<p><strong>ಕೋಲ್ಕತ್ತ</strong>: ಮಾಲ್ಡಾ ಜಿಲ್ಲೆಯಲ್ಲಿ ನ್ಯಾಯಾಂಗದ ಏಳು ಅಧಿಕಾರಿಗಳನ್ನು ಕೂಡಿಹಾಕಿದ ಪ್ರಕರಣದ ಪ್ರಮುಖ ‘ಸೂತ್ರಧಾರ’ ಸೇರಿದಂತೆ ಇಬ್ಬರನ್ನು ಪಶ್ಚಿಮ ಬಂಗಾಳ ಪೊಲೀಸರು ಶುಕ್ರವಾರ ಸಿಲಿಗುರಿಯ ಬಾಗ್ಡೊಗ್ರಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.</p>.<p>ಪ್ರಮುಖ ಆರೋಪಿ ಮೊಫಕ್ಕರುಲ್ ಇಸ್ಲಾಂ ಎಂಬ ವಕೀಲನನ್ನು ವಿಮಾನ ಏರಲು ಮುಂದಾಗಿದ್ದಾಗ ಬಂಧಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>‘ಮೊಫಕ್ಕರುಲ್ ಬುಧವಾರ ರಾತ್ರಿ ಕಾಲಿಯಾಚಕ್ ತಾಲ್ಲೂಕು ಕಚೇರಿಯೊಳಗೆ ನ್ಯಾಯಾಂಗದ ಏಳು ಅಧಿಕಾರಿಗಳನ್ನು ಹಲವು ಗಂಟೆ ಘೇರಾವ್ ಮಾಡಿದ ಘಟನೆಯ ಹಿಂದಿನ ಶಂಕಿತ ಸೂತ್ರಧಾರ ಆಗಿದ್ದಾನೆ. ಆತ ವಿಮಾನದ ಮೂಲಕ ರಾಜ್ಯದಿಂದ ಪಲಾಯನ ಮಾಡಲು ಮುಂದಾಗಿದ್ದ’ ಎಂದು ಹೇಳಿದ್ದಾರೆ.</p>.<p>‘ಉತ್ತರ ದಿನಾಜ್ಪುರ ಜಿಲ್ಲೆಯ ಇತಾಹರ್ ನಿವಾಸಿಯಾಗಿರುವ ಮೊಫಕ್ಕರುಲ್, ಪ್ರಸ್ತುತ ಕೋಲ್ಕತ್ತದಲ್ಲಿ ನೆಲಸಿದ್ದಾನೆ’ ಎಂದು ಎಡಿಜಿ (ಉತ್ತರ ಬಂಗಾಳ) ಕೆ.ಜಯರಾಮನ್ ಸುದ್ದಿಗಾರರಿಗೆ ತಿಳಿಸಿದರು.</p>.<p>ಬುಧವಾರ ಭಾಷಣದ ಮೂಲಕ ಸ್ಥಳೀಯರನ್ನು ‘ಪ್ರಚೋದನೆ’ ಮಾಡಿದ ಆರೋಪದ ಮೇಲೆ ಆತನ ವಿರುದ್ಧ ಕಲಿಯಾಚಕ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಚೋದನಕಾರಿ ಭಾಷಣದ ಬೆನ್ನಲ್ಲೇ ಜನರ ಗುಂಪು ನ್ಯಾಯಾಂಗದ ಅಧಿಕಾರಿಗಳನ್ನು ಫೇರಾವ್ ಮಾಡಿದೆ ಎಂದಿದ್ದಾರೆ.</p>.<p>‘ಘಟನೆಯ ಬೆನ್ನಲ್ಲೇ ನಾವು ಮೊಫಕ್ಕರುಲ್ ಇಸ್ಲಾಂನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆವು. ಪಶ್ಚಿಮ ಬಂಗಾಳದ ಸಿಐಡಿ ಮತ್ತು ಸಿಲಿಗುರಿ ಪೊಲೀಸರ ಸಹಾಯದಿಂದ ಆತ ಮತ್ತು ಸಹಚರನನ್ನು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದರೂ, ಈ ಘಟನೆಯು ‘ಪೂರ್ವಯೋಜಿತವೇ’ ಮತ್ತು ಇದರ ಹಿಂದೆ ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪಶ್ಚಿಮ ಬಂಗಾಳ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸುವರು ಎಂದಿದ್ದಾರೆ. </p>.<p>ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ತೊಡಗಿದ್ದ ಅಧಿಕಾರಿಗಳನ್ನು ಕೂಡಿಹಾಕಿದ ಘಟನೆ ಮಾಲ್ಡಾ ಜಿಲ್ಲೆಯಲ್ಲಿ ಬುಧವಾರ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನಿಷ್ಕ್ರಿಯತೆ ತೋರಿದ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಮಾಲ್ಡಾ ಜಿಲ್ಲೆಯಲ್ಲಿ ನ್ಯಾಯಾಂಗದ ಏಳು ಅಧಿಕಾರಿಗಳನ್ನು ಕೂಡಿಹಾಕಿದ ಪ್ರಕರಣದ ಪ್ರಮುಖ ‘ಸೂತ್ರಧಾರ’ ಸೇರಿದಂತೆ ಇಬ್ಬರನ್ನು ಪಶ್ಚಿಮ ಬಂಗಾಳ ಪೊಲೀಸರು ಶುಕ್ರವಾರ ಸಿಲಿಗುರಿಯ ಬಾಗ್ಡೊಗ್ರಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.</p>.<p>ಪ್ರಮುಖ ಆರೋಪಿ ಮೊಫಕ್ಕರುಲ್ ಇಸ್ಲಾಂ ಎಂಬ ವಕೀಲನನ್ನು ವಿಮಾನ ಏರಲು ಮುಂದಾಗಿದ್ದಾಗ ಬಂಧಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>‘ಮೊಫಕ್ಕರುಲ್ ಬುಧವಾರ ರಾತ್ರಿ ಕಾಲಿಯಾಚಕ್ ತಾಲ್ಲೂಕು ಕಚೇರಿಯೊಳಗೆ ನ್ಯಾಯಾಂಗದ ಏಳು ಅಧಿಕಾರಿಗಳನ್ನು ಹಲವು ಗಂಟೆ ಘೇರಾವ್ ಮಾಡಿದ ಘಟನೆಯ ಹಿಂದಿನ ಶಂಕಿತ ಸೂತ್ರಧಾರ ಆಗಿದ್ದಾನೆ. ಆತ ವಿಮಾನದ ಮೂಲಕ ರಾಜ್ಯದಿಂದ ಪಲಾಯನ ಮಾಡಲು ಮುಂದಾಗಿದ್ದ’ ಎಂದು ಹೇಳಿದ್ದಾರೆ.</p>.<p>‘ಉತ್ತರ ದಿನಾಜ್ಪುರ ಜಿಲ್ಲೆಯ ಇತಾಹರ್ ನಿವಾಸಿಯಾಗಿರುವ ಮೊಫಕ್ಕರುಲ್, ಪ್ರಸ್ತುತ ಕೋಲ್ಕತ್ತದಲ್ಲಿ ನೆಲಸಿದ್ದಾನೆ’ ಎಂದು ಎಡಿಜಿ (ಉತ್ತರ ಬಂಗಾಳ) ಕೆ.ಜಯರಾಮನ್ ಸುದ್ದಿಗಾರರಿಗೆ ತಿಳಿಸಿದರು.</p>.<p>ಬುಧವಾರ ಭಾಷಣದ ಮೂಲಕ ಸ್ಥಳೀಯರನ್ನು ‘ಪ್ರಚೋದನೆ’ ಮಾಡಿದ ಆರೋಪದ ಮೇಲೆ ಆತನ ವಿರುದ್ಧ ಕಲಿಯಾಚಕ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಚೋದನಕಾರಿ ಭಾಷಣದ ಬೆನ್ನಲ್ಲೇ ಜನರ ಗುಂಪು ನ್ಯಾಯಾಂಗದ ಅಧಿಕಾರಿಗಳನ್ನು ಫೇರಾವ್ ಮಾಡಿದೆ ಎಂದಿದ್ದಾರೆ.</p>.<p>‘ಘಟನೆಯ ಬೆನ್ನಲ್ಲೇ ನಾವು ಮೊಫಕ್ಕರುಲ್ ಇಸ್ಲಾಂನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆವು. ಪಶ್ಚಿಮ ಬಂಗಾಳದ ಸಿಐಡಿ ಮತ್ತು ಸಿಲಿಗುರಿ ಪೊಲೀಸರ ಸಹಾಯದಿಂದ ಆತ ಮತ್ತು ಸಹಚರನನ್ನು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದರೂ, ಈ ಘಟನೆಯು ‘ಪೂರ್ವಯೋಜಿತವೇ’ ಮತ್ತು ಇದರ ಹಿಂದೆ ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪಶ್ಚಿಮ ಬಂಗಾಳ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸುವರು ಎಂದಿದ್ದಾರೆ. </p>.<p>ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ತೊಡಗಿದ್ದ ಅಧಿಕಾರಿಗಳನ್ನು ಕೂಡಿಹಾಕಿದ ಘಟನೆ ಮಾಲ್ಡಾ ಜಿಲ್ಲೆಯಲ್ಲಿ ಬುಧವಾರ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನಿಷ್ಕ್ರಿಯತೆ ತೋರಿದ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>