೆ ಆದ್ಯತೆ ನೀಡಿದ್ದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರೂ ಅವರು ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಮೋದಿ ಆರೋಪಿಸಿದರು. ‘ನಮಗೆ ಸ್ವಾತಂತ್ರ್ಯ ಸಿಕ್ಕ ಬಳಿಕ ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣ ಮೊದಲ ಕರ್ತವ್ಯವಾಗಿತ್ತು. ಈ ಕಾರಣಕ್ಕಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಅಪಾರ ಪ್ರಯತ್ನಗಳನ್ನು ಮಾಡಿ ಯಶಸ್ಸು ಸಾಧಿಸಿದರು. ಆದರೆ ಈ ಮಹಾನ್ ಕೆಲಸಕ್ಕೆ ನೆಹರೂ ಅವರು ವಿರೋಧ ವ್ಯಕ್ತಪಡಿಸಿದ್ದರು’ ಎಂದರು. ‘ತುಷ್ಟೀಕರಣ ರಾಜಕೀಯವನ್ನು ಉತ್ತೇಜಿಸುವ ಶಕ್ತಿಗಳು ಈಗಲೂ ದೇಶದಲ್ಲಿ ಸಕ್ರಿಯವಾಗಿವೆ. ರಾಮಮಂದಿರ ನಿರ್ಮಾಣಕ್ಕೂ ಈ ಶಕ್ತಿಗಳು ವಿರೋಧ ವ್ಯಕ್ತಪಡಿಸಿದವು. ಅಂತಹ ಸಂಕುಚಿತ ಮನಸ್ಥಿತಿಯ ವಿರುದ್ಧ ನಾವು ಜಾಗರೂಕರಾಗಿರಬೇಕು’ ಎಂದು ಅವರು ಎಚ್ಚರಿಸಿದರು. </p>.<p> ಬಾನಂಗಳದಲ್ಲಿ ಸೂರ್ಯಕಿರಣ ಚಿತ್ತಾರ ಅಮೃತ ಮಹೋತ್ಸವದ ಭಾಗವಾಗಿ ಐತಿಹಾಸಿಕ ದೇವಾಲಯದಲ್ಲಿ ಮೋದಿ ಅವರು ಮಹಾಪೂಜೆ ಹಾಗೂ ಇತರ ಆಚರಣೆಗಳನ್ನು ನೆರವೇರಿಸಿದರು. ದೇವರಿಗೆ ಮಹಾಕುಂಭಾಭಿಷೇಕ ಮಾಡಲಾಯಿತು. ಸುಮಾರು 1.5 ಕಿ.ಮೀ. ರೋಡ್ ಶೋ ನಡೆಸಿದ ಬಳಿಕ ಪ್ರಧಾನಿ ಅವರು ದೇಗುಲದಲ್ಲಿ ವೇದ ಮಂತ್ರಗಳ ಪಠಣದೊಂದಿಗೆ ಶಿವಲಿಂಗದ ಮೇಲೆ ಜಲಾಭಿಷೇಕ ಹಾಗೂ ಮಹಾಪೂಜೆ ಮಾಡಿದರು. ಮೋದಿ ಅವರು ‘ಕುಂಭಾಭಿಷೇಕ’ಕ್ಕೂ ಸಾಕ್ಷಿಯಾದರು. ದೇಶದ 11 ಪ್ರಮುಖ ಯಾತ್ರಾ ಸ್ಥಳಗಳಿಂದ ತಂದಿದ್ದ ಪವಿತ್ರ ನೀರನ್ನು ಕ್ರೇನ್ ಬಳಸಿ ದೇವಸ್ಥಾನದ ಶಿಖರದ ಮೇಲೆ ಅಭಿಷೇಕ ಮಾಡಲಾಯಿತು. ಐದು ಸೂರ್ಯಕಿರಣ ಯುದ್ಧ ವಿಮಾನಗಳು ನೀಲಿಯ ಬಾನಲ್ಲಿ ಓಲಾಡಿ ಸಾಗಿ ಬಂದು ಬಂದು ದೇವ ಮಂದಿರಕ್ಕೆ ಪುಷ್ಪಾರ್ಚನೆ ಮಾಡಿದವು. ಆರ್ಭಟಿಸುತ್ತಾ ಶರವೇಗದಲ್ಲಿ ಸಾಗಿ ಬಂದು ಮುಗಿಲೆತ್ತರಕ್ಕೆ ಕಣ್ಣಳತೆಯಲ್ಲಿ ಮರೆಯಾಗುವ ಯುದ್ಧ ವಿಮಾನಗಳ ರುದ್ರ ನರ್ತನಕ್ಕೆ ತ್ರಿವೇಣಿ ಸಂಗಮ ಸಾಕ್ಷಿಯಾಯಿತು. ಆಕಾಶದಲ್ಲಿಯೇ ಪ್ರೀತಿಯ ಸಂಕೇತದ (ಹೃದಯದ ಚಿತ್ರ) ಚಿತ್ತಾರ ಮೂಡಿಸಿ ನೋಡುಗರ ಮನಸ್ಸಿನಲ್ಲಿ ಪ್ರೀತಿ ಉಕ್ಕಿಸಿದವು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>