<p><strong>ಚಂದ್ರಾಪುರ, ಮಹಾರಾಷ್ಟ್ರ:</strong> ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಒಂದೇ ಏಟಿಗೆ ದಾಳಿ ಮಾಡಿ ನಾಲ್ವರು ಮಹಿಳೆಯನ್ನು ಕೊಂದಿದ್ದ ನರಭಕ್ಷಕ ಹುಲಿಯನ್ನು ಅಂತೂ ಸೆರೆ ಹಿಡಿಯಲಾಗಿದೆ.</p><p>ನರಭಕ್ಷಕ ಹುಲಿ ಸೆರೆಗೆ ಕಳೆದ ಗುರುವಾರದಿಂದ ಮಹಾರಾಷ್ಟ್ರ ಅರಣ್ಯ ಇಲಾಖೆ, ವಿಶೇಷ ಹುಲಿ ರಕ್ಷಣಾ ಪಡೆ (STPF) ಸೇರಿದಂತೆ ತಜ್ಞರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದರು.</p><p>ಇಂದು ಬೆಳಿಗ್ಗೆ 11ರ ಸುಮಾರು ಸಿಂಧೇವಾಡಿಯ ಅರಣ್ಯ ವಲಯ–1836ರಲ್ಲಿ ಹುಲಿಯನ್ನು ಸೆರೆ ಹಿಡಿಯಲಾಯಿತು. ಸದ್ಯ ತಡೋಬಾ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಪಶು ವೈದ್ಯಕೀಯ ಘಟಕದಲ್ಲಿ ತೀವ್ರ ನಿಗಾದಲ್ಲಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.</p><p>ಸೆರೆಯಾಗಿರುವುದು ಹೆಣ್ಣು ಹುಲಿಯಾಗಿದ್ದು, ಟಿ–2 ಎಂದು ಹೆಸರಿಲಾಗಿದೆ.</p><p>ತಡೋಬಾ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಸಿಂಧೇವಾಡಿ ತಾಲ್ಲೂಕಿನ ಗುಂಜೇವಾಹಿ–ಪಾಪನ್ಪುರ್ ಅರಣ್ಯ ವ್ಯಾಪ್ತಿಯಲ್ಲಿ ಈ ಭೀಕರ ಹಾಗೂ ಅತ್ಯಪರೂಪದ ಘಟನೆ ನಡೆದಿತ್ತು.</p><p>ಗುಂಜೇವಾಹಿ ಗ್ರಾಮದ ಹತ್ತು ಮಹಿಳೆಯರು ಕಟ್ಟಿಗೆ ಸಂಗ್ರಹಿಸಲು ಅರಣ್ಯಕ್ಕೆ ತೆರಳಿದ್ದರು. ಈ ವೇಳೆ ಪೊದೆಯಲ್ಲಿ ಅಡಗಿದ್ದ ಹುಲಿ ದಾಳಿ ನಡೆಸಿದ್ದರಿಂದ ನಾಲ್ವರು ಮಹಿಳೆಯರು ಮೃತಪಟ್ಟಿದ್ದರು. ಕೆಲವರು ಗಾಯಗೊಂಡಿದ್ದರು.</p><p>ಮಾನವರ ಮೇಲೆ ಹುಲಿ ದಾಳಿ ನಡೆಯುವುದು ಅಪರೂಪವಾದರೂ ಜನರ ಗುಂಪಿನ ಮೇಲೆ ದಾಳಿ ಮಾಡಿ ಒಂದೇ ಏಟಿಗೆ ಹಲವರನ್ನು ಕೊಂದಿರುವುದು ಅತ್ಯಪರೂಪದ ಘಟನೆ ಎಂದು ದೇಶದ ಹುಲಿ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದರು.</p>.ಹುಲಿ ದಾಳಿ: ರಾಜ್ಯ ಸರ್ಕಾರದ ವೈಫಲ್ಯ; ನಿಖಿಲ್ ಕುಮಾರಸ್ವಾಮಿ .ಮಹಾರಾಷ್ಟ್ರ | ಹುಲಿ ದಾಳಿ: ನಾಲ್ವರು ಮಹಿಳೆಯರ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂದ್ರಾಪುರ, ಮಹಾರಾಷ್ಟ್ರ:</strong> ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಒಂದೇ ಏಟಿಗೆ ದಾಳಿ ಮಾಡಿ ನಾಲ್ವರು ಮಹಿಳೆಯನ್ನು ಕೊಂದಿದ್ದ ನರಭಕ್ಷಕ ಹುಲಿಯನ್ನು ಅಂತೂ ಸೆರೆ ಹಿಡಿಯಲಾಗಿದೆ.</p><p>ನರಭಕ್ಷಕ ಹುಲಿ ಸೆರೆಗೆ ಕಳೆದ ಗುರುವಾರದಿಂದ ಮಹಾರಾಷ್ಟ್ರ ಅರಣ್ಯ ಇಲಾಖೆ, ವಿಶೇಷ ಹುಲಿ ರಕ್ಷಣಾ ಪಡೆ (STPF) ಸೇರಿದಂತೆ ತಜ್ಞರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದರು.</p><p>ಇಂದು ಬೆಳಿಗ್ಗೆ 11ರ ಸುಮಾರು ಸಿಂಧೇವಾಡಿಯ ಅರಣ್ಯ ವಲಯ–1836ರಲ್ಲಿ ಹುಲಿಯನ್ನು ಸೆರೆ ಹಿಡಿಯಲಾಯಿತು. ಸದ್ಯ ತಡೋಬಾ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಪಶು ವೈದ್ಯಕೀಯ ಘಟಕದಲ್ಲಿ ತೀವ್ರ ನಿಗಾದಲ್ಲಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.</p><p>ಸೆರೆಯಾಗಿರುವುದು ಹೆಣ್ಣು ಹುಲಿಯಾಗಿದ್ದು, ಟಿ–2 ಎಂದು ಹೆಸರಿಲಾಗಿದೆ.</p><p>ತಡೋಬಾ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಸಿಂಧೇವಾಡಿ ತಾಲ್ಲೂಕಿನ ಗುಂಜೇವಾಹಿ–ಪಾಪನ್ಪುರ್ ಅರಣ್ಯ ವ್ಯಾಪ್ತಿಯಲ್ಲಿ ಈ ಭೀಕರ ಹಾಗೂ ಅತ್ಯಪರೂಪದ ಘಟನೆ ನಡೆದಿತ್ತು.</p><p>ಗುಂಜೇವಾಹಿ ಗ್ರಾಮದ ಹತ್ತು ಮಹಿಳೆಯರು ಕಟ್ಟಿಗೆ ಸಂಗ್ರಹಿಸಲು ಅರಣ್ಯಕ್ಕೆ ತೆರಳಿದ್ದರು. ಈ ವೇಳೆ ಪೊದೆಯಲ್ಲಿ ಅಡಗಿದ್ದ ಹುಲಿ ದಾಳಿ ನಡೆಸಿದ್ದರಿಂದ ನಾಲ್ವರು ಮಹಿಳೆಯರು ಮೃತಪಟ್ಟಿದ್ದರು. ಕೆಲವರು ಗಾಯಗೊಂಡಿದ್ದರು.</p><p>ಮಾನವರ ಮೇಲೆ ಹುಲಿ ದಾಳಿ ನಡೆಯುವುದು ಅಪರೂಪವಾದರೂ ಜನರ ಗುಂಪಿನ ಮೇಲೆ ದಾಳಿ ಮಾಡಿ ಒಂದೇ ಏಟಿಗೆ ಹಲವರನ್ನು ಕೊಂದಿರುವುದು ಅತ್ಯಪರೂಪದ ಘಟನೆ ಎಂದು ದೇಶದ ಹುಲಿ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದರು.</p>.ಹುಲಿ ದಾಳಿ: ರಾಜ್ಯ ಸರ್ಕಾರದ ವೈಫಲ್ಯ; ನಿಖಿಲ್ ಕುಮಾರಸ್ವಾಮಿ .ಮಹಾರಾಷ್ಟ್ರ | ಹುಲಿ ದಾಳಿ: ನಾಲ್ವರು ಮಹಿಳೆಯರ ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>