<p>ಸಂಪಾದಕೀಯ, ಆಳ–ಅಗಲ ಹಾಗೂ ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡಾ ವಿಭಾದ ಪ್ರಮುಖ ಸುದ್ದಿಗಳು ಇಲ್ಲಿವೆ....</p>.<p>ಆನೇಕಲ್<strong> </strong>ತಾಲ್ಲೂಕಿನ ಇಂಡ್ಲವಾಡಿ ಸೂರ್ಯಸಿಟಿ 4ನೇ ಹಂತದಲ್ಲಿ ನಿರ್ಮಾಣಗೊಳ್ಳಲಿರುವ ಅಂತರರಾಷ್ಟ್ರೀಯ ಕ್ರೀಡಾಂಗಣ ಕಾಮಗಾರಿಗೆ ಮೇ 23ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೂಮಿ ಪೂಜೆ ನೆರವೇರಿಸಲಿದ್ದಾರೆ. </p><p>ಉದ್ಘಾಟನಾ ಕಾರ್ಯಕ್ರಮಕ್ಕೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಸಾಕ್ಷಿಯಾಗಲಿದ್ದಾರೆ.</p>.ಸೂರ್ಯಸಿಟಿಯಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಇಂದು ಭೂಮಿಪೂಜೆ.<p>ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ನಡೆಸಿದ ನೀಟ್– ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೌತವಿಜ್ಞಾನದ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ಪುಣೆಯ ಶಿಕ್ಷಕಿಯನ್ನು ಸಿಬಿಐ ಬಂಧಿಸಿದೆ.</p><p>ಪುಣೆಯ ಸೇಠ್ ಹೀರಾಲಾಲ್ ಸರಾಫ್ ಪ್ರಶಾಲಾದ ಶಿಕ್ಷಕಿ ಮನೀಷಾ ಸಂಜಯ್ ಹವಾಲ್ದಾರ್ ಅವರನ್ನು ವಿಚಾರಣೆಯ ನಂತರ ಬಂಧಿಸಲಾಗಿದೆ ಎಂದು ಸಿಬಿಐ ಶುಕ್ರವಾರ ತಿಳಿಸಿದೆ.</p> .ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪುಣೆಯ ಶಿಕ್ಷಕಿ ಬಂಧಿಸಿದ ಸಿಬಿಐ.<p>ಪ್ರತಿ ಲೀಟರ್ ಪೆಟ್ರೋಲ್ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆ ಮತ್ತೆ ಏರಿಕೆಯಾಗಿದೆ.</p><p>ಮೇ 15ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ಗೆ ತಲಾ ₹3ರಷ್ಟು ಹೆಚ್ಚಿಸಿತ್ತು. ಬಳಿಕ ಮೇ 19ರಂದು ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ 90 ಪೈಸೆ ಏರಿಕೆ ಮಾಡಲಾಗಿತ್ತು.</p><p>ಇದೀಗ ಇಂಧನ ದರ ಮತ್ತೆ ಏರಿಕೆ ಮಾಡಿದ್ದು, ಕಳೆದ 10 ದಿನಗಳಲ್ಲಿ ಮೂರನೇ ಬಾರಿಗೆ ದರ ಹೆಚ್ಚಿಸಿದಂತಾಗಿದೆ.</p>.10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ: ಇಲ್ಲಿದೆ ಸಂಪೂರ್ಣ ವಿವರ.<p>ಡಿಜಿಲಾಕರ್ ಹೆಸರಿನಲ್ಲಿ ನಕಲಿ ವೆಬ್ಸೈಟ್ವೊಂದು ಸಕ್ರಿಯವಾಗಿದೆ. ಈ ಬಗ್ಗೆ ಬಳಕೆದಾರರು ಎಚ್ಚರದಿಂದ ಇರಬೇಕು ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.</p><p>ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಇಲಾಖೆ, ನಕಲಿ ವೆಬ್ಸೈಟ್ನ ಲಿಂಕ್ ಹಂಚಿಕೊಂಡು, ‘ಸೈಬರ್ ಅಪರಾಧಗಳ ವಿಚಾರದಲ್ಲಿ ಎಚ್ಚರ ಹಾಗೂ ಸುರಕ್ಷಿತವಾಗಿರಿ’ ಎಂದು ಸಲಹೆ ನೀಡಿದೆ.</p> .ಡಿಜಿಲಾಕರ್ ಹೆಸರಲ್ಲಿ ನಕಲಿ ವೆಬ್ಸೈಟ್: ಕೇಂದ್ರ ಸರ್ಕಾರದಿಂದ ಎಚ್ಚರಿಕೆಯ ಸಂದೇಶ.<p>ಬಿತ್ತನೆ ಬೀಜ ಪಡೆಯಲು ರೈತರು ಹಗಲು–ರಾತ್ರಿ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿರುವುದು, ಸರ್ಕಾರದ ರೈತಕಾಳಜಿಯ ಟೊಳ್ಳುತನವನ್ನು ಸೂಚಿಸುವಂತಿದೆ.</p><p>ಬಿತ್ತನೆ ಬೀಜಗಳಿಗಾಗಿ ರೈತರು ಪರದಾಡುವ ಸ್ಥಿತಿ ಹಾವೇರಿ ಜಿಲ್ಲೆಯಲ್ಲಿ ಉಂಟಾಗಿದೆ. ಇದು, ಹಳೆಯ ತಪ್ಪುಗಳಿಂದ ಪಾಠ ಕಲಿಯದ ಸರ್ಕಾರಿ ವ್ಯವಸ್ಥೆಯ ಸಂವೇದನಾಶೂನ್ಯ ಮನಃಸ್ಥಿತಿಯ ಹಾಗೂ ಕೃಷಿಯನ್ನು ಆದ್ಯತೆಯ ವಿಷಯವನ್ನಾಗಿ ಸರ್ಕಾರ ಪರಿಗಣಿಸದೆ ಇರುವುದರ ಸಂಕೇತದಂತಿದೆ.</p>.ಸಂಪಾದಕೀಯ | ಬಿತ್ತನೆ ಬೀಜ ವಿತರಣೆ ಅವ್ಯವಸ್ಥೆ: ಮಾತಿನಲ್ಲೇ ಉಳಿದ ರೈತಕಾಳಜಿ.<p>ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ನಾಲ್ಕು ದಿನಗಳ ಪ್ರವಾಸದ ಭಾಗವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಪ್ರವಾಸದ ಮೊದಲ ಹಂತವಾಗಿ ಅವರು ಕೋಲ್ಕತ್ತಕ್ಕೆ ಭೇಟಿ ನೀಡಿದ್ದಾರೆ.</p><p>ಕೋಲ್ಕತ್ತಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಬ್ಬರು ಭೇಟಿ ನೀಡುತ್ತಿರುವುದು 14 ವರ್ಷಗಳ ನಂತರ ಇದೇ ಮೊದಲು. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಐತಿಹಾಸಿಕ ರಾಜಕೀಯ ಬದಲಾವಣೆ ಕಂಡ ಕೆಲವೇ ವಾರಗಳಲ್ಲಿ ಈ ಭೇಟಿ ನಡೆದಿರುವುದು ವಿಶೇಷ.</p>.ಭಾರತಕ್ಕೆ ಬಂದಿಳಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ.<p>ಜೊನಾಥನ್, ತೂಯಿ ಮಾಲಿಲ ಮತ್ತು ಅದ್ವೈತ! ಇವು ವಿಶ್ವ ಪ್ರಸಿದ್ಧರ ಹೆಸರುಗಳಲ್ಲ. ನಕ್ಷತ್ರ, ನೀಹಾರಿಕೆಗಳೂ ಅಲ್ಲ. ಸಮಾಜಸೇವೆ ಮಾಡುತ್ತ ಎಲೆಮರೆಯ ಕಾಯಿಯಂತೆ ಬದುಕಿದ ಮಹನೀಯರ ಹೆಸರುಗಳೂ ಅಲ್ಲ. ಒಲಿಂಪಿಕ್ ಕ್ರೀಡಾಕೂಟದ ತಾರೆಗಳೂ ಅಲ್ಲ. ಯುದ್ಧ ಬಳಕೆಯ ಕ್ಷಿಪಣಿ–ರಾಕೆಟ್ಗಳೂ ಅಲ್ಲ! ಕಾದಂಬರಿಯೊಂದರ ಪಾತ್ರಗಳೂ ಅಲ್ಲ. ಇವು, ಜಗತ್ತಿನ ಇತಿಹಾಸದಲ್ಲೇ ಅತಿಹೆಚ್ಚು ಕಾಲ ಬದುಕಿದ ಆಮೆಗಳ ಹೆಸರು!</p>.ಸಂಗತ: ಗದ್ದಲದ ಜಗ, ಮೌನ, ನಿಧಾನ ಮತ್ತು ಆಮೆ!.<p>‘ಸೈಕ್ಲಿಂಗ್ ಕಾಶಿ’ ಎಂದು ಪ್ರಸಿದ್ಧವಾದ ‘ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಸಂಬಂಧಿಸಿದ ‘ಸೈಕ್ಲಿಂಗ್’ ಬೆಳವಣಿಗೆಗೆ ಅರ್ಧ ಶತಮಾನದ ಇತಿಹಾಸವಿದೆ. ಈ ಜಿಲ್ಲೆಗಳ ಬಡ ಕುಟುಂಬಗಳ ಯುವಜನರು ಸೈಕ್ಲಿಂಗ್ ಮೂಲಕವೇ ತಮ್ಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ; ಕೆಲವರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಿರುವುದೂ ಇದೆ.</p>.ಗಿರೀಶ ದೊಡ್ಡಮನಿ ಅವರ ವಿಶ್ಲೇಷಣೆ: ಕೃಷ್ಣೆ ಮಡಿಲಲ್ಲಿ ‘ಸೈಕ್ಲಿಂಗ್ ಕ್ರಾಂತಿ’.<p>ಅರ್ಹ ಮತದಾರರನ್ನಷ್ಟೇ ಮತದಾರರ ಪಟ್ಟಿಯಲ್ಲಿ ಉಳಿಸುವುದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಮೂಲ ಉದ್ದೇಶ. ಅರ್ಹರನ್ನಷ್ಟೇ ಗುರುತಿಸುವ ರೀತಿಯಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ರೂಪಿಸಲಾಗಿದ್ದು, ಅದು ಸಂಪೂರ್ಣವಾಗಿ ನಿಯಮಬದ್ಧವಾಗಿಯೇ ನಡೆಯುತ್ತದೆ. ಪ್ರಕ್ರಿಯೆ ಅಂತಿಮಗೊಂಡಾಗ ಅರ್ಹ ಮತದಾರರಷ್ಟೇ ಉಳಿಯುತ್ತಾರೆ, ಅನರ್ಹರು ಅಲ್ಲ ಎನ್ನುವುದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರ ಸ್ಪಷ್ಟ ನುಡಿ. ಎಸ್ಐಆರ್ ಕುರಿತ ವಿವರಗಳನ್ನು ‘ಪ್ರಜಾವಾಣಿ’ ಯೊಂದಿಗೆ ಅವರು ಹಂಚಿಕೊಂಡಿದ್ದಾರೆ.</p> .ಪ್ರಜಾವಾಣಿ ಸಂದರ್ಶನ| ಎಸ್ಐಆರ್: ಅರ್ಹರಿಗೆ ತಪ್ಪದು ಮತದಾನದ ಹಕ್ಕು- ಅನ್ಬುಕುಮಾರ್.<p>ಪ್ರಮುಖ ಬ್ಯಾಟರ್ಗಳ ಕಾಣಿಕೆಯಿಂದಾಗಿ ದೊಡ್ಡ ಮೊತ್ತ ಕಲೆಹಾಕಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಶುಕ್ರವಾರ ಐಪಿಎಲ್ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 55 ರನ್ಗಳಿಂದ ಸುಲಭವಾಗಿ ಮಣಿಸಿತು. ಈ ಸೋಲಿನ ಹೊರತಾಗಿಯೂ ಹಾಲಿ ಚಾಂಪಿಯನ್ ಆರ್ಸಿಬಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಬಾಧಿತವಾಗಿ ಉಳಿಸಿಕೊಂಡಿತು.</p>. SRH vs RCB: ಸೋತರೂ ಅಗ್ರಸ್ಥಾನದಲ್ಲೇ ಉಳಿದ ಆರ್ಸಿಬಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಪಾದಕೀಯ, ಆಳ–ಅಗಲ ಹಾಗೂ ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡಾ ವಿಭಾದ ಪ್ರಮುಖ ಸುದ್ದಿಗಳು ಇಲ್ಲಿವೆ....</p>.<p>ಆನೇಕಲ್<strong> </strong>ತಾಲ್ಲೂಕಿನ ಇಂಡ್ಲವಾಡಿ ಸೂರ್ಯಸಿಟಿ 4ನೇ ಹಂತದಲ್ಲಿ ನಿರ್ಮಾಣಗೊಳ್ಳಲಿರುವ ಅಂತರರಾಷ್ಟ್ರೀಯ ಕ್ರೀಡಾಂಗಣ ಕಾಮಗಾರಿಗೆ ಮೇ 23ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೂಮಿ ಪೂಜೆ ನೆರವೇರಿಸಲಿದ್ದಾರೆ. </p><p>ಉದ್ಘಾಟನಾ ಕಾರ್ಯಕ್ರಮಕ್ಕೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಸಾಕ್ಷಿಯಾಗಲಿದ್ದಾರೆ.</p>.ಸೂರ್ಯಸಿಟಿಯಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಇಂದು ಭೂಮಿಪೂಜೆ.<p>ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ನಡೆಸಿದ ನೀಟ್– ಯುಜಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೌತವಿಜ್ಞಾನದ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ಪುಣೆಯ ಶಿಕ್ಷಕಿಯನ್ನು ಸಿಬಿಐ ಬಂಧಿಸಿದೆ.</p><p>ಪುಣೆಯ ಸೇಠ್ ಹೀರಾಲಾಲ್ ಸರಾಫ್ ಪ್ರಶಾಲಾದ ಶಿಕ್ಷಕಿ ಮನೀಷಾ ಸಂಜಯ್ ಹವಾಲ್ದಾರ್ ಅವರನ್ನು ವಿಚಾರಣೆಯ ನಂತರ ಬಂಧಿಸಲಾಗಿದೆ ಎಂದು ಸಿಬಿಐ ಶುಕ್ರವಾರ ತಿಳಿಸಿದೆ.</p> .ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪುಣೆಯ ಶಿಕ್ಷಕಿ ಬಂಧಿಸಿದ ಸಿಬಿಐ.<p>ಪ್ರತಿ ಲೀಟರ್ ಪೆಟ್ರೋಲ್ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆ ಮತ್ತೆ ಏರಿಕೆಯಾಗಿದೆ.</p><p>ಮೇ 15ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ಗೆ ತಲಾ ₹3ರಷ್ಟು ಹೆಚ್ಚಿಸಿತ್ತು. ಬಳಿಕ ಮೇ 19ರಂದು ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ 90 ಪೈಸೆ ಏರಿಕೆ ಮಾಡಲಾಗಿತ್ತು.</p><p>ಇದೀಗ ಇಂಧನ ದರ ಮತ್ತೆ ಏರಿಕೆ ಮಾಡಿದ್ದು, ಕಳೆದ 10 ದಿನಗಳಲ್ಲಿ ಮೂರನೇ ಬಾರಿಗೆ ದರ ಹೆಚ್ಚಿಸಿದಂತಾಗಿದೆ.</p>.10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ: ಇಲ್ಲಿದೆ ಸಂಪೂರ್ಣ ವಿವರ.<p>ಡಿಜಿಲಾಕರ್ ಹೆಸರಿನಲ್ಲಿ ನಕಲಿ ವೆಬ್ಸೈಟ್ವೊಂದು ಸಕ್ರಿಯವಾಗಿದೆ. ಈ ಬಗ್ಗೆ ಬಳಕೆದಾರರು ಎಚ್ಚರದಿಂದ ಇರಬೇಕು ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.</p><p>ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಇಲಾಖೆ, ನಕಲಿ ವೆಬ್ಸೈಟ್ನ ಲಿಂಕ್ ಹಂಚಿಕೊಂಡು, ‘ಸೈಬರ್ ಅಪರಾಧಗಳ ವಿಚಾರದಲ್ಲಿ ಎಚ್ಚರ ಹಾಗೂ ಸುರಕ್ಷಿತವಾಗಿರಿ’ ಎಂದು ಸಲಹೆ ನೀಡಿದೆ.</p> .ಡಿಜಿಲಾಕರ್ ಹೆಸರಲ್ಲಿ ನಕಲಿ ವೆಬ್ಸೈಟ್: ಕೇಂದ್ರ ಸರ್ಕಾರದಿಂದ ಎಚ್ಚರಿಕೆಯ ಸಂದೇಶ.<p>ಬಿತ್ತನೆ ಬೀಜ ಪಡೆಯಲು ರೈತರು ಹಗಲು–ರಾತ್ರಿ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿರುವುದು, ಸರ್ಕಾರದ ರೈತಕಾಳಜಿಯ ಟೊಳ್ಳುತನವನ್ನು ಸೂಚಿಸುವಂತಿದೆ.</p><p>ಬಿತ್ತನೆ ಬೀಜಗಳಿಗಾಗಿ ರೈತರು ಪರದಾಡುವ ಸ್ಥಿತಿ ಹಾವೇರಿ ಜಿಲ್ಲೆಯಲ್ಲಿ ಉಂಟಾಗಿದೆ. ಇದು, ಹಳೆಯ ತಪ್ಪುಗಳಿಂದ ಪಾಠ ಕಲಿಯದ ಸರ್ಕಾರಿ ವ್ಯವಸ್ಥೆಯ ಸಂವೇದನಾಶೂನ್ಯ ಮನಃಸ್ಥಿತಿಯ ಹಾಗೂ ಕೃಷಿಯನ್ನು ಆದ್ಯತೆಯ ವಿಷಯವನ್ನಾಗಿ ಸರ್ಕಾರ ಪರಿಗಣಿಸದೆ ಇರುವುದರ ಸಂಕೇತದಂತಿದೆ.</p>.ಸಂಪಾದಕೀಯ | ಬಿತ್ತನೆ ಬೀಜ ವಿತರಣೆ ಅವ್ಯವಸ್ಥೆ: ಮಾತಿನಲ್ಲೇ ಉಳಿದ ರೈತಕಾಳಜಿ.<p>ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ನಾಲ್ಕು ದಿನಗಳ ಪ್ರವಾಸದ ಭಾಗವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಪ್ರವಾಸದ ಮೊದಲ ಹಂತವಾಗಿ ಅವರು ಕೋಲ್ಕತ್ತಕ್ಕೆ ಭೇಟಿ ನೀಡಿದ್ದಾರೆ.</p><p>ಕೋಲ್ಕತ್ತಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಬ್ಬರು ಭೇಟಿ ನೀಡುತ್ತಿರುವುದು 14 ವರ್ಷಗಳ ನಂತರ ಇದೇ ಮೊದಲು. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಐತಿಹಾಸಿಕ ರಾಜಕೀಯ ಬದಲಾವಣೆ ಕಂಡ ಕೆಲವೇ ವಾರಗಳಲ್ಲಿ ಈ ಭೇಟಿ ನಡೆದಿರುವುದು ವಿಶೇಷ.</p>.ಭಾರತಕ್ಕೆ ಬಂದಿಳಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ.<p>ಜೊನಾಥನ್, ತೂಯಿ ಮಾಲಿಲ ಮತ್ತು ಅದ್ವೈತ! ಇವು ವಿಶ್ವ ಪ್ರಸಿದ್ಧರ ಹೆಸರುಗಳಲ್ಲ. ನಕ್ಷತ್ರ, ನೀಹಾರಿಕೆಗಳೂ ಅಲ್ಲ. ಸಮಾಜಸೇವೆ ಮಾಡುತ್ತ ಎಲೆಮರೆಯ ಕಾಯಿಯಂತೆ ಬದುಕಿದ ಮಹನೀಯರ ಹೆಸರುಗಳೂ ಅಲ್ಲ. ಒಲಿಂಪಿಕ್ ಕ್ರೀಡಾಕೂಟದ ತಾರೆಗಳೂ ಅಲ್ಲ. ಯುದ್ಧ ಬಳಕೆಯ ಕ್ಷಿಪಣಿ–ರಾಕೆಟ್ಗಳೂ ಅಲ್ಲ! ಕಾದಂಬರಿಯೊಂದರ ಪಾತ್ರಗಳೂ ಅಲ್ಲ. ಇವು, ಜಗತ್ತಿನ ಇತಿಹಾಸದಲ್ಲೇ ಅತಿಹೆಚ್ಚು ಕಾಲ ಬದುಕಿದ ಆಮೆಗಳ ಹೆಸರು!</p>.ಸಂಗತ: ಗದ್ದಲದ ಜಗ, ಮೌನ, ನಿಧಾನ ಮತ್ತು ಆಮೆ!.<p>‘ಸೈಕ್ಲಿಂಗ್ ಕಾಶಿ’ ಎಂದು ಪ್ರಸಿದ್ಧವಾದ ‘ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಸಂಬಂಧಿಸಿದ ‘ಸೈಕ್ಲಿಂಗ್’ ಬೆಳವಣಿಗೆಗೆ ಅರ್ಧ ಶತಮಾನದ ಇತಿಹಾಸವಿದೆ. ಈ ಜಿಲ್ಲೆಗಳ ಬಡ ಕುಟುಂಬಗಳ ಯುವಜನರು ಸೈಕ್ಲಿಂಗ್ ಮೂಲಕವೇ ತಮ್ಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ; ಕೆಲವರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಿರುವುದೂ ಇದೆ.</p>.ಗಿರೀಶ ದೊಡ್ಡಮನಿ ಅವರ ವಿಶ್ಲೇಷಣೆ: ಕೃಷ್ಣೆ ಮಡಿಲಲ್ಲಿ ‘ಸೈಕ್ಲಿಂಗ್ ಕ್ರಾಂತಿ’.<p>ಅರ್ಹ ಮತದಾರರನ್ನಷ್ಟೇ ಮತದಾರರ ಪಟ್ಟಿಯಲ್ಲಿ ಉಳಿಸುವುದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಮೂಲ ಉದ್ದೇಶ. ಅರ್ಹರನ್ನಷ್ಟೇ ಗುರುತಿಸುವ ರೀತಿಯಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ರೂಪಿಸಲಾಗಿದ್ದು, ಅದು ಸಂಪೂರ್ಣವಾಗಿ ನಿಯಮಬದ್ಧವಾಗಿಯೇ ನಡೆಯುತ್ತದೆ. ಪ್ರಕ್ರಿಯೆ ಅಂತಿಮಗೊಂಡಾಗ ಅರ್ಹ ಮತದಾರರಷ್ಟೇ ಉಳಿಯುತ್ತಾರೆ, ಅನರ್ಹರು ಅಲ್ಲ ಎನ್ನುವುದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರ ಸ್ಪಷ್ಟ ನುಡಿ. ಎಸ್ಐಆರ್ ಕುರಿತ ವಿವರಗಳನ್ನು ‘ಪ್ರಜಾವಾಣಿ’ ಯೊಂದಿಗೆ ಅವರು ಹಂಚಿಕೊಂಡಿದ್ದಾರೆ.</p> .ಪ್ರಜಾವಾಣಿ ಸಂದರ್ಶನ| ಎಸ್ಐಆರ್: ಅರ್ಹರಿಗೆ ತಪ್ಪದು ಮತದಾನದ ಹಕ್ಕು- ಅನ್ಬುಕುಮಾರ್.<p>ಪ್ರಮುಖ ಬ್ಯಾಟರ್ಗಳ ಕಾಣಿಕೆಯಿಂದಾಗಿ ದೊಡ್ಡ ಮೊತ್ತ ಕಲೆಹಾಕಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಶುಕ್ರವಾರ ಐಪಿಎಲ್ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 55 ರನ್ಗಳಿಂದ ಸುಲಭವಾಗಿ ಮಣಿಸಿತು. ಈ ಸೋಲಿನ ಹೊರತಾಗಿಯೂ ಹಾಲಿ ಚಾಂಪಿಯನ್ ಆರ್ಸಿಬಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಬಾಧಿತವಾಗಿ ಉಳಿಸಿಕೊಂಡಿತು.</p>. SRH vs RCB: ಸೋತರೂ ಅಗ್ರಸ್ಥಾನದಲ್ಲೇ ಉಳಿದ ಆರ್ಸಿಬಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>