<p><strong>ಶಿವಸಾಗರ:</strong> 'ಕಾಂಗ್ರೆಸ್ ನಾಯಕ ಪವನ್ ಖೇರಾ ಪೊಲೀಸರಿಗೆ ಹೆದರಿ ಹೈದರಾಬಾದ್ಗೆ ಪಲಾಯನಗೈದಿದ್ದಾರೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ. </p><p>ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹಾಗೂ ಅವರ ಕುಟುಂಬದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಪವನ್ ಖೇರಾ ನಿವಾಸದ ಮೇಲೆ ಅಸ್ಸಾಂ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ. </p><p>'ಪವನ್ ಖೇರಾ ತನ್ನನ್ನು ಬಂಧಿಸುವಂತೆ ಅಸ್ಸಾಂ ಪೊಲೀಸರಿಗೆ ಸವಾಲು ಹಾಕಿದ್ದರು. ಆದರೆ ಈಗ ಹೈದರಾಬಾದ್ಗೆ ಓಡಿ ಹೋಗಿದ್ದಾರೆ' ಎಂದು ಶಿವಸಾಗರದಲ್ಲಿ ಚುನಾವಣಾ ಸಮಾವೇಶದ ವೇಳೆ ಹಿಮಂತ ಹೇಳಿದ್ದಾರೆ. </p>.ಕಾಂಗ್ರೆಸ್ ನಾಯಕ ಪವನ್ ಖೇರಾ ನಿವಾಸದ ಮೇಲೆ ಅಸ್ಸಾಂ ಪೊಲೀಸರಿಂದ ದಾಳಿ.ಅಸ್ಸಾಂ ಸಿಎಂ ಪತ್ನಿ ಬಳಿ ಮೂರು ಪಾಸ್ಪೋರ್ಟ್, ದುಬೈನಲ್ಲಿ ಆಸ್ತಿ; ಪವನ್ ಖೇರಾ.<p>'ಅವರು ಏಕೆ ಪಲಾಯನ ಮಾಡಿದ್ದರೆಂದು ನನಗೆ ಗೊತ್ತಿಲ್ಲ. ನಿನ್ನೆಯವರೆಗೂ ಖೇರಾ ನನ್ನನ್ನು ಬಂಧಿಸಿ ಎಂದು ಸವಾಲು ಹಾಕುತ್ತಿದ್ದರು. ಈಗ ವಿಚಾರಣೆಗಾಗಿ ಪೊಲೀಸರು ಅವರ ನಿವಾಸಕ್ಕೆ ತೆರಳಿದಾಗ ಓಡಿ ಹೋಗಿದ್ದಾರೆ' ಎಂದು ಹೇಳಿದ್ದಾರೆ. </p><p>'ನನ್ನ ವಿರುದ್ಧ ಪವನ್ ಖೇರಾ ಸುಳ್ಳು ಆರೋಪ ಮಾಡಿದ್ದಾರೆ' ಎಂದು ಹಿಮಂತ ತಿಳಿಸಿದ್ದಾರೆ. </p><p>ಹಿಮಂತ ಅವರ ಪತ್ನಿ ಮೂರು ವಿದೇಶಿ ಪಾಸ್ಪೋರ್ಟ್ಗಳನ್ನು, ದುಬೈನಲ್ಲಿ ಆಸ್ತಿಗಳನ್ನು, ಅಮೆರಿಕದಲ್ಲಿ ಕಂಪನಿಗಳನ್ನು ಅಥವಾ ಶೆಲ್ ಕಂಪನಿಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದರು. </p><p>ಆದರೆ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮಗಳಿಂದ ಪಡೆದ ಸುಳ್ಳು ಮಾಹಿತಿಯನ್ನು ಪಡೆದು ಆರೋಪ ಮಾಡಲಾಗುತ್ತಿದೆ. ಇದು ಅಸ್ಸಾಂ ಚುನಾವಣೆಯ ಮೇಲೆ ಪರಿಣಾಮ ಬೀರುವ ಮತ್ತು ಶಿಕ್ಷಾರ್ಹ ಅಪರಾಧ ಎಂದು ಹಿಮಂತ ತಿರುಗೇಟು ನೀಡಿದ್ದರು. </p><p>126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಸಾಗರ:</strong> 'ಕಾಂಗ್ರೆಸ್ ನಾಯಕ ಪವನ್ ಖೇರಾ ಪೊಲೀಸರಿಗೆ ಹೆದರಿ ಹೈದರಾಬಾದ್ಗೆ ಪಲಾಯನಗೈದಿದ್ದಾರೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ. </p><p>ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹಾಗೂ ಅವರ ಕುಟುಂಬದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಪವನ್ ಖೇರಾ ನಿವಾಸದ ಮೇಲೆ ಅಸ್ಸಾಂ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ. </p><p>'ಪವನ್ ಖೇರಾ ತನ್ನನ್ನು ಬಂಧಿಸುವಂತೆ ಅಸ್ಸಾಂ ಪೊಲೀಸರಿಗೆ ಸವಾಲು ಹಾಕಿದ್ದರು. ಆದರೆ ಈಗ ಹೈದರಾಬಾದ್ಗೆ ಓಡಿ ಹೋಗಿದ್ದಾರೆ' ಎಂದು ಶಿವಸಾಗರದಲ್ಲಿ ಚುನಾವಣಾ ಸಮಾವೇಶದ ವೇಳೆ ಹಿಮಂತ ಹೇಳಿದ್ದಾರೆ. </p>.ಕಾಂಗ್ರೆಸ್ ನಾಯಕ ಪವನ್ ಖೇರಾ ನಿವಾಸದ ಮೇಲೆ ಅಸ್ಸಾಂ ಪೊಲೀಸರಿಂದ ದಾಳಿ.ಅಸ್ಸಾಂ ಸಿಎಂ ಪತ್ನಿ ಬಳಿ ಮೂರು ಪಾಸ್ಪೋರ್ಟ್, ದುಬೈನಲ್ಲಿ ಆಸ್ತಿ; ಪವನ್ ಖೇರಾ.<p>'ಅವರು ಏಕೆ ಪಲಾಯನ ಮಾಡಿದ್ದರೆಂದು ನನಗೆ ಗೊತ್ತಿಲ್ಲ. ನಿನ್ನೆಯವರೆಗೂ ಖೇರಾ ನನ್ನನ್ನು ಬಂಧಿಸಿ ಎಂದು ಸವಾಲು ಹಾಕುತ್ತಿದ್ದರು. ಈಗ ವಿಚಾರಣೆಗಾಗಿ ಪೊಲೀಸರು ಅವರ ನಿವಾಸಕ್ಕೆ ತೆರಳಿದಾಗ ಓಡಿ ಹೋಗಿದ್ದಾರೆ' ಎಂದು ಹೇಳಿದ್ದಾರೆ. </p><p>'ನನ್ನ ವಿರುದ್ಧ ಪವನ್ ಖೇರಾ ಸುಳ್ಳು ಆರೋಪ ಮಾಡಿದ್ದಾರೆ' ಎಂದು ಹಿಮಂತ ತಿಳಿಸಿದ್ದಾರೆ. </p><p>ಹಿಮಂತ ಅವರ ಪತ್ನಿ ಮೂರು ವಿದೇಶಿ ಪಾಸ್ಪೋರ್ಟ್ಗಳನ್ನು, ದುಬೈನಲ್ಲಿ ಆಸ್ತಿಗಳನ್ನು, ಅಮೆರಿಕದಲ್ಲಿ ಕಂಪನಿಗಳನ್ನು ಅಥವಾ ಶೆಲ್ ಕಂಪನಿಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದರು. </p><p>ಆದರೆ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮಗಳಿಂದ ಪಡೆದ ಸುಳ್ಳು ಮಾಹಿತಿಯನ್ನು ಪಡೆದು ಆರೋಪ ಮಾಡಲಾಗುತ್ತಿದೆ. ಇದು ಅಸ್ಸಾಂ ಚುನಾವಣೆಯ ಮೇಲೆ ಪರಿಣಾಮ ಬೀರುವ ಮತ್ತು ಶಿಕ್ಷಾರ್ಹ ಅಪರಾಧ ಎಂದು ಹಿಮಂತ ತಿರುಗೇಟು ನೀಡಿದ್ದರು. </p><p>126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>