<p><strong>ನವದೆಹಲಿ:</strong> ಅಡುಗೆ ಅನಿಲ (ಎಲ್ಪಿಜಿ) ಸಾಗಿಸುವ, ಭಾರತದ ಧ್ವಜ ಹೊಂದಿರುವ ಎರಡು ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಇರಾನ್ ಶುಕ್ರವಾರ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.</p>.<p>ಇರಾನ್ನ ನಿರ್ಧಾರವು ಭಾರತದಲ್ಲಿ ತಲೆದೋರಿರುವ ಅಡುಗೆ ಅನಿಲ ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ನೆರವಾಗಲಿದೆ. ಸೌದಿ ಅರೇಬಿಯಾದ ತೈಲ ಹೊತ್ತು ತರುತ್ತಿರುವ ಇನ್ನೊಂದು ಹಡಗು ಮಾರ್ಚ್ 1ರಂದು ಹೊರ್ಮುಜ್ ಜಲಸಂಧಿ ದಾಟಿದ್ದು, ಶನಿವಾರ ಭಾರತ ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.</p>.<p>ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿರುವ ಭಾರತದ ಧ್ವಜ ಹೊಂದಿರುವ 28 ಹಡಗುಗಳಲ್ಲಿ ಒಂದು ಹಡಗು ಸುರಕ್ಷಿತವಾಗಿ ಜಲಸಂಧಿಯನ್ನು ದಾಟಿದೆ. </p>.<p>ಒಮಾನ್ನಿಂದ ಆಫ್ರಿಕಾಕ್ಕೆ ತೈಲ ಸಾಗಿಸುತ್ತಿರುವ ‘ಜಗ್ ಪ್ರಕಾಶ್’ ಹೆಸರಿನ ಹಡಗು ಹೊರ್ಮುಜ್ ಜಲಸಂಧಿಯ ಪೂರ್ವದಿಂದ ಪ್ರಯಾಣ ಬೆಳೆಸಿದೆ ಎಂದು ಬಂದರು ಮತ್ತು ಜಲಸಾರಿಗೆ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಹೊರ್ಮುಜ್ ಜಲಸಂಧಿಯ ಪಶ್ಚಿಮದಲ್ಲಿ 24 ಮತ್ತು ಪೂರ್ವದಲ್ಲಿ ನಾಲ್ಕು ಸೇರಿದಂತೆ ಭಾರತದ ಧ್ವಜ ಹೊಂದಿರುವ ಒಟ್ಟು 28 ಹಡಗುಗಳು ಸಿಲುಕಿಕೊಂಡಿವೆ ಎಂದು ಅವರು ಹೇಳಿದರು. ಪೂರ್ವ ಭಾಗದಲ್ಲಿದ್ದ ನಾಲ್ಕು ಹಡಗುಗಳಲ್ಲಿ ‘ಜಗ್ ಪ್ರಕಾಶ್’ ಇದೀಗ ತಾಂಜಾನಿಯಾದ ತಾಂಗಾಕ್ಕೆ ಪ್ರಯಾಣ ಆರಂಭಿಸಿದೆ. </p>.<p>ಅನುಮತಿ ಶೀಘ್ರ: ಹೊರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಸಾಗುವ ಎಲ್ಲ ಹಡಗುಗಳ ಸುಗಮ ಸಂಚಾರಕ್ಕೆ ಇರಾನ್ ಅನುಮತಿ ನೀಡಲಿದೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಶುಕ್ರವಾರ ದೃಢಪಡಿಸಿದ್ದಾರೆ.</p>.<p>‘ಭಾರತ ಮತ್ತು ಇರಾನ್ ನಡುವೆ ಗೆಳೆತನ ಇದ್ದು, ಸಮಾನ ಹಿತಾಸಕ್ತಿಗಳನ್ನು ಪರಸ್ಪರ ಹಂಚಿಕೊಂಡಿವೆ. ಭಾರತದ ಹಡಗುಗಳ ಸುಗಮ ಸಂಚಾರಕ್ಕೆ ಅನುಮತಿ ನೀಡುವ ನಿರ್ಧಾರವನ್ನು ಇರಾನ್ ಆಡಳಿತ ಶೀಘ್ರದಲ್ಲೇ ತೆಗೆದುಕೊಳ್ಳಲಿದೆ’ ಎಂದಿದ್ದಾರೆ.</p>.<p>ಜೈಶಂಕರ್ ಮಾತುಕತೆ: ಹೊರ್ಮುಜ್ ಜಲಸಂಧಿಯ ಎರಡೂ ಬದಿಗಳಲ್ಲಿ ಬೀಡುಬಿಟ್ಟಿರುವ ಭಾರತದ 28 ವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ಮಾತುಕತೆ ನಡೆಸಿದರು.</p>.<p>ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದಾಗಿನಿಂದ ಉಭಯ ನಾಯಕರ ನಡುವೆ ನಡೆದ ನಾಲ್ಕನೇ ಸುತ್ತಿನ ಮಾತುಕತೆ ಇದಾಗಿದೆ. ಇಬ್ಬರೂ ನಾಯಕರು ದೂರವಾಣಿ ಮೂಲಕ ಗುರುವಾರ ರಾತ್ರಿ ಮಾತನಾಡಿದ್ದಾರೆ. </p>.<p>‘ಇರಾನ್ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ್ದೇನೆ. ದ್ವಿಪಕ್ಷೀಯ ವಿಷಯಗಳು ಮತ್ತು ಬ್ರಿಕ್ಸ್ ಸಂಬಂಧಿತ ವಿಷಯಗಳನ್ನು ಈ ವೇಳೆ ಚರ್ಚಿಸಿದ್ದೇವೆ’ ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. </p>.<p>ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ದಾಳಿ ಮತ್ತು ಅದರ ಪರಿಣಾಮಗಳು ಹಾಗೂ ಪ್ರಾದೇಶಿಕ ಸ್ಥಿತಿಗತಿ ಕುರಿತು ಅರಘ್ಚಿ ಅವರು ಈ ವೇಳೆ ಮಾಹಿತಿ ನಿಡಿದ್ದಾರೆ. ದಾಳಿಗಳಿಗೆ ಪ್ರತಿಯಾಗಿ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಇರಾನ್ನ ಹಕ್ಕಾಗಿದೆ ಎಂದೂ ಅವರು ಜೈಶಂಕರ್ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. </p>.<p>ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕದ ಆಕ್ರಮಣವನ್ನು ಜಾಗತಿಕ ಮತ್ತು ಪ್ರಾದೇಶಿಕ ವೇದಿಕೆಗಳು ಹಾಗೂ ಸಂಸ್ಥೆಗಳು ತೀವ್ರವಾಗಿ ಖಂಡಿಸಬೇಕು ಎಂದು ಅವರು ಈ ವೇಳೆ ಒತ್ತಿ ಹೇಳಿದ್ದಾರೆ ಎಂದು ಗೊತ್ತಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅಡುಗೆ ಅನಿಲ (ಎಲ್ಪಿಜಿ) ಸಾಗಿಸುವ, ಭಾರತದ ಧ್ವಜ ಹೊಂದಿರುವ ಎರಡು ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಇರಾನ್ ಶುಕ್ರವಾರ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.</p>.<p>ಇರಾನ್ನ ನಿರ್ಧಾರವು ಭಾರತದಲ್ಲಿ ತಲೆದೋರಿರುವ ಅಡುಗೆ ಅನಿಲ ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ನೆರವಾಗಲಿದೆ. ಸೌದಿ ಅರೇಬಿಯಾದ ತೈಲ ಹೊತ್ತು ತರುತ್ತಿರುವ ಇನ್ನೊಂದು ಹಡಗು ಮಾರ್ಚ್ 1ರಂದು ಹೊರ್ಮುಜ್ ಜಲಸಂಧಿ ದಾಟಿದ್ದು, ಶನಿವಾರ ಭಾರತ ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.</p>.<p>ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿರುವ ಭಾರತದ ಧ್ವಜ ಹೊಂದಿರುವ 28 ಹಡಗುಗಳಲ್ಲಿ ಒಂದು ಹಡಗು ಸುರಕ್ಷಿತವಾಗಿ ಜಲಸಂಧಿಯನ್ನು ದಾಟಿದೆ. </p>.<p>ಒಮಾನ್ನಿಂದ ಆಫ್ರಿಕಾಕ್ಕೆ ತೈಲ ಸಾಗಿಸುತ್ತಿರುವ ‘ಜಗ್ ಪ್ರಕಾಶ್’ ಹೆಸರಿನ ಹಡಗು ಹೊರ್ಮುಜ್ ಜಲಸಂಧಿಯ ಪೂರ್ವದಿಂದ ಪ್ರಯಾಣ ಬೆಳೆಸಿದೆ ಎಂದು ಬಂದರು ಮತ್ತು ಜಲಸಾರಿಗೆ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಹೊರ್ಮುಜ್ ಜಲಸಂಧಿಯ ಪಶ್ಚಿಮದಲ್ಲಿ 24 ಮತ್ತು ಪೂರ್ವದಲ್ಲಿ ನಾಲ್ಕು ಸೇರಿದಂತೆ ಭಾರತದ ಧ್ವಜ ಹೊಂದಿರುವ ಒಟ್ಟು 28 ಹಡಗುಗಳು ಸಿಲುಕಿಕೊಂಡಿವೆ ಎಂದು ಅವರು ಹೇಳಿದರು. ಪೂರ್ವ ಭಾಗದಲ್ಲಿದ್ದ ನಾಲ್ಕು ಹಡಗುಗಳಲ್ಲಿ ‘ಜಗ್ ಪ್ರಕಾಶ್’ ಇದೀಗ ತಾಂಜಾನಿಯಾದ ತಾಂಗಾಕ್ಕೆ ಪ್ರಯಾಣ ಆರಂಭಿಸಿದೆ. </p>.<p>ಅನುಮತಿ ಶೀಘ್ರ: ಹೊರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಸಾಗುವ ಎಲ್ಲ ಹಡಗುಗಳ ಸುಗಮ ಸಂಚಾರಕ್ಕೆ ಇರಾನ್ ಅನುಮತಿ ನೀಡಲಿದೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಶುಕ್ರವಾರ ದೃಢಪಡಿಸಿದ್ದಾರೆ.</p>.<p>‘ಭಾರತ ಮತ್ತು ಇರಾನ್ ನಡುವೆ ಗೆಳೆತನ ಇದ್ದು, ಸಮಾನ ಹಿತಾಸಕ್ತಿಗಳನ್ನು ಪರಸ್ಪರ ಹಂಚಿಕೊಂಡಿವೆ. ಭಾರತದ ಹಡಗುಗಳ ಸುಗಮ ಸಂಚಾರಕ್ಕೆ ಅನುಮತಿ ನೀಡುವ ನಿರ್ಧಾರವನ್ನು ಇರಾನ್ ಆಡಳಿತ ಶೀಘ್ರದಲ್ಲೇ ತೆಗೆದುಕೊಳ್ಳಲಿದೆ’ ಎಂದಿದ್ದಾರೆ.</p>.<p>ಜೈಶಂಕರ್ ಮಾತುಕತೆ: ಹೊರ್ಮುಜ್ ಜಲಸಂಧಿಯ ಎರಡೂ ಬದಿಗಳಲ್ಲಿ ಬೀಡುಬಿಟ್ಟಿರುವ ಭಾರತದ 28 ವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ಮಾತುಕತೆ ನಡೆಸಿದರು.</p>.<p>ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದಾಗಿನಿಂದ ಉಭಯ ನಾಯಕರ ನಡುವೆ ನಡೆದ ನಾಲ್ಕನೇ ಸುತ್ತಿನ ಮಾತುಕತೆ ಇದಾಗಿದೆ. ಇಬ್ಬರೂ ನಾಯಕರು ದೂರವಾಣಿ ಮೂಲಕ ಗುರುವಾರ ರಾತ್ರಿ ಮಾತನಾಡಿದ್ದಾರೆ. </p>.<p>‘ಇರಾನ್ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ್ದೇನೆ. ದ್ವಿಪಕ್ಷೀಯ ವಿಷಯಗಳು ಮತ್ತು ಬ್ರಿಕ್ಸ್ ಸಂಬಂಧಿತ ವಿಷಯಗಳನ್ನು ಈ ವೇಳೆ ಚರ್ಚಿಸಿದ್ದೇವೆ’ ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. </p>.<p>ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ದಾಳಿ ಮತ್ತು ಅದರ ಪರಿಣಾಮಗಳು ಹಾಗೂ ಪ್ರಾದೇಶಿಕ ಸ್ಥಿತಿಗತಿ ಕುರಿತು ಅರಘ್ಚಿ ಅವರು ಈ ವೇಳೆ ಮಾಹಿತಿ ನಿಡಿದ್ದಾರೆ. ದಾಳಿಗಳಿಗೆ ಪ್ರತಿಯಾಗಿ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಇರಾನ್ನ ಹಕ್ಕಾಗಿದೆ ಎಂದೂ ಅವರು ಜೈಶಂಕರ್ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. </p>.<p>ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕದ ಆಕ್ರಮಣವನ್ನು ಜಾಗತಿಕ ಮತ್ತು ಪ್ರಾದೇಶಿಕ ವೇದಿಕೆಗಳು ಹಾಗೂ ಸಂಸ್ಥೆಗಳು ತೀವ್ರವಾಗಿ ಖಂಡಿಸಬೇಕು ಎಂದು ಅವರು ಈ ವೇಳೆ ಒತ್ತಿ ಹೇಳಿದ್ದಾರೆ ಎಂದು ಗೊತ್ತಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>