<p><strong>ಕಾನ್ಪುರ:</strong> ನಾದಿನಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಪೋಕ್ಸೊ ಪ್ರಕರಣ ಎದುರಿಸುತ್ತಿದ್ದ ಭಾರತೀಯ ವಾಯುಪಡೆಯ (ಐಎಎಫ್) ಸಿಬ್ಬಂದಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ. </p>.<p>‘ಬಾವ ತನಗೆ ಕಿರುಕುಳ ನೀಡಿದ್ದು ಕನಸಿನಲ್ಲಿ’ ಎಂದು ದೂರುದಾರೆ ಹೇಳಿದ ಬಳಿಕ ನ್ಯಾಯಪೀಠ ಆರೋಪಿಯನ್ನು ದೋಷಮುಕ್ತ ಎಂದು ಘೋಷಿಸಿದೆ.</p>.<p class="bodytext">2019ರ ಮಾರ್ಚ್ 8ರಂದು ತನ್ನ ಅಕ್ಕನ ಮನೆಯಲ್ಲಿ ತಂಗಿದ್ದ ಸಂದರ್ಭದಲ್ಲಿ ಬಾವ ತನಗೆ ಕಿರುಕುಳ ನೀಡಿದ್ದರೆಂದು ಆರೋಪಿಸಿ 15 ವರ್ಷದ ಬಾಲಕಿ ದೂರು ನೀಡಿದ್ದರು. ದೂರನ್ನು ಆಧರಿಸಿ ಅನುರಾಗ್ ಶುಕ್ಲಾ ವಿರುದ್ಧ ಎಫ್ಐಆರ್ ದಾಖಲಿಸಿ, 19 ದಿನ ಜೈಲಿನಲ್ಲಿ ಇರಿಸಲಾಗಿತ್ತು. </p>.<p class="bodytext">ಆದರೆ, ವಿಚಾರಣೆ ಸಂದರ್ಭದಲ್ಲಿ ‘ಘಟನೆ ನಡೆದ ದಿನ ತಾನು ಆ್ಯಂಟಿಬಯೋಟಿಕ್ಸ್ ಔಷಧಿ ತೆಗದಕೊಂಡು, ಅರೆ ಪ್ರಜ್ಞಾವಸ್ಥೆಯಲ್ಲಿದ್ದೆ. ಈ ವೇಳೆ ಶುಕ್ಲಾ ತನ್ನನ್ನು ಎಳೆದಾಡಿ ಕಿರುಕುಳ ನೀಡಿದಂತೆ ಕನಸು ಬಿದ್ದಿತ್ತು. ಹೀಗಾಗಿ ಗಾಬರಿಗೊಂಡು ಕಿರುಚಾಡಿ, ತಪ್ಪು ತಿಳುವಳಿಕೆಯಿಂದ ದೂರು ನೀಡಿದ್ದೆ’ ಎಂದು ದೂರುದಾರೆ ಹೇಳಿದ್ದಾರೆ.</p>.<p class="bodytext">ಈ ಹಿಂದೆ ತಾವು ಮಾಡಿದ್ದ ಆರೋಪಗಳನ್ನೂ ಹಿಂಪಡೆದಿದ್ದಾರೆ. ಹೀಗಾಗಿ ನ್ಯಾಯಾಲಯವು ಮಾರ್ಚ್ 7ರಂದು ಶುಕ್ಲಾ ಅವರನ್ನು ಖುಲಾಸೆಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನ್ಪುರ:</strong> ನಾದಿನಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಪೋಕ್ಸೊ ಪ್ರಕರಣ ಎದುರಿಸುತ್ತಿದ್ದ ಭಾರತೀಯ ವಾಯುಪಡೆಯ (ಐಎಎಫ್) ಸಿಬ್ಬಂದಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ. </p>.<p>‘ಬಾವ ತನಗೆ ಕಿರುಕುಳ ನೀಡಿದ್ದು ಕನಸಿನಲ್ಲಿ’ ಎಂದು ದೂರುದಾರೆ ಹೇಳಿದ ಬಳಿಕ ನ್ಯಾಯಪೀಠ ಆರೋಪಿಯನ್ನು ದೋಷಮುಕ್ತ ಎಂದು ಘೋಷಿಸಿದೆ.</p>.<p class="bodytext">2019ರ ಮಾರ್ಚ್ 8ರಂದು ತನ್ನ ಅಕ್ಕನ ಮನೆಯಲ್ಲಿ ತಂಗಿದ್ದ ಸಂದರ್ಭದಲ್ಲಿ ಬಾವ ತನಗೆ ಕಿರುಕುಳ ನೀಡಿದ್ದರೆಂದು ಆರೋಪಿಸಿ 15 ವರ್ಷದ ಬಾಲಕಿ ದೂರು ನೀಡಿದ್ದರು. ದೂರನ್ನು ಆಧರಿಸಿ ಅನುರಾಗ್ ಶುಕ್ಲಾ ವಿರುದ್ಧ ಎಫ್ಐಆರ್ ದಾಖಲಿಸಿ, 19 ದಿನ ಜೈಲಿನಲ್ಲಿ ಇರಿಸಲಾಗಿತ್ತು. </p>.<p class="bodytext">ಆದರೆ, ವಿಚಾರಣೆ ಸಂದರ್ಭದಲ್ಲಿ ‘ಘಟನೆ ನಡೆದ ದಿನ ತಾನು ಆ್ಯಂಟಿಬಯೋಟಿಕ್ಸ್ ಔಷಧಿ ತೆಗದಕೊಂಡು, ಅರೆ ಪ್ರಜ್ಞಾವಸ್ಥೆಯಲ್ಲಿದ್ದೆ. ಈ ವೇಳೆ ಶುಕ್ಲಾ ತನ್ನನ್ನು ಎಳೆದಾಡಿ ಕಿರುಕುಳ ನೀಡಿದಂತೆ ಕನಸು ಬಿದ್ದಿತ್ತು. ಹೀಗಾಗಿ ಗಾಬರಿಗೊಂಡು ಕಿರುಚಾಡಿ, ತಪ್ಪು ತಿಳುವಳಿಕೆಯಿಂದ ದೂರು ನೀಡಿದ್ದೆ’ ಎಂದು ದೂರುದಾರೆ ಹೇಳಿದ್ದಾರೆ.</p>.<p class="bodytext">ಈ ಹಿಂದೆ ತಾವು ಮಾಡಿದ್ದ ಆರೋಪಗಳನ್ನೂ ಹಿಂಪಡೆದಿದ್ದಾರೆ. ಹೀಗಾಗಿ ನ್ಯಾಯಾಲಯವು ಮಾರ್ಚ್ 7ರಂದು ಶುಕ್ಲಾ ಅವರನ್ನು ಖುಲಾಸೆಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>