<p>ಇರಾನ್ ಯುದ್ಧ, ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆ ಆತಂಕ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ಟೆಕ್ಸಾಸ್ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ತೈಲ ಸಂಸ್ಕರಣಾ ಘಟಕಕ್ಕೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.</p>.ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ: ಡೊನಾಲ್ಡ್ ಟ್ರಂಪ್ ಘೋಷಣೆ.<p>ಹರಿಯಾಣದ ಸೋನಿಪತ್ನ ಮದೀನಾ ಗಾಮ್ರಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದು, ರೈತ ಕುಟುಂಬದ ಮದುವೆಯಲ್ಲಿ ಭಾಗಿಯಾಗಿದ್ದಾರೆ. 2023ರಲ್ಲಿ ರಾಹುಲ್ ಗಾಂಧಿ ಶಿಮ್ಲಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದರು. ರೈತರ ಜೊತೆಗೂಡಿ ಭತ್ತ ನಾಟಿ ಮಾಡಿದ್ದರು. ರಾಹುಲ್ಗೆ ಭತ್ತ ನಾಟಿ ಮಾಡಲು ರೈತ ಸಂಜಯ್ ಮಲಿಕ್ ಸಹಾಯ ಮಾಡಿದ್ದರು.</p>.3 ವರ್ಷದ ಹಿಂದೆ ಕೊಟ್ಟ ಮಾತು..ರೈತನ ಮಗಳ ಮದುವೆಯಲ್ಲಿ ರಾಹುಲ್ ಗಾಂಧಿ...<p>ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯು ಮಂಗಳವಾರ ಲೋಕಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ‘ಸ್ಪೀಕರ್ ಬಿರ್ಲಾ ಅವರು ಸಜ್ಜನ. ಆದರೆ, ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ವಿರೋಧ ಪಕ್ಷದ ಸಂಸದರು ದೂರಿದರು. </p>.ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ಪಟ್ಟು: ಸದನದಲ್ಲಿ ಕೊಲಾಹಲ.<p>ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮುಂದೂಡಿಕೆಯಾಗಿ ಜೂನ್ 4ರಂದು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ವರುಣ್ ಧವನ್, ಪೂಜಾ ಹೆಗ್ಡೆ ಹಾಗೂ ಮೃಣಾಲ್ ಠಾಕೂರ್ ನಟನೆಯ ‘ಹೇ ಜವಾನಿ ತೊ ಇಷ್ಕ್ ಹೋನಾ ಹೇ’ ಸಿನಿಮಾವನ್ನು ಚಿತ್ರತಂಡ ಮುಂದೂಡಿದೆ. ಈ ಸಿನಿಮಾ ಜೂನ್ 5ರಂದು ತೆರೆಕಾಣಬೇಕಿತ್ತು. ಇದೀಗ ಜೂನ್ 12ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.</p>.‘ಟಾಕ್ಸಿಕ್’ ಜತೆ ಪೈಪೋಟಿ ತಪ್ಪಿಸಲು ವರುಣ್ ಧವನ್ ಸಿನಿಮಾ ಮುಂದಕ್ಕೆ.<p>ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಮಂಗಳವಾರ ಬಿಡುಗಡೆಯಾದ ಮಹಿಳಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ವನ್ನು ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 0-3 ಅಂತರದಿಂದ ಭಾರತ ಸೋತ ನಂತರ ಈ ರ್ಯಾಂಕಿಂಗ್ ಪ್ರಕಟವಾಗಿದೆ. </p>. ಮಹಿಳಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್: ಸ್ಮೃತಿ ಮಂದಾನ ಅಗ್ರಸ್ಥಾನ ಅಬಾಧಿತ.<p>ಆಸ್ತಿ ತೆರಿಗೆ ಸಂಗ್ರಹ ಸೇರಿದಂತೆ ಸಂಪನ್ಮೂಲ ಕ್ರೋಡೀಕರಣದಲ್ಲಿ ಅತಿ ಹಿಂದುಳಿದಿರುವ, ಅತಿದೊಡ್ಡ ನಗರ ಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ತನ್ನ ಸಿಬ್ಬಂದಿಗೆ ಫೆಬ್ರುವರಿಯ ವೇತನವನ್ನು ಪಾವತಿಸಿಲ್ಲ. ಫೆಬ್ರುವರಿಯ ವೇತನವನ್ನು ತಿಂಗಳ ಅಂತ್ಯ ಅಥವಾ ಮಾರ್ಚ್ 1ಕ್ಕೆ ಪಾವತಿಯಾಗಬೇಕಿತ್ತು. ಆದರೆ, 10 ಕಳೆದರೂ ವೇತನ ಪಾವತಿ ಮಾಡಿಲ್ಲ. </p>.ಸಂಪನ್ಮೂಲ ಕ್ರೋಡೀಕರಣದಲ್ಲಿ ಹಿಂದೆ: ವೇತನ ಪಾವತಿಸದ ಜಿಬಿಎ ಪಶ್ಚಿಮ ನಗರ ಪಾಲಿಕೆ.<p>ಗದಗ ಜಿಲ್ಲೆಯ ರೋಣ<strong> </strong>ತಾಲ್ಲೂಕಿನ ಹೊಳೆಆಲೂರು ಭಾಗದ ಮಲಪ್ರಭೆ ತಟದಲ್ಲಿ ಫಿಲೋಸ್ಕೋಪಿಡೆ ಕುಟುಂಬಕ್ಕೆ ಸೇರಿದ ಕಾಮನ್ ಚಿಫ್ಚಾಫ್ ಹಕ್ಕಿ (ಕಂದು ಎಲೆ ಉಲಿಯಕ್ಕಿ) ಇದೇ ಮೊದಲ ಬಾರಿಗೆ ಕಂಡುಬಂದಿದೆ.</p>.ರೋಣ: ಮಲಪ್ರಭೆ ತಟದಲ್ಲಿ ಕಾಮನ್ ಚಿಫ್ಚಾಫ್ ಹಕ್ಕಿ ಗೋಚರ.<p>ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.ಡಿಕೆಶಿಗೆ ಉಜ್ವಲ ರಾಜಕೀಯ ಭವಿಷ್ಯವಿದೆ, ಹೋರಾಟದಲ್ಲಿ ಜೊತೆಯಾಗಿರುವೆ: ಸಿದ್ದರಾಮಯ್ಯ.<p>ಕೇಂದ್ರ ಸರ್ಕಾರವು ತೆರಿಗೆ ಆದಾಯವನ್ನು ಸರಿಯಾಗಿ ಹಂಚಿಕೆ ಮಾಡದೇ ಇರುವುದು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೇ ಇರುವುದರಿಂದ 2017–18ರಿಂದ ಈವರೆಗೆ ರಾಜ್ಯಕ್ಕೆ ₹2.88 ಲಕ್ಷ ಕೋಟಿ ನಷ್ಟವಾಗಿದೆ.<strong>ಸರಿಯಾಗಿ ತೆರಿಗೆ ಹಂಚಿಕೆ ಮಾಡದ ಕೇಂದ್ರ: ರಾಜ್ಯಕ್ಕೆ ₹2.88 ಲಕ್ಷ ಕೋಟಿ ನಷ್ಟ</strong></p>.ಸರಿಯಾಗಿ ತೆರಿಗೆ ಹಂಚಿಕೆ ಮಾಡದ ಕೇಂದ್ರ: ರಾಜ್ಯಕ್ಕೆ ₹2.88 ಲಕ್ಷ ಕೋಟಿ ನಷ್ಟ.<p>ಟಿ20 ವಿಶ್ವಕಪ್ ಫೈನಲ್ಗೆ ಮೊದಲು ಎಬಿ ಡಿವಿಲಿಯರ್ಸ್ ಅವರ ಯುಟ್ಯೂಬ್ ಶೋ ಒಂದರಲ್ಲಿ, ದಕ್ಷಿಣ ಆಫ್ರಿಕಾ ತಂಡದಲ್ಲಿ ಅವರ ಜೊತೆಗಾರನಾಗಿದ್ದ ಡೇಲ್ ಸ್ಟೀನ್ ಅವರು ನ್ಯೂಜಿಲೆಂಡ್ ತಂಡಕ್ಕೆ ಪ್ರಶಸ್ತಿ ಗೆಲ್ಲುವಂತೆ ಒತ್ತಾಯಿಸುತ್ತಾರೆ. ಕಿವೀಸ್ ಮತ್ತೊಮ್ಮೆ ಫೈನಲ್ ಪಂದ್ಯ ಸೋತರೆ, ಹರಿಣಗಳ ಪಡೆ ದೀರ್ಘ ಕಾಲದಿಂದ ಹೊಂದಿರುವ ‘ಚೋಕರ್ಸ್’ ಪಟ್ಟವನ್ನು ಆ ತಂಡಕ್ಕೆ ಅಧಿಕೃತವಾಗಿ ಹಸ್ತಾಂತರಿಸುವುದಾಗಿ ತಮಾಷೆಯಾಗಿ ಹೇಳುತ್ತಾರೆ.</p>.ನ್ಯೂಜಿಲೆಂಡ್ ತಂಡಕ್ಕೆ ಫೈನಲ್ ‘ಒಗಟು‘: ಪದೇ ಪದೇ ಎಡವುತ್ತಿದೆ ಕಿವೀಸ್ ಪಡೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇರಾನ್ ಯುದ್ಧ, ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆ ಆತಂಕ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ಟೆಕ್ಸಾಸ್ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ತೈಲ ಸಂಸ್ಕರಣಾ ಘಟಕಕ್ಕೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.</p>.ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ: ಡೊನಾಲ್ಡ್ ಟ್ರಂಪ್ ಘೋಷಣೆ.<p>ಹರಿಯಾಣದ ಸೋನಿಪತ್ನ ಮದೀನಾ ಗಾಮ್ರಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದು, ರೈತ ಕುಟುಂಬದ ಮದುವೆಯಲ್ಲಿ ಭಾಗಿಯಾಗಿದ್ದಾರೆ. 2023ರಲ್ಲಿ ರಾಹುಲ್ ಗಾಂಧಿ ಶಿಮ್ಲಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದರು. ರೈತರ ಜೊತೆಗೂಡಿ ಭತ್ತ ನಾಟಿ ಮಾಡಿದ್ದರು. ರಾಹುಲ್ಗೆ ಭತ್ತ ನಾಟಿ ಮಾಡಲು ರೈತ ಸಂಜಯ್ ಮಲಿಕ್ ಸಹಾಯ ಮಾಡಿದ್ದರು.</p>.3 ವರ್ಷದ ಹಿಂದೆ ಕೊಟ್ಟ ಮಾತು..ರೈತನ ಮಗಳ ಮದುವೆಯಲ್ಲಿ ರಾಹುಲ್ ಗಾಂಧಿ...<p>ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯು ಮಂಗಳವಾರ ಲೋಕಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ‘ಸ್ಪೀಕರ್ ಬಿರ್ಲಾ ಅವರು ಸಜ್ಜನ. ಆದರೆ, ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ವಿರೋಧ ಪಕ್ಷದ ಸಂಸದರು ದೂರಿದರು. </p>.ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ಪಟ್ಟು: ಸದನದಲ್ಲಿ ಕೊಲಾಹಲ.<p>ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮುಂದೂಡಿಕೆಯಾಗಿ ಜೂನ್ 4ರಂದು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ವರುಣ್ ಧವನ್, ಪೂಜಾ ಹೆಗ್ಡೆ ಹಾಗೂ ಮೃಣಾಲ್ ಠಾಕೂರ್ ನಟನೆಯ ‘ಹೇ ಜವಾನಿ ತೊ ಇಷ್ಕ್ ಹೋನಾ ಹೇ’ ಸಿನಿಮಾವನ್ನು ಚಿತ್ರತಂಡ ಮುಂದೂಡಿದೆ. ಈ ಸಿನಿಮಾ ಜೂನ್ 5ರಂದು ತೆರೆಕಾಣಬೇಕಿತ್ತು. ಇದೀಗ ಜೂನ್ 12ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.</p>.‘ಟಾಕ್ಸಿಕ್’ ಜತೆ ಪೈಪೋಟಿ ತಪ್ಪಿಸಲು ವರುಣ್ ಧವನ್ ಸಿನಿಮಾ ಮುಂದಕ್ಕೆ.<p>ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಮಂಗಳವಾರ ಬಿಡುಗಡೆಯಾದ ಮಹಿಳಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ವನ್ನು ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 0-3 ಅಂತರದಿಂದ ಭಾರತ ಸೋತ ನಂತರ ಈ ರ್ಯಾಂಕಿಂಗ್ ಪ್ರಕಟವಾಗಿದೆ. </p>. ಮಹಿಳಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್: ಸ್ಮೃತಿ ಮಂದಾನ ಅಗ್ರಸ್ಥಾನ ಅಬಾಧಿತ.<p>ಆಸ್ತಿ ತೆರಿಗೆ ಸಂಗ್ರಹ ಸೇರಿದಂತೆ ಸಂಪನ್ಮೂಲ ಕ್ರೋಡೀಕರಣದಲ್ಲಿ ಅತಿ ಹಿಂದುಳಿದಿರುವ, ಅತಿದೊಡ್ಡ ನಗರ ಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ತನ್ನ ಸಿಬ್ಬಂದಿಗೆ ಫೆಬ್ರುವರಿಯ ವೇತನವನ್ನು ಪಾವತಿಸಿಲ್ಲ. ಫೆಬ್ರುವರಿಯ ವೇತನವನ್ನು ತಿಂಗಳ ಅಂತ್ಯ ಅಥವಾ ಮಾರ್ಚ್ 1ಕ್ಕೆ ಪಾವತಿಯಾಗಬೇಕಿತ್ತು. ಆದರೆ, 10 ಕಳೆದರೂ ವೇತನ ಪಾವತಿ ಮಾಡಿಲ್ಲ. </p>.ಸಂಪನ್ಮೂಲ ಕ್ರೋಡೀಕರಣದಲ್ಲಿ ಹಿಂದೆ: ವೇತನ ಪಾವತಿಸದ ಜಿಬಿಎ ಪಶ್ಚಿಮ ನಗರ ಪಾಲಿಕೆ.<p>ಗದಗ ಜಿಲ್ಲೆಯ ರೋಣ<strong> </strong>ತಾಲ್ಲೂಕಿನ ಹೊಳೆಆಲೂರು ಭಾಗದ ಮಲಪ್ರಭೆ ತಟದಲ್ಲಿ ಫಿಲೋಸ್ಕೋಪಿಡೆ ಕುಟುಂಬಕ್ಕೆ ಸೇರಿದ ಕಾಮನ್ ಚಿಫ್ಚಾಫ್ ಹಕ್ಕಿ (ಕಂದು ಎಲೆ ಉಲಿಯಕ್ಕಿ) ಇದೇ ಮೊದಲ ಬಾರಿಗೆ ಕಂಡುಬಂದಿದೆ.</p>.ರೋಣ: ಮಲಪ್ರಭೆ ತಟದಲ್ಲಿ ಕಾಮನ್ ಚಿಫ್ಚಾಫ್ ಹಕ್ಕಿ ಗೋಚರ.<p>ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.ಡಿಕೆಶಿಗೆ ಉಜ್ವಲ ರಾಜಕೀಯ ಭವಿಷ್ಯವಿದೆ, ಹೋರಾಟದಲ್ಲಿ ಜೊತೆಯಾಗಿರುವೆ: ಸಿದ್ದರಾಮಯ್ಯ.<p>ಕೇಂದ್ರ ಸರ್ಕಾರವು ತೆರಿಗೆ ಆದಾಯವನ್ನು ಸರಿಯಾಗಿ ಹಂಚಿಕೆ ಮಾಡದೇ ಇರುವುದು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೇ ಇರುವುದರಿಂದ 2017–18ರಿಂದ ಈವರೆಗೆ ರಾಜ್ಯಕ್ಕೆ ₹2.88 ಲಕ್ಷ ಕೋಟಿ ನಷ್ಟವಾಗಿದೆ.<strong>ಸರಿಯಾಗಿ ತೆರಿಗೆ ಹಂಚಿಕೆ ಮಾಡದ ಕೇಂದ್ರ: ರಾಜ್ಯಕ್ಕೆ ₹2.88 ಲಕ್ಷ ಕೋಟಿ ನಷ್ಟ</strong></p>.ಸರಿಯಾಗಿ ತೆರಿಗೆ ಹಂಚಿಕೆ ಮಾಡದ ಕೇಂದ್ರ: ರಾಜ್ಯಕ್ಕೆ ₹2.88 ಲಕ್ಷ ಕೋಟಿ ನಷ್ಟ.<p>ಟಿ20 ವಿಶ್ವಕಪ್ ಫೈನಲ್ಗೆ ಮೊದಲು ಎಬಿ ಡಿವಿಲಿಯರ್ಸ್ ಅವರ ಯುಟ್ಯೂಬ್ ಶೋ ಒಂದರಲ್ಲಿ, ದಕ್ಷಿಣ ಆಫ್ರಿಕಾ ತಂಡದಲ್ಲಿ ಅವರ ಜೊತೆಗಾರನಾಗಿದ್ದ ಡೇಲ್ ಸ್ಟೀನ್ ಅವರು ನ್ಯೂಜಿಲೆಂಡ್ ತಂಡಕ್ಕೆ ಪ್ರಶಸ್ತಿ ಗೆಲ್ಲುವಂತೆ ಒತ್ತಾಯಿಸುತ್ತಾರೆ. ಕಿವೀಸ್ ಮತ್ತೊಮ್ಮೆ ಫೈನಲ್ ಪಂದ್ಯ ಸೋತರೆ, ಹರಿಣಗಳ ಪಡೆ ದೀರ್ಘ ಕಾಲದಿಂದ ಹೊಂದಿರುವ ‘ಚೋಕರ್ಸ್’ ಪಟ್ಟವನ್ನು ಆ ತಂಡಕ್ಕೆ ಅಧಿಕೃತವಾಗಿ ಹಸ್ತಾಂತರಿಸುವುದಾಗಿ ತಮಾಷೆಯಾಗಿ ಹೇಳುತ್ತಾರೆ.</p>.ನ್ಯೂಜಿಲೆಂಡ್ ತಂಡಕ್ಕೆ ಫೈನಲ್ ‘ಒಗಟು‘: ಪದೇ ಪದೇ ಎಡವುತ್ತಿದೆ ಕಿವೀಸ್ ಪಡೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>