<p>ಅತೀ ವೇಗದ ಚಾಲನೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯಿಂದ ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸಕ್ತ ವರ್ಷದ ಮೂರು ತಿಂಗಳಲ್ಲಿ 11,265 ಅಪಘಾತಗಳು ಸಂಭವಿಸಿ 2,917 ಮಂದಿ ಮೃತಪಟ್ಟಿದ್ದಾರೆ. ದಿನಕ್ಕೆ ಸರಾಸರಿ 32 ಮಂದಿ ಜೀವ ಕಳೆದುಕೊಂಡಿದ್ದಾರೆ.</p><p>ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಅಲ್ಲದೇ ಇತರೆ ರಸ್ತೆಗಳಲ್ಲಿ 2026ರ ಜನವರಿಯಿಂದ ಮಾರ್ಚ್ವರೆಗೆ ಸಂಭವಿಸಿದ ಅಪಘಾತಗಳ ಅಂಕಿ–ಅಂಶಗಳನ್ನು ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ (ಎಸ್ಸಿಆರ್ಬಿ) ಬಿಡುಗಡೆಗೊಳಿಸಿದೆ.</p>.ರಾಜ್ಯದಲ್ಲಿ 2026ರ ಮೂರೇ ತಿಂಗಳಲ್ಲಿ 11,265 ಅಪಘಾತ: ನಿತ್ಯ ಸರಾಸರಿ 32 ಸಾವು.<p>ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು...</p>.<p>‘ನೀಟ್–ಯುಜಿ’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ, ‘ನೀಟ್’ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ತಂಡದ ಭಾಗವಾಗಿದ್ದ ಸಸ್ಯವಿಜ್ಞಾನ ಉಪನ್ಯಾಸಕಿಯನ್ನು ಶನಿವಾರ ಬಂಧಿಸಿದೆ.</p><p>ಪುಣೆ ಮೂಲದ ಮನಿಶಾ ಮಂಧಾರೆ ಬಂಧಿತ ಉಪನ್ಯಾಸಕಿ. ದೆಹಲಿಯಲ್ಲಿ ಅವರನ್ನು ಬಂಧಿಸಿದ ಸಿಬಿಐ ತನ್ನ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದೆ. ಉಪನ್ಯಾಸಕಿಯು ಈ ಪ್ರಕರಣದ ಮತ್ತೊಬ್ಬ ಪ್ರಮುಖ ಸಂಚುಕೋರಾಗಿದ್ದಾರೆ ಎಂದು ಸಿಬಿಐ ಹೇಳಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಸಿಬಿಐ ಬಂಧಿಸಿದ 9ನೇ ಆರೋಪಿ ಇವರಾಗಿದ್ದಾರೆ.</p>.ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಉಪನ್ಯಾಸಕಿ ಬಂಧನ.<p>ಭಾರತವನ್ನು ‘ಅವಕಾಶಗಳ ನಾಡು’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಮಹತ್ವಾಕಾಂಕ್ಷೆಯು ಇನ್ನು ಮುಂದೆ ಅದರ ಗಡಿಗಳಿಗಷ್ಟೇ ಸೀಮಿತವಾಗಿರುವುದಿಲ್ಲ’ ಎಂದು ಹೇಳಿದರು.</p><p>ನೆದರ್ಲೆಂಡ್ಸ್ ಪ್ರವಾಸದಲ್ಲಿರುವ ಪ್ರಧಾನಿ ಅವರು ಹೇಗ್ನಲ್ಲಿ ಶನಿವಾರ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದರು. ಭಾರತದ ಜತೆಗಿನ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವಂತೆ ನೆದರ್ಲೆಂಡ್ಸ್ನಲ್ಲಿರುವ ‘ಭಾರತದ ಸ್ನೇಹಿತರಿ’ಗೆ ಕರೆ ನೀಡಿದರು.</p>.ಭಾರತದ ಮಹತ್ವಾಕಾಂಕ್ಷೆ ಸೀಮಾತೀತ: ಮೋದಿ.<p>ರಾಜ್ಯದಲ್ಲಿ ಶಾಲೆಗಳು ಜೂನ್ 1ರಿಂದ ಆರಂಭವಾಗಲಿದ್ದು, ಅಂದೇ ಪೋಷಕ-ಶಿಕ್ಷಕರ ಮಹಾ ಸಭೆಯನ್ನೂ ಆಯೋಜಿಸಲಾಗುತ್ತಿದೆ.</p><p>ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, 2026–27ನೇ ಸಾಲಿನ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರ ಜತೆ ಶನಿವಾರ ಸಂವಾದ ನಡೆಸಿದರು.</p>.ರಾಜ್ಯದಲ್ಲಿ ಜೂನ್ 1ಕ್ಕೆ ಶಾಲಾ ಪ್ರಾರಂಭೋತ್ಸವ.<p>ಕಾಂಗೊ ಮತ್ತು ಉಗಾಂಡಾ ದೇಶಗಳಲ್ಲಿ ಎಬೊಲಾ ವೈರಸ್ ಹರಡುವಿಕೆ ವಿಪರೀತ ಹೆಚ್ಚಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ‘ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಘೋಷಿಸಿದೆ.</p><p>ಕಾಂಗೊದ ಇಟುರಿ ಪ್ರಾಂತ್ಯದ ಬುನಿಯಾ, ವ್ಯಾಂಪರಾ ಮತ್ತು ಮೊಂಗದವಾಲು ಸೇರಿದಂತೆ ಕನಿಷ್ಠ ಮೂರು ಆರೋಗ್ಯ ವಲಯಗಳಲ್ಲಿ ಶನಿವಾರದ ವೇಳೆಗೆ 80 ಶಂಕಿತ ಸಾವು, ಎಂಟು ಮಂದಿಗೆ ಎಬೊಲಾ ದೃಢಪಟ್ಟಿದೆ.</p>.ಎಬೊಲಾದಿಂದ 80 ಸಾವು?: ಕಾಂಗೊ, ಉಂಗಾಡಾದಲ್ಲಿ ಆರೋಗ್ಯ ತುರ್ತು ಸ್ಥಿತಿ ಘೋಷಣೆ.<p>ಕೇಂದ್ರ ಚುನಾವಣಾ ಆಯೋಗ ಜೂನ್ 20 ರಿಂದ ಕರ್ನಾಟಕದಲ್ಲಿ ಆರಂಭಿಸುತ್ತಿರುವ ಮೂರನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಎಂಟು ಪ್ರಮುಖ ಅಂಶಗಳತ್ತ ಗಮನ ಹರಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೆಪಿಸಿಸಿ ಪತ್ರ ಬರೆದಿದೆ.</p><p>ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು ಪತ್ರ ಬರೆದಿದ್ದಾರೆ.</p>.ಎಸ್ಐಆರ್: ಚುನಾವಣಾಧಿಕಾರಿಗೆ ಕೆಪಿಸಿಸಿ ಪತ್ರ.<p>ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಮೇಲೆ ಸುಂಕವಿಧಿಸುವ ನೂತನ ಅಬಕಾರಿ ಸುಂಕ ನೀತಿಯು ಮೇ 11ರಿಂದ ಜಾರಿಗೆ ಬಂದಿದ್ದು, ಆಲ್ಕೋಹಾಲ್ ಪ್ರಮಾಣ ಹೆಚ್ಚುಇರುವ ಎಲ್ಲ ಮದ್ಯಗಳ ಮಾರಾಟ ಬೆಲೆ ಏರಿಕೆಯಾಗಿದೆ. ಹೆಚ್ಚಳಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.</p><p>ನೂತನ ಸುಂಕ ನೀತಿಯಿಂದ ಕಡಿಮೆ ಬೆಲೆಯ ಮದ್ಯಗಳ ದರ ಅತಿಹೆಚ್ಚು ಏರಿಕೆಯಾಗಿದೆ. ಈ ಮೊದಲು 180 ಎಂ.ಎಲ್ನ (ಕ್ವಾರ್ಟರ್) ವಿಸ್ಕಿಯ ಟೆಟ್ರಾಪ್ಯಾಕ್ನ ಬೆಲೆ ₹70 ಇದ್ದದ್ದು, ₹95–₹98ರವರೆಗೆ ಏರಿಕೆಯಾಗಿದೆ. ಅದೇ ರೀತಿ ₹135ಕ್ಕೆ ಸಿಗುತ್ತಿದ್ದ ಕ್ವಾರ್ಟರ್ ವಿಸ್ಕಿಗೆ ಈಗ ₹160 ನೀಡಬೇಕಾಗಿದೆ.</p>.ಆಲ್ಕೋಹಾಲ್ ಹೆಚ್ಚಿರುವ ಮದ್ಯದ ಬೆಲೆ ಏರಿಕೆ: ಬಿಯರ್ ಪ್ರಿಯರಿಗೆ ಖುಷಿ.<p>‘ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿ, ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವುದನ್ನು ಮುಂದುವರಿಸಿದರೆ, ಅದು ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದಲ್ಲಿ ಉಳಿಯಬೇಕೆ? ಬೇಡವೇ ಎಂಬುದನ್ನು ನಿರ್ಧರಿಸಲಿದ್ದೇವೆ’ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.</p><p>ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೊದಲನೇ ವರ್ಷಾಚರಣೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಮಾಣಿಕ್ಶಾ ಕೇಂದ್ರದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಸಂದೇಶ ನೀಡಿದ್ದಾರೆ.</p>.ಪಾಕಿಸ್ತಾನ ಇತಿಹಾಸ ಸೇರಬೇಕೇ? ದ್ವಿವೇದಿ ಪ್ರಶ್ನೆ.<p>ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಸತತ ಮನವೊಲಿಕೆ ನಂತರ, ಗೃಹ ಸಚಿವರಾಗಿ ಸಂಪುಟ ಸೇರಲು ರಮೇಶ್ ಚೆನ್ನಿತ್ತಲ ಒಪ್ಪಿಕೊಂಡಿದ್ದಾರೆ.</p>.ಕೇರಳಂ: ಮುನಿಸು ಮರೆತ ಚೆನ್ನಿತ್ತಲಗೆ ಸತೀಶನ್ ಸಂಪುಟದಲ್ಲಿ ಗೃಹ ಖಾತೆ.<p>ಸತತ ಸೋಲುಗಳ ಸುಳಿಯಲ್ಲಿ ಸಿಲುಕಿರುವ ಪಂಜಾಬ್ ಕಿಂಗ್ಸ್ ತಂಡದ ಗಾಯದ ಮೇಲೆ ಬರೆ ಎಳೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿದ್ಧವಾಗಿದೆ.</p><p>ಭಾನುವಾರ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯ ಲಿರುವ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗ ಲಿವೆ. ರಾಯಪುರದಲ್ಲಿ ನಡೆದಿದ್ದ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ದೌಲ್ಧಾರಾ ವಲಯದ ಪರ್ವತಶ್ರೇಣಿಗಳ ಮಧ್ಯೆ ಇರುವ ಈ ಕ್ರೀಡಾಂಗಣದಲ್ಲಿ ಕೊಹ್ಲಿ ಬ್ಯಾಟಿಂಗ್ ರಂಗೇರುವ ನಿರೀಕ್ಷೆ ಇದೆ.</p>.IPL 2026: ಆರ್ಸಿಬಿಗೆ ಅಗ್ರಸ್ಥಾನ ಉಳಿಸಿಕೊಳ್ಳುವ ಛಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅತೀ ವೇಗದ ಚಾಲನೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯಿಂದ ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸಕ್ತ ವರ್ಷದ ಮೂರು ತಿಂಗಳಲ್ಲಿ 11,265 ಅಪಘಾತಗಳು ಸಂಭವಿಸಿ 2,917 ಮಂದಿ ಮೃತಪಟ್ಟಿದ್ದಾರೆ. ದಿನಕ್ಕೆ ಸರಾಸರಿ 32 ಮಂದಿ ಜೀವ ಕಳೆದುಕೊಂಡಿದ್ದಾರೆ.</p><p>ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಅಲ್ಲದೇ ಇತರೆ ರಸ್ತೆಗಳಲ್ಲಿ 2026ರ ಜನವರಿಯಿಂದ ಮಾರ್ಚ್ವರೆಗೆ ಸಂಭವಿಸಿದ ಅಪಘಾತಗಳ ಅಂಕಿ–ಅಂಶಗಳನ್ನು ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ (ಎಸ್ಸಿಆರ್ಬಿ) ಬಿಡುಗಡೆಗೊಳಿಸಿದೆ.</p>.ರಾಜ್ಯದಲ್ಲಿ 2026ರ ಮೂರೇ ತಿಂಗಳಲ್ಲಿ 11,265 ಅಪಘಾತ: ನಿತ್ಯ ಸರಾಸರಿ 32 ಸಾವು.<p>ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಟಾಪ್ 10 ಸುದ್ದಿಗಳು...</p>.<p>‘ನೀಟ್–ಯುಜಿ’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ, ‘ನೀಟ್’ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ತಂಡದ ಭಾಗವಾಗಿದ್ದ ಸಸ್ಯವಿಜ್ಞಾನ ಉಪನ್ಯಾಸಕಿಯನ್ನು ಶನಿವಾರ ಬಂಧಿಸಿದೆ.</p><p>ಪುಣೆ ಮೂಲದ ಮನಿಶಾ ಮಂಧಾರೆ ಬಂಧಿತ ಉಪನ್ಯಾಸಕಿ. ದೆಹಲಿಯಲ್ಲಿ ಅವರನ್ನು ಬಂಧಿಸಿದ ಸಿಬಿಐ ತನ್ನ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದೆ. ಉಪನ್ಯಾಸಕಿಯು ಈ ಪ್ರಕರಣದ ಮತ್ತೊಬ್ಬ ಪ್ರಮುಖ ಸಂಚುಕೋರಾಗಿದ್ದಾರೆ ಎಂದು ಸಿಬಿಐ ಹೇಳಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಸಿಬಿಐ ಬಂಧಿಸಿದ 9ನೇ ಆರೋಪಿ ಇವರಾಗಿದ್ದಾರೆ.</p>.ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಉಪನ್ಯಾಸಕಿ ಬಂಧನ.<p>ಭಾರತವನ್ನು ‘ಅವಕಾಶಗಳ ನಾಡು’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಮಹತ್ವಾಕಾಂಕ್ಷೆಯು ಇನ್ನು ಮುಂದೆ ಅದರ ಗಡಿಗಳಿಗಷ್ಟೇ ಸೀಮಿತವಾಗಿರುವುದಿಲ್ಲ’ ಎಂದು ಹೇಳಿದರು.</p><p>ನೆದರ್ಲೆಂಡ್ಸ್ ಪ್ರವಾಸದಲ್ಲಿರುವ ಪ್ರಧಾನಿ ಅವರು ಹೇಗ್ನಲ್ಲಿ ಶನಿವಾರ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಿದರು. ಭಾರತದ ಜತೆಗಿನ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವಂತೆ ನೆದರ್ಲೆಂಡ್ಸ್ನಲ್ಲಿರುವ ‘ಭಾರತದ ಸ್ನೇಹಿತರಿ’ಗೆ ಕರೆ ನೀಡಿದರು.</p>.ಭಾರತದ ಮಹತ್ವಾಕಾಂಕ್ಷೆ ಸೀಮಾತೀತ: ಮೋದಿ.<p>ರಾಜ್ಯದಲ್ಲಿ ಶಾಲೆಗಳು ಜೂನ್ 1ರಿಂದ ಆರಂಭವಾಗಲಿದ್ದು, ಅಂದೇ ಪೋಷಕ-ಶಿಕ್ಷಕರ ಮಹಾ ಸಭೆಯನ್ನೂ ಆಯೋಜಿಸಲಾಗುತ್ತಿದೆ.</p><p>ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, 2026–27ನೇ ಸಾಲಿನ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರ ಜತೆ ಶನಿವಾರ ಸಂವಾದ ನಡೆಸಿದರು.</p>.ರಾಜ್ಯದಲ್ಲಿ ಜೂನ್ 1ಕ್ಕೆ ಶಾಲಾ ಪ್ರಾರಂಭೋತ್ಸವ.<p>ಕಾಂಗೊ ಮತ್ತು ಉಗಾಂಡಾ ದೇಶಗಳಲ್ಲಿ ಎಬೊಲಾ ವೈರಸ್ ಹರಡುವಿಕೆ ವಿಪರೀತ ಹೆಚ್ಚಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ‘ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಘೋಷಿಸಿದೆ.</p><p>ಕಾಂಗೊದ ಇಟುರಿ ಪ್ರಾಂತ್ಯದ ಬುನಿಯಾ, ವ್ಯಾಂಪರಾ ಮತ್ತು ಮೊಂಗದವಾಲು ಸೇರಿದಂತೆ ಕನಿಷ್ಠ ಮೂರು ಆರೋಗ್ಯ ವಲಯಗಳಲ್ಲಿ ಶನಿವಾರದ ವೇಳೆಗೆ 80 ಶಂಕಿತ ಸಾವು, ಎಂಟು ಮಂದಿಗೆ ಎಬೊಲಾ ದೃಢಪಟ್ಟಿದೆ.</p>.ಎಬೊಲಾದಿಂದ 80 ಸಾವು?: ಕಾಂಗೊ, ಉಂಗಾಡಾದಲ್ಲಿ ಆರೋಗ್ಯ ತುರ್ತು ಸ್ಥಿತಿ ಘೋಷಣೆ.<p>ಕೇಂದ್ರ ಚುನಾವಣಾ ಆಯೋಗ ಜೂನ್ 20 ರಿಂದ ಕರ್ನಾಟಕದಲ್ಲಿ ಆರಂಭಿಸುತ್ತಿರುವ ಮೂರನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಎಂಟು ಪ್ರಮುಖ ಅಂಶಗಳತ್ತ ಗಮನ ಹರಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೆಪಿಸಿಸಿ ಪತ್ರ ಬರೆದಿದೆ.</p><p>ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು ಪತ್ರ ಬರೆದಿದ್ದಾರೆ.</p>.ಎಸ್ಐಆರ್: ಚುನಾವಣಾಧಿಕಾರಿಗೆ ಕೆಪಿಸಿಸಿ ಪತ್ರ.<p>ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಮೇಲೆ ಸುಂಕವಿಧಿಸುವ ನೂತನ ಅಬಕಾರಿ ಸುಂಕ ನೀತಿಯು ಮೇ 11ರಿಂದ ಜಾರಿಗೆ ಬಂದಿದ್ದು, ಆಲ್ಕೋಹಾಲ್ ಪ್ರಮಾಣ ಹೆಚ್ಚುಇರುವ ಎಲ್ಲ ಮದ್ಯಗಳ ಮಾರಾಟ ಬೆಲೆ ಏರಿಕೆಯಾಗಿದೆ. ಹೆಚ್ಚಳಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.</p><p>ನೂತನ ಸುಂಕ ನೀತಿಯಿಂದ ಕಡಿಮೆ ಬೆಲೆಯ ಮದ್ಯಗಳ ದರ ಅತಿಹೆಚ್ಚು ಏರಿಕೆಯಾಗಿದೆ. ಈ ಮೊದಲು 180 ಎಂ.ಎಲ್ನ (ಕ್ವಾರ್ಟರ್) ವಿಸ್ಕಿಯ ಟೆಟ್ರಾಪ್ಯಾಕ್ನ ಬೆಲೆ ₹70 ಇದ್ದದ್ದು, ₹95–₹98ರವರೆಗೆ ಏರಿಕೆಯಾಗಿದೆ. ಅದೇ ರೀತಿ ₹135ಕ್ಕೆ ಸಿಗುತ್ತಿದ್ದ ಕ್ವಾರ್ಟರ್ ವಿಸ್ಕಿಗೆ ಈಗ ₹160 ನೀಡಬೇಕಾಗಿದೆ.</p>.ಆಲ್ಕೋಹಾಲ್ ಹೆಚ್ಚಿರುವ ಮದ್ಯದ ಬೆಲೆ ಏರಿಕೆ: ಬಿಯರ್ ಪ್ರಿಯರಿಗೆ ಖುಷಿ.<p>‘ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿ, ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವುದನ್ನು ಮುಂದುವರಿಸಿದರೆ, ಅದು ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದಲ್ಲಿ ಉಳಿಯಬೇಕೆ? ಬೇಡವೇ ಎಂಬುದನ್ನು ನಿರ್ಧರಿಸಲಿದ್ದೇವೆ’ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.</p><p>ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೊದಲನೇ ವರ್ಷಾಚರಣೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಮಾಣಿಕ್ಶಾ ಕೇಂದ್ರದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಸಂದೇಶ ನೀಡಿದ್ದಾರೆ.</p>.ಪಾಕಿಸ್ತಾನ ಇತಿಹಾಸ ಸೇರಬೇಕೇ? ದ್ವಿವೇದಿ ಪ್ರಶ್ನೆ.<p>ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಸತತ ಮನವೊಲಿಕೆ ನಂತರ, ಗೃಹ ಸಚಿವರಾಗಿ ಸಂಪುಟ ಸೇರಲು ರಮೇಶ್ ಚೆನ್ನಿತ್ತಲ ಒಪ್ಪಿಕೊಂಡಿದ್ದಾರೆ.</p>.ಕೇರಳಂ: ಮುನಿಸು ಮರೆತ ಚೆನ್ನಿತ್ತಲಗೆ ಸತೀಶನ್ ಸಂಪುಟದಲ್ಲಿ ಗೃಹ ಖಾತೆ.<p>ಸತತ ಸೋಲುಗಳ ಸುಳಿಯಲ್ಲಿ ಸಿಲುಕಿರುವ ಪಂಜಾಬ್ ಕಿಂಗ್ಸ್ ತಂಡದ ಗಾಯದ ಮೇಲೆ ಬರೆ ಎಳೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿದ್ಧವಾಗಿದೆ.</p><p>ಭಾನುವಾರ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯ ಲಿರುವ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗ ಲಿವೆ. ರಾಯಪುರದಲ್ಲಿ ನಡೆದಿದ್ದ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ದೌಲ್ಧಾರಾ ವಲಯದ ಪರ್ವತಶ್ರೇಣಿಗಳ ಮಧ್ಯೆ ಇರುವ ಈ ಕ್ರೀಡಾಂಗಣದಲ್ಲಿ ಕೊಹ್ಲಿ ಬ್ಯಾಟಿಂಗ್ ರಂಗೇರುವ ನಿರೀಕ್ಷೆ ಇದೆ.</p>.IPL 2026: ಆರ್ಸಿಬಿಗೆ ಅಗ್ರಸ್ಥಾನ ಉಳಿಸಿಕೊಳ್ಳುವ ಛಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>