<p><strong>ನವದೆಹಲಿ</strong>: ವಿಶ್ವಸಂಸ್ಥೆಯ ವಾರ್ಷಿಕ ಹವಾಮಾನ ಶೃಂಗಸಭೆಗೆ (ಸಿಒಪಿ33) ಆತಿಥ್ಯ ವಹಿಸುವ ಪ್ರಸ್ತಾವವನ್ನು ಭಾರತ ಹಿಂಪಡೆದುಕೊಂಡಿದೆ ಎಂದು ಬುಧವಾರ ವರದಿಯಾಗಿದೆ.</p><p>ಸಾಮಾನ್ಯವಾಗಿ, ಹವಾಮಾನ ಶೃಂಗಸಭೆಯ ಆತಿಥ್ಯವನ್ನು ಯಾವ ರಾಷ್ಟ್ರ ವಹಿಸಿಕೊಳ್ಳಲಿದೆ ಎಂಬುದು ಎರಡು ವರ್ಷ ಮೊದಲೇ ನಿರ್ಧಾರವಾಗುತ್ತದೆ.</p><p>2023ರಲ್ಲಿ ದುಬೈನಲ್ಲಿ ಆಯೋಜನೆಗೊಂಡಿದ್ದ ಸಿಒಪಿ28 ಶೃಂಗದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಸಿಒಪಿ33 ಆತಿಥ್ಯ ವಹಿಸುವ ಕುರಿತು ಪ್ರಸ್ತಾಪಿಸಿದ್ದರು.</p><p>ಸಿಒಪಿ33ಗೆ ಆತಿಥ್ಯ ವಹಿಸುವ ಪ್ರಸ್ತಾವವನ್ನು ಭಾರತ ಹಿಂತೆಗೆದುಕೊಳ್ಳುತ್ತಿದೆ ಎಂದು ಈ ವಾರದ ಆರಂಭದಲ್ಲಿ ಮೂಲಗಳು ಖಚಿತಪಡಿಸಿದ್ದವು. ಕಾರಣವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.</p><p>ಈ ಬೆಳವಣಿಗೆ ಕುರಿತು ಕೇಂದ್ರ ಪರಿಸರ ಸಚಿವಾಲಯದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜರ್ಮನಿಯ ಬಾನ್ನಲ್ಲಿರುವ ಸಿಒಪಿ ಪ್ರಧಾನ ಕಚೇರಿಯಿಂದಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.</p><p>ಆದರೆ, ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರು, ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸಿಒಪಿಗೆ ಆತಿಥ್ಯ ವಹಿಸುವ ಪ್ರಸ್ತಾವನೆಯನ್ನು ಹಿಂಪಡೆದಿರುವುದರ ಕುರಿತ ವರದಿಯೊಂದನ್ನು ಹಂಚಿಕೊಂಡು 'ಸಂವೇದನಾಶೀಲ ನಡೆ' ಎಂದು ಪ್ರತಿಪಾದಿಸಿದ್ದಾರೆ.</p><p>ಪ್ಯಾರಿಸ್ನಲ್ಲಿ ನಡೆದ ಸಿಒಪಿ21ರಲ್ಲಿ ಕೈಗೊಳ್ಳಲಾಗಿದ್ದ ತೀರ್ಮಾನಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈಡೇರಿಸಿಲ್ಲ. ಪಳಯುಳಿಕೆ ಇಂಧನಕ್ಕಾಗಿ ಲಾಬಿ ನಡೆಸುವವರ ಪ್ರಭಾವ ಹವಾಮಾನ ಶೃಂಗಸಭೆಯ ಮೇಲಿದೆ ಎಂದೂ ಬರೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವಿಶ್ವಸಂಸ್ಥೆಯ ವಾರ್ಷಿಕ ಹವಾಮಾನ ಶೃಂಗಸಭೆಗೆ (ಸಿಒಪಿ33) ಆತಿಥ್ಯ ವಹಿಸುವ ಪ್ರಸ್ತಾವವನ್ನು ಭಾರತ ಹಿಂಪಡೆದುಕೊಂಡಿದೆ ಎಂದು ಬುಧವಾರ ವರದಿಯಾಗಿದೆ.</p><p>ಸಾಮಾನ್ಯವಾಗಿ, ಹವಾಮಾನ ಶೃಂಗಸಭೆಯ ಆತಿಥ್ಯವನ್ನು ಯಾವ ರಾಷ್ಟ್ರ ವಹಿಸಿಕೊಳ್ಳಲಿದೆ ಎಂಬುದು ಎರಡು ವರ್ಷ ಮೊದಲೇ ನಿರ್ಧಾರವಾಗುತ್ತದೆ.</p><p>2023ರಲ್ಲಿ ದುಬೈನಲ್ಲಿ ಆಯೋಜನೆಗೊಂಡಿದ್ದ ಸಿಒಪಿ28 ಶೃಂಗದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಸಿಒಪಿ33 ಆತಿಥ್ಯ ವಹಿಸುವ ಕುರಿತು ಪ್ರಸ್ತಾಪಿಸಿದ್ದರು.</p><p>ಸಿಒಪಿ33ಗೆ ಆತಿಥ್ಯ ವಹಿಸುವ ಪ್ರಸ್ತಾವವನ್ನು ಭಾರತ ಹಿಂತೆಗೆದುಕೊಳ್ಳುತ್ತಿದೆ ಎಂದು ಈ ವಾರದ ಆರಂಭದಲ್ಲಿ ಮೂಲಗಳು ಖಚಿತಪಡಿಸಿದ್ದವು. ಕಾರಣವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.</p><p>ಈ ಬೆಳವಣಿಗೆ ಕುರಿತು ಕೇಂದ್ರ ಪರಿಸರ ಸಚಿವಾಲಯದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜರ್ಮನಿಯ ಬಾನ್ನಲ್ಲಿರುವ ಸಿಒಪಿ ಪ್ರಧಾನ ಕಚೇರಿಯಿಂದಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.</p><p>ಆದರೆ, ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರು, ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸಿಒಪಿಗೆ ಆತಿಥ್ಯ ವಹಿಸುವ ಪ್ರಸ್ತಾವನೆಯನ್ನು ಹಿಂಪಡೆದಿರುವುದರ ಕುರಿತ ವರದಿಯೊಂದನ್ನು ಹಂಚಿಕೊಂಡು 'ಸಂವೇದನಾಶೀಲ ನಡೆ' ಎಂದು ಪ್ರತಿಪಾದಿಸಿದ್ದಾರೆ.</p><p>ಪ್ಯಾರಿಸ್ನಲ್ಲಿ ನಡೆದ ಸಿಒಪಿ21ರಲ್ಲಿ ಕೈಗೊಳ್ಳಲಾಗಿದ್ದ ತೀರ್ಮಾನಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈಡೇರಿಸಿಲ್ಲ. ಪಳಯುಳಿಕೆ ಇಂಧನಕ್ಕಾಗಿ ಲಾಬಿ ನಡೆಸುವವರ ಪ್ರಭಾವ ಹವಾಮಾನ ಶೃಂಗಸಭೆಯ ಮೇಲಿದೆ ಎಂದೂ ಬರೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>