<p><strong>ತಿರುವನಂತಪುರ:</strong> ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ಅವರೊಂದಿಗೆ ಇತರ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.</p><p>ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸತೀಶನ್ ಸೇರಿದಂತೆ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೊಧಿಸಿದ್ದಾರೆ.</p><p>20 ಸದಸ್ಯರ ಸಂಪುಟದಲ್ಲಿ, ಇಬ್ಬರು ಮಹಿಳೆಯರು, ಇಬ್ಬರು ಪರಿಶಿಷ್ಟ ಸಮುದಾಯದವರು ಸೇರಿದಂತೆ 14 ಶಾಸಕರು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.</p><p>ಕಾಂಗ್ರೆಸ್ನ ಹಿರಿಯ ಮುಖಂಡರಾದ ರಮೇಶ್ ಚೆನ್ನಿತ್ತಲ, ಕೆ.ಮುರಳೀಧರನ್, ಸಣ್ಣಿ ಜೋಸೆಫ್ ಸಹ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಆರ್ಎಸ್ಪಿ ಮುಖಂಡ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್ ಮುಖಂಡ ಮೋನ್ಸ್ ಜೋಸೆಫ್, ಅನೂಪ್ ಜೇಕಬ್ ಅವರಿಗೂ ಸಚಿವ ಸ್ಥಾನ ಲಭಿಸಿದೆ.</p><p>ಸತೀಶನ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಲ್ಲಿದೆ..</p><p><strong>* ರಮೇಶ್ ಚೆನ್ನಿತ್ತಲ </strong></p><p><strong>* ಕೆ. ಮುರಳೀಧರನ್</strong></p><p><strong>* ಎ.ಪಿ. ಅನಿಲ್ ಕುಮಾರ್</strong></p><p><strong>* ಸನ್ನಿ ಜೋಸೆಫ್</strong></p><p><strong>* ಹಿರಿಯ ಐಯುಎಂಎಲ್ ನಾಯಕ ಪಿ.ಕೆ. ಕುಂಞಾಲಿಕುಟ್ಟಿ</strong></p><p><strong>* ಎನ್. ಶಂಸುದ್ದೀನ್ </strong></p><p><strong>* ಆರ್ಎಸ್ಪಿ ನಾಯಕ ಶಿಬು ಬೇಬಿ ಜಾನ್</strong></p><p><strong>* ಕೇರಳ ಕಾಂಗ್ರೆಸ್ ನಾಯಕ ಮೊನ್ಸ್ ಜೋಸೆಫ್</strong></p><p><strong>* ಕೇರಳ ಕಾಂಗ್ರೆಸ್ (ಜಾಕೋಬ್) ನಾಯಕ ಅನೂಪ್ ಜಾಕೋಬ್</strong></p><p><strong>* ಸಿ.ಪಿ. ಜಾನ್</strong></p><p><strong>* ಐಯುಎಂಎಲ್ ನಾಯಕ ಎನ್. ಶಂಸುದ್ದೀನ್</strong></p><p><strong>* ಕೆ.ಎಂ. ಶಾಜಿ</strong></p><p><strong>* ಪಿ. ಕೆ. ಬಶೀರ್</strong></p><p><strong>* ವಿ.ಇ. ಅಬ್ದುಲ್ ಗಫೂರ್ </strong></p><p><strong>* ಪಿ.ಸಿ. ವಿಷ್ಣುನಾಥ್</strong></p><p><strong>* ರೋಜಿ ಎಂ. ಜಾನ್</strong></p><p><strong>* ಬಿಂದು ಕೃಷ್ಣ</strong></p><p><strong>* ಟಿ. ಸಿದ್ದಿಕ್</strong></p><p><strong>* ಕೆ.ಎ. ತುಳಸಿ</strong></p><p><strong>* ಒ.ಜೆ. ಜನೀಶ್</strong></p><p><strong>* ಅಪು ಜಾನ್ ಜೋಸೆಫ್</strong></p><p>ಹಿರಿಯ ಶಾಸಕ ತಿರುವಂಜೂರ್ ರಾಧಾಕೃಷ್ಣನ್ ಅವರನ್ನು ಸಭಾಪತಿ ಹಾಗೂ ಶಾನಿಮೋಳ್ ಉಸ್ಮಾನ್ ಅವರನ್ನು ಉಪ ಸಭಾಪತಿಯಾಗಿ ನೇಮಿಸಲು ಯುಡಿಎಫ್ ನಿರ್ಧರಿಸಿದೆ. </p><p>‘ರಾಜ್ಯದಲ್ಲಿ ಕಾಂಗ್ರೆಸ್ 63 ಸ್ಥಾನಗಳನ್ನು ಗಳಿಸುವ ಮೂಲಕ ಪಕ್ಷದ ಅತಿ ದೊಡ್ಡ ವಿಜಯ ದಾಖಲಿಸಿದ್ದರೂ, ಅರ್ಹರಾದ ಹಲವು ನಾಯಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಗಲಿಲ್ಲ’ ಎಂದು ಸತೀಶನ್ ಹೇಳಿದರು.</p><p>‘ಸಂಪುಟಕ್ಕೆ ಹೊಸ ಮುಖಗಳು ಬರಬೇಕು. ಎಲ್ಲರಿಗೂ ಅವಕಾಶ ಸಿಗಬೇಕು’ ಎಂದಿದ್ದಾರೆ. </p><p>140 ಸದಸ್ಯ ಬಲದ ಕೇರಳಂ ವಿಧಾನಸಭೆಯಲ್ಲಿ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳಲ್ಲಿ ಗೆಲುವು ಗಳಿಸಿದೆ. ಈ ಪೈಕಿ ಕಾಂಗ್ರೆಸ್ 63 ಶಾಸಕರನ್ನು ಹೊಂದಿದೆ. ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22, ಕೇರಳ ಕಾಂಗ್ರೆಸ್ (ಕೆಇಸಿ) ಎಂಟು ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್ಎಸ್ಪಿ) ಮೂರು ಶಾಸಕರನ್ನು ಹೊಂದಿವೆ.</p>.ಕೇರಳಂ ನೂತನ ಸಿಎಂ ಆಗಿ ಸತೀಶನ್ ಪ್ರಮಾಣ: ರಾಹುಲ್, ಪ್ರಿಯಾಂಕಾ ಸೇರಿ ಗಣ್ಯರು ಭಾಗಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತೀಶನ್ ಅವರೊಂದಿಗೆ ಇತರ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.</p><p>ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸತೀಶನ್ ಸೇರಿದಂತೆ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೊಧಿಸಿದ್ದಾರೆ.</p><p>20 ಸದಸ್ಯರ ಸಂಪುಟದಲ್ಲಿ, ಇಬ್ಬರು ಮಹಿಳೆಯರು, ಇಬ್ಬರು ಪರಿಶಿಷ್ಟ ಸಮುದಾಯದವರು ಸೇರಿದಂತೆ 14 ಶಾಸಕರು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.</p><p>ಕಾಂಗ್ರೆಸ್ನ ಹಿರಿಯ ಮುಖಂಡರಾದ ರಮೇಶ್ ಚೆನ್ನಿತ್ತಲ, ಕೆ.ಮುರಳೀಧರನ್, ಸಣ್ಣಿ ಜೋಸೆಫ್ ಸಹ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಆರ್ಎಸ್ಪಿ ಮುಖಂಡ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್ ಮುಖಂಡ ಮೋನ್ಸ್ ಜೋಸೆಫ್, ಅನೂಪ್ ಜೇಕಬ್ ಅವರಿಗೂ ಸಚಿವ ಸ್ಥಾನ ಲಭಿಸಿದೆ.</p><p>ಸತೀಶನ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಲ್ಲಿದೆ..</p><p><strong>* ರಮೇಶ್ ಚೆನ್ನಿತ್ತಲ </strong></p><p><strong>* ಕೆ. ಮುರಳೀಧರನ್</strong></p><p><strong>* ಎ.ಪಿ. ಅನಿಲ್ ಕುಮಾರ್</strong></p><p><strong>* ಸನ್ನಿ ಜೋಸೆಫ್</strong></p><p><strong>* ಹಿರಿಯ ಐಯುಎಂಎಲ್ ನಾಯಕ ಪಿ.ಕೆ. ಕುಂಞಾಲಿಕುಟ್ಟಿ</strong></p><p><strong>* ಎನ್. ಶಂಸುದ್ದೀನ್ </strong></p><p><strong>* ಆರ್ಎಸ್ಪಿ ನಾಯಕ ಶಿಬು ಬೇಬಿ ಜಾನ್</strong></p><p><strong>* ಕೇರಳ ಕಾಂಗ್ರೆಸ್ ನಾಯಕ ಮೊನ್ಸ್ ಜೋಸೆಫ್</strong></p><p><strong>* ಕೇರಳ ಕಾಂಗ್ರೆಸ್ (ಜಾಕೋಬ್) ನಾಯಕ ಅನೂಪ್ ಜಾಕೋಬ್</strong></p><p><strong>* ಸಿ.ಪಿ. ಜಾನ್</strong></p><p><strong>* ಐಯುಎಂಎಲ್ ನಾಯಕ ಎನ್. ಶಂಸುದ್ದೀನ್</strong></p><p><strong>* ಕೆ.ಎಂ. ಶಾಜಿ</strong></p><p><strong>* ಪಿ. ಕೆ. ಬಶೀರ್</strong></p><p><strong>* ವಿ.ಇ. ಅಬ್ದುಲ್ ಗಫೂರ್ </strong></p><p><strong>* ಪಿ.ಸಿ. ವಿಷ್ಣುನಾಥ್</strong></p><p><strong>* ರೋಜಿ ಎಂ. ಜಾನ್</strong></p><p><strong>* ಬಿಂದು ಕೃಷ್ಣ</strong></p><p><strong>* ಟಿ. ಸಿದ್ದಿಕ್</strong></p><p><strong>* ಕೆ.ಎ. ತುಳಸಿ</strong></p><p><strong>* ಒ.ಜೆ. ಜನೀಶ್</strong></p><p><strong>* ಅಪು ಜಾನ್ ಜೋಸೆಫ್</strong></p><p>ಹಿರಿಯ ಶಾಸಕ ತಿರುವಂಜೂರ್ ರಾಧಾಕೃಷ್ಣನ್ ಅವರನ್ನು ಸಭಾಪತಿ ಹಾಗೂ ಶಾನಿಮೋಳ್ ಉಸ್ಮಾನ್ ಅವರನ್ನು ಉಪ ಸಭಾಪತಿಯಾಗಿ ನೇಮಿಸಲು ಯುಡಿಎಫ್ ನಿರ್ಧರಿಸಿದೆ. </p><p>‘ರಾಜ್ಯದಲ್ಲಿ ಕಾಂಗ್ರೆಸ್ 63 ಸ್ಥಾನಗಳನ್ನು ಗಳಿಸುವ ಮೂಲಕ ಪಕ್ಷದ ಅತಿ ದೊಡ್ಡ ವಿಜಯ ದಾಖಲಿಸಿದ್ದರೂ, ಅರ್ಹರಾದ ಹಲವು ನಾಯಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಗಲಿಲ್ಲ’ ಎಂದು ಸತೀಶನ್ ಹೇಳಿದರು.</p><p>‘ಸಂಪುಟಕ್ಕೆ ಹೊಸ ಮುಖಗಳು ಬರಬೇಕು. ಎಲ್ಲರಿಗೂ ಅವಕಾಶ ಸಿಗಬೇಕು’ ಎಂದಿದ್ದಾರೆ. </p><p>140 ಸದಸ್ಯ ಬಲದ ಕೇರಳಂ ವಿಧಾನಸಭೆಯಲ್ಲಿ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳಲ್ಲಿ ಗೆಲುವು ಗಳಿಸಿದೆ. ಈ ಪೈಕಿ ಕಾಂಗ್ರೆಸ್ 63 ಶಾಸಕರನ್ನು ಹೊಂದಿದೆ. ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22, ಕೇರಳ ಕಾಂಗ್ರೆಸ್ (ಕೆಇಸಿ) ಎಂಟು ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್ಎಸ್ಪಿ) ಮೂರು ಶಾಸಕರನ್ನು ಹೊಂದಿವೆ.</p>.ಕೇರಳಂ ನೂತನ ಸಿಎಂ ಆಗಿ ಸತೀಶನ್ ಪ್ರಮಾಣ: ರಾಹುಲ್, ಪ್ರಿಯಾಂಕಾ ಸೇರಿ ಗಣ್ಯರು ಭಾಗಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>