<p><strong>ಕೋಲ್ಕತ್ತ</strong>: ದೇಶದ ಪ್ರಜಾಪ್ರಭುತ್ವದ ಜೀವಂತಿಕೆಗೆ ಸಾಕ್ಷಿ ಎನ್ನುವಂತಿದೆ ಇತ್ತೀಚಿನ ಪಶ್ಚಿಮ ಬಂಗಾಳದ ರಾಜಕೀಯ ವಿದ್ಯಮಾನ. ಇತರರ ಮನೆಗಳಲ್ಲಿ ಕಸ ಗುಡಿಸಿ, ಪಾತ್ರೆ ತೊಳೆದು ಜೀವನ ನಡೆಸುತ್ತಿದ್ದ ಸಾಮಾನ್ಯ ಮಹಿಳೆಯೊಬ್ಬರು ಇದೀಗ ಪಶ್ಚಿಮ ಬಂಗಾಳದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ವೇಳೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಔಸ್ಗ್ರಾಮ್ ಕ್ಷೇತ್ರದ ಶಾಸಕಿ ಕಲಿತಾ ಮಾಝಿ ಅವರಿಗೆ ರಾಜ್ಯ ಸಚಿವೆ ಜವಾಬ್ದಾರಿಯನ್ನು ನೀಡಿದ್ದಾರೆ.</p><p><strong>ಸೋಲಿನಿಂದ ಗೆಲುವಿನತ್ತ ಸಾಗಿದ ಹಾದಿ</strong></p><p>ಗುಸ್ಕಾರಾ ಮೂಲದ ಕಲಿತಾ ಮಾಝಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಔಸ್ಗ್ರಾಮ್ ಮೀಸಲು ಕ್ಷೇತ್ರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ದೇಶದಾದ್ಯಂತ ಸುದ್ದಿಯಾಗಿದ್ದರು. ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿದ್ದ ಅವರು ಒಟ್ಟು 1,07,692 ಮತಗಳನ್ನು ಪಡೆಯುವ ಮೂಲಕ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಶ್ಯಾಮಾ ಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದ್ದರು. ಈ ಹಿಂದೆ 2021ರ ಚುನಾವಣೆಯಲ್ಲೂ ಅವರು ಸ್ಪರ್ಧಿಸಿದ್ದರಾದರೂ, ಟಿಎಂಸಿಯ ಅಭೇದಾನಂದ ಥಾಂಡರ್ ವಿರುದ್ಧ 11,815 ಮತಗಳಿಂದ ಪರಾಭವಗೊಂಡಿದ್ದರು. ಆದರೂ ಧೃತಿಗೆಡದ ಕಲಿತಾ, ಸತತ ಪ್ರಯತ್ನದಿಂದ ಈ ಬಾರಿ ವಿಜಯದ ನಗೆ ಬೀರಿದ್ದಾರೆ.</p><p><strong>ಯಾರು ಈ ಕಲಿತಾ ಮಾಝಿ? ಹಿನ್ನೆಲೆ ಏನು?</strong></p><p>ಅತ್ಯಂತ ಬಡ ಕುಟುಂಬದಿಂದ ಬಂದಿರುವ ಕಲಿತಾ ಮಾಝಿ, ರಾಜಕೀಯಕ್ಕೆ ಬರುವ ಮುನ್ನ ಮನೆಗೆಲಸ ಮಾಡಿಕೊಂಡು ತಿಂಗಳಿಗೆ ಕೇವಲ ₹2,500 ಗಳಿಸುತ್ತಿದ್ದರು. ಇವರ ಪತಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿ ಟಿಎಂಸಿ ಪಕ್ಷವನ್ನು ಎದುರಿಸಲು ಔಸ್ಗ್ರಾಮ್ ಕ್ಷೇತ್ರದಲ್ಲಿ ಪ್ರಭಾವಿ ನಾಯಕರೆಲ್ಲರೂ ಹಿಂಜರಿಯುತ್ತಿದ್ದರು. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷವು ಒಬಿಸಿ ಸಮುದಾಯದ, ಸಾಮಾನ್ಯ ಹಿನ್ನೆಲೆಯುಳ್ಳ ಕಲಿತಾ ಮಾಝಿ ಅವರಿಗೆ ಟಿಕೆಟ್ ನೀಡಿ ರಾಜಕೀಯ ದಾಳ ಉರುಳಿಸಿತ್ತು. ಮೊದಲ ಯತ್ನದಲ್ಲಿ ಸೋತರೂ, ಪಕ್ಷ ಅವರ ಮೇಲಿನ ನಂಬಿಕೆಯನ್ನು ಕೈಬಿಡಲಿಲ್ಲ.</p><p><strong>ಬದಲಾದ ರಾಜಕೀಯ ಮತ್ತು ಮಂತ್ರಿಗಿರಿ</strong></p><p>ಕಳೆದ ಕೆಲವು ವರ್ಷಗಳಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಚಿತ್ರಣ ಸಾಕಷ್ಟು ಬದಲಾಗಿದೆ. ಟಿಎಂಸಿ ಪಕ್ಷದ ಮೇಲಿನ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳಿಂದ ಬೇಸತ್ತಿದ್ದ ಜನತೆ ಬದಲಾವಣೆ ಬಯಸಿದ್ದರು. ಈ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಬಿಜೆಪಿ, 2026ರ ಚುನಾವಣೆಯಲ್ಲೂ ಕಲಿತಾ ಮಾಝಿ ಅವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ನೀಡಿತು. ಜನರ ಒಲವು ಮತ್ತು ಕಲಿತಾ ಅವರ ಪ್ರಾಮಾಣಿಕತೆಗೆ ಒಲಿದ ಮತದಾರರು ಅವರನ್ನು ವಿಧಾನಸಭೆಗೆ ಆರಿಸಿ ಕಳುಹಿಸಿದರು. ಕಲಿತಾರನ್ನು ಗುರುತಿಸಿದ ಸುವೇಂದು ಅಧಿಕಾರಿ, ಅವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.</p><p> ರಾಜಕೀಯ ವಿಶ್ಲೇಷಕರು ಕಲಿತಾ ಮಾಝಿ ಅವರ ಈ ಬೆಳವಣಿಗೆಯನ್ನು ಬಿಹಾರದ ಲಾಲೂ ಪ್ರಸಾದ್ ಯಾದವ್, ರಾಮ್ ವಿಲಾಸ್ ಪಾಸ್ವಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಏಳಿಗೆಗೆ ಹೋಲಿಸುತ್ತಿದ್ದಾರೆ. ಹಣ, ತೋಳ್ಬಲ ಮತ್ತು ವಂಶಪಾರಂಪರ್ಯ ರಾಜಕಾರಣದ ನಡುವೆಯೂ, ತಿಂಗಳಿಗೆ ಕೇವಲ ₹2,500 ದುಡಿಯುತ್ತಿದ್ದ ಸಾಮಾನ್ಯ ಮಹಿಳೆ ಶಾಸಕಿ, ಸಚಿವೆಯಾಗಬಹುದು ಎಂಬುದು ಭಾರತೀಯ ಪ್ರಜಾಪ್ರಭುತ್ವದ ನೈಜ ಶಕ್ತಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ದೇಶದ ಪ್ರಜಾಪ್ರಭುತ್ವದ ಜೀವಂತಿಕೆಗೆ ಸಾಕ್ಷಿ ಎನ್ನುವಂತಿದೆ ಇತ್ತೀಚಿನ ಪಶ್ಚಿಮ ಬಂಗಾಳದ ರಾಜಕೀಯ ವಿದ್ಯಮಾನ. ಇತರರ ಮನೆಗಳಲ್ಲಿ ಕಸ ಗುಡಿಸಿ, ಪಾತ್ರೆ ತೊಳೆದು ಜೀವನ ನಡೆಸುತ್ತಿದ್ದ ಸಾಮಾನ್ಯ ಮಹಿಳೆಯೊಬ್ಬರು ಇದೀಗ ಪಶ್ಚಿಮ ಬಂಗಾಳದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ವೇಳೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಔಸ್ಗ್ರಾಮ್ ಕ್ಷೇತ್ರದ ಶಾಸಕಿ ಕಲಿತಾ ಮಾಝಿ ಅವರಿಗೆ ರಾಜ್ಯ ಸಚಿವೆ ಜವಾಬ್ದಾರಿಯನ್ನು ನೀಡಿದ್ದಾರೆ.</p><p><strong>ಸೋಲಿನಿಂದ ಗೆಲುವಿನತ್ತ ಸಾಗಿದ ಹಾದಿ</strong></p><p>ಗುಸ್ಕಾರಾ ಮೂಲದ ಕಲಿತಾ ಮಾಝಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಔಸ್ಗ್ರಾಮ್ ಮೀಸಲು ಕ್ಷೇತ್ರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ದೇಶದಾದ್ಯಂತ ಸುದ್ದಿಯಾಗಿದ್ದರು. ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿದ್ದ ಅವರು ಒಟ್ಟು 1,07,692 ಮತಗಳನ್ನು ಪಡೆಯುವ ಮೂಲಕ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಶ್ಯಾಮಾ ಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದ್ದರು. ಈ ಹಿಂದೆ 2021ರ ಚುನಾವಣೆಯಲ್ಲೂ ಅವರು ಸ್ಪರ್ಧಿಸಿದ್ದರಾದರೂ, ಟಿಎಂಸಿಯ ಅಭೇದಾನಂದ ಥಾಂಡರ್ ವಿರುದ್ಧ 11,815 ಮತಗಳಿಂದ ಪರಾಭವಗೊಂಡಿದ್ದರು. ಆದರೂ ಧೃತಿಗೆಡದ ಕಲಿತಾ, ಸತತ ಪ್ರಯತ್ನದಿಂದ ಈ ಬಾರಿ ವಿಜಯದ ನಗೆ ಬೀರಿದ್ದಾರೆ.</p><p><strong>ಯಾರು ಈ ಕಲಿತಾ ಮಾಝಿ? ಹಿನ್ನೆಲೆ ಏನು?</strong></p><p>ಅತ್ಯಂತ ಬಡ ಕುಟುಂಬದಿಂದ ಬಂದಿರುವ ಕಲಿತಾ ಮಾಝಿ, ರಾಜಕೀಯಕ್ಕೆ ಬರುವ ಮುನ್ನ ಮನೆಗೆಲಸ ಮಾಡಿಕೊಂಡು ತಿಂಗಳಿಗೆ ಕೇವಲ ₹2,500 ಗಳಿಸುತ್ತಿದ್ದರು. ಇವರ ಪತಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆ ಸಂದರ್ಭದಲ್ಲಿ ಟಿಎಂಸಿ ಪಕ್ಷವನ್ನು ಎದುರಿಸಲು ಔಸ್ಗ್ರಾಮ್ ಕ್ಷೇತ್ರದಲ್ಲಿ ಪ್ರಭಾವಿ ನಾಯಕರೆಲ್ಲರೂ ಹಿಂಜರಿಯುತ್ತಿದ್ದರು. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷವು ಒಬಿಸಿ ಸಮುದಾಯದ, ಸಾಮಾನ್ಯ ಹಿನ್ನೆಲೆಯುಳ್ಳ ಕಲಿತಾ ಮಾಝಿ ಅವರಿಗೆ ಟಿಕೆಟ್ ನೀಡಿ ರಾಜಕೀಯ ದಾಳ ಉರುಳಿಸಿತ್ತು. ಮೊದಲ ಯತ್ನದಲ್ಲಿ ಸೋತರೂ, ಪಕ್ಷ ಅವರ ಮೇಲಿನ ನಂಬಿಕೆಯನ್ನು ಕೈಬಿಡಲಿಲ್ಲ.</p><p><strong>ಬದಲಾದ ರಾಜಕೀಯ ಮತ್ತು ಮಂತ್ರಿಗಿರಿ</strong></p><p>ಕಳೆದ ಕೆಲವು ವರ್ಷಗಳಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಚಿತ್ರಣ ಸಾಕಷ್ಟು ಬದಲಾಗಿದೆ. ಟಿಎಂಸಿ ಪಕ್ಷದ ಮೇಲಿನ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳಿಂದ ಬೇಸತ್ತಿದ್ದ ಜನತೆ ಬದಲಾವಣೆ ಬಯಸಿದ್ದರು. ಈ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಬಿಜೆಪಿ, 2026ರ ಚುನಾವಣೆಯಲ್ಲೂ ಕಲಿತಾ ಮಾಝಿ ಅವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ನೀಡಿತು. ಜನರ ಒಲವು ಮತ್ತು ಕಲಿತಾ ಅವರ ಪ್ರಾಮಾಣಿಕತೆಗೆ ಒಲಿದ ಮತದಾರರು ಅವರನ್ನು ವಿಧಾನಸಭೆಗೆ ಆರಿಸಿ ಕಳುಹಿಸಿದರು. ಕಲಿತಾರನ್ನು ಗುರುತಿಸಿದ ಸುವೇಂದು ಅಧಿಕಾರಿ, ಅವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.</p><p> ರಾಜಕೀಯ ವಿಶ್ಲೇಷಕರು ಕಲಿತಾ ಮಾಝಿ ಅವರ ಈ ಬೆಳವಣಿಗೆಯನ್ನು ಬಿಹಾರದ ಲಾಲೂ ಪ್ರಸಾದ್ ಯಾದವ್, ರಾಮ್ ವಿಲಾಸ್ ಪಾಸ್ವಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಏಳಿಗೆಗೆ ಹೋಲಿಸುತ್ತಿದ್ದಾರೆ. ಹಣ, ತೋಳ್ಬಲ ಮತ್ತು ವಂಶಪಾರಂಪರ್ಯ ರಾಜಕಾರಣದ ನಡುವೆಯೂ, ತಿಂಗಳಿಗೆ ಕೇವಲ ₹2,500 ದುಡಿಯುತ್ತಿದ್ದ ಸಾಮಾನ್ಯ ಮಹಿಳೆ ಶಾಸಕಿ, ಸಚಿವೆಯಾಗಬಹುದು ಎಂಬುದು ಭಾರತೀಯ ಪ್ರಜಾಪ್ರಭುತ್ವದ ನೈಜ ಶಕ್ತಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>