<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಶಾಸಕ ರುತಬ್ರತಾ ಬ್ಯಾನರ್ಜಿ ಅವರನ್ನು ಸದ್ಯ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಪರಮ ವೈರಿಯಾಗಿ ಬಿಂಬಿಸಲಾಗುತ್ತಿದೆ. </p><p>ಹೌದು, 2017ರ ನವೆಂಬರ್ನಲ್ಲಿ ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯರಾಗಿದ್ದ (ರುತಬ್ರತಾ ಬ್ಯಾನರ್ಜಿ) ವಿರುದ್ಧ ಉತ್ತರ ಬಂಗಾಳದ ಮಹಿಳೆಯೊಬ್ಬರು ಲೈಂಗಿಕ ಶೋಷಣೆಯ ದೂರು ದಾಖಲಿಸಿದ್ದರು. ಬಳಿಕ ಅವರನ್ನು ಬಂಧಿಸಲು ಪಶ್ಚಿಮ ಬಂಗಾಳ ಪೊಲೀಸರ ತಂಡವೊಂದು ದೆಹಲಿಯಲ್ಲಿ ಬೀಡುಬಿಟ್ಟಿತ್ತು.</p><p>ಈ ಪ್ರಕರಣದ ತನಿಖೆಯನ್ನು ಬಂಗಾಳದ ಸಿಐಡಿ ಪೊಲೀಸರು ನಡೆಸುತ್ತಿದ್ದರು. ಇದರ ನೇತೃತ್ವವನ್ನು ಹಿರಿಯ ಐಪಿಎಸ್ ಅಧಿಕಾರಿ ರಾಜೇಶ್ ಕುಮಾರ್ ವಹಿಸಿದ್ದರು. .</p><p>ರುತಬ್ರತಾ ಬ್ಯಾನರ್ಜಿ ಈ ಆರೋಪಗಳನ್ನು ನಿರಾಕರಿಸಿದ್ದರು ಮತ್ತು ಪೊಲೀಸರ ಕ್ರಮವು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ್ದರು. ಅಲ್ಲದೆ, ಸಂತ್ರಸ್ತ ಮಹಿಳೆಯು ನನ್ನಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ದಾಖಲಿಸಿದ್ದರು.</p><p>2017ರ ಸೆಪ್ಟೆಂಬರ್ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮತ್ತು ಆದಾಯದ ಮೂಲ ಮೀರಿ ಐಷಾರಾಮಿ ಜೀವನಶೈಲಿ ಹೊಂದಿದ್ದ ಆರೋಪದ ಮೇಲೆ ಸಿಪಿಎಂ ರುತಬ್ರತಾ ಬ್ಯಾನರ್ಜಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. </p><p>ಬಂಧನ ಭೀತಿಯಲ್ಲಿದ್ದ ರುತಬ್ರತಾ ಬ್ಯಾನರ್ಜಿ ಅವರು ಬಿಜೆಪಿಗೆ ವಲಸೆ ಹೋಗಿದ್ದ ಟಿಎಂಸಿಯ ಮಾಜಿ ಸಂಸದರೊಬ್ಬರ ದೆಹಲಿ ನಿವಾಸದಲ್ಲಿ ಆಶ್ರಯ ಪಡೆದಿದ್ದರು ಎಂದು ವರದಿಯಾಗಿತ್ತು. ಅದಾದ ನಂತರ ಅವರು ಸದ್ದಿಲ್ಲದೆ ವಿದೇಶಕ್ಕೆ ತೆರಳಿದ್ದರು.</p><p>ಇದಾದ ಕೆಲವು ತಿಂಗಳ ಬಳಿಕ ಮುಂಬೈಯಲ್ಲಿ ನಡೆದ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಪ್ರತ್ಯಕ್ಷರಾಗಿದ್ದರು. ಬಳಿಕ, ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. </p>.TMC ಇಬ್ಭಾಗಕ್ಕೆ ಕಾರಣವಾಯ್ತು ಸುವೇಂದು–ರುತಬ್ರತಾ ಬ್ಯಾನರ್ಜಿ ‘ಆಕಸ್ಮಿಕ’ ಭೇಟಿ!.<h2>ಬುದ್ಧದೇವ್ ಮಾರ್ಗದರ್ಶನ...</h2><p>ಕುತೂಹಲಕಾರಿ ಸಂಗತಿಯೆಂದರೆ, ರುತಬ್ರತಾ ಬ್ಯಾನರ್ಜಿ ಅವರನ್ನು ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಅತ್ಯಾಪ್ತ ಶಿಷ್ಯ ಎಂದೇ ಪರಿಗಣಿಸಲಾಗಿತ್ತು. ರುತಬ್ರತಾ ಬ್ಯಾನರ್ಜಿ ಅವರನ್ನು ಪಕ್ಷದಲ್ಲಿ ಬೆಳೆಸುವಲ್ಲಿ ಮತ್ತು ಚಿಕ್ಕ ವಯಸ್ಸಿನಲ್ಲೇ ರಾಜ್ಯಸಭೆಗೆ ಪ್ರವೇಶ ಕಲ್ಪಿಸುವಲ್ಲಿ ಬುದ್ಧದೇವ್ ಪ್ರಮುಖ ಪಾತ್ರ ವಹಿಸಿದ್ದರು.</p><p>2013ರ ಏಪ್ರಿಲ್ನಲ್ಲಿ ರುತಬ್ರತಾ ಬ್ಯಾನರ್ಜಿ ಅವರು ಮೊದಲ ಬಾರಿಗೆ ಮುಂಚೂಣಿಗೆ ಬಂದರು. ಕೋಲ್ಕತ್ತದಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಚ್ನಲ್ಲಿ ಪಕ್ಷದ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದನ್ನು ವಿರೋಧಿಸಿ, ಸಿಪಿಎಂನ ವಿದ್ಯಾರ್ಥಿ ಸಂಘಟನೆಯಾದ ಎಸ್ಎಫ್ಐನ ಹಲವು ಸಹೋದ್ಯೋಗಿಗಳೊಂದಿಗೆ ಸೇರಿ ದೆಹಲಿಯ ಯೋಜನಾ ಆಯೋಗದ ಎದುರು ಮಮತಾ ಬ್ಯಾನರ್ಜಿ ಮತ್ತು ಅಂದಿನ ಹಣಕಾಸು ಸಚಿವ ಅಮಿತ್ ಮಿತ್ರಾ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಅವರು ಬಂಧನಕ್ಕೊಳಗಾಗಿದ್ದರು.</p><p>ಟಿಎಂಸಿಗೆ ಸೇರ್ಪಡೆಯಾದ ಬಳಿಕ ಎಡಪಂಥೀಯ ರಾಜಕಾರಣದಲ್ಲಿ ಅವರಿಗಿದ್ದ ಹಿನ್ನೆಲೆಯನ್ನು ಗುರುತಿಸಿದ ಪಕ್ಷವು, ಕಾರ್ಮಿಕ ಸಂಘಟನೆಯ ಮುಖ್ಯಸ್ಥರನ್ನಾಗಿ ಮಾಡಿತ್ತು. ಬಳಿಕ ನಡೆದ ಉಪಚುನಾವಣೆಯಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.</p>.<h2>ರಾಜಕೀಯ ಶಕ್ತಿ ಪ್ರದರ್ಶನ</h2><p>ಈ ವರ್ಷದ ಆರಂಭದಲ್ಲಿ ರುತಬ್ರತಾ ಬ್ಯಾನರ್ಜಿ ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಂಡಿತ್ತು. ರಾಜ್ಯಸಭೆ ಬದಲಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷವು ಮನವೊಲಿಸಿತ್ತು. ಇದರಿಂದಾಗಿ ರಾಜ್ಯಸಭಾ ಸ್ಥಾನವನ್ನು ಗಾಯಕ, ಮಾಜಿ ಕೇಂದ್ರ ಸಚಿವರಾದ ಬಾಬುಲ್ ಸುಪ್ರಿಯೊ ಅವರಿಗೆ ನೀಡಲಾಯಿತು. ಬಾಬುಲ್ ಕೂಡ ಬಿಜೆಪಿಯಿಂದ ಟಿಎಂಸಿಗೆ ವಲಸೆ ಬಂದವರಾಗಿದ್ದರು.</p><p>ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರುತಬ್ರತಾ ಬ್ಯಾನರ್ಜಿ ಗೆಲುವಿನ ನಗೆ ಬೀರಿದ್ದಾರೆ. ಮಮತಾ ಬ್ಯಾನರ್ಜಿ ಅವರು ಆಯ್ಕೆ ಮಾಡಿದ್ದ ನಾಯಕರನ್ನು ಬದಿಗೆ ಸರಿಸಿ, ಬಹುಪಾಲು ಟಿಎಂಸಿ ಶಾಸಕರ ಬೆಂಬಲದೊಂದಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗುವಲ್ಲಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಶಾಸಕ ರುತಬ್ರತಾ ಬ್ಯಾನರ್ಜಿ ಅವರನ್ನು ಸದ್ಯ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಪರಮ ವೈರಿಯಾಗಿ ಬಿಂಬಿಸಲಾಗುತ್ತಿದೆ. </p><p>ಹೌದು, 2017ರ ನವೆಂಬರ್ನಲ್ಲಿ ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯರಾಗಿದ್ದ (ರುತಬ್ರತಾ ಬ್ಯಾನರ್ಜಿ) ವಿರುದ್ಧ ಉತ್ತರ ಬಂಗಾಳದ ಮಹಿಳೆಯೊಬ್ಬರು ಲೈಂಗಿಕ ಶೋಷಣೆಯ ದೂರು ದಾಖಲಿಸಿದ್ದರು. ಬಳಿಕ ಅವರನ್ನು ಬಂಧಿಸಲು ಪಶ್ಚಿಮ ಬಂಗಾಳ ಪೊಲೀಸರ ತಂಡವೊಂದು ದೆಹಲಿಯಲ್ಲಿ ಬೀಡುಬಿಟ್ಟಿತ್ತು.</p><p>ಈ ಪ್ರಕರಣದ ತನಿಖೆಯನ್ನು ಬಂಗಾಳದ ಸಿಐಡಿ ಪೊಲೀಸರು ನಡೆಸುತ್ತಿದ್ದರು. ಇದರ ನೇತೃತ್ವವನ್ನು ಹಿರಿಯ ಐಪಿಎಸ್ ಅಧಿಕಾರಿ ರಾಜೇಶ್ ಕುಮಾರ್ ವಹಿಸಿದ್ದರು. .</p><p>ರುತಬ್ರತಾ ಬ್ಯಾನರ್ಜಿ ಈ ಆರೋಪಗಳನ್ನು ನಿರಾಕರಿಸಿದ್ದರು ಮತ್ತು ಪೊಲೀಸರ ಕ್ರಮವು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ್ದರು. ಅಲ್ಲದೆ, ಸಂತ್ರಸ್ತ ಮಹಿಳೆಯು ನನ್ನಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ದಾಖಲಿಸಿದ್ದರು.</p><p>2017ರ ಸೆಪ್ಟೆಂಬರ್ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮತ್ತು ಆದಾಯದ ಮೂಲ ಮೀರಿ ಐಷಾರಾಮಿ ಜೀವನಶೈಲಿ ಹೊಂದಿದ್ದ ಆರೋಪದ ಮೇಲೆ ಸಿಪಿಎಂ ರುತಬ್ರತಾ ಬ್ಯಾನರ್ಜಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. </p><p>ಬಂಧನ ಭೀತಿಯಲ್ಲಿದ್ದ ರುತಬ್ರತಾ ಬ್ಯಾನರ್ಜಿ ಅವರು ಬಿಜೆಪಿಗೆ ವಲಸೆ ಹೋಗಿದ್ದ ಟಿಎಂಸಿಯ ಮಾಜಿ ಸಂಸದರೊಬ್ಬರ ದೆಹಲಿ ನಿವಾಸದಲ್ಲಿ ಆಶ್ರಯ ಪಡೆದಿದ್ದರು ಎಂದು ವರದಿಯಾಗಿತ್ತು. ಅದಾದ ನಂತರ ಅವರು ಸದ್ದಿಲ್ಲದೆ ವಿದೇಶಕ್ಕೆ ತೆರಳಿದ್ದರು.</p><p>ಇದಾದ ಕೆಲವು ತಿಂಗಳ ಬಳಿಕ ಮುಂಬೈಯಲ್ಲಿ ನಡೆದ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಪ್ರತ್ಯಕ್ಷರಾಗಿದ್ದರು. ಬಳಿಕ, ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. </p>.TMC ಇಬ್ಭಾಗಕ್ಕೆ ಕಾರಣವಾಯ್ತು ಸುವೇಂದು–ರುತಬ್ರತಾ ಬ್ಯಾನರ್ಜಿ ‘ಆಕಸ್ಮಿಕ’ ಭೇಟಿ!.<h2>ಬುದ್ಧದೇವ್ ಮಾರ್ಗದರ್ಶನ...</h2><p>ಕುತೂಹಲಕಾರಿ ಸಂಗತಿಯೆಂದರೆ, ರುತಬ್ರತಾ ಬ್ಯಾನರ್ಜಿ ಅವರನ್ನು ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಅತ್ಯಾಪ್ತ ಶಿಷ್ಯ ಎಂದೇ ಪರಿಗಣಿಸಲಾಗಿತ್ತು. ರುತಬ್ರತಾ ಬ್ಯಾನರ್ಜಿ ಅವರನ್ನು ಪಕ್ಷದಲ್ಲಿ ಬೆಳೆಸುವಲ್ಲಿ ಮತ್ತು ಚಿಕ್ಕ ವಯಸ್ಸಿನಲ್ಲೇ ರಾಜ್ಯಸಭೆಗೆ ಪ್ರವೇಶ ಕಲ್ಪಿಸುವಲ್ಲಿ ಬುದ್ಧದೇವ್ ಪ್ರಮುಖ ಪಾತ್ರ ವಹಿಸಿದ್ದರು.</p><p>2013ರ ಏಪ್ರಿಲ್ನಲ್ಲಿ ರುತಬ್ರತಾ ಬ್ಯಾನರ್ಜಿ ಅವರು ಮೊದಲ ಬಾರಿಗೆ ಮುಂಚೂಣಿಗೆ ಬಂದರು. ಕೋಲ್ಕತ್ತದಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಚ್ನಲ್ಲಿ ಪಕ್ಷದ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದನ್ನು ವಿರೋಧಿಸಿ, ಸಿಪಿಎಂನ ವಿದ್ಯಾರ್ಥಿ ಸಂಘಟನೆಯಾದ ಎಸ್ಎಫ್ಐನ ಹಲವು ಸಹೋದ್ಯೋಗಿಗಳೊಂದಿಗೆ ಸೇರಿ ದೆಹಲಿಯ ಯೋಜನಾ ಆಯೋಗದ ಎದುರು ಮಮತಾ ಬ್ಯಾನರ್ಜಿ ಮತ್ತು ಅಂದಿನ ಹಣಕಾಸು ಸಚಿವ ಅಮಿತ್ ಮಿತ್ರಾ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಅವರು ಬಂಧನಕ್ಕೊಳಗಾಗಿದ್ದರು.</p><p>ಟಿಎಂಸಿಗೆ ಸೇರ್ಪಡೆಯಾದ ಬಳಿಕ ಎಡಪಂಥೀಯ ರಾಜಕಾರಣದಲ್ಲಿ ಅವರಿಗಿದ್ದ ಹಿನ್ನೆಲೆಯನ್ನು ಗುರುತಿಸಿದ ಪಕ್ಷವು, ಕಾರ್ಮಿಕ ಸಂಘಟನೆಯ ಮುಖ್ಯಸ್ಥರನ್ನಾಗಿ ಮಾಡಿತ್ತು. ಬಳಿಕ ನಡೆದ ಉಪಚುನಾವಣೆಯಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.</p>.<h2>ರಾಜಕೀಯ ಶಕ್ತಿ ಪ್ರದರ್ಶನ</h2><p>ಈ ವರ್ಷದ ಆರಂಭದಲ್ಲಿ ರುತಬ್ರತಾ ಬ್ಯಾನರ್ಜಿ ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಂಡಿತ್ತು. ರಾಜ್ಯಸಭೆ ಬದಲಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷವು ಮನವೊಲಿಸಿತ್ತು. ಇದರಿಂದಾಗಿ ರಾಜ್ಯಸಭಾ ಸ್ಥಾನವನ್ನು ಗಾಯಕ, ಮಾಜಿ ಕೇಂದ್ರ ಸಚಿವರಾದ ಬಾಬುಲ್ ಸುಪ್ರಿಯೊ ಅವರಿಗೆ ನೀಡಲಾಯಿತು. ಬಾಬುಲ್ ಕೂಡ ಬಿಜೆಪಿಯಿಂದ ಟಿಎಂಸಿಗೆ ವಲಸೆ ಬಂದವರಾಗಿದ್ದರು.</p><p>ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರುತಬ್ರತಾ ಬ್ಯಾನರ್ಜಿ ಗೆಲುವಿನ ನಗೆ ಬೀರಿದ್ದಾರೆ. ಮಮತಾ ಬ್ಯಾನರ್ಜಿ ಅವರು ಆಯ್ಕೆ ಮಾಡಿದ್ದ ನಾಯಕರನ್ನು ಬದಿಗೆ ಸರಿಸಿ, ಬಹುಪಾಲು ಟಿಎಂಸಿ ಶಾಸಕರ ಬೆಂಬಲದೊಂದಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗುವಲ್ಲಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>