<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದ ಚಾಂಬಾ ಜಿಲ್ಲೆಯಲ್ಲಿ ಕಾರೊಂದು ಸುಮಾರು 500 ಮೀಟರ್ ಆಳವಾದ ಕಮರಿಗೆ (ಕಣಿವೆ ಪ್ರದೇಶ) ಬಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಏಳು ಮಂದಿ ಕರ್ನಾಟಕದವರು.</p>.<p>ಶುಕ್ರವಾರ ತಡರಾತ್ರಿ ಬೈರಾಗ್ ಸಚ್ ಪಾಸ್ ಕಿಲ್ಲಾರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಶನಿವಾರ ಮಧ್ಯಾಹ್ನ ಸ್ಥಳೀಯರ ಗಮನಕ್ಕೆ ಬಂದಿತ್ತು.</p>.<p>ಮೃತರನ್ನು ಬೆಂಗಳೂರಿನ ಕಾಡುಗೋಡಿಯ ಅರವಿಂದ್ ಚಂದ್ರಕರ್, ಅವರ ಪತ್ನಿ ಪ್ರಾಚಿ, ಪುತ್ರ 8 ವರ್ಷದ ದರ್ಶ್ ಮತ್ತು 11 ವರ್ಷದ ಅಕ್ಷದ್. ಜತೆಗೆ ಪಿ.ಜಿ.ಕಾರ್ತಿಕೇಯನ್, ಅವರ ಪತ್ನಿ ಮಣಿಮಾಲಾ, ಪುತ್ರ ನಂದನ್ ಮತ್ತು ಟ್ಯಾಕ್ಸಿ ಚಾಲಕ, ಹಿಮಾಚಲ ಪ್ರದೇಶದ ಬನಿಖೇಟ್ ನಿವಾಸಿ ವಿಶ್ವಾಸ್ ಎಂದು ಗುರುತಿಸಲಾಗಿದೆ.</p>.<p>‘ಹಿಮಾಚಲ ಪ್ರದೇಶದ ಅತ್ಯಂತ ಕಡಿದಾದ ಮತ್ತು ದುರ್ಗಮ ಹಿಮಚ್ಛಾದಿತ ಪ್ರದೇಶ ಸಚ್ ಪಾಸ್ಗೆ ಇವರೆಲ್ಲರೂ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಪೊಲೀಸರು, ಸ್ಥಳೀಯರು ಹಗ್ಗದ ಸಹಾಯದಿಂದ ಕಾರು ಬಿದ್ದಿರುವ ಸ್ಥಳಕ್ಕೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಎರಡು ಕುಟುಂಬಗಳು ಸೇರಿ ಟ್ಯಾಕ್ಸಿ ಬುಕ್ ಮಾಡಿಕೊಂಡು ತೆರಳಿದ್ದರು. ಸರಿಯಾದ ಸಮಯಕ್ಕೆ ಟ್ಯಾಕ್ಸಿ ವಾಪಸ್ ಬಾರದೇ ಇದ್ದಾಗ ಅನುಮಾನ ಬಂದು ವಾಹನ ಮಾಲೀಕ ಜಿಪಿಎಸ್ ಆಧಾರದ ಮೇಲೆ ಟ್ರ್ಯಾಕ್ ಮಾಡಿದ್ದರು. ಕಲಾವನ್ ಪ್ರದೇಶದಲ್ಲಿ ಕೊನೆಯದಾಗಿ ಟ್ಯಾಕ್ಸಿ ಸಂಪರ್ಕಕ್ಕೆ ಸಿಕ್ಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದ ಚಾಂಬಾ ಜಿಲ್ಲೆಯಲ್ಲಿ ಕಾರೊಂದು ಸುಮಾರು 500 ಮೀಟರ್ ಆಳವಾದ ಕಮರಿಗೆ (ಕಣಿವೆ ಪ್ರದೇಶ) ಬಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಏಳು ಮಂದಿ ಕರ್ನಾಟಕದವರು.</p>.<p>ಶುಕ್ರವಾರ ತಡರಾತ್ರಿ ಬೈರಾಗ್ ಸಚ್ ಪಾಸ್ ಕಿಲ್ಲಾರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಶನಿವಾರ ಮಧ್ಯಾಹ್ನ ಸ್ಥಳೀಯರ ಗಮನಕ್ಕೆ ಬಂದಿತ್ತು.</p>.<p>ಮೃತರನ್ನು ಬೆಂಗಳೂರಿನ ಕಾಡುಗೋಡಿಯ ಅರವಿಂದ್ ಚಂದ್ರಕರ್, ಅವರ ಪತ್ನಿ ಪ್ರಾಚಿ, ಪುತ್ರ 8 ವರ್ಷದ ದರ್ಶ್ ಮತ್ತು 11 ವರ್ಷದ ಅಕ್ಷದ್. ಜತೆಗೆ ಪಿ.ಜಿ.ಕಾರ್ತಿಕೇಯನ್, ಅವರ ಪತ್ನಿ ಮಣಿಮಾಲಾ, ಪುತ್ರ ನಂದನ್ ಮತ್ತು ಟ್ಯಾಕ್ಸಿ ಚಾಲಕ, ಹಿಮಾಚಲ ಪ್ರದೇಶದ ಬನಿಖೇಟ್ ನಿವಾಸಿ ವಿಶ್ವಾಸ್ ಎಂದು ಗುರುತಿಸಲಾಗಿದೆ.</p>.<p>‘ಹಿಮಾಚಲ ಪ್ರದೇಶದ ಅತ್ಯಂತ ಕಡಿದಾದ ಮತ್ತು ದುರ್ಗಮ ಹಿಮಚ್ಛಾದಿತ ಪ್ರದೇಶ ಸಚ್ ಪಾಸ್ಗೆ ಇವರೆಲ್ಲರೂ ಟ್ಯಾಕ್ಸಿ ಮಾಡಿಕೊಂಡು ತೆರಳುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಪೊಲೀಸರು, ಸ್ಥಳೀಯರು ಹಗ್ಗದ ಸಹಾಯದಿಂದ ಕಾರು ಬಿದ್ದಿರುವ ಸ್ಥಳಕ್ಕೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಎರಡು ಕುಟುಂಬಗಳು ಸೇರಿ ಟ್ಯಾಕ್ಸಿ ಬುಕ್ ಮಾಡಿಕೊಂಡು ತೆರಳಿದ್ದರು. ಸರಿಯಾದ ಸಮಯಕ್ಕೆ ಟ್ಯಾಕ್ಸಿ ವಾಪಸ್ ಬಾರದೇ ಇದ್ದಾಗ ಅನುಮಾನ ಬಂದು ವಾಹನ ಮಾಲೀಕ ಜಿಪಿಎಸ್ ಆಧಾರದ ಮೇಲೆ ಟ್ರ್ಯಾಕ್ ಮಾಡಿದ್ದರು. ಕಲಾವನ್ ಪ್ರದೇಶದಲ್ಲಿ ಕೊನೆಯದಾಗಿ ಟ್ಯಾಕ್ಸಿ ಸಂಪರ್ಕಕ್ಕೆ ಸಿಕ್ಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>