<p><strong>ಝಾನ್ಸಿ</strong>: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ದಾನ, ಆಪಾದಿತರಿಗೆ ಶಿಕ್ಷೆ ಪ್ರಕಟಿಸಿಸುವುದು ತುಂಬಾ ವಿಳಂಬ ಎಂಬ ಹಲವರ ಆರೋಪಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ.</p><p>‘ಚರಸ್’ ಎಂಬ ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ವ್ಯಕ್ತಿಯೊಬ್ಬನಿಗೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲಾ ನ್ಯಾಯಾಲಯ ಬರೋಬ್ಬರಿ 18 ವರ್ಷಗಳ ವಿಚಾರಣೆ ಬಳಿಕ ಶಿಕ್ಷೆ ಹಾಗೂ ದಂಡ ಪ್ರಕಟಿಸಿದೆ.</p><p>ಕಾನ್ಪುರ ನಗರ ವ್ಯಾಪ್ತಿಯ ಕಲ್ಯಾಣಪುರ ಮೂಲದ ಸಂಜಯ್ ಸಿಂಗ್ ಎಂಬಾತ 2008 ರಲ್ಲಿ ಝಾನ್ಸಿಯ ಮಹಾವೀರನ್ ಬಳಿ 300 ಗ್ರಾಂ ಚರಸ್ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜೈಲು ಸೇರಿದ್ದ.</p><p>ಝಾನ್ಸಿ ಜಿಲ್ಲೆಯ ಪ್ರೇಮನಗರ ಪೊಲೀಸ್ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿದ್ದರು.</p><p>2008ರಿಂದಲೂ ಕೋರ್ಟ್ನಲ್ಲಿ ವಿಚಾರಣೆ ನಡೆದ ಈ ಪ್ರಕಣದಲ್ಲಿ ಬುಧವಾರ (ಏಪ್ರಿಲ್ 22) ಝಾನ್ಸಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ಕೋರ್ಟ್ನ ನ್ಯಾಯಾಧೀಶ ಶರದ್ ಚೌಧರಿ ಅವರು ಅಪರಾಧಿ ಸಂಜಯ್ ಸಿಂಗ್ಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ ಎಂದು ಪ್ರೇಮನಗರ ಪೊಲೀಸ್ ಠಾಣೆಯ ಮುಖ್ಯಸ್ಥ ಬಲ್ಬೀರ್ ಸಿಂಗ್ ಗೌರ್ ತಿಳಿಸಿದ್ದಾರೆ.</p>.ಬೆಳಗಾವಿ | ₹500 ಲಂಚ: 30 ವರ್ಷಗಳ ಬಳಿಕ ಗ್ರಾಮಲೆಕ್ಕಿಗನಿಗೆ ಶಿಕ್ಷೆ.ಕೊಡಗು | ಗೋವಾದಲ್ಲಿ ನಡೆದಿದ್ದ ಕೊಲೆ; 18 ವರ್ಷಗಳ ಬಳಿಕ ಬಾಲಕಿ ಅಂತ್ಯಕ್ರಿಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಝಾನ್ಸಿ</strong>: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ದಾನ, ಆಪಾದಿತರಿಗೆ ಶಿಕ್ಷೆ ಪ್ರಕಟಿಸಿಸುವುದು ತುಂಬಾ ವಿಳಂಬ ಎಂಬ ಹಲವರ ಆರೋಪಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ.</p><p>‘ಚರಸ್’ ಎಂಬ ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ವ್ಯಕ್ತಿಯೊಬ್ಬನಿಗೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲಾ ನ್ಯಾಯಾಲಯ ಬರೋಬ್ಬರಿ 18 ವರ್ಷಗಳ ವಿಚಾರಣೆ ಬಳಿಕ ಶಿಕ್ಷೆ ಹಾಗೂ ದಂಡ ಪ್ರಕಟಿಸಿದೆ.</p><p>ಕಾನ್ಪುರ ನಗರ ವ್ಯಾಪ್ತಿಯ ಕಲ್ಯಾಣಪುರ ಮೂಲದ ಸಂಜಯ್ ಸಿಂಗ್ ಎಂಬಾತ 2008 ರಲ್ಲಿ ಝಾನ್ಸಿಯ ಮಹಾವೀರನ್ ಬಳಿ 300 ಗ್ರಾಂ ಚರಸ್ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜೈಲು ಸೇರಿದ್ದ.</p><p>ಝಾನ್ಸಿ ಜಿಲ್ಲೆಯ ಪ್ರೇಮನಗರ ಪೊಲೀಸ್ ಠಾಣೆಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿದ್ದರು.</p><p>2008ರಿಂದಲೂ ಕೋರ್ಟ್ನಲ್ಲಿ ವಿಚಾರಣೆ ನಡೆದ ಈ ಪ್ರಕಣದಲ್ಲಿ ಬುಧವಾರ (ಏಪ್ರಿಲ್ 22) ಝಾನ್ಸಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ಕೋರ್ಟ್ನ ನ್ಯಾಯಾಧೀಶ ಶರದ್ ಚೌಧರಿ ಅವರು ಅಪರಾಧಿ ಸಂಜಯ್ ಸಿಂಗ್ಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ ಎಂದು ಪ್ರೇಮನಗರ ಪೊಲೀಸ್ ಠಾಣೆಯ ಮುಖ್ಯಸ್ಥ ಬಲ್ಬೀರ್ ಸಿಂಗ್ ಗೌರ್ ತಿಳಿಸಿದ್ದಾರೆ.</p>.ಬೆಳಗಾವಿ | ₹500 ಲಂಚ: 30 ವರ್ಷಗಳ ಬಳಿಕ ಗ್ರಾಮಲೆಕ್ಕಿಗನಿಗೆ ಶಿಕ್ಷೆ.ಕೊಡಗು | ಗೋವಾದಲ್ಲಿ ನಡೆದಿದ್ದ ಕೊಲೆ; 18 ವರ್ಷಗಳ ಬಳಿಕ ಬಾಲಕಿ ಅಂತ್ಯಕ್ರಿಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>