<p><strong>ಭೋಪಾಲ್(ಮಧ್ಯಪ್ರದೇಶ)</strong>: ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದಿರುವುದು ಜಲಮೂಲ ಕಲುಷಿತಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಪ್ರತಿಕ್ರಿಯೆ ಕೇಳಿದೆ.</p><p>ಮಧ್ಯಪ್ರದೇಶ ಸರ್ಕಾರದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿಯೋ ಕುಮಾರ್ ಸಿಂಗ್ ಮತ್ತು ಸದಸ್ಯ ಸುಧೀರ್ ಕುಮಾರ್ ಚತುರ್ವೇದಿ ಅವರನ್ನೊಳಗೊಂಡ ಪೀಠ, ಇಂತಹ ಧಾರ್ಮಿಕ ಆಚರಣೆಗಳು ಪ್ರಸ್ತುತ ಇರುವ ಪರಿಸರ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತವೆಯೇ? ಅಥವಾ ಹೊಸ ಮಾಲಿನ್ಯ ವಿರೋಧಿ ನಿಯಮಗಳ ಅಗತ್ಯವಿದೆಯೇ? ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.</p><p>ಭೇರುಂಡಾ ಪ್ರದೇಶದ ಸತ್ದೇವ್ ಗ್ರಾಮದಲ್ಲಿ ಏ. 8ರಂದು ನಡೆದ 21 ದಿನಗಳ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನ ಸುಮಾರು 11 ಸಾವಿರ ಲೀಟರ್ ಹಾಲನ್ನು ನದಿಗೆ ಸುರಿಯಲಾಗಿತ್ತು. ಅದರೊಂದಿಗೆ 210 ಸೀರೆಗಳನ್ನು ನದಿಗೆ ಅರ್ಪಿಸಲಾಗಿತ್ತು. ಇದರ ಬಗ್ಗೆ ದೇಶದಾದ್ಯಂತ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು.</p><p>ಈ ಆಚರಣೆಯು ನದಿಯ ಪರಿಸರ ವ್ಯವಸ್ಥೆ, ಜಲಚರಗಳು, ನೀರಾವರಿ ಮೂಲಗಳು ಮತ್ತು ಕುಡಿಯುವ ನೀರಿನ ಗುಣಮಟ್ಟದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಇದು ಜಲ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 1974 ರ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.</p><p>ನದಿಗೆ ಹಾಲನ್ನು ಸುರಿಯುವುದರಿಂದ ಉಂಟಾಗುವ ಮಾಲಿನ್ಯದ ಕುರಿತು ಯಾವುದೇ ವೈಜ್ಞಾನಿಕ ದತ್ತಾಂಶವನ್ನು ತನ್ನ ಮುಂದೆ ಇಟ್ಟಿಲ್ಲ ಎಂಬ ಅಂಶವನ್ನು ಪೀಠವು ಗಮನಿಸಿದ್ದರೂ, ಜಲ ಕಾಯ್ದೆಯ ಸೆಕ್ಷನ್ 24ರ ಪ್ರಕಾರ ನದಿಗಳು ಮತ್ತು ಬಾವಿಗಳಿಗೆ ಕಲುಷಿತ ವಸ್ತುಗಳನ್ನು ಬಿಡುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ಅದು ಉಲ್ಲೇಖಿಸಿದೆ.</p><p>ಸಾವಯವ ಪದಾರ್ಥಗಳು ಜೈವಿಕ ಆಮ್ಲಜನಕದ ಬೇಡಿಕೆಯನ್ನು(ಬಿಒಡಿ) ಹೆಚ್ಚಿಸಬಹುದು, ಇದು ಜಲಚರಗಳ ಜೀವನದ ಮೇಲೆ ಸಂಭಾವ್ಯ ಪರಿಣಾಮ ಬೀರಬಹುದು ಎಂದು ಹೇಳಿದೆ.</p><p>ಧಾರ್ಮಿಕ ಆಚರಣೆಗಳ ಸಮಯದಲ್ಲಿ ನದಿಗೆ ಹಾಲನ್ನು ಸುರಿಯುವುದು ಪರಿಸರ ಮತ್ತು ಸಾರ್ವಜನಿಕ ಕಳವಳದ ವಿಷಯವಾಗಿದ್ದು, ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಇದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.</p><p>ಪ್ರಕರಣದ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೋಪಾಲ್(ಮಧ್ಯಪ್ರದೇಶ)</strong>: ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದಿರುವುದು ಜಲಮೂಲ ಕಲುಷಿತಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಪ್ರತಿಕ್ರಿಯೆ ಕೇಳಿದೆ.</p><p>ಮಧ್ಯಪ್ರದೇಶ ಸರ್ಕಾರದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿಯೋ ಕುಮಾರ್ ಸಿಂಗ್ ಮತ್ತು ಸದಸ್ಯ ಸುಧೀರ್ ಕುಮಾರ್ ಚತುರ್ವೇದಿ ಅವರನ್ನೊಳಗೊಂಡ ಪೀಠ, ಇಂತಹ ಧಾರ್ಮಿಕ ಆಚರಣೆಗಳು ಪ್ರಸ್ತುತ ಇರುವ ಪರಿಸರ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತವೆಯೇ? ಅಥವಾ ಹೊಸ ಮಾಲಿನ್ಯ ವಿರೋಧಿ ನಿಯಮಗಳ ಅಗತ್ಯವಿದೆಯೇ? ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.</p><p>ಭೇರುಂಡಾ ಪ್ರದೇಶದ ಸತ್ದೇವ್ ಗ್ರಾಮದಲ್ಲಿ ಏ. 8ರಂದು ನಡೆದ 21 ದಿನಗಳ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನ ಸುಮಾರು 11 ಸಾವಿರ ಲೀಟರ್ ಹಾಲನ್ನು ನದಿಗೆ ಸುರಿಯಲಾಗಿತ್ತು. ಅದರೊಂದಿಗೆ 210 ಸೀರೆಗಳನ್ನು ನದಿಗೆ ಅರ್ಪಿಸಲಾಗಿತ್ತು. ಇದರ ಬಗ್ಗೆ ದೇಶದಾದ್ಯಂತ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು.</p><p>ಈ ಆಚರಣೆಯು ನದಿಯ ಪರಿಸರ ವ್ಯವಸ್ಥೆ, ಜಲಚರಗಳು, ನೀರಾವರಿ ಮೂಲಗಳು ಮತ್ತು ಕುಡಿಯುವ ನೀರಿನ ಗುಣಮಟ್ಟದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಇದು ಜಲ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 1974 ರ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.</p><p>ನದಿಗೆ ಹಾಲನ್ನು ಸುರಿಯುವುದರಿಂದ ಉಂಟಾಗುವ ಮಾಲಿನ್ಯದ ಕುರಿತು ಯಾವುದೇ ವೈಜ್ಞಾನಿಕ ದತ್ತಾಂಶವನ್ನು ತನ್ನ ಮುಂದೆ ಇಟ್ಟಿಲ್ಲ ಎಂಬ ಅಂಶವನ್ನು ಪೀಠವು ಗಮನಿಸಿದ್ದರೂ, ಜಲ ಕಾಯ್ದೆಯ ಸೆಕ್ಷನ್ 24ರ ಪ್ರಕಾರ ನದಿಗಳು ಮತ್ತು ಬಾವಿಗಳಿಗೆ ಕಲುಷಿತ ವಸ್ತುಗಳನ್ನು ಬಿಡುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ಅದು ಉಲ್ಲೇಖಿಸಿದೆ.</p><p>ಸಾವಯವ ಪದಾರ್ಥಗಳು ಜೈವಿಕ ಆಮ್ಲಜನಕದ ಬೇಡಿಕೆಯನ್ನು(ಬಿಒಡಿ) ಹೆಚ್ಚಿಸಬಹುದು, ಇದು ಜಲಚರಗಳ ಜೀವನದ ಮೇಲೆ ಸಂಭಾವ್ಯ ಪರಿಣಾಮ ಬೀರಬಹುದು ಎಂದು ಹೇಳಿದೆ.</p><p>ಧಾರ್ಮಿಕ ಆಚರಣೆಗಳ ಸಮಯದಲ್ಲಿ ನದಿಗೆ ಹಾಲನ್ನು ಸುರಿಯುವುದು ಪರಿಸರ ಮತ್ತು ಸಾರ್ವಜನಿಕ ಕಳವಳದ ವಿಷಯವಾಗಿದ್ದು, ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಇದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.</p><p>ಪ್ರಕರಣದ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>