<p><strong>ತಿರುವನಂತಪುರಂ</strong>: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ (ಎನ್ಎಫ್ಡಿಸಿ) ಅಧ್ಯಕ್ಷರನ್ನಾಗಿ ಮಲಯಾಳಂ ನಟ ಹಾಗೂ ಕೇರಳ ಬಿಜೆಪಿ ನಾಯಕ ಜಿ. ಕೃಷ್ಣಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.</p><p>ಇಂದು ಕೇರಳ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ನಿನ್ನೆ ಸಂಜೆ ಜಿ.ಕೃಷ್ಣಕುಮಾರ್ ಅವರ ನೇಮಕದ ಆದೇಶ ಹೊರಬಿದ್ದಿದೆ.</p><p>2021 ರಲ್ಲಿ ಜಿ.ಕೃಷ್ಣಕುಮಾರ್ ಅವರು ಬಿಜೆಪಿ ಸೇರ್ಪಡೆ ಆಗಿ ಅದೇ ವರ್ಷ ತಿರುವನಂತಪುರ ವಿಧಾನಸಭೆ ಚುನಾವಣೆಗೆ ಹಾಗೂ 2024 ರಲ್ಲಿ ಕೊಲ್ಲಂ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು.</p><p>ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು, ದೂರದರ್ಶನ ವಾಹಿನಿಯಲ್ಲಿ ವಾರ್ತಾ ವಾಚಕರಾಗಿದ್ದರು.</p><p>ಜಿ.ಕೃಷ್ಣಕುಮಾರ್ ಅವರ ಅಧಿಕಾರವಧಿ ಮೂರು ವರ್ಷದ್ದಾಗಿರುತ್ತದೆ ಎಂದು ಪ್ರಸಾರ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಈ ಸಾರಿಯ ಚುನಾವಣೆಯಲ್ಲಿ ಕೃಷ್ಣಕುಮಾರ್ ಅವರು ಸ್ಪರ್ಧಿಸುತ್ತಿಲ್ಲ.</p>.ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಜಯ: ಧನ್ಯವಾದ ಸಲ್ಲಿಸಿದ ಮೋದಿ.ಕೇರಳ ಚುನಾವಣೆಯಲ್ಲಿ ಎಎಪಿ ಮಹಿಳಾ ಅಭ್ಯರ್ಥಿಗಳ ಕಮಾಲ್: ಇಲ್ಲಿದೆ ವಿವರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರಂ</strong>: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ (ಎನ್ಎಫ್ಡಿಸಿ) ಅಧ್ಯಕ್ಷರನ್ನಾಗಿ ಮಲಯಾಳಂ ನಟ ಹಾಗೂ ಕೇರಳ ಬಿಜೆಪಿ ನಾಯಕ ಜಿ. ಕೃಷ್ಣಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.</p><p>ಇಂದು ಕೇರಳ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ನಿನ್ನೆ ಸಂಜೆ ಜಿ.ಕೃಷ್ಣಕುಮಾರ್ ಅವರ ನೇಮಕದ ಆದೇಶ ಹೊರಬಿದ್ದಿದೆ.</p><p>2021 ರಲ್ಲಿ ಜಿ.ಕೃಷ್ಣಕುಮಾರ್ ಅವರು ಬಿಜೆಪಿ ಸೇರ್ಪಡೆ ಆಗಿ ಅದೇ ವರ್ಷ ತಿರುವನಂತಪುರ ವಿಧಾನಸಭೆ ಚುನಾವಣೆಗೆ ಹಾಗೂ 2024 ರಲ್ಲಿ ಕೊಲ್ಲಂ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು.</p><p>ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು, ದೂರದರ್ಶನ ವಾಹಿನಿಯಲ್ಲಿ ವಾರ್ತಾ ವಾಚಕರಾಗಿದ್ದರು.</p><p>ಜಿ.ಕೃಷ್ಣಕುಮಾರ್ ಅವರ ಅಧಿಕಾರವಧಿ ಮೂರು ವರ್ಷದ್ದಾಗಿರುತ್ತದೆ ಎಂದು ಪ್ರಸಾರ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಈ ಸಾರಿಯ ಚುನಾವಣೆಯಲ್ಲಿ ಕೃಷ್ಣಕುಮಾರ್ ಅವರು ಸ್ಪರ್ಧಿಸುತ್ತಿಲ್ಲ.</p>.ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಜಯ: ಧನ್ಯವಾದ ಸಲ್ಲಿಸಿದ ಮೋದಿ.ಕೇರಳ ಚುನಾವಣೆಯಲ್ಲಿ ಎಎಪಿ ಮಹಿಳಾ ಅಭ್ಯರ್ಥಿಗಳ ಕಮಾಲ್: ಇಲ್ಲಿದೆ ವಿವರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>