<p>ಇರಾನ್ ಯುದ್ಧ, ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆ ಆತಂಕ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ಇರಾನ್ ಸೇನೆ ದಾಳಿ ನಡೆಸಿರುವುದನ್ನು ಭಾರತ ಬುಧವಾರ ಖಂಡಿಸಿದೆ. ಇಸ್ರೇಲ್ ಹಾಗೂ ಅಮೆರಿಕ ಪಡೆಗಳು, ಇರಾನ್ ವಿರುದ್ಧ ಫೆಬ್ರುವರಿ 28ರಂದು ಜಂಟಿಯಾಗಿ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದೆ.</p>.ಭಾರತಕ್ಕೆ ಸರಕು ತರುತ್ತಿದ್ದ ಹಡಗಿನ ಮೇಲೆ ಇರಾನ್ ದಾಳಿ: ವಿದೇಶಾಂಗ ಸಚಿವಾಲಯ ಕಿಡಿ.<p>ಪಶ್ಚಿಮ ಏಷ್ಯಾ ಸಂಘರ್ಷ ಬುಧವಾರ ಇನ್ನಷ್ಟು ತಾರಕಕ್ಕೇರಿದ್ದು, ಅಮೆರಿಕ ಸೇನೆಯು ಇರಾನ್ನ ಯುದ್ಧನೌಕೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದ್ದರೆ, ಇರಾನ್ ದೇಶವು ಪರ್ಷಿಯನ್ ಕೊಲ್ಲಿಯಾದ್ಯಂತ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದೆ.</p>.ಪಶ್ಚಿಮ ಏಷ್ಯಾ ಸಂಘರ್ಷ: ಭಾರತಕ್ಕೆ ಬರುತ್ತಿದ್ದ ಸರಕು ನೌಕೆ ಮೇಲೆ ಇರಾನ್ ದಾಳಿ.<p>ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಕಾರವಾರಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊರಟಿದ್ದ ಖಾಸಗಿ ಕಂಪನಿಯ ಬಸ್ (ಕೆಎ 01 ಎಎಸ್ 9746) ಉರುಳಿಬಿದ್ದಿದೆ. ಅತೀ ವೇಗವಾಗಿ ಬಸ್ ಚಲಾಯಿಸುತ್ತಿದ್ದ ಚಾಲಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ.</p>.ಬೆಂಗಳೂರಿನಿಂದ ಕಾರವಾರ ಹೊರಟಿದ್ದ ಖಾಸಗಿ ಬಸ್ ಹಾವೇರಿಯಲ್ಲಿ ಪಲ್ಟಿ; ಹಲವರಿಗೆ ಗಾಯ.<p><strong>ಬೆಂಗಳೂರು:</strong> ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿಯಂತಹ ಬದ್ಧವೆಚ್ಚವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. 2026–27ನೇ ಸಾಲಿನಲ್ಲಿ ₹1.86 ಲಕ್ಷ ಕೋಟಿಯಷ್ಟಿರುವ ಬದ್ಧವೆಚ್ಚವು, 2029–30ನೇ ಸಾಲಿನಲ್ಲಿ ₹2.44 ಲಕ್ಷ ಕೋಟಿಗೆ ಏರಿಕೆಯಾಗಲಿದೆ.</p>.ರಾಜ್ಯ ಬದ್ಧವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆ: ಗ್ಯಾರಂಟಿಗಳ ಮರುವಿನ್ಯಾಸಕ್ಕೆ ಸಲಹೆ.<p>ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಬಂದ್ ಆಗಿದ್ದು, ಮದುವೆ ಸೇರಿ ಶುಭ ಸಮಾರಂಭಗಳಿಗೂ ತೊಂದರೆ ಎದುರಾಗಿದೆ. ಯುದ್ಧದ ಕಾರಣಕ್ಕೆ ಏಕಾಏಕಿ ಸಿಲಿಂಡರ್ಗಳ ಪೂರೈಕೆಯೇ ನಿಂತುಹೋಗಿರುವುದರಿಂದ ದುಡ್ಡು ಕೊಟ್ಟರೂ ಸಿಲಿಂಡರ್ಗಳು ಸಿಗುತ್ತಿಲ್ಲ. ತಿಂಗಳುಗಳ ಮುಂಚೆಯೇ ಕಲ್ಯಾಣ ಮಂಟಪ, ಊಟೋಪಚಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಕಾಯ್ದಿರಿಸಿಕೊಂಡು ನೆಮ್ಮದಿಯಿಂದ ಇದ್ದ ಕುಟುಂಬಗಳು, ಕಡೆಯ ಕ್ಷಣದಲ್ಲಿ ಪೇಚಿಗೆ ಸಿಲುಕಿವೆ. </p>.ಶುಭ ಸಮಾರಂಭಕ್ಕೂ ‘ಗ್ಯಾಸ್ ಟ್ರಬಲ್’: ಮದುವೆ, ಬೀಗರೂಟಕ್ಕಿಲ್ಲ ವಾಣಿಜ್ಯ ಸಿಲಿಂಡರ್.<p>ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ವಿಚಾರವಾಗಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಪರಸ್ಪರ ಕಿತ್ತಾಡಿಕೊಂಡ ಘಟನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯಲ್ಲಿ ನಡೆದಿದೆ.</p>.ಸಿಎಲ್ಪಿಯಲ್ಲಿ ಸಿದ್ದರಾಮಯ್ಯ ಎದುರಲ್ಲೇ ನಾರಾಯಣಸ್ವಾಮಿ– ರಾಜೇಗೌಡ ಕಿತ್ತಾಟ.<p>ಅಡುಗೆ ಅನಿಲ ಸಿಲಿಂಡರ್ ಕೊರತೆ ಕಾರಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬೆಳಗಿನ ಉಪಾಹಾರ ವಿತರಣೆಯಲ್ಲಿ ಬುಧವಾರದಿಂದ ಬದಲಾವಣೆ ಮಾಡಲಾಗಿದೆ. ಪ್ರತಿದಿನ ಭಕ್ತರಿಗೆ ವಿವಿಧ ಬಗೆಯ ಬಿಸಿ ಉಪಾಹಾರ ವಿತರಿಸಲಾಗುತ್ತಿತ್ತು. ಬೇಯಿಸುವ ತಿನಿಸುಗಳ ಬದಲಿಗೆ ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ. ಸದ್ಯ ದೇವಸ್ಥಾನದಲ್ಲಿ ಮೂರು ದಿನಗಳವರೆಗೆ ಬೇಕಾಗುವಷ್ಟು ಸಿಲಿಂಡರ್ಗಳು ಮಾತ್ರ ಲಭ್ಯ ಇವೆ. ಪೂರೈಕೆ ಆಗದೆ ಇದ್ದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. </p>.LPG ಕೊರತೆಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗಿನ ಉಪಾಹಾರದಲ್ಲಿ ಬದಲಾವಣೆ.<p>ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ, ನ್ಯಾಷನಲ್ ಕಾನ್ಫರೆನ್ಸ್(ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಜಮ್ಮು–ಕಾಶ್ಮೀರದ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.</p>.ಜಮ್ಮು: ಫಾರೂಕ್ ಅಬ್ದುಲ್ಲಾ, ಡಿಸಿಎಂ ಚೌಧರಿ ಹತ್ಯೆ ಯತ್ನ.<p>ರಾಜ್ಯದ ಕರಾವಳಿ ಪ್ರದೇಶದಲ್ಲಿ ತಾಪಮಾನ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನ ಇದು. ಉತ್ತರ ಕನ್ನಡದಲ್ಲಿ 36.6, ಬೀದರ್ನಲ್ಲಿ ಗರಿಷ್ಠ 36.3, ರಾಯಚೂರಿನಲ್ಲಿ 36.1, ಉಡುಪಿಯಲ್ಲಿ 35.8, ಚಿಕ್ಕಮಗಳೂರಿನಲ್ಲಿ 34.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. </p>.ಕರಾವಳಿ ನಿಗಿ ನಿಗಿ: ದ.ಕ. ಜಿಲ್ಲೆಯಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು.<p>ಅಮೆರಿಕ– ಇರಾನ್ ನಡುವಿನ ಯುದ್ಧದ ಬಿಸಿ ಇದೀಗ ಕಾಫಿ ಉದ್ಯಮಕ್ಕೂ ತಟ್ಟಲಾರಂಭಿಸಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಕೊರತೆ ಹಾಗೂ ಪಶ್ಚಿಮ ಏಷ್ಯಾ ದೇಶಗಳಿಗೆ ಕಾಫಿ ರಫ್ತುನಲ್ಲಿ ವ್ಯತ್ಯಯವಾಗಿರುವುದು ಕಾಫಿ ವಲಯವನ್ನು ಸಂಕಷ್ಟಕ್ಕೆ ದೂಡಿವೆ.</p>.ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆ: ಕಾಫಿ ವಲಯ ಸಂಕಷ್ಟಕ್ಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇರಾನ್ ಯುದ್ಧ, ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆ ಆತಂಕ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ಇರಾನ್ ಸೇನೆ ದಾಳಿ ನಡೆಸಿರುವುದನ್ನು ಭಾರತ ಬುಧವಾರ ಖಂಡಿಸಿದೆ. ಇಸ್ರೇಲ್ ಹಾಗೂ ಅಮೆರಿಕ ಪಡೆಗಳು, ಇರಾನ್ ವಿರುದ್ಧ ಫೆಬ್ರುವರಿ 28ರಂದು ಜಂಟಿಯಾಗಿ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದೆ.</p>.ಭಾರತಕ್ಕೆ ಸರಕು ತರುತ್ತಿದ್ದ ಹಡಗಿನ ಮೇಲೆ ಇರಾನ್ ದಾಳಿ: ವಿದೇಶಾಂಗ ಸಚಿವಾಲಯ ಕಿಡಿ.<p>ಪಶ್ಚಿಮ ಏಷ್ಯಾ ಸಂಘರ್ಷ ಬುಧವಾರ ಇನ್ನಷ್ಟು ತಾರಕಕ್ಕೇರಿದ್ದು, ಅಮೆರಿಕ ಸೇನೆಯು ಇರಾನ್ನ ಯುದ್ಧನೌಕೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದ್ದರೆ, ಇರಾನ್ ದೇಶವು ಪರ್ಷಿಯನ್ ಕೊಲ್ಲಿಯಾದ್ಯಂತ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದೆ.</p>.ಪಶ್ಚಿಮ ಏಷ್ಯಾ ಸಂಘರ್ಷ: ಭಾರತಕ್ಕೆ ಬರುತ್ತಿದ್ದ ಸರಕು ನೌಕೆ ಮೇಲೆ ಇರಾನ್ ದಾಳಿ.<p>ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಕಾರವಾರಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊರಟಿದ್ದ ಖಾಸಗಿ ಕಂಪನಿಯ ಬಸ್ (ಕೆಎ 01 ಎಎಸ್ 9746) ಉರುಳಿಬಿದ್ದಿದೆ. ಅತೀ ವೇಗವಾಗಿ ಬಸ್ ಚಲಾಯಿಸುತ್ತಿದ್ದ ಚಾಲಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ.</p>.ಬೆಂಗಳೂರಿನಿಂದ ಕಾರವಾರ ಹೊರಟಿದ್ದ ಖಾಸಗಿ ಬಸ್ ಹಾವೇರಿಯಲ್ಲಿ ಪಲ್ಟಿ; ಹಲವರಿಗೆ ಗಾಯ.<p><strong>ಬೆಂಗಳೂರು:</strong> ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿಯಂತಹ ಬದ್ಧವೆಚ್ಚವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. 2026–27ನೇ ಸಾಲಿನಲ್ಲಿ ₹1.86 ಲಕ್ಷ ಕೋಟಿಯಷ್ಟಿರುವ ಬದ್ಧವೆಚ್ಚವು, 2029–30ನೇ ಸಾಲಿನಲ್ಲಿ ₹2.44 ಲಕ್ಷ ಕೋಟಿಗೆ ಏರಿಕೆಯಾಗಲಿದೆ.</p>.ರಾಜ್ಯ ಬದ್ಧವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆ: ಗ್ಯಾರಂಟಿಗಳ ಮರುವಿನ್ಯಾಸಕ್ಕೆ ಸಲಹೆ.<p>ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಬಂದ್ ಆಗಿದ್ದು, ಮದುವೆ ಸೇರಿ ಶುಭ ಸಮಾರಂಭಗಳಿಗೂ ತೊಂದರೆ ಎದುರಾಗಿದೆ. ಯುದ್ಧದ ಕಾರಣಕ್ಕೆ ಏಕಾಏಕಿ ಸಿಲಿಂಡರ್ಗಳ ಪೂರೈಕೆಯೇ ನಿಂತುಹೋಗಿರುವುದರಿಂದ ದುಡ್ಡು ಕೊಟ್ಟರೂ ಸಿಲಿಂಡರ್ಗಳು ಸಿಗುತ್ತಿಲ್ಲ. ತಿಂಗಳುಗಳ ಮುಂಚೆಯೇ ಕಲ್ಯಾಣ ಮಂಟಪ, ಊಟೋಪಚಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಕಾಯ್ದಿರಿಸಿಕೊಂಡು ನೆಮ್ಮದಿಯಿಂದ ಇದ್ದ ಕುಟುಂಬಗಳು, ಕಡೆಯ ಕ್ಷಣದಲ್ಲಿ ಪೇಚಿಗೆ ಸಿಲುಕಿವೆ. </p>.ಶುಭ ಸಮಾರಂಭಕ್ಕೂ ‘ಗ್ಯಾಸ್ ಟ್ರಬಲ್’: ಮದುವೆ, ಬೀಗರೂಟಕ್ಕಿಲ್ಲ ವಾಣಿಜ್ಯ ಸಿಲಿಂಡರ್.<p>ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ವಿಚಾರವಾಗಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಪರಸ್ಪರ ಕಿತ್ತಾಡಿಕೊಂಡ ಘಟನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯಲ್ಲಿ ನಡೆದಿದೆ.</p>.ಸಿಎಲ್ಪಿಯಲ್ಲಿ ಸಿದ್ದರಾಮಯ್ಯ ಎದುರಲ್ಲೇ ನಾರಾಯಣಸ್ವಾಮಿ– ರಾಜೇಗೌಡ ಕಿತ್ತಾಟ.<p>ಅಡುಗೆ ಅನಿಲ ಸಿಲಿಂಡರ್ ಕೊರತೆ ಕಾರಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬೆಳಗಿನ ಉಪಾಹಾರ ವಿತರಣೆಯಲ್ಲಿ ಬುಧವಾರದಿಂದ ಬದಲಾವಣೆ ಮಾಡಲಾಗಿದೆ. ಪ್ರತಿದಿನ ಭಕ್ತರಿಗೆ ವಿವಿಧ ಬಗೆಯ ಬಿಸಿ ಉಪಾಹಾರ ವಿತರಿಸಲಾಗುತ್ತಿತ್ತು. ಬೇಯಿಸುವ ತಿನಿಸುಗಳ ಬದಲಿಗೆ ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ. ಸದ್ಯ ದೇವಸ್ಥಾನದಲ್ಲಿ ಮೂರು ದಿನಗಳವರೆಗೆ ಬೇಕಾಗುವಷ್ಟು ಸಿಲಿಂಡರ್ಗಳು ಮಾತ್ರ ಲಭ್ಯ ಇವೆ. ಪೂರೈಕೆ ಆಗದೆ ಇದ್ದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. </p>.LPG ಕೊರತೆಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗಿನ ಉಪಾಹಾರದಲ್ಲಿ ಬದಲಾವಣೆ.<p>ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ, ನ್ಯಾಷನಲ್ ಕಾನ್ಫರೆನ್ಸ್(ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಜಮ್ಮು–ಕಾಶ್ಮೀರದ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.</p>.ಜಮ್ಮು: ಫಾರೂಕ್ ಅಬ್ದುಲ್ಲಾ, ಡಿಸಿಎಂ ಚೌಧರಿ ಹತ್ಯೆ ಯತ್ನ.<p>ರಾಜ್ಯದ ಕರಾವಳಿ ಪ್ರದೇಶದಲ್ಲಿ ತಾಪಮಾನ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನ ಇದು. ಉತ್ತರ ಕನ್ನಡದಲ್ಲಿ 36.6, ಬೀದರ್ನಲ್ಲಿ ಗರಿಷ್ಠ 36.3, ರಾಯಚೂರಿನಲ್ಲಿ 36.1, ಉಡುಪಿಯಲ್ಲಿ 35.8, ಚಿಕ್ಕಮಗಳೂರಿನಲ್ಲಿ 34.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. </p>.ಕರಾವಳಿ ನಿಗಿ ನಿಗಿ: ದ.ಕ. ಜಿಲ್ಲೆಯಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು.<p>ಅಮೆರಿಕ– ಇರಾನ್ ನಡುವಿನ ಯುದ್ಧದ ಬಿಸಿ ಇದೀಗ ಕಾಫಿ ಉದ್ಯಮಕ್ಕೂ ತಟ್ಟಲಾರಂಭಿಸಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಕೊರತೆ ಹಾಗೂ ಪಶ್ಚಿಮ ಏಷ್ಯಾ ದೇಶಗಳಿಗೆ ಕಾಫಿ ರಫ್ತುನಲ್ಲಿ ವ್ಯತ್ಯಯವಾಗಿರುವುದು ಕಾಫಿ ವಲಯವನ್ನು ಸಂಕಷ್ಟಕ್ಕೆ ದೂಡಿವೆ.</p>.ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆ: ಕಾಫಿ ವಲಯ ಸಂಕಷ್ಟಕ್ಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>