<p><strong>ಬರೇಲಿ</strong>: ಉತ್ತರ ಪ್ರದೇಶದ ಬರೇಲಿಯ ಕ್ವಿಲಾ ಪ್ರದೇಶದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಒಂದು ತಿಂಗಳ ಹಸುಗೂಸು ಹಸಿವಿನಿಂದ ಮೃತಪಟ್ಟಿದೆ.</p><p>ಶಾದಾಬ್ ಮತ್ತು ಹೀನಾ (ಪೋಷಕರು) ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಭಿಕ್ಷೆ ಬೇಡಿ ಜೀವನ ಕಟ್ಟಿಕೊಂಡಿದ್ದವರು. ಅಂದು (ಶನಿವಾರ) ಘಟನೆ ನಡೆದ ದಿನ ತಮ್ಮ ಮೂವರು ಮಕ್ಕಳೊಂದಿಗೆ ಭಿಕ್ಷೆ ಬೇಡಲು ಹೋಗಿದ್ದರು. ನವಜಾತ ಶಿಶುವನ್ನು ಮನೆಯೊಳಗೆ ಬಿಟ್ಟು ಬೀಗ ಹಾಕಿ ಹೋಗಿದ್ದರು.</p><p>ಸಂಜೆ ಪೋಷಕರು ಮನೆಗೆ ಮರಳಿದಾಗ ಮಗು ಮೃತಪಟ್ಟಿರುವುದು ಕಂಡುಬಂದಿದೆ.</p>.ಪಾಕಿಸ್ತಾನದಲ್ಲಿ ಅಮೆರಿಕ-ಇರಾನ್ ಮಾತುಕತೆ ಸಾಧ್ಯವೇ? ಶ್ವೇತಭವನದ ಉತ್ತರ ಹೀಗಿತ್ತು.ಪಂಜಾಬ್ನಲ್ಲೂ Statue of Liberty: ಎನ್ಆರ್ಐ ಯೋಜನೆ ಹಿಂದಿದೆ ಕಾರಣ.<p>ವರದಿಗಳ ಪ್ರಕಾರ, ಮಗು ಅವಧಿಗೂ ಮುನ್ನವೇ ಜನಿಸಿದ್ದು, ಅತ್ಯಂತ ಅಶಕ್ತವಾಗಿತ್ತು. ಶಿಶು ದೀರ್ಘಕಾಲ ಹಸಿವಿನಿಂದಾಗಿ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.</p><p>ಪೊಲೀಸ್ ಅಧಿಕಾರಿಗಳ ಪ್ರಕಾರ, ಮಗು ತೀವ್ರ ಅಪೌಷ್ಟಿಕತೆಯಿಂದ ಕೂಡಿತ್ತು. ಆದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ.</p><p>ಈ ಕುಟುಂಬವು ತೀವ್ರ ಬಡತನದಲ್ಲಿತ್ತು. ಭಿಕ್ಷಾಟನೆಯಿಂದಲೇ ಜೀವನ ಸಾಗಿಸುತ್ತಿತ್ತು. ಅಲ್ಲದೆ, ಪೋಷಕರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.</p>.ಮತ್ತಷ್ಟು ಇಳೀತು ಚಿನ್ನದ ರೇಟು: ಆಭರಣ ಖರೀದಿಗಿದು ಒಳ್ಳೇ ಸಮಯವೇ?.₹2.9 ಲಕ್ಷದ ಗ್ರಾಫಿಕ್ಸ್ ಕಾರ್ಡ್ ಆರ್ಡರ್: ಸಿಕ್ಕಿದ್ದು ಡಿಟರ್ಜೆಂಟ್ ಪೌಡರ್!.ಧುರಂಧರ್ 2 ಬಿಡುಗಡೆ ಬೆನ್ನಲ್ಲೆ ಪಾಕ್ನಲ್ಲಿ ಭಾರತೀಯ ಗೂಢಚಾರರಿಗಾಗಿ ಹುಡುಕಾಟ.IPL 2026| ಇಲ್ಲಿ ಮಾತ್ರ ಟಿಕೆಟ್ ಖರೀದಿಸಿ, ಮೋಸದ ಜಾಲಕ್ಕೆ ಒಳಗಾಗಬೇಡಿ: RCB.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬರೇಲಿ</strong>: ಉತ್ತರ ಪ್ರದೇಶದ ಬರೇಲಿಯ ಕ್ವಿಲಾ ಪ್ರದೇಶದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಒಂದು ತಿಂಗಳ ಹಸುಗೂಸು ಹಸಿವಿನಿಂದ ಮೃತಪಟ್ಟಿದೆ.</p><p>ಶಾದಾಬ್ ಮತ್ತು ಹೀನಾ (ಪೋಷಕರು) ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಭಿಕ್ಷೆ ಬೇಡಿ ಜೀವನ ಕಟ್ಟಿಕೊಂಡಿದ್ದವರು. ಅಂದು (ಶನಿವಾರ) ಘಟನೆ ನಡೆದ ದಿನ ತಮ್ಮ ಮೂವರು ಮಕ್ಕಳೊಂದಿಗೆ ಭಿಕ್ಷೆ ಬೇಡಲು ಹೋಗಿದ್ದರು. ನವಜಾತ ಶಿಶುವನ್ನು ಮನೆಯೊಳಗೆ ಬಿಟ್ಟು ಬೀಗ ಹಾಕಿ ಹೋಗಿದ್ದರು.</p><p>ಸಂಜೆ ಪೋಷಕರು ಮನೆಗೆ ಮರಳಿದಾಗ ಮಗು ಮೃತಪಟ್ಟಿರುವುದು ಕಂಡುಬಂದಿದೆ.</p>.ಪಾಕಿಸ್ತಾನದಲ್ಲಿ ಅಮೆರಿಕ-ಇರಾನ್ ಮಾತುಕತೆ ಸಾಧ್ಯವೇ? ಶ್ವೇತಭವನದ ಉತ್ತರ ಹೀಗಿತ್ತು.ಪಂಜಾಬ್ನಲ್ಲೂ Statue of Liberty: ಎನ್ಆರ್ಐ ಯೋಜನೆ ಹಿಂದಿದೆ ಕಾರಣ.<p>ವರದಿಗಳ ಪ್ರಕಾರ, ಮಗು ಅವಧಿಗೂ ಮುನ್ನವೇ ಜನಿಸಿದ್ದು, ಅತ್ಯಂತ ಅಶಕ್ತವಾಗಿತ್ತು. ಶಿಶು ದೀರ್ಘಕಾಲ ಹಸಿವಿನಿಂದಾಗಿ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.</p><p>ಪೊಲೀಸ್ ಅಧಿಕಾರಿಗಳ ಪ್ರಕಾರ, ಮಗು ತೀವ್ರ ಅಪೌಷ್ಟಿಕತೆಯಿಂದ ಕೂಡಿತ್ತು. ಆದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ.</p><p>ಈ ಕುಟುಂಬವು ತೀವ್ರ ಬಡತನದಲ್ಲಿತ್ತು. ಭಿಕ್ಷಾಟನೆಯಿಂದಲೇ ಜೀವನ ಸಾಗಿಸುತ್ತಿತ್ತು. ಅಲ್ಲದೆ, ಪೋಷಕರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.</p>.ಮತ್ತಷ್ಟು ಇಳೀತು ಚಿನ್ನದ ರೇಟು: ಆಭರಣ ಖರೀದಿಗಿದು ಒಳ್ಳೇ ಸಮಯವೇ?.₹2.9 ಲಕ್ಷದ ಗ್ರಾಫಿಕ್ಸ್ ಕಾರ್ಡ್ ಆರ್ಡರ್: ಸಿಕ್ಕಿದ್ದು ಡಿಟರ್ಜೆಂಟ್ ಪೌಡರ್!.ಧುರಂಧರ್ 2 ಬಿಡುಗಡೆ ಬೆನ್ನಲ್ಲೆ ಪಾಕ್ನಲ್ಲಿ ಭಾರತೀಯ ಗೂಢಚಾರರಿಗಾಗಿ ಹುಡುಕಾಟ.IPL 2026| ಇಲ್ಲಿ ಮಾತ್ರ ಟಿಕೆಟ್ ಖರೀದಿಸಿ, ಮೋಸದ ಜಾಲಕ್ಕೆ ಒಳಗಾಗಬೇಡಿ: RCB.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>