<p><strong>ಜಾಲ್ನಾ</strong>: ಸೂಕ್ತ ಬೆಲೆ ಸಿಗದ ಹಿನ್ನೆಲೆ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ರೈತರೊಬ್ಬರು ತಾವು ಬೆಳೆದ ಸುಮಾರು 25 ಕ್ವಿಂಟಲ್ ಟೊಮೆಟೊವನ್ನು ಹೆದ್ದಾರಿಯ ಮೇಲೆ ಸುರಿದಿದ್ದಾರೆ.</p><p>ಜಿಲ್ಲೆಯ ಧಾರಕಲ್ಯಾಣ ಗ್ರಾಮದ ರೈತ ಅಮರ್ ಕಾಕಡೆ ಎಂಬುವವರು ಸಾಲ ಮಾಡಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದರು. ಫಸಲನ್ನು ಕರ್ಮಡ್ ಮಾರುಕಟ್ಟೆಗೆ ತಂದಾಗ, ವ್ಯಾಪಾರಿಗಳು ಪ್ರತಿ ಕೆ.ಜಿಗೆ ಕೇವಲ ₹4 ನೀಡಲು ಮುಂದಾಗಿದ್ದಾರೆ.</p><p>ಇದರಿಂದ ಆಕ್ರೋಶಗೊಂಡ ಕಾಕಡೆ, ಸುಮಾರು 25 ಕ್ವಿಂಟಲ್ ಟೊಮೆಟೊವನ್ನು ಜಾಲ್ನಾ-ಛತ್ರಪತಿ ಸಂಭಾಜಿನಗರ ಹೆದ್ದಾರಿಯ ಸೋಮ್ತಾನ ಫಾಟಾ ಬಳಿಯ ಸೇತುವೆಯ ಕೆಳಗೆ ಸುರಿದಿದ್ದಾರೆ. </p><p>‘ಅವರು ಕೊಡುವ ಬೆಲೆಯು ಬೆಳೆ ಬೆಳೆಯಲು ಮಾಡಿದ ಖರ್ಚು ಮತ್ತು ಸಾರಿಗೆ ವೆಚ್ಚವನ್ನೂ ಭರಿಸುವುದಿಲ್ಲ’ ಎಂದು ಹೇಳಿದ್ದಾರೆ.</p><p>ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ರಫ್ತು ಸ್ಥಗಿತಗೊಂಡಿರುವುದು ಜಾಲ್ನಾ ಜಿಲ್ಲೆಯ ಟೊಮೆಟೊ ಬೆಳಗಾರರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾಲ್ನಾ</strong>: ಸೂಕ್ತ ಬೆಲೆ ಸಿಗದ ಹಿನ್ನೆಲೆ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ರೈತರೊಬ್ಬರು ತಾವು ಬೆಳೆದ ಸುಮಾರು 25 ಕ್ವಿಂಟಲ್ ಟೊಮೆಟೊವನ್ನು ಹೆದ್ದಾರಿಯ ಮೇಲೆ ಸುರಿದಿದ್ದಾರೆ.</p><p>ಜಿಲ್ಲೆಯ ಧಾರಕಲ್ಯಾಣ ಗ್ರಾಮದ ರೈತ ಅಮರ್ ಕಾಕಡೆ ಎಂಬುವವರು ಸಾಲ ಮಾಡಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದರು. ಫಸಲನ್ನು ಕರ್ಮಡ್ ಮಾರುಕಟ್ಟೆಗೆ ತಂದಾಗ, ವ್ಯಾಪಾರಿಗಳು ಪ್ರತಿ ಕೆ.ಜಿಗೆ ಕೇವಲ ₹4 ನೀಡಲು ಮುಂದಾಗಿದ್ದಾರೆ.</p><p>ಇದರಿಂದ ಆಕ್ರೋಶಗೊಂಡ ಕಾಕಡೆ, ಸುಮಾರು 25 ಕ್ವಿಂಟಲ್ ಟೊಮೆಟೊವನ್ನು ಜಾಲ್ನಾ-ಛತ್ರಪತಿ ಸಂಭಾಜಿನಗರ ಹೆದ್ದಾರಿಯ ಸೋಮ್ತಾನ ಫಾಟಾ ಬಳಿಯ ಸೇತುವೆಯ ಕೆಳಗೆ ಸುರಿದಿದ್ದಾರೆ. </p><p>‘ಅವರು ಕೊಡುವ ಬೆಲೆಯು ಬೆಳೆ ಬೆಳೆಯಲು ಮಾಡಿದ ಖರ್ಚು ಮತ್ತು ಸಾರಿಗೆ ವೆಚ್ಚವನ್ನೂ ಭರಿಸುವುದಿಲ್ಲ’ ಎಂದು ಹೇಳಿದ್ದಾರೆ.</p><p>ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ರಫ್ತು ಸ್ಥಗಿತಗೊಂಡಿರುವುದು ಜಾಲ್ನಾ ಜಿಲ್ಲೆಯ ಟೊಮೆಟೊ ಬೆಳಗಾರರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>