<p><strong>ಅನಂತನಾಗ್:</strong> ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಶಾಲೆಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರನ್ನು ರಕ್ಷಿಸುವಾಗ ಮೃತಪಟ್ಟಿದ್ದ ಆದಿಲ್ ಹುಸೇನ್ ಶಾ ಅವರ ಹೆಸರನ್ನು ಇಡಲಾಗಿದೆ.</p>.<p>ಹಪತನಾರ್ ಸರ್ಕಾರಿ ಪ್ರೌಢ ಶಾಲೆಯನ್ನು ಆದಿಲ್ ಹುಸೇನ್ ಶಾ ಸ್ಮಾರಕ ಪ್ರೌಢ ಶಾಲೆ ಎಂದು ಮರುನಾಮಕರಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸಕೀನಾ ಇಟೂ ಮತ್ತು ಹುಸೇನ್ ಶಾ ಕುಟುಂಬಸ್ಥರು ಹಾಜರಿದ್ದರು.</p>.<p>‘ಶಿಕ್ಷಣ ಸಂಸ್ಥೆಯನ್ನು ಮರುನಾಮಕರಣ ಮಾಡುವ ಮೂಲಕ ಪ್ರವಾಸಿಗರ ರಕ್ಷಣೆಯಲ್ಲಿ ತನ್ನ ಜೀವವನ್ನು ಮುಡಿಪಾಗಿಟ್ಟ ಶಾ ಅವರ ಧೈರ್ಯ ಮತ್ತು ತ್ಯಾಗವನ್ನು ಗೌರವಿಸಲಾಗಿದೆ. ಕಾಶ್ಮೀರ ಜನರ ಆತಿಥ್ಯ ಎಂತದ್ದು ಎಂಬುದು ಶಾ ಅವರ ತ್ಯಾಗದಿಂದ ಸಾಬೀತಾಗಿದೆ’ ಎಂದು ಇಟೂ ಅವರು ತಿಳಿಸಿದರು.</p>.<p>‘ಶಾ ಅವರ ತ್ಯಾಗಕ್ಕಾಗಿ ಶಾಲೆಗೆ ಅವರ ಹೆಸರನ್ನು ಇಡುವುದಾಗಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಘೋಷಿಸಿದ್ದರು’ ಎಂದು ಅವರು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-51-2006908448</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅನಂತನಾಗ್:</strong> ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಶಾಲೆಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರನ್ನು ರಕ್ಷಿಸುವಾಗ ಮೃತಪಟ್ಟಿದ್ದ ಆದಿಲ್ ಹುಸೇನ್ ಶಾ ಅವರ ಹೆಸರನ್ನು ಇಡಲಾಗಿದೆ.</p>.<p>ಹಪತನಾರ್ ಸರ್ಕಾರಿ ಪ್ರೌಢ ಶಾಲೆಯನ್ನು ಆದಿಲ್ ಹುಸೇನ್ ಶಾ ಸ್ಮಾರಕ ಪ್ರೌಢ ಶಾಲೆ ಎಂದು ಮರುನಾಮಕರಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸಕೀನಾ ಇಟೂ ಮತ್ತು ಹುಸೇನ್ ಶಾ ಕುಟುಂಬಸ್ಥರು ಹಾಜರಿದ್ದರು.</p>.<p>‘ಶಿಕ್ಷಣ ಸಂಸ್ಥೆಯನ್ನು ಮರುನಾಮಕರಣ ಮಾಡುವ ಮೂಲಕ ಪ್ರವಾಸಿಗರ ರಕ್ಷಣೆಯಲ್ಲಿ ತನ್ನ ಜೀವವನ್ನು ಮುಡಿಪಾಗಿಟ್ಟ ಶಾ ಅವರ ಧೈರ್ಯ ಮತ್ತು ತ್ಯಾಗವನ್ನು ಗೌರವಿಸಲಾಗಿದೆ. ಕಾಶ್ಮೀರ ಜನರ ಆತಿಥ್ಯ ಎಂತದ್ದು ಎಂಬುದು ಶಾ ಅವರ ತ್ಯಾಗದಿಂದ ಸಾಬೀತಾಗಿದೆ’ ಎಂದು ಇಟೂ ಅವರು ತಿಳಿಸಿದರು.</p>.<p>‘ಶಾ ಅವರ ತ್ಯಾಗಕ್ಕಾಗಿ ಶಾಲೆಗೆ ಅವರ ಹೆಸರನ್ನು ಇಡುವುದಾಗಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಘೋಷಿಸಿದ್ದರು’ ಎಂದು ಅವರು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-51-2006908448</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>