<p><strong>ಲುಧಿಯಾನ</strong>: ರಷ್ಯಾ ಸೇನೆ ಸೇರಿದ್ದ ಲುಧಿಯಾನದ 21ವರ್ಷದ ಯುವಕ ಸಮರ್ಜೀತ್ ಸಿಂಗ್ ಪ್ರಸ್ತುತ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದಲ್ಲಿ ಮೃತಪಟ್ಟಿದ್ದಾರೆ.</p>.<p>‘ಏಜೆನ್ಸಿಯೊಂದು ಉದ್ಯೋಗದ ಆಮಿಷದೊಂದಿಗೆ 2025ರ ಜುಲೈನಲ್ಲಿ ಸಮರ್ಜೀತ್ ಅವರನ್ನು ರಷ್ಯಾಕ್ಕೆ ಕರೆಸಿಕೊಂಡಿತ್ತು. ಯಾವುದೇ ಪೂರ್ವ ತರಬೇತಿ ಇಲ್ಲದೇ ಮೋಸದಿಂದ ರಷ್ಯಾ ಸೇನೆಗೆ ಸೇರಿಸಿ, ಬಲವಂತವಾಗಿ ರಷ್ಯಾ–ಉಕ್ರೇನ್ ಯುದ್ಧಕ್ಕೆ ಕಳುಹಿಸಲಾಗಿದೆ’ ಎಂದು ಕುಟುಂಬದವರು ಆರೋಪಿಸಿದ್ದಾರೆ.</p>.<p>‘ರಷ್ಯಾದಲ್ಲಿ ಉದ್ಯೋಗ ಒದಗಿಸುವ ಸುಳ್ಳು ಆಮಿಷವೊಡ್ಡಿ ಯುವಕರನ್ನು ಆಕರ್ಷಿಸಿ, ನಂತರ ಅವರನ್ನು ರಷ್ಯಾದ ಸೇನೆಗೆ ಸೇರಿಸಿಕೊಳ್ಳುವ ಏಜೆಂಟ್ಗಳೇ ಈ ಘಟನೆಗೆ ಕಾರಣ’ ಎಂದು ಸಮರ್ಜೀತ್ ಅವರ ತಂದೆ ಚರಣ್ಜೀತ್ ಸಿಂಗ್ ದೂಷಿಸಿದ್ದಾರೆ. </p>.<p>‘ನನ್ನ ಮಗ ಸಮರ್ಜೀತ್ ಸೆಪ್ಟೆಂಬರ್ನಲ್ಲಿ ಕೊನೆಯ ಬಾರಿಗೆ ನನ್ನೊಂದಿಗೆ ಮಾತನಾಡಿದ್ದು, ನಂತರ ಅವನು ನಾಪತ್ತೆಯಾದ. ಮಗನನ್ನು ಕರೆತರಲು ಸಹಾಯ ಮಾಡುವಂತೆ ಶಾಸಕರು ಸೇರಿದಂತೆ ಹಲವು ನಾಯಕರಲ್ಲಿ ಬೇಡಿಕೊಂಡಿದ್ದೆವು’ ಎಂದು ಅವರು ವಿವರಿಸಿದರು.</p>.<p>ಸಮರ್ಜೀತ್ ಮತ್ತು ಇತರೆ ಭಾರತೀಯರಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ಪೋಸ್ಟ್ ಆಗಿತ್ತು. ಆ ವಿಡಿಯೊದಲ್ಲಿದ್ದವರು ‘ನಮಗೆ ಸರಿಯಾದ ತರಬೇತಿಯಿಲ್ಲದೆ ರಷ್ಯಾ-ಉಕ್ರೇನ್ ಯುದ್ಧಕ್ಕೆ ಕಳುಹಿಸಲಾಗಿದೆ. ನಮ್ಮನ್ನು ರಕ್ಷಿಸಿ’ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು.</p>.<p>ಸಮರ್ಜೀತ್ ಸಿಂಗ್ ಮೃತದೇಹವನ್ನು ರಷ್ಯಾದಿಂದ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ತಂದು, ಅಲ್ಲಿಂದ ಲುಧಿಯಾನಕ್ಕೆ ತರಲಾಯಿತು. ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಿತು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲುಧಿಯಾನ</strong>: ರಷ್ಯಾ ಸೇನೆ ಸೇರಿದ್ದ ಲುಧಿಯಾನದ 21ವರ್ಷದ ಯುವಕ ಸಮರ್ಜೀತ್ ಸಿಂಗ್ ಪ್ರಸ್ತುತ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧದಲ್ಲಿ ಮೃತಪಟ್ಟಿದ್ದಾರೆ.</p>.<p>‘ಏಜೆನ್ಸಿಯೊಂದು ಉದ್ಯೋಗದ ಆಮಿಷದೊಂದಿಗೆ 2025ರ ಜುಲೈನಲ್ಲಿ ಸಮರ್ಜೀತ್ ಅವರನ್ನು ರಷ್ಯಾಕ್ಕೆ ಕರೆಸಿಕೊಂಡಿತ್ತು. ಯಾವುದೇ ಪೂರ್ವ ತರಬೇತಿ ಇಲ್ಲದೇ ಮೋಸದಿಂದ ರಷ್ಯಾ ಸೇನೆಗೆ ಸೇರಿಸಿ, ಬಲವಂತವಾಗಿ ರಷ್ಯಾ–ಉಕ್ರೇನ್ ಯುದ್ಧಕ್ಕೆ ಕಳುಹಿಸಲಾಗಿದೆ’ ಎಂದು ಕುಟುಂಬದವರು ಆರೋಪಿಸಿದ್ದಾರೆ.</p>.<p>‘ರಷ್ಯಾದಲ್ಲಿ ಉದ್ಯೋಗ ಒದಗಿಸುವ ಸುಳ್ಳು ಆಮಿಷವೊಡ್ಡಿ ಯುವಕರನ್ನು ಆಕರ್ಷಿಸಿ, ನಂತರ ಅವರನ್ನು ರಷ್ಯಾದ ಸೇನೆಗೆ ಸೇರಿಸಿಕೊಳ್ಳುವ ಏಜೆಂಟ್ಗಳೇ ಈ ಘಟನೆಗೆ ಕಾರಣ’ ಎಂದು ಸಮರ್ಜೀತ್ ಅವರ ತಂದೆ ಚರಣ್ಜೀತ್ ಸಿಂಗ್ ದೂಷಿಸಿದ್ದಾರೆ. </p>.<p>‘ನನ್ನ ಮಗ ಸಮರ್ಜೀತ್ ಸೆಪ್ಟೆಂಬರ್ನಲ್ಲಿ ಕೊನೆಯ ಬಾರಿಗೆ ನನ್ನೊಂದಿಗೆ ಮಾತನಾಡಿದ್ದು, ನಂತರ ಅವನು ನಾಪತ್ತೆಯಾದ. ಮಗನನ್ನು ಕರೆತರಲು ಸಹಾಯ ಮಾಡುವಂತೆ ಶಾಸಕರು ಸೇರಿದಂತೆ ಹಲವು ನಾಯಕರಲ್ಲಿ ಬೇಡಿಕೊಂಡಿದ್ದೆವು’ ಎಂದು ಅವರು ವಿವರಿಸಿದರು.</p>.<p>ಸಮರ್ಜೀತ್ ಮತ್ತು ಇತರೆ ಭಾರತೀಯರಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ಪೋಸ್ಟ್ ಆಗಿತ್ತು. ಆ ವಿಡಿಯೊದಲ್ಲಿದ್ದವರು ‘ನಮಗೆ ಸರಿಯಾದ ತರಬೇತಿಯಿಲ್ಲದೆ ರಷ್ಯಾ-ಉಕ್ರೇನ್ ಯುದ್ಧಕ್ಕೆ ಕಳುಹಿಸಲಾಗಿದೆ. ನಮ್ಮನ್ನು ರಕ್ಷಿಸಿ’ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು.</p>.<p>ಸಮರ್ಜೀತ್ ಸಿಂಗ್ ಮೃತದೇಹವನ್ನು ರಷ್ಯಾದಿಂದ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ತಂದು, ಅಲ್ಲಿಂದ ಲುಧಿಯಾನಕ್ಕೆ ತರಲಾಯಿತು. ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಿತು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>