<p><strong>ಪುಣೆ:</strong> ಪಿಂಪ್ರಿ ಚಿಂಚವಾಡ ಹಾಗೂ ಪುಣೆ ನಗರದಲ್ಲಿ ವಿಷಮಿಶ್ರಿತ ಮದ್ಯ ಸೇವಿಸಿ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ.</p>.<p>ವಿಷಮಿಶ್ರಿತ ಮದ್ಯ ಪೂರೈಕೆ ಜಾಲದ ಪ್ರಮುಖ ಸೂತ್ರಧಾರ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ.</p>.<p>ಪಿಂಪ್ರಿ ಚಿಂಚವಾಡ್ನ ಫುಗೇವಾಡಿ ಪ್ರದೇಶದಲ್ಲಿ ಏಳು ಜನರು ಮೃತಪಟ್ಟಿದ್ದರೆ, ಪುಣೆಯ ಹಡಪಸರ್ನ ಪಂಧರೆ ಮಾಲಾ ಭಾಗದಲ್ಲಿ ಶಂಕಿತ ವಿಷಮಿಶ್ರಿತ ಮದ್ಯ ಸೇವಿಸಿ ಐವರು ಅಸುನೀಗಿದ್ದಾರೆ.</p>.<p>ವಿಷಮಿಶ್ರಿತ ಮದ್ಯ ಸೇವನೆಯಿಂದ ಅಸ್ವಸ್ಥಗೊಂಡಿರುವ ಮೂವರು ಪಿಂಪ್ರಿ ಚಿಂಚವಾಡ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ವಿಷಮಿಶ್ರಿತ ಮದ್ಯ ಪೂರೈಕೆ ಜಾಲ ಪತ್ತೆ ಹಚ್ಚಲಾಗಿದ್ದು, ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದಿದ್ದಾರೆ.</p>.<p>‘ತನಿಖೆ ಆರಂಭಿಸಿದ್ದೇವೆ. ನಿಖರ ಕಾರಣ ಖಚಿತಪಡಿಸುವ ಪರೀಕ್ಷಾ ವರದಿಗಳಿಗಾಗಿ ಕಾಯುತ್ತಿದ್ದೇವೆ’ ಎಂದು ಪಿಂಪ್ರಿ ಚಿಂಚವಾಡ್ನ ಪೊಲೀಸ್ ಉಪ ಆಯುಕ್ತ ಸಂದೀಪ್ ಅಟೋಲ್ ಮಾಹಿತಿ ನೀಡಿದ್ದಾರೆ.</p>.<p>‘ಇಲಾಖೆಯು ತನಿಖೆ ಆರಂಭಿಸಿದೆ. ಎರಡೂ ಕಡೆಗೆ ವಿಷಪೂರಿತ ಮದ್ಯ ಪೂರೈಸಿದ್ದ ಯೋಗೇಶ್ ವಾಂಖೆಡೆ ಎಂಬಾತನನ್ನು ಬಂಧಿಸಿದ್ದು, ಪಿಂಪ್ರಿ ಚಿಂಚವಾಡ ಪೊಲೀಸರಿಗೆ ಹಸ್ತಾಂತರಿಸಿದ್ದೇವೆ’ ಎಂದು ಅಬಕಾರಿ ಆಯುಕ್ತ ಅತುಲ್ ಕನಾಡೆ ತಿಳಿಸಿದ್ದಾರೆ.</p>.<h2> ಮದ್ಯ ತಯಾರಿಕಾ ಕೇಂದ್ರ ಧ್ವಂಸ </h2><p>ಎನ್ಸಿಪಿ (ಶರದ್ ಬಣ) ಮುಖಂಡ ಶಾಸಕ ರೋಹಿತ್ ಪವಾರ್ ಹಾಗೂ ಇತರ ಪಕ್ಷಗಳ ಕಾರ್ಯಕರ್ತರು ಹಡಪಸರ್ನ ರಹಸ್ಯ ತಾಣದಲ್ಲಿದ್ದ ನಕಲಿ ಮದ್ಯ ತಯಾರಿಕಾ ಕೇಂದ್ರವನ್ನು ಧ್ವಂಸಗೊಳಿಸಿದ್ದಾರೆ.</p><p>‘ಅತ್ಯಂತ ಭಯಾನಕ ಘಟನೆಯಿದು. ಗೃಹ ಇಲಾಖೆಯ ಅನಿಯಂತ್ರಿತ ಮತ್ತು ಭ್ರಷ್ಟ ಕಾರ್ಯನಿರ್ವಹಣೆಯನ್ನು ಬಹಿರಂಗಪಡಿಸಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ರೋಹಿತ್ ಅವರು ದೂರಿದ್ದಾರೆ.</p><p>‘ರಾಜ್ಯ ಸರ್ಕಾರವು ತಾಂತ್ರಿಕವಾಗಿ ಅಧಿಕಾರದಲ್ಲಿದೆಯಷ್ಟೇ. ಜನರ ನಂಬಿಕೆಯನ್ನು ಕಳೆದುಕೊಂಡಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ:</strong> ಪಿಂಪ್ರಿ ಚಿಂಚವಾಡ ಹಾಗೂ ಪುಣೆ ನಗರದಲ್ಲಿ ವಿಷಮಿಶ್ರಿತ ಮದ್ಯ ಸೇವಿಸಿ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ.</p>.<p>ವಿಷಮಿಶ್ರಿತ ಮದ್ಯ ಪೂರೈಕೆ ಜಾಲದ ಪ್ರಮುಖ ಸೂತ್ರಧಾರ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ.</p>.<p>ಪಿಂಪ್ರಿ ಚಿಂಚವಾಡ್ನ ಫುಗೇವಾಡಿ ಪ್ರದೇಶದಲ್ಲಿ ಏಳು ಜನರು ಮೃತಪಟ್ಟಿದ್ದರೆ, ಪುಣೆಯ ಹಡಪಸರ್ನ ಪಂಧರೆ ಮಾಲಾ ಭಾಗದಲ್ಲಿ ಶಂಕಿತ ವಿಷಮಿಶ್ರಿತ ಮದ್ಯ ಸೇವಿಸಿ ಐವರು ಅಸುನೀಗಿದ್ದಾರೆ.</p>.<p>ವಿಷಮಿಶ್ರಿತ ಮದ್ಯ ಸೇವನೆಯಿಂದ ಅಸ್ವಸ್ಥಗೊಂಡಿರುವ ಮೂವರು ಪಿಂಪ್ರಿ ಚಿಂಚವಾಡ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ವಿಷಮಿಶ್ರಿತ ಮದ್ಯ ಪೂರೈಕೆ ಜಾಲ ಪತ್ತೆ ಹಚ್ಚಲಾಗಿದ್ದು, ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದಿದ್ದಾರೆ.</p>.<p>‘ತನಿಖೆ ಆರಂಭಿಸಿದ್ದೇವೆ. ನಿಖರ ಕಾರಣ ಖಚಿತಪಡಿಸುವ ಪರೀಕ್ಷಾ ವರದಿಗಳಿಗಾಗಿ ಕಾಯುತ್ತಿದ್ದೇವೆ’ ಎಂದು ಪಿಂಪ್ರಿ ಚಿಂಚವಾಡ್ನ ಪೊಲೀಸ್ ಉಪ ಆಯುಕ್ತ ಸಂದೀಪ್ ಅಟೋಲ್ ಮಾಹಿತಿ ನೀಡಿದ್ದಾರೆ.</p>.<p>‘ಇಲಾಖೆಯು ತನಿಖೆ ಆರಂಭಿಸಿದೆ. ಎರಡೂ ಕಡೆಗೆ ವಿಷಪೂರಿತ ಮದ್ಯ ಪೂರೈಸಿದ್ದ ಯೋಗೇಶ್ ವಾಂಖೆಡೆ ಎಂಬಾತನನ್ನು ಬಂಧಿಸಿದ್ದು, ಪಿಂಪ್ರಿ ಚಿಂಚವಾಡ ಪೊಲೀಸರಿಗೆ ಹಸ್ತಾಂತರಿಸಿದ್ದೇವೆ’ ಎಂದು ಅಬಕಾರಿ ಆಯುಕ್ತ ಅತುಲ್ ಕನಾಡೆ ತಿಳಿಸಿದ್ದಾರೆ.</p>.<h2> ಮದ್ಯ ತಯಾರಿಕಾ ಕೇಂದ್ರ ಧ್ವಂಸ </h2><p>ಎನ್ಸಿಪಿ (ಶರದ್ ಬಣ) ಮುಖಂಡ ಶಾಸಕ ರೋಹಿತ್ ಪವಾರ್ ಹಾಗೂ ಇತರ ಪಕ್ಷಗಳ ಕಾರ್ಯಕರ್ತರು ಹಡಪಸರ್ನ ರಹಸ್ಯ ತಾಣದಲ್ಲಿದ್ದ ನಕಲಿ ಮದ್ಯ ತಯಾರಿಕಾ ಕೇಂದ್ರವನ್ನು ಧ್ವಂಸಗೊಳಿಸಿದ್ದಾರೆ.</p><p>‘ಅತ್ಯಂತ ಭಯಾನಕ ಘಟನೆಯಿದು. ಗೃಹ ಇಲಾಖೆಯ ಅನಿಯಂತ್ರಿತ ಮತ್ತು ಭ್ರಷ್ಟ ಕಾರ್ಯನಿರ್ವಹಣೆಯನ್ನು ಬಹಿರಂಗಪಡಿಸಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ರೋಹಿತ್ ಅವರು ದೂರಿದ್ದಾರೆ.</p><p>‘ರಾಜ್ಯ ಸರ್ಕಾರವು ತಾಂತ್ರಿಕವಾಗಿ ಅಧಿಕಾರದಲ್ಲಿದೆಯಷ್ಟೇ. ಜನರ ನಂಬಿಕೆಯನ್ನು ಕಳೆದುಕೊಂಡಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>