<p><strong>ತಿರುವನಂತಪುರಂ</strong>: ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಇದುವರೆಗೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಹಾಗೂ ಸಿಪಿಎಂ ನೇತೃತ್ವದ (ಎಲ್ಡಿಎಫ್) ಮೈತ್ರಿಕೂಟದ ಹಣಾಹಣಿಗೆ ರಾಜ್ಯ ಸಾಕ್ಷಿಯಾಗಿತ್ತು. ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.</p> <p>ಎಲ್ಡಿಎಫ್ ಹಾಗೂ ಯುಡಿಎಫ್ ನಡುವೆ ತುರುಸಿನ ಸ್ಪರ್ಧೆಯಿದೆ. ಹಿಂದಿನ ಫಲಿತಾಂಶಕ್ಕೆ ಹೋಲಿಸಿದರೆ, ಕೇಸರಿ ಪಕ್ಷವು ತನ್ನ ಪ್ರದರ್ಶನವನ್ನು ಸುಧಾರಿಸಿಕೊಳ್ಳುವ ಉಮೇದಿನಲ್ಲಿದೆ.</p> <p>10 ವರ್ಷಗಳ ಬಳಿಕ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಯುಡಿಎಫ್ ಎಲ್ಲ ಪ್ರಯತ್ನಗಳನ್ನು ನಡೆಸಿದ್ದು, ಎಲ್ಡಿಎಫ್ ಸರ್ಕಾರವು ಆಡಳಿತ ಅವಧಿಯಲ್ಲಿ ನಡೆಸಿದ ಜನಪರ ಕೆಲಸಗಳ ಮೂಲಕ ಸತತ ಮೂರನೇ ಬಾರಿ ಅಧಿಕಾರಕ್ಕೇರುವ ತವಕದಲ್ಲಿದೆ. ಇಡೀ ದೇಶದಲ್ಲಿ ಕೇರಳದಲ್ಲಿ ಮಾತ್ರ ಎಡಪಕ್ಷವು ಅಧಿಕಾರದಲ್ಲಿದ್ದು, ಇಲ್ಲಿ ಚುನಾವಣೆ ಗೆಲ್ಲುವುದು ಪಕ್ಷದ ಪಾಲಿಗೂ ಅನಿವಾರ್ಯವಾಗಿದೆ.</p> <p>ಕೇರಳದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಯುಡಿಎಫ್ ಅಥವಾ ಎಲ್ಡಿಎಫ್ಗೆ ಜನರು ಮಣೆಹಾಕುತ್ತಿದ್ದರು. 2021ರಲ್ಲಿ ಎಲ್ಡಿಎಫ್ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದಿತ್ತು. ಕಳೆದ 10 ವರ್ಷದಿಂದ ಪ್ರಶ್ನಾತೀತ ನಾಯಕರಾಗಿದ್ದ ವಿಜಯನ್ ನೇತೃತ್ವದಲ್ಲಿ ಪಕ್ಷವು ಚುನಾವಣೆ ಎದುರಿಸಲಿದೆ. ಯುಡಿಎಫ್ನಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ರಮೇಶ್ ಚೆನ್ನಿತ್ತಲ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಪಕ್ಷಕ್ಕೂ ಸವಾಲೆನಿಸಿದೆ. </p> <p>ವರ್ಷದ ಹಿಂದೆ ಕೇರಳ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಬಲ ಹೆಚ್ಚಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿಟ್ಟುಕೊಂಡು, ವಿಕಸಿತ ಭಾರತ ಅಭಿಯಾನದ ಮೂಲಕ ಜನರನ್ನು ಸೆಳೆಯುವ ಯತ್ನಕ್ಕೆ ಕೈ ಹಾಕಿದ್ದಾರೆ. </p><p>ತಿರುವನಂತರಪುರದ ನೆಮೊಮ್ನಿಂದ ಕಣಕ್ಕಿಳಿಯಲು ಅವರು ನಿರ್ಧರಿಸಿದ್ದು, ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವ ತವಕದಲ್ಲಿದ್ದಾರೆ. 2016ರಲ್ಲಿ ಬಿಜೆಪಿಯಿಂದ ಒ.ರಾಜಗೋಪಾಲ್ ಗೆದ್ದಿದ್ದರು, 2021ರಲ್ಲಿ ಸಿಪಿಎಂನ ವಿ.ಶಿವನ್ಕುಟ್ಟಿ ಗೆಲುವು ಪಡೆದಿದ್ದಾರೆ.</p>.<h2>ವ್ಯಾಪಕ ಪ್ರಚಾರ– ಮುನ್ನೆಲೆಗೆ ಶಬರಿಮಲೆ</h2><p>ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಕಲ್ಯಾಣ ಯೋಜನೆಗಳ ಕುರಿತು ವ್ಯಾಪಕ ಪ್ರಚಾರ ನಡೆಸಿರುವ ಎಲ್ಡಿಎಫ್ ಸರ್ಕಾರ ನಟ ಮೋಹನ್ಲಾಲ್ ಅವರನ್ನು ಸರ್ಕಾರಿ ಯೋಜನೆಗಳ ಪ್ರಚಾರಕ್ಕೆ ಬಳಸಿಕೊಂಡಿತ್ತು. ಆ ಮೂಲಕ ಕೆಲ ತಿಂಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉಂಟಾದ ಹಿನ್ನಡೆಯನ್ನು ತುಂಬಿಕೊಳ್ಳುವ ಪ್ರಯತ್ನದಲ್ಲಿದೆ. ಶಬರಿಮಲೆ ದೇವಾಲಯದಲ್ಲಿ ನಡೆದ ಚಿನ್ನ ಕಳ್ಳತನ ಹಾಗೂ ಮಹಿಳೆಯರ ಪ್ರವೇಶಾತಿ ವಿಚಾರವನ್ನು ಮುಂದಿಟ್ಟುಕೊಂಡು ಯುಡಿಎಫ್ ಹಾಗೂ ಎನ್ಡಿಎ ಒಕ್ಕೂಟ ಜನರನ್ನು ಸೆಳೆಯುವ ಪ್ರಯತ್ನ ನಡೆಸಿದೆ. ಯು–ಟರ್ನ್: ಶಬರಿಮಲೆ ದೇವಾಲಯಕ್ಕೆ 10ರಿಂದ 50 ವರ್ಷದ ಮಹಿಳೆಯರಿಗೆ ಪ್ರವೇಶಾತಿ ಕಲ್ಪಿಸುವ ಬೇಡಿಕೆಗೆ ಸಿಪಿಎಂ ಆರಂಭದಲ್ಲಿ ಬೆಂಬಲ ವ್ಯಕ್ತಪಡಿಸಿತ್ತು. ಈಗ ಯೂ–ಟರ್ನ್ ಹೊಡೆದಿದ್ದು ಜನರ ನಂಬಿಕೆ ಹಾಗೂ ಸಂಪ್ರದಾಯಗಳನ್ನು ರಕ್ಷಿಸಬೇಕು ಎಂದು ತನ್ನ ನಿಲುವು ಬದಲಾಯಿಸಿದೆ. ದೇವಾಲಯದ ಚಿನ್ನ ಕಳವು ಪ್ರಕರಣದಲ್ಲಿ ಸಿಪಿಎಂನ ಕೆಲವು ನಾಯಕರು ಬಂಧನಕ್ಕೆ ಒಳಗಾಗಿರುವುದು ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ. </p>.<p> <strong>ಸಿಪಿಎಂ ಪಟ್ಟಿ ಪ್ರಕಟ: ಎಲ್ಲ ಸಚಿವರಿಗೂ ಮಣೆ </strong></p><p><strong>ತಿರುವನಂತಪುರಂ</strong>: ವಿಧಾನಸಭೆಗೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆಯೇ ಆಡಳಿತಾರೂಢ ಸಿಪಿಎಂ ಪಕ್ಷವು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 80 ವರ್ಷದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಧರ್ಮಡಂ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದ್ದು ಫುಟ್ಬಾಲ್ ಮಾಜಿ ಆಟಗಾರ ಯು.ಶರಫ್ಅಲಿ ಅವರಿಗೆ ಮಲಪ್ಪುರಂ ನಿಲಂಬೂರು ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. </p><p>ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚಿನ ಅವಧಿ ಹಾಗೂ ವಯಸ್ಸಿನ ವಯೋಮಿತಿ ವಿಚಾರದಲ್ಲಿ ಪಿಣರಾಯಿಗೆ ಸಡಿಲಿಕೆ ನೀಡಲಾಗಿದೆ. ಗರಿಷ್ಠ ಸೀಟುಗಳನ್ನು ಗೆಲ್ಲಬೇಕೆಂಬ ಕಾರಣದಿಂದ ಉಳಿದವರಿಗೆ ಇದೇ ರೀತಿ ರಿಯಾಯಿತಿ ನೀಡಿದೆ. 86 ಕ್ಷೇತ್ರಗಳಲ್ಲಿ ಸಿಪಿಎಂ ಕಣಕ್ಕಿಳಿಯಲಿದ್ದು 56 ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗಿದೆ ಎಂದು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಎಂ.ಗೋವಿಂದನ್ ತಿಳಿಸಿದ್ದಾರೆ. </p><p>ಮೈತ್ರಿಪಕ್ಷದ ಎರಡನೇ ಅತೀ ದೊಡ್ಡ ಪಕ್ಷವಾಗಿರುವ ಸಿಪಿಐ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು ನಾಲ್ವರು ಸಚಿವರು ಕೂಡ ಮತ್ತೆ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದೆ. ಕಳೆದ ಬಾರಿ ಮಟ್ಟನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವೆ ಕೆ.ಕೆ. ಶೈಲಜಾ ಅವರನ್ನು ಪೆರವೂರು ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರಂ</strong>: ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಇದುವರೆಗೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಹಾಗೂ ಸಿಪಿಎಂ ನೇತೃತ್ವದ (ಎಲ್ಡಿಎಫ್) ಮೈತ್ರಿಕೂಟದ ಹಣಾಹಣಿಗೆ ರಾಜ್ಯ ಸಾಕ್ಷಿಯಾಗಿತ್ತು. ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.</p> <p>ಎಲ್ಡಿಎಫ್ ಹಾಗೂ ಯುಡಿಎಫ್ ನಡುವೆ ತುರುಸಿನ ಸ್ಪರ್ಧೆಯಿದೆ. ಹಿಂದಿನ ಫಲಿತಾಂಶಕ್ಕೆ ಹೋಲಿಸಿದರೆ, ಕೇಸರಿ ಪಕ್ಷವು ತನ್ನ ಪ್ರದರ್ಶನವನ್ನು ಸುಧಾರಿಸಿಕೊಳ್ಳುವ ಉಮೇದಿನಲ್ಲಿದೆ.</p> <p>10 ವರ್ಷಗಳ ಬಳಿಕ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಯುಡಿಎಫ್ ಎಲ್ಲ ಪ್ರಯತ್ನಗಳನ್ನು ನಡೆಸಿದ್ದು, ಎಲ್ಡಿಎಫ್ ಸರ್ಕಾರವು ಆಡಳಿತ ಅವಧಿಯಲ್ಲಿ ನಡೆಸಿದ ಜನಪರ ಕೆಲಸಗಳ ಮೂಲಕ ಸತತ ಮೂರನೇ ಬಾರಿ ಅಧಿಕಾರಕ್ಕೇರುವ ತವಕದಲ್ಲಿದೆ. ಇಡೀ ದೇಶದಲ್ಲಿ ಕೇರಳದಲ್ಲಿ ಮಾತ್ರ ಎಡಪಕ್ಷವು ಅಧಿಕಾರದಲ್ಲಿದ್ದು, ಇಲ್ಲಿ ಚುನಾವಣೆ ಗೆಲ್ಲುವುದು ಪಕ್ಷದ ಪಾಲಿಗೂ ಅನಿವಾರ್ಯವಾಗಿದೆ.</p> <p>ಕೇರಳದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಯುಡಿಎಫ್ ಅಥವಾ ಎಲ್ಡಿಎಫ್ಗೆ ಜನರು ಮಣೆಹಾಕುತ್ತಿದ್ದರು. 2021ರಲ್ಲಿ ಎಲ್ಡಿಎಫ್ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದಿತ್ತು. ಕಳೆದ 10 ವರ್ಷದಿಂದ ಪ್ರಶ್ನಾತೀತ ನಾಯಕರಾಗಿದ್ದ ವಿಜಯನ್ ನೇತೃತ್ವದಲ್ಲಿ ಪಕ್ಷವು ಚುನಾವಣೆ ಎದುರಿಸಲಿದೆ. ಯುಡಿಎಫ್ನಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ರಮೇಶ್ ಚೆನ್ನಿತ್ತಲ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಪಕ್ಷಕ್ಕೂ ಸವಾಲೆನಿಸಿದೆ. </p> <p>ವರ್ಷದ ಹಿಂದೆ ಕೇರಳ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಬಲ ಹೆಚ್ಚಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿಟ್ಟುಕೊಂಡು, ವಿಕಸಿತ ಭಾರತ ಅಭಿಯಾನದ ಮೂಲಕ ಜನರನ್ನು ಸೆಳೆಯುವ ಯತ್ನಕ್ಕೆ ಕೈ ಹಾಕಿದ್ದಾರೆ. </p><p>ತಿರುವನಂತರಪುರದ ನೆಮೊಮ್ನಿಂದ ಕಣಕ್ಕಿಳಿಯಲು ಅವರು ನಿರ್ಧರಿಸಿದ್ದು, ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವ ತವಕದಲ್ಲಿದ್ದಾರೆ. 2016ರಲ್ಲಿ ಬಿಜೆಪಿಯಿಂದ ಒ.ರಾಜಗೋಪಾಲ್ ಗೆದ್ದಿದ್ದರು, 2021ರಲ್ಲಿ ಸಿಪಿಎಂನ ವಿ.ಶಿವನ್ಕುಟ್ಟಿ ಗೆಲುವು ಪಡೆದಿದ್ದಾರೆ.</p>.<h2>ವ್ಯಾಪಕ ಪ್ರಚಾರ– ಮುನ್ನೆಲೆಗೆ ಶಬರಿಮಲೆ</h2><p>ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಕಲ್ಯಾಣ ಯೋಜನೆಗಳ ಕುರಿತು ವ್ಯಾಪಕ ಪ್ರಚಾರ ನಡೆಸಿರುವ ಎಲ್ಡಿಎಫ್ ಸರ್ಕಾರ ನಟ ಮೋಹನ್ಲಾಲ್ ಅವರನ್ನು ಸರ್ಕಾರಿ ಯೋಜನೆಗಳ ಪ್ರಚಾರಕ್ಕೆ ಬಳಸಿಕೊಂಡಿತ್ತು. ಆ ಮೂಲಕ ಕೆಲ ತಿಂಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉಂಟಾದ ಹಿನ್ನಡೆಯನ್ನು ತುಂಬಿಕೊಳ್ಳುವ ಪ್ರಯತ್ನದಲ್ಲಿದೆ. ಶಬರಿಮಲೆ ದೇವಾಲಯದಲ್ಲಿ ನಡೆದ ಚಿನ್ನ ಕಳ್ಳತನ ಹಾಗೂ ಮಹಿಳೆಯರ ಪ್ರವೇಶಾತಿ ವಿಚಾರವನ್ನು ಮುಂದಿಟ್ಟುಕೊಂಡು ಯುಡಿಎಫ್ ಹಾಗೂ ಎನ್ಡಿಎ ಒಕ್ಕೂಟ ಜನರನ್ನು ಸೆಳೆಯುವ ಪ್ರಯತ್ನ ನಡೆಸಿದೆ. ಯು–ಟರ್ನ್: ಶಬರಿಮಲೆ ದೇವಾಲಯಕ್ಕೆ 10ರಿಂದ 50 ವರ್ಷದ ಮಹಿಳೆಯರಿಗೆ ಪ್ರವೇಶಾತಿ ಕಲ್ಪಿಸುವ ಬೇಡಿಕೆಗೆ ಸಿಪಿಎಂ ಆರಂಭದಲ್ಲಿ ಬೆಂಬಲ ವ್ಯಕ್ತಪಡಿಸಿತ್ತು. ಈಗ ಯೂ–ಟರ್ನ್ ಹೊಡೆದಿದ್ದು ಜನರ ನಂಬಿಕೆ ಹಾಗೂ ಸಂಪ್ರದಾಯಗಳನ್ನು ರಕ್ಷಿಸಬೇಕು ಎಂದು ತನ್ನ ನಿಲುವು ಬದಲಾಯಿಸಿದೆ. ದೇವಾಲಯದ ಚಿನ್ನ ಕಳವು ಪ್ರಕರಣದಲ್ಲಿ ಸಿಪಿಎಂನ ಕೆಲವು ನಾಯಕರು ಬಂಧನಕ್ಕೆ ಒಳಗಾಗಿರುವುದು ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ. </p>.<p> <strong>ಸಿಪಿಎಂ ಪಟ್ಟಿ ಪ್ರಕಟ: ಎಲ್ಲ ಸಚಿವರಿಗೂ ಮಣೆ </strong></p><p><strong>ತಿರುವನಂತಪುರಂ</strong>: ವಿಧಾನಸಭೆಗೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆಯೇ ಆಡಳಿತಾರೂಢ ಸಿಪಿಎಂ ಪಕ್ಷವು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 80 ವರ್ಷದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಧರ್ಮಡಂ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದ್ದು ಫುಟ್ಬಾಲ್ ಮಾಜಿ ಆಟಗಾರ ಯು.ಶರಫ್ಅಲಿ ಅವರಿಗೆ ಮಲಪ್ಪುರಂ ನಿಲಂಬೂರು ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. </p><p>ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚಿನ ಅವಧಿ ಹಾಗೂ ವಯಸ್ಸಿನ ವಯೋಮಿತಿ ವಿಚಾರದಲ್ಲಿ ಪಿಣರಾಯಿಗೆ ಸಡಿಲಿಕೆ ನೀಡಲಾಗಿದೆ. ಗರಿಷ್ಠ ಸೀಟುಗಳನ್ನು ಗೆಲ್ಲಬೇಕೆಂಬ ಕಾರಣದಿಂದ ಉಳಿದವರಿಗೆ ಇದೇ ರೀತಿ ರಿಯಾಯಿತಿ ನೀಡಿದೆ. 86 ಕ್ಷೇತ್ರಗಳಲ್ಲಿ ಸಿಪಿಎಂ ಕಣಕ್ಕಿಳಿಯಲಿದ್ದು 56 ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗಿದೆ ಎಂದು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಎಂ.ಗೋವಿಂದನ್ ತಿಳಿಸಿದ್ದಾರೆ. </p><p>ಮೈತ್ರಿಪಕ್ಷದ ಎರಡನೇ ಅತೀ ದೊಡ್ಡ ಪಕ್ಷವಾಗಿರುವ ಸಿಪಿಐ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು ನಾಲ್ವರು ಸಚಿವರು ಕೂಡ ಮತ್ತೆ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದೆ. ಕಳೆದ ಬಾರಿ ಮಟ್ಟನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವೆ ಕೆ.ಕೆ. ಶೈಲಜಾ ಅವರನ್ನು ಪೆರವೂರು ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>