ತಮಿಳುನಾಡಿನಲ್ಲಿ ಪ್ರಸ್ತುತ 39 ಸಂಸದರು ಇದ್ದಾರೆ. ಸಂಸದರ ಸಂಖ್ಯೆಯನ್ನು 58ಕ್ಕೆ ಏರಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ, ಸಂಸದರ ಸಂಖ್ಯೆ 46ಕ್ಕೆ ಹೆಚ್ಚಳ ಆಗಲಿದೆ. ಇದು ಭ್ರಮೆ ಹೊರತು ಬೇರೇನೂ ಇಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಸಂಸದರ ಸಂಖ್ಯೆ 80ರಿಂದ 140ಕ್ಕೆ ಜಿಗಿಯಲಿದೆ. ಮಸೂದೆಯನ್ನು ವಿರೋಧಿಸುತ್ತಿರುವ ದಕ್ಷಿಣದ ರಾಜ್ಯಗಳ ಧ್ವನಿಯನ್ನು ನಿಗ್ರಹಿಸಲಾಗುತ್ತಿದೆ
ಪಿ.ಚಿದಂಬರಂ, ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ
ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿರುವ ಎಲ್ಲ ಭರವಸೆಗಳಿಗೆ ಈ ಮಸೂದೆ ವಿರುದ್ಧವಾಗಿದೆ. ಈ ಮಸೂದೆಯಿಂದಾಗಿ, ದಕ್ಷಿಣ, ವಾಯವ್ಯ ಮತ್ತು ಪೂರ್ವ ರಾಜ್ಯಗಳು ಲೋಕಸಭೆಯಲ್ಲಿ ತಮ್ಮ ಬಲ ಕಳೆದುಕೊಳ್ಳಲಿವೆ. ಪ್ರಧಾನಿ ಭರವಸೆಗಳನ್ನು ನಂಬುವ ಹಾಗಿಲ್ಲ