<p><strong>ನವದೆಹಲಿ</strong>: ತಮಿಳುನಾಡಿನಲ್ಲಿ ಮಿತ್ರಪಕ್ಷ ಡಿಎಂಕೆಗೆ ತಡವಿಲ್ಲದೇ ಕೈಕೊಟ್ಟ ಕಾಂಗ್ರೆಸ್, ನಟ ವಿಜಯ್ ನೇತೃತ್ವದ ಟಿವಿಕೆಯನ್ನು ಬೆಂಬಲಿಸಿ ಸರ್ಕಾರ ರಚನೆಯಲ್ಲಿ ನೆರವಾಯಿತು. ಆದರೆ, ಸ್ಪಷ್ಟ ಬಹುಮತ ಹೊಂದಿರುವ ಕೇರಳದಲ್ಲಿ ಮಾತ್ರ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದೆ.</p>.<p>ಆಕಾಂಕ್ಷಿಗಳ ಪೈಕಿ ಯಾರಿಗೆ ಪಕ್ಷದ ಕಾರ್ಯಕರ್ತರ ಬೆಂಬಲ ಅಧಿಕವಿದೆಯೊ ಅವರನ್ನೇ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಲು ಕಾಂಗ್ರೆಸ್ ನಾಯಕತ್ವ ಮುಂದಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಒಡಕು ಮೂಡಿಸಿದೆ. ಇದು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಳಂಬವಾಗುವುದಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.</p>.<p>ಕೆ.ಸಿ.ವೇಣುಗೋಪಾಲ್, ವಿ.ಡಿ.ಸತೀಶನ್ ಹಾಗೂ ರಮೇಶ ಚೆನ್ನಿತ್ತಲ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಮೂವರೊಂದಿಗೆ ಪ್ರತ್ಯೇಕವಾಗಿ ಹಾಗೂ ಒಟ್ಟಾಗಿ ಮಾತುಕತೆಯನ್ನೂ ನಡೆಸಿದ್ದಾರೆ. ಪಕ್ಷದ ಕೇರಳ ಘಟಕದ ಮುಖ್ಯಸ್ಥ ಸಣ್ಣಿ ಜೋಸೆಫ್, ಎಐಸಿಸಿಯ ರಾಜ್ಯ ಉಸ್ತುವಾರಿ ದೀಪಾ ದಾಸ್ಮುನ್ಷಿ, ವೀಕ್ಷಕರಾದ ಅಜಯ್ ಮಾಕೆನ್ ಹಾಗೂ ಮುಕುಲ್ ವಾಸ್ನಿಕ್ ಅವರೊಂದಿಗೆ ಶನಿವಾರ ಮೂರು ಗಂಟೆಯಷ್ಟು ಚರ್ಚೆಯನ್ನೂ ನಡೆಸಿದ್ದಾರೆ. ಇಷ್ಟಾದರೂ ಯಾವುದೇ ನಿರ್ಧಾರಕ್ಕೆ ಬರಲು ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದು ಇವೇ ಮೂಲಗಳು ಹೇಳಿವೆ.</p>.<p>ಶಾಸಕಾಂಗ ಪಕ್ಷದ ಬೆಂಬಲ ವೇಣುಗೋಪಾಲ್ ಅವರಿಗಿದ್ದರೆ, ಪಕ್ಷದ ಕಾರ್ಯಕರ್ತರು ಹಾಗೂ ಮಿತ್ರ ಪಕ್ಷಗಳು ಸತೀಶನ್ ಪರ ಒಲವು ಹೊಂದಿದ್ದಾರೆ. ಇನ್ನು, ಚೆನ್ನಿತ್ತಲ ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಈ ಹಿಂದೆ ಪಕ್ಷ ಮತ್ತು ಸರ್ಕಾರದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ತಮ್ಮ ರಾಜಕೀಯ ಅನುಭವವನ್ನೇ ದಾಳವಾಗಿಸಿಕೊಂಡು, ಮುಖ್ಯಮಂತ್ರಿ ಹುದ್ದೆಗೇರಲು ಚೆನ್ನಿತ್ತಲ ಮುಂದಾಗಿದ್ದಾರೆ ಎನ್ನಲಾಗಿದೆ.</p>.<p><strong>ವ್ಯಾಪಕ ಸಮಾಲೋಚನೆಗೆ ಒತ್ತು</strong></p><p>ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲಿ ಅವಸರವಾಗಿ ನಿರ್ಧಾರ ಕೈಗೊಳ್ಳುವುದಕ್ಕೂ ಖರ್ಗೆ ಮತ್ತು ರಾಹುಲ್ ಅವರು ಸಿದ್ಧರಿಲ್ಲ. ನಾಯಕರಾದ ಸೋನಿಯಾ ಗಾಂಧಿ ಹಾಗೂ ಎ.ಕೆ.ಆ್ಯಂಟನಿ ಅವರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಸತೀಶನ್ ಅವರೇ ಮುಖ್ಯಮಂತ್ರಿಯಾಗಬೇಕು ಎಂಬುದಕ್ಕೆ ಜನರಿಂದ ಭಾರಿ ಬೆಂಬಲ ಇದೆ ಎಂಬ ಗ್ರಹಿಕೆ ಪಕ್ಷದಲ್ಲಿ ಮನೆಮಾಡಿದೆ. ಈ ಕಾರಣಕ್ಕೆ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಲು ಖರ್ಗೆ ಹಾಗೂ ರಾಹುಲ್ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ‘ಜನರ ಭಾವನೆ’ ಹೆಸರಿನಲ್ಲಿ ಇಲ್ಲವೇ ಮುಸ್ಲಿಂ ಲೀಗ್ನಂತಹ ಮಿತ್ರ ಪಕ್ಷದ ಒತ್ತಡಕ್ಕೆ ಪಕ್ಷದ ನಾಯಕತ್ವ ಮಣಿದಿದೆ ಎಂಬ ಸಂದೇಶ ರವಾನೆಯಾಗಬಾರದು ಎಂಬ ಎಚ್ಚರಿಕೆ ಕೂಡ ಇಂತಹ ನಿರ್ಧಾರದ ಹಿಂದಿದೆ ಎಂದು ಮೂಲಗಳು ಹೇಳಿವೆ.</p>.<p><strong>ಪಕ್ಷದ ವಿದ್ಯಮಾನಗಳಿಂದ ಅಸಮಾಧಾನ</strong></p><p>ಕೇರಳದಲ್ಲಿನ ಇತ್ತೀಚಿನ ಪಕ್ಷದ ವಿದ್ಯಮಾನಗಳಿಂದ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಸತೀಶನ್ ಪರ ಬೆಂಬಲಿಗರಿಂದ ನಡೆದ ಪ್ರದರ್ಶನ ಎಲ್ಲ ಮೂವರು ಆಕಾಂಕ್ಷಿಗಳ ಪರ ರಾಜ್ಯದಾದ್ಯಂತ ಬ್ಯಾನರ್ಗಳ ಅಳವಡಿಕೆ ಈ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಇಂತಹ ಬಣಗಳ ಜಗಳಕ್ಕೆ ಕಡಿವಾಣ ಹಾಕುವುದು ಹಾಗೂ ಮೂವರು ನಾಯಕರಿಂದ ಜಂಟಿ ಹೇಳಿಕೆ ಹೊರಬೀಳುವಂತೆ ಮಾಡುವುದು ಪಕ್ಷದ ನಾಯಕತ್ವದ ಮೊದಲ ಕಾರ್ಯವಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಈ ಮೂವರು ನಾಯಕರ ಬೆಂಬಲಿಗರಿಂದ ಪ್ರದರ್ಶನಗಳು ನಡೆಯುತ್ತಿರುವ ವೇಳೆ ಮುಖ್ಯಮಂತ್ರಿ ಆಗುವವರ ಕುರಿತು ಮಾಡುವ ಘೋಷಣೆಯು ಪಕ್ಷವನ್ನು ಇಬ್ಭಾಗ ಮಾಡಬಹುದು ಎಂಬ ಆತಂಕ ಕೂಡ ಕಾಂಗ್ರೆಸ್ ವರಿಷ್ಠರನ್ನು ಕಾಡುತ್ತಿದೆ. ಒಂದೊಮ್ಮೆ ಈ ರೀತಿ ಘೋಷಣೆ ಮಾಡಿದಲ್ಲಿ ಅದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಭ್ರಮವನ್ನೇ ಮಸುಕು ಮಾಡಬಹುದು. ಭರ್ಜರಿ ಜಯ ಗಳಿಸಿರುವ ಮೈತ್ರಿಕೂಟದ ನೂತನ ಸರ್ಕಾರವು ಅಹಿತಕರ ಆರಂಭ ಮಾಡುವುದು ಕೂಡ ವರಿಷ್ಠರಿಗೆ ಇಷ್ಟ ಇಲ್ಲ ಎಂದು ಇವೇ ಮೂಲಗಳು ಹೇಳುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ತಮಿಳುನಾಡಿನಲ್ಲಿ ಮಿತ್ರಪಕ್ಷ ಡಿಎಂಕೆಗೆ ತಡವಿಲ್ಲದೇ ಕೈಕೊಟ್ಟ ಕಾಂಗ್ರೆಸ್, ನಟ ವಿಜಯ್ ನೇತೃತ್ವದ ಟಿವಿಕೆಯನ್ನು ಬೆಂಬಲಿಸಿ ಸರ್ಕಾರ ರಚನೆಯಲ್ಲಿ ನೆರವಾಯಿತು. ಆದರೆ, ಸ್ಪಷ್ಟ ಬಹುಮತ ಹೊಂದಿರುವ ಕೇರಳದಲ್ಲಿ ಮಾತ್ರ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದೆ.</p>.<p>ಆಕಾಂಕ್ಷಿಗಳ ಪೈಕಿ ಯಾರಿಗೆ ಪಕ್ಷದ ಕಾರ್ಯಕರ್ತರ ಬೆಂಬಲ ಅಧಿಕವಿದೆಯೊ ಅವರನ್ನೇ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಲು ಕಾಂಗ್ರೆಸ್ ನಾಯಕತ್ವ ಮುಂದಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಒಡಕು ಮೂಡಿಸಿದೆ. ಇದು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಳಂಬವಾಗುವುದಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.</p>.<p>ಕೆ.ಸಿ.ವೇಣುಗೋಪಾಲ್, ವಿ.ಡಿ.ಸತೀಶನ್ ಹಾಗೂ ರಮೇಶ ಚೆನ್ನಿತ್ತಲ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಮೂವರೊಂದಿಗೆ ಪ್ರತ್ಯೇಕವಾಗಿ ಹಾಗೂ ಒಟ್ಟಾಗಿ ಮಾತುಕತೆಯನ್ನೂ ನಡೆಸಿದ್ದಾರೆ. ಪಕ್ಷದ ಕೇರಳ ಘಟಕದ ಮುಖ್ಯಸ್ಥ ಸಣ್ಣಿ ಜೋಸೆಫ್, ಎಐಸಿಸಿಯ ರಾಜ್ಯ ಉಸ್ತುವಾರಿ ದೀಪಾ ದಾಸ್ಮುನ್ಷಿ, ವೀಕ್ಷಕರಾದ ಅಜಯ್ ಮಾಕೆನ್ ಹಾಗೂ ಮುಕುಲ್ ವಾಸ್ನಿಕ್ ಅವರೊಂದಿಗೆ ಶನಿವಾರ ಮೂರು ಗಂಟೆಯಷ್ಟು ಚರ್ಚೆಯನ್ನೂ ನಡೆಸಿದ್ದಾರೆ. ಇಷ್ಟಾದರೂ ಯಾವುದೇ ನಿರ್ಧಾರಕ್ಕೆ ಬರಲು ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದು ಇವೇ ಮೂಲಗಳು ಹೇಳಿವೆ.</p>.<p>ಶಾಸಕಾಂಗ ಪಕ್ಷದ ಬೆಂಬಲ ವೇಣುಗೋಪಾಲ್ ಅವರಿಗಿದ್ದರೆ, ಪಕ್ಷದ ಕಾರ್ಯಕರ್ತರು ಹಾಗೂ ಮಿತ್ರ ಪಕ್ಷಗಳು ಸತೀಶನ್ ಪರ ಒಲವು ಹೊಂದಿದ್ದಾರೆ. ಇನ್ನು, ಚೆನ್ನಿತ್ತಲ ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಈ ಹಿಂದೆ ಪಕ್ಷ ಮತ್ತು ಸರ್ಕಾರದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ತಮ್ಮ ರಾಜಕೀಯ ಅನುಭವವನ್ನೇ ದಾಳವಾಗಿಸಿಕೊಂಡು, ಮುಖ್ಯಮಂತ್ರಿ ಹುದ್ದೆಗೇರಲು ಚೆನ್ನಿತ್ತಲ ಮುಂದಾಗಿದ್ದಾರೆ ಎನ್ನಲಾಗಿದೆ.</p>.<p><strong>ವ್ಯಾಪಕ ಸಮಾಲೋಚನೆಗೆ ಒತ್ತು</strong></p><p>ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲಿ ಅವಸರವಾಗಿ ನಿರ್ಧಾರ ಕೈಗೊಳ್ಳುವುದಕ್ಕೂ ಖರ್ಗೆ ಮತ್ತು ರಾಹುಲ್ ಅವರು ಸಿದ್ಧರಿಲ್ಲ. ನಾಯಕರಾದ ಸೋನಿಯಾ ಗಾಂಧಿ ಹಾಗೂ ಎ.ಕೆ.ಆ್ಯಂಟನಿ ಅವರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಸತೀಶನ್ ಅವರೇ ಮುಖ್ಯಮಂತ್ರಿಯಾಗಬೇಕು ಎಂಬುದಕ್ಕೆ ಜನರಿಂದ ಭಾರಿ ಬೆಂಬಲ ಇದೆ ಎಂಬ ಗ್ರಹಿಕೆ ಪಕ್ಷದಲ್ಲಿ ಮನೆಮಾಡಿದೆ. ಈ ಕಾರಣಕ್ಕೆ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಲು ಖರ್ಗೆ ಹಾಗೂ ರಾಹುಲ್ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ‘ಜನರ ಭಾವನೆ’ ಹೆಸರಿನಲ್ಲಿ ಇಲ್ಲವೇ ಮುಸ್ಲಿಂ ಲೀಗ್ನಂತಹ ಮಿತ್ರ ಪಕ್ಷದ ಒತ್ತಡಕ್ಕೆ ಪಕ್ಷದ ನಾಯಕತ್ವ ಮಣಿದಿದೆ ಎಂಬ ಸಂದೇಶ ರವಾನೆಯಾಗಬಾರದು ಎಂಬ ಎಚ್ಚರಿಕೆ ಕೂಡ ಇಂತಹ ನಿರ್ಧಾರದ ಹಿಂದಿದೆ ಎಂದು ಮೂಲಗಳು ಹೇಳಿವೆ.</p>.<p><strong>ಪಕ್ಷದ ವಿದ್ಯಮಾನಗಳಿಂದ ಅಸಮಾಧಾನ</strong></p><p>ಕೇರಳದಲ್ಲಿನ ಇತ್ತೀಚಿನ ಪಕ್ಷದ ವಿದ್ಯಮಾನಗಳಿಂದ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಸತೀಶನ್ ಪರ ಬೆಂಬಲಿಗರಿಂದ ನಡೆದ ಪ್ರದರ್ಶನ ಎಲ್ಲ ಮೂವರು ಆಕಾಂಕ್ಷಿಗಳ ಪರ ರಾಜ್ಯದಾದ್ಯಂತ ಬ್ಯಾನರ್ಗಳ ಅಳವಡಿಕೆ ಈ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಇಂತಹ ಬಣಗಳ ಜಗಳಕ್ಕೆ ಕಡಿವಾಣ ಹಾಕುವುದು ಹಾಗೂ ಮೂವರು ನಾಯಕರಿಂದ ಜಂಟಿ ಹೇಳಿಕೆ ಹೊರಬೀಳುವಂತೆ ಮಾಡುವುದು ಪಕ್ಷದ ನಾಯಕತ್ವದ ಮೊದಲ ಕಾರ್ಯವಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಈ ಮೂವರು ನಾಯಕರ ಬೆಂಬಲಿಗರಿಂದ ಪ್ರದರ್ಶನಗಳು ನಡೆಯುತ್ತಿರುವ ವೇಳೆ ಮುಖ್ಯಮಂತ್ರಿ ಆಗುವವರ ಕುರಿತು ಮಾಡುವ ಘೋಷಣೆಯು ಪಕ್ಷವನ್ನು ಇಬ್ಭಾಗ ಮಾಡಬಹುದು ಎಂಬ ಆತಂಕ ಕೂಡ ಕಾಂಗ್ರೆಸ್ ವರಿಷ್ಠರನ್ನು ಕಾಡುತ್ತಿದೆ. ಒಂದೊಮ್ಮೆ ಈ ರೀತಿ ಘೋಷಣೆ ಮಾಡಿದಲ್ಲಿ ಅದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಭ್ರಮವನ್ನೇ ಮಸುಕು ಮಾಡಬಹುದು. ಭರ್ಜರಿ ಜಯ ಗಳಿಸಿರುವ ಮೈತ್ರಿಕೂಟದ ನೂತನ ಸರ್ಕಾರವು ಅಹಿತಕರ ಆರಂಭ ಮಾಡುವುದು ಕೂಡ ವರಿಷ್ಠರಿಗೆ ಇಷ್ಟ ಇಲ್ಲ ಎಂದು ಇವೇ ಮೂಲಗಳು ಹೇಳುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>