<p><strong>ಕೊಚ್ಚಿ:</strong> ಕೇರಳದ ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ಡಿಪಿ ಯೋಗಂ)ನ ಪಧಾನ ಕಾರ್ಯದರ್ಶಿ ವೆಳ್ಳಾಪ್ಪಳ್ಳಿ ನಟೇಶನ್ ಮತ್ತು ಇತರ ನಿರ್ದೇಶಕರನ್ನು ಅನರ್ಹಗೊಳಿಸಿರುವ ಕೇರಳ ಹೈಕೋರ್ಟ್, ಯೋಗಂನ ಸಂಪೂರ್ಣ ನಿರ್ದೇಶಕ ಮಂಡಳಿಯನ್ನು ವಜಾಗೊಳಿಸಿ ಗುರುವಾರ ಆದೇಶ ಹೊರಡಿಸಿದೆ. </p>.<p>ಕಂಪನಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಸ್ಎನ್ಡಿಪಿ ಯೋಗಂ ಆಡಳಿತ ಮಂಡಳಿಯನ್ನು ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ಆರ್. ರವಿ ಆದೇಶದಲ್ಲಿ ತಿಳಿಸಿದ್ದಾರೆ.</p>.<p>ಕೇರಳದ ಪ್ರಭಾವಿ ಈಳವ ಸಮುದಾಯದ ಸಂಘಟನೆಯಾದ ಎಸ್ಎನ್ಡಿಪಿ ಯೋಗಂ ಅನ್ನು ವೆಳ್ಳಾಪ್ಪಳ್ಳಿ ನಟೇಶನ್ ಅವರು ಎರಡೂವರೆ ದಶಕಗಳಿಂದ ಮುನ್ನಡೆಸುತ್ತಿದ್ದರು. ಎಸ್ಎನ್ಡಿಪಿ ಯೋಗಂನ ಅಕ್ರಮಗಳ ಕುರಿತು ಪ್ರೊ. ದಿವಂಗತ ಎಂ.ಕೆ. ಸಾನು, ಎಸ್ಎನ್ಡಿಪಿ ಸಂರಕ್ಷಣಾ ಸಮಿತಿಯ ಚಂದ್ರಸೇನನ್ ಮತ್ತಿತರರು ಕೋರ್ಟ್ ಮೊರೆ ಹೋಗಿದ್ದರು. </p>.<p>ವೆಳ್ಳಾಪ್ಪಳ್ಳಿ ನಟೇಶನ್ ಅವರ ಪುತ್ರ ತುಷಾರ್ ವೆಳ್ಳಾಪ್ಪಳ್ಳಿ ಅವರನ್ನೂ ನಿರ್ದೇಶಕ ಮಂಡಳಿಯಿಂದ ಅನರ್ಹಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ:</strong> ಕೇರಳದ ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ಡಿಪಿ ಯೋಗಂ)ನ ಪಧಾನ ಕಾರ್ಯದರ್ಶಿ ವೆಳ್ಳಾಪ್ಪಳ್ಳಿ ನಟೇಶನ್ ಮತ್ತು ಇತರ ನಿರ್ದೇಶಕರನ್ನು ಅನರ್ಹಗೊಳಿಸಿರುವ ಕೇರಳ ಹೈಕೋರ್ಟ್, ಯೋಗಂನ ಸಂಪೂರ್ಣ ನಿರ್ದೇಶಕ ಮಂಡಳಿಯನ್ನು ವಜಾಗೊಳಿಸಿ ಗುರುವಾರ ಆದೇಶ ಹೊರಡಿಸಿದೆ. </p>.<p>ಕಂಪನಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಸ್ಎನ್ಡಿಪಿ ಯೋಗಂ ಆಡಳಿತ ಮಂಡಳಿಯನ್ನು ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಟಿ.ಆರ್. ರವಿ ಆದೇಶದಲ್ಲಿ ತಿಳಿಸಿದ್ದಾರೆ.</p>.<p>ಕೇರಳದ ಪ್ರಭಾವಿ ಈಳವ ಸಮುದಾಯದ ಸಂಘಟನೆಯಾದ ಎಸ್ಎನ್ಡಿಪಿ ಯೋಗಂ ಅನ್ನು ವೆಳ್ಳಾಪ್ಪಳ್ಳಿ ನಟೇಶನ್ ಅವರು ಎರಡೂವರೆ ದಶಕಗಳಿಂದ ಮುನ್ನಡೆಸುತ್ತಿದ್ದರು. ಎಸ್ಎನ್ಡಿಪಿ ಯೋಗಂನ ಅಕ್ರಮಗಳ ಕುರಿತು ಪ್ರೊ. ದಿವಂಗತ ಎಂ.ಕೆ. ಸಾನು, ಎಸ್ಎನ್ಡಿಪಿ ಸಂರಕ್ಷಣಾ ಸಮಿತಿಯ ಚಂದ್ರಸೇನನ್ ಮತ್ತಿತರರು ಕೋರ್ಟ್ ಮೊರೆ ಹೋಗಿದ್ದರು. </p>.<p>ವೆಳ್ಳಾಪ್ಪಳ್ಳಿ ನಟೇಶನ್ ಅವರ ಪುತ್ರ ತುಷಾರ್ ವೆಳ್ಳಾಪ್ಪಳ್ಳಿ ಅವರನ್ನೂ ನಿರ್ದೇಶಕ ಮಂಡಳಿಯಿಂದ ಅನರ್ಹಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>