<p><strong>ನವದೆಹಲಿ</strong>: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂರ್ಘಷದಿಂದಾಗಿ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದು, ಈ ನಡುವೆ ಸಮಸ್ಯೆಯನ್ನು ಪರಿಹರಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ತಿಳಿಸಿದೆ.</p><p>ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ, ಇರಾನ್ ಮತ್ತು ಭಾರತ ಮಿತ್ರ ರಾಷ್ಟ್ರಗಳು ಎಂದು ನಂಬುತ್ತೇವೆ. ಉಭಯ ರಾಷ್ಟ್ರಗಳಿಗೆ 'ಸಾಮಾನ್ಯ ಹಿತಾಸಕ್ತಿ ಹಾಗೂ, ಸಾಮಾನ್ಯ ನಂಬಿಕೆ ಇದೆ' ಎಂದು ಹೇಳಿದ್ದಾರೆ.</p><p>ಯುದ್ಧದ ಪರಿಸ್ಥಿತಿ ಮುಂದುವರಿದಿದ್ದು ಇರಾನ್ ಯುದ್ಧವನ್ನು ಬಯಸುವುದಿಲ್ಲ, ಆದರೆ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಫತಾಲಿ ತಿಳಿಸಿದ್ದಾರೆ.</p>.ಕೇರಳದಲ್ಲಿ ಮಲಯಾಳ ಕಡ್ಡಾಯ ಕಾಯ್ದೆ: ಕಾಸರಗೋಡು ಕನ್ನಡದ ಅಸ್ಮಿತೆ ಮೇಲೆ ಕರಿಮೋಡ .ಅಖಿಲೇಶ್ ಚಿಪ್ಪಳಿಯವರ ಬರಹ: ಯುದ್ಧದಿಂದ ಮನುಷ್ಯನಷ್ಟೇ ಸಂತ್ರಸ್ತನಲ್ಲ. <p>ಕಳೆದ ನಾಲ್ಕೈದು ದಿನಗಳಲ್ಲಿ ಇರಾನ್ ಯಾವುದೇ ಭಾರತೀಯ ಧ್ವಜ ಹೊಂದಿರುವ ವಾಣಿಜ್ಯ ಟ್ಯಾಂಕರ್ ಅನ್ನು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಿಲ್ಲ ಎಂದು ತಿಳಿದುಬಂದಿದೆ.</p><p>677 ನಾವಿಕರು, ಭಾರತೀಯ ಧ್ವಜ ಹೊಂದಿರುವ ಒಟ್ಟು 24 ಹಡಗುಗಳು ಪ್ರಸ್ತುತ ಹೊರ್ಮುಜ್ ಜಲಸಂಧಿಯ ಪಶ್ಚಿಮ ದಿಕ್ಕಿನಲ್ಲಿ ನಿಂತಿವೆ. ಆದರೆ, 101 ನಾವಿಕರನ್ನು ಹೊಂದಿರುವ ನಾಲ್ಕು ಹಡಗುಗಳು ಕಾರ್ಯತಂತ್ರದ ಜಲಮಾರ್ಗದ ಪೂರ್ವಕ್ಕೆ ನಿಂತಿವೆ ಎಂದು ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಇರಾನ್ ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದ ನಂತರ ಜಾಗತಿಕ ತೈಲ ಮತ್ತು ಅನಿಲ ಸರಬರಾಜಿಗೆ ತೊಡಕಾಗಿದ್ದು, ಬೆಲೆ ಏರುಗತಿಯಲ್ಲಿದೆ. ಈ ಮಾರ್ಗದ ಮೂಲಕ ಶೇ 20ರಷ್ಟು ತೈಲ ಸರಬರಾಜಾಗುತ್ತದೆ</p>.ಧೈರ್ಯ ಇರುವ ಒಬ್ಬ ವ್ಯಕ್ತಿ ಬಹುಮತ ತರಬಲ್ಲ: ಡಿ.ಕೆ. ಶಿವಕುಮಾರ್.ಹಾವೇರಿ: ಚಿನ್ನದ ಸರ ಕಳವಾಗಿದ್ದಕ್ಕೆ ಠಾಣೆಗೆ ಬಸ್ಸಿನ ಸಮೇತ ಬಂದ ಮಹಿಳೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂರ್ಘಷದಿಂದಾಗಿ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದು, ಈ ನಡುವೆ ಸಮಸ್ಯೆಯನ್ನು ಪರಿಹರಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ತಿಳಿಸಿದೆ.</p><p>ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ, ಇರಾನ್ ಮತ್ತು ಭಾರತ ಮಿತ್ರ ರಾಷ್ಟ್ರಗಳು ಎಂದು ನಂಬುತ್ತೇವೆ. ಉಭಯ ರಾಷ್ಟ್ರಗಳಿಗೆ 'ಸಾಮಾನ್ಯ ಹಿತಾಸಕ್ತಿ ಹಾಗೂ, ಸಾಮಾನ್ಯ ನಂಬಿಕೆ ಇದೆ' ಎಂದು ಹೇಳಿದ್ದಾರೆ.</p><p>ಯುದ್ಧದ ಪರಿಸ್ಥಿತಿ ಮುಂದುವರಿದಿದ್ದು ಇರಾನ್ ಯುದ್ಧವನ್ನು ಬಯಸುವುದಿಲ್ಲ, ಆದರೆ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಫತಾಲಿ ತಿಳಿಸಿದ್ದಾರೆ.</p>.ಕೇರಳದಲ್ಲಿ ಮಲಯಾಳ ಕಡ್ಡಾಯ ಕಾಯ್ದೆ: ಕಾಸರಗೋಡು ಕನ್ನಡದ ಅಸ್ಮಿತೆ ಮೇಲೆ ಕರಿಮೋಡ .ಅಖಿಲೇಶ್ ಚಿಪ್ಪಳಿಯವರ ಬರಹ: ಯುದ್ಧದಿಂದ ಮನುಷ್ಯನಷ್ಟೇ ಸಂತ್ರಸ್ತನಲ್ಲ. <p>ಕಳೆದ ನಾಲ್ಕೈದು ದಿನಗಳಲ್ಲಿ ಇರಾನ್ ಯಾವುದೇ ಭಾರತೀಯ ಧ್ವಜ ಹೊಂದಿರುವ ವಾಣಿಜ್ಯ ಟ್ಯಾಂಕರ್ ಅನ್ನು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಿಲ್ಲ ಎಂದು ತಿಳಿದುಬಂದಿದೆ.</p><p>677 ನಾವಿಕರು, ಭಾರತೀಯ ಧ್ವಜ ಹೊಂದಿರುವ ಒಟ್ಟು 24 ಹಡಗುಗಳು ಪ್ರಸ್ತುತ ಹೊರ್ಮುಜ್ ಜಲಸಂಧಿಯ ಪಶ್ಚಿಮ ದಿಕ್ಕಿನಲ್ಲಿ ನಿಂತಿವೆ. ಆದರೆ, 101 ನಾವಿಕರನ್ನು ಹೊಂದಿರುವ ನಾಲ್ಕು ಹಡಗುಗಳು ಕಾರ್ಯತಂತ್ರದ ಜಲಮಾರ್ಗದ ಪೂರ್ವಕ್ಕೆ ನಿಂತಿವೆ ಎಂದು ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಇರಾನ್ ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದ ನಂತರ ಜಾಗತಿಕ ತೈಲ ಮತ್ತು ಅನಿಲ ಸರಬರಾಜಿಗೆ ತೊಡಕಾಗಿದ್ದು, ಬೆಲೆ ಏರುಗತಿಯಲ್ಲಿದೆ. ಈ ಮಾರ್ಗದ ಮೂಲಕ ಶೇ 20ರಷ್ಟು ತೈಲ ಸರಬರಾಜಾಗುತ್ತದೆ</p>.ಧೈರ್ಯ ಇರುವ ಒಬ್ಬ ವ್ಯಕ್ತಿ ಬಹುಮತ ತರಬಲ್ಲ: ಡಿ.ಕೆ. ಶಿವಕುಮಾರ್.ಹಾವೇರಿ: ಚಿನ್ನದ ಸರ ಕಳವಾಗಿದ್ದಕ್ಕೆ ಠಾಣೆಗೆ ಬಸ್ಸಿನ ಸಮೇತ ಬಂದ ಮಹಿಳೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>