<p><strong>ಭುವನೇಶ್ವರ (ಒಡಿಶಾ):</strong> ‘ಇಲ್ಲಿನ ಸರ್ಕಾರಿ ಸ್ವಾಮ್ಯದ ಎಸ್ಸಿಬಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐಸಿಯು) ಬೆಂಕಿ ಅವಘಡ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.</p><p>ದುರಂತದ ಸಂದರ್ಭದಲ್ಲಿ ರೋಗಿಗಳನ್ನು ಕಾಪಾಡುವ ವೇಳೆ 11 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಕೂಡ ಸುಟ್ಟ ಗಾಯ ಗಳಾಗಿವೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಅವರು ಹೇಳಿದ್ದಾರೆ.</p><p>‘ಶಾರ್ಟ್ ಸರ್ಕೀಟ್ನಿಂದ ಬೆಂಕಿ ಅನಾಹುತ ಸಂಭವಿಸಿರುವ ಸಾಧ್ಯತೆ ಯಿದೆ’ ಎಂದು ಅವರು ತಿಳಿಸಿದ್ದಾರೆ.</p><p>ಸೋಮವಾರ ಬೆಳಿಗ್ಗೆ 2.30ರಿಂದ 3.30ರ ನಡುವೆ ಬೆಂಕಿ ಅನಾಹುತ ಸಂಭವಿಸಿದ್ದು, ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.</p><p><strong>₹2 ಲಕ್ಷ ಪರಿಹಾರ: </strong>ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸಲ್ಲಿಸಿದ್ದು, ಮೃತಪಟ್ಟವರ ಕುಟುಂಬದ ಹತ್ತಿರದ ಸದಸ್ಯರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್ಆರ್ಎಫ್) ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.</p><p>‘ಒಡಿಶಾದ ಕಟಕ್ನ ಆಸ್ಪತ್ರೆಯಲ್ಲಿ ನಡೆದ ಅಗ್ನಿ ದುರಂತದಿಂದ ತೀವ್ರ ದುಃಖಿ ತನಾಗಿದ್ದೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತಪಟ್ಟ ಕುಟುಂಬದ ಹತ್ತಿರದ ಸದಸ್ಯರಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡಲಾಗುವುದು’ ಎಂದು ಪ್ರಧಾನಿ ಕಚೇರಿಯು ‘ಎಕ್ಸ್’ನಲ್ಲಿ ತಿಳಿಸಿದೆ.</p><p>ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಒಡಿಶಾ ಸರ್ಕಾರ ದಿಂದ ತಲಾ ₹25 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಘೋಷಿಸಿದ್ದಾರೆ.</p><p>ನಂತರ ಮುಖ್ಯಮಂತ್ರಿಗೆ ಕರೆ ಮಾಡಿದ ಪ್ರಧಾನಿ ಪರಿಸ್ಥಿತಿ ಕುರಿತಂತೆ ಮಾಹಿತಿ ಪಡೆದುಕೊಂಡರು.</p><p>‘ದುರಂತದ ಕುರಿತು ಪ್ರಧಾನಿ ಅವರು ನನ್ನ ಜೊತೆಗೆ ದೂರವಾಣಿ ಕರೆ ಮಾಡಿ ವಿಸ್ತೃತವಾಗಿ ಮಾಹಿತಿ ಪಡೆದು ಕೊಂಡರು’ ಎಂದು ಮುಖ್ಯಮಂತ್ರಿ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.</p><p>‘ದುರಂತದ ಬಳಿಕ ತುರ್ತು ಪರಿಹಾರ ಕೈಗೊಂಡ ರಾಜ್ಯ ಸರ್ಕಾರದ ಕ್ರಮಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ಗಾಯಗೊಂಡವರಿಗೆ ವಿಶೇಷ ಚಿಕಿತ್ಸೆ ಒದಗಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.</p><p>ತೀವ್ರವಾಗಿ ಅಸ್ವಸ್ಥಗೊಂಡ ರೋಗಿಗಳು ದಾಖಲಾಗಿದ್ದ ಆಸ್ಪತ್ರೆಯ ಟ್ರಾಮಾಕೇರ್, ಐಸಿಯು ಹಾಗೂ ಅದಕ್ಕೆ ತಾಗಿಕೊಂಡಿದ್ದ ಐಸಿಯು ವಾರ್ಡ್ನಲ್ಲಿ 23 ಮಂದಿ ರೋಗಿಗಳಿದ್ದರು. ಬೆಂಕಿಯ ಕೆನ್ನಾಲಗೆಯಿಂದಾಗಿ 7 ಜನ ಮೃತಪಟ್ಟಿದ್ದು, ಉಳಿದ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.</p>.<h2>ನ್ಯಾಯಾಂಗ ತನಿಖೆಗೆ ಆದೇಶ</h2><p>ಪ್ರಕರಣದ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿರುವ ಮೋಹನ್ ಚರಣ್ ಮಾಝಿ, ಘಟನೆ ಕುರಿತು ತಕ್ಷಣವೇ ವರದಿ ನೀಡುವಂತೆ ಅಗ್ನಿಶಾಮಕ ಸೇವೆಯ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.</p><p>‘ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುವಂತೆ ತಿಳಿಸಿದ್ದೇನೆ. ನ್ಯಾಯಾಂಗ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.</p><p><strong>ಅಗ್ನಿ ಅವಘಡ ತಡೆಯಲು ₹720 ಕೋಟಿ: </strong>‘ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತ ಎದುರಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಉಪಕರಣಗಳ ಅಳವಡಿಕೆಗೆ ಕಳೆದೆರಡು ವರ್ಷಗಳ ಬಜೆಟ್ನಲ್ಲಿ ₹720 ಕೋಟಿ ಅನುದಾನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.</p>.<h2>ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಸಂಭವಿಸಿದ ಪ್ರಮುಖ ಅಗ್ನಿ ದುರಂತಗಳು</h2><p>*ಎಎಂಆರ್ಐ ಆಸ್ಪತ್ರೆ, ಕೋಲ್ಕತ್ತ–ಪಶ್ಚಿಮ ಬಂಗಾಳ (ಡಿ.9, 2011)– ಏಳು ಮಹಡಿಯ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ; ವಿಷಕಾರಿ ಹೊಗೆಯಿಂದ 90 ಮಂದಿ ಸಾವು</p><p>*ಡ್ರೀಮ್ಸ್ ಮಾಲ್ ಮುಂಬೈ–ಮಹಾರಾಷ್ಟ್ರ (ಮಾ–25–26 2021): ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದ್ದ ಮಾಲ್ನಲ್ಲಿ ಬೆಂಕಿ ಅನಾಹುತ ಸಂಭವಿಸಿ 9 ಮಂದಿ ಸಾವು</p><p>*ವಿಜಯ್ ವಲ್ಲಭ್ ಆಸ್ಪತ್ರೆ, ವಿರಾರ್–ಮಹಾರಾಷ್ಟ್ರ (ಏ.23, 2021): ಆಸ್ಪತ್ರೆಯಲ್ಲಿ ಬೆಂಕಿ ಅನಾಹುತದಿಂದ 15 ಮಂದಿ ಕೋವಿಡ್ ರೋಗಿಗಳ ಸಾವು</p><p>*ಪಟೇಲ್ ವೆಲ್ಫೇರ್ ಆಸ್ಪತ್ರೆ ಭರೂಚ್–ಗುಜರಾತ್ (ಮೇ1, 2021): ಇಬ್ಬರು ಟ್ರೇನಿ ಶುಷ್ರೂಷಕಿಯರು ಸೇರಿ 16 ಕೋವಿಡ್ ಪೀಡಿತರು ಸಾವು</p><p>*ಮಹಾರಾಣಿ ಲಕ್ಷ್ಮೀ ಭಾಯಿ ವೈದ್ಯಕೀಯ ಕಾಲೇಜು, ಝಾನ್ಸಿ–ಉತ್ತರ ಪ್ರದೇಶ (ನ.15, 2024): ಶಾರ್ಟ್ ಸರ್ಕೀಟ್ನಿಂದ ನವಜಾತ ಶಿಶುಗಳ ತೀವ್ರ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿ 10 ಮಕ್ಕಳ ಸಾವು</p><p>*ಎಸ್ಎಂಎಸ್ ಆಸ್ಪತ್ರೆ ಜೈಪುರ, ರಾಜಸ್ಥಾನ (ಅ.6, 2025): ತುರ್ತು ನಿಗಾ ಘಟಕದಲ್ಲಿ ಅಗ್ನಿ ಅನಾಹುತ ಸಂಭವಿಸಿ ಆರು ಮಂದಿ ಸಾವು</p>.ಸಂಡೂರು: ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ.ಕೊಣನೂರು | ತಂಬಾಕು ಬೆಲೆ ಕುಸಿತ: ಬೆಂಕಿ ಹಚ್ಚಿ ಬೆಳೆಗಾರರ ಆಕ್ರೋಶ .ನೋಯ್ಡಾದ ವಿದ್ಯುತ್ ಮೀಟರ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ: 26 ಮಂದಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ (ಒಡಿಶಾ):</strong> ‘ಇಲ್ಲಿನ ಸರ್ಕಾರಿ ಸ್ವಾಮ್ಯದ ಎಸ್ಸಿಬಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐಸಿಯು) ಬೆಂಕಿ ಅವಘಡ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.</p><p>ದುರಂತದ ಸಂದರ್ಭದಲ್ಲಿ ರೋಗಿಗಳನ್ನು ಕಾಪಾಡುವ ವೇಳೆ 11 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಕೂಡ ಸುಟ್ಟ ಗಾಯ ಗಳಾಗಿವೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಅವರು ಹೇಳಿದ್ದಾರೆ.</p><p>‘ಶಾರ್ಟ್ ಸರ್ಕೀಟ್ನಿಂದ ಬೆಂಕಿ ಅನಾಹುತ ಸಂಭವಿಸಿರುವ ಸಾಧ್ಯತೆ ಯಿದೆ’ ಎಂದು ಅವರು ತಿಳಿಸಿದ್ದಾರೆ.</p><p>ಸೋಮವಾರ ಬೆಳಿಗ್ಗೆ 2.30ರಿಂದ 3.30ರ ನಡುವೆ ಬೆಂಕಿ ಅನಾಹುತ ಸಂಭವಿಸಿದ್ದು, ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.</p><p><strong>₹2 ಲಕ್ಷ ಪರಿಹಾರ: </strong>ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸಲ್ಲಿಸಿದ್ದು, ಮೃತಪಟ್ಟವರ ಕುಟುಂಬದ ಹತ್ತಿರದ ಸದಸ್ಯರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್ಆರ್ಎಫ್) ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.</p><p>‘ಒಡಿಶಾದ ಕಟಕ್ನ ಆಸ್ಪತ್ರೆಯಲ್ಲಿ ನಡೆದ ಅಗ್ನಿ ದುರಂತದಿಂದ ತೀವ್ರ ದುಃಖಿ ತನಾಗಿದ್ದೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತಪಟ್ಟ ಕುಟುಂಬದ ಹತ್ತಿರದ ಸದಸ್ಯರಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡಲಾಗುವುದು’ ಎಂದು ಪ್ರಧಾನಿ ಕಚೇರಿಯು ‘ಎಕ್ಸ್’ನಲ್ಲಿ ತಿಳಿಸಿದೆ.</p><p>ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಒಡಿಶಾ ಸರ್ಕಾರ ದಿಂದ ತಲಾ ₹25 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಘೋಷಿಸಿದ್ದಾರೆ.</p><p>ನಂತರ ಮುಖ್ಯಮಂತ್ರಿಗೆ ಕರೆ ಮಾಡಿದ ಪ್ರಧಾನಿ ಪರಿಸ್ಥಿತಿ ಕುರಿತಂತೆ ಮಾಹಿತಿ ಪಡೆದುಕೊಂಡರು.</p><p>‘ದುರಂತದ ಕುರಿತು ಪ್ರಧಾನಿ ಅವರು ನನ್ನ ಜೊತೆಗೆ ದೂರವಾಣಿ ಕರೆ ಮಾಡಿ ವಿಸ್ತೃತವಾಗಿ ಮಾಹಿತಿ ಪಡೆದು ಕೊಂಡರು’ ಎಂದು ಮುಖ್ಯಮಂತ್ರಿ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.</p><p>‘ದುರಂತದ ಬಳಿಕ ತುರ್ತು ಪರಿಹಾರ ಕೈಗೊಂಡ ರಾಜ್ಯ ಸರ್ಕಾರದ ಕ್ರಮಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ಗಾಯಗೊಂಡವರಿಗೆ ವಿಶೇಷ ಚಿಕಿತ್ಸೆ ಒದಗಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.</p><p>ತೀವ್ರವಾಗಿ ಅಸ್ವಸ್ಥಗೊಂಡ ರೋಗಿಗಳು ದಾಖಲಾಗಿದ್ದ ಆಸ್ಪತ್ರೆಯ ಟ್ರಾಮಾಕೇರ್, ಐಸಿಯು ಹಾಗೂ ಅದಕ್ಕೆ ತಾಗಿಕೊಂಡಿದ್ದ ಐಸಿಯು ವಾರ್ಡ್ನಲ್ಲಿ 23 ಮಂದಿ ರೋಗಿಗಳಿದ್ದರು. ಬೆಂಕಿಯ ಕೆನ್ನಾಲಗೆಯಿಂದಾಗಿ 7 ಜನ ಮೃತಪಟ್ಟಿದ್ದು, ಉಳಿದ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.</p>.<h2>ನ್ಯಾಯಾಂಗ ತನಿಖೆಗೆ ಆದೇಶ</h2><p>ಪ್ರಕರಣದ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿರುವ ಮೋಹನ್ ಚರಣ್ ಮಾಝಿ, ಘಟನೆ ಕುರಿತು ತಕ್ಷಣವೇ ವರದಿ ನೀಡುವಂತೆ ಅಗ್ನಿಶಾಮಕ ಸೇವೆಯ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.</p><p>‘ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುವಂತೆ ತಿಳಿಸಿದ್ದೇನೆ. ನ್ಯಾಯಾಂಗ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.</p><p><strong>ಅಗ್ನಿ ಅವಘಡ ತಡೆಯಲು ₹720 ಕೋಟಿ: </strong>‘ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಅಗ್ನಿ ಅನಾಹುತ ಎದುರಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಉಪಕರಣಗಳ ಅಳವಡಿಕೆಗೆ ಕಳೆದೆರಡು ವರ್ಷಗಳ ಬಜೆಟ್ನಲ್ಲಿ ₹720 ಕೋಟಿ ಅನುದಾನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.</p>.<h2>ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಸಂಭವಿಸಿದ ಪ್ರಮುಖ ಅಗ್ನಿ ದುರಂತಗಳು</h2><p>*ಎಎಂಆರ್ಐ ಆಸ್ಪತ್ರೆ, ಕೋಲ್ಕತ್ತ–ಪಶ್ಚಿಮ ಬಂಗಾಳ (ಡಿ.9, 2011)– ಏಳು ಮಹಡಿಯ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ; ವಿಷಕಾರಿ ಹೊಗೆಯಿಂದ 90 ಮಂದಿ ಸಾವು</p><p>*ಡ್ರೀಮ್ಸ್ ಮಾಲ್ ಮುಂಬೈ–ಮಹಾರಾಷ್ಟ್ರ (ಮಾ–25–26 2021): ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದ್ದ ಮಾಲ್ನಲ್ಲಿ ಬೆಂಕಿ ಅನಾಹುತ ಸಂಭವಿಸಿ 9 ಮಂದಿ ಸಾವು</p><p>*ವಿಜಯ್ ವಲ್ಲಭ್ ಆಸ್ಪತ್ರೆ, ವಿರಾರ್–ಮಹಾರಾಷ್ಟ್ರ (ಏ.23, 2021): ಆಸ್ಪತ್ರೆಯಲ್ಲಿ ಬೆಂಕಿ ಅನಾಹುತದಿಂದ 15 ಮಂದಿ ಕೋವಿಡ್ ರೋಗಿಗಳ ಸಾವು</p><p>*ಪಟೇಲ್ ವೆಲ್ಫೇರ್ ಆಸ್ಪತ್ರೆ ಭರೂಚ್–ಗುಜರಾತ್ (ಮೇ1, 2021): ಇಬ್ಬರು ಟ್ರೇನಿ ಶುಷ್ರೂಷಕಿಯರು ಸೇರಿ 16 ಕೋವಿಡ್ ಪೀಡಿತರು ಸಾವು</p><p>*ಮಹಾರಾಣಿ ಲಕ್ಷ್ಮೀ ಭಾಯಿ ವೈದ್ಯಕೀಯ ಕಾಲೇಜು, ಝಾನ್ಸಿ–ಉತ್ತರ ಪ್ರದೇಶ (ನ.15, 2024): ಶಾರ್ಟ್ ಸರ್ಕೀಟ್ನಿಂದ ನವಜಾತ ಶಿಶುಗಳ ತೀವ್ರ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿ 10 ಮಕ್ಕಳ ಸಾವು</p><p>*ಎಸ್ಎಂಎಸ್ ಆಸ್ಪತ್ರೆ ಜೈಪುರ, ರಾಜಸ್ಥಾನ (ಅ.6, 2025): ತುರ್ತು ನಿಗಾ ಘಟಕದಲ್ಲಿ ಅಗ್ನಿ ಅನಾಹುತ ಸಂಭವಿಸಿ ಆರು ಮಂದಿ ಸಾವು</p>.ಸಂಡೂರು: ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ.ಕೊಣನೂರು | ತಂಬಾಕು ಬೆಲೆ ಕುಸಿತ: ಬೆಂಕಿ ಹಚ್ಚಿ ಬೆಳೆಗಾರರ ಆಕ್ರೋಶ .ನೋಯ್ಡಾದ ವಿದ್ಯುತ್ ಮೀಟರ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ: 26 ಮಂದಿಗೆ ಗಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>