<p><strong>ನವದೆಹಲಿ:</strong> ಎದೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೂರ್ವ ದೆಹಲಿಯ ದಲ್ಲೂಪುರದಲ್ಲಿ ನಡೆದಿದೆ.</p>.<p>ಪಿಸ್ತೂಲ್ಗೆ ಗುಂಡು ತುಂಬಿಸುತ್ತಾ ಅದನ್ನು ವಿಡಿಯೊ ಮಾಡುವಂತೆ ಸೋದರ ಸಂಬಂಧಿಗೆ ಹೇಳಿದ್ದ ಪವನ್, ಬಳಿಕ ಎದೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.</p>.<p>‘ಪವನ್ ಗುಂಡು ಹಾರಿಸಿಕೊಂಡಿರುವ ದೃಶ್ಯಗಳನ್ನು ಅವರ ಸೋದರ ಸಂಬಂಧಿ ಹಿಮಾಂಶು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಪವನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ ಬಗ್ಗೆ ಹಿಮಾಂಶುಗೆ ಗೊತ್ತಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪವನ್ ಪಿಸ್ತೂಲಿಗೆ ಗುಂಡು ತುಂಬಿಸುತ್ತಿದ್ದ ವೇಳೆ ಎಚ್ಚರಿಕೆಯಿಂದ ಇರುವಂತೆ ಹಿಮಾಂಶು ಸಲಹೆ ನೀಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಪವನ್ ಪಿಸ್ತೂಲನ್ನು ತನ್ನ ಎಡಭಾಗದ ಎದೆ ಮೇಲಿಟ್ಟುಕೊಂಡು, ಕ್ಯಾಮೆರಾ ಕಡೆ ನೋಡುತ್ತಾ ಗುಂಡು ಹಾರಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಹಿಮಾಂಶು ಅವರಿಗೆ ಪಿಸ್ತೂಲ್ ಸೇರಿದ್ದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಎದೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೂರ್ವ ದೆಹಲಿಯ ದಲ್ಲೂಪುರದಲ್ಲಿ ನಡೆದಿದೆ.</p>.<p>ಪಿಸ್ತೂಲ್ಗೆ ಗುಂಡು ತುಂಬಿಸುತ್ತಾ ಅದನ್ನು ವಿಡಿಯೊ ಮಾಡುವಂತೆ ಸೋದರ ಸಂಬಂಧಿಗೆ ಹೇಳಿದ್ದ ಪವನ್, ಬಳಿಕ ಎದೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.</p>.<p>‘ಪವನ್ ಗುಂಡು ಹಾರಿಸಿಕೊಂಡಿರುವ ದೃಶ್ಯಗಳನ್ನು ಅವರ ಸೋದರ ಸಂಬಂಧಿ ಹಿಮಾಂಶು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಪವನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ ಬಗ್ಗೆ ಹಿಮಾಂಶುಗೆ ಗೊತ್ತಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪವನ್ ಪಿಸ್ತೂಲಿಗೆ ಗುಂಡು ತುಂಬಿಸುತ್ತಿದ್ದ ವೇಳೆ ಎಚ್ಚರಿಕೆಯಿಂದ ಇರುವಂತೆ ಹಿಮಾಂಶು ಸಲಹೆ ನೀಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಪವನ್ ಪಿಸ್ತೂಲನ್ನು ತನ್ನ ಎಡಭಾಗದ ಎದೆ ಮೇಲಿಟ್ಟುಕೊಂಡು, ಕ್ಯಾಮೆರಾ ಕಡೆ ನೋಡುತ್ತಾ ಗುಂಡು ಹಾರಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಹಿಮಾಂಶು ಅವರಿಗೆ ಪಿಸ್ತೂಲ್ ಸೇರಿದ್ದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>