<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದ ‘ಜಾಲ್ಮುರಿ’ ಅಂಗಡಿಯ ಮಾಲೀಕನಿಗೆ ಜೀವ ಬೆದರಿಕೆ ಬಂದಿರುವ ಕಾರಣ ಶನಿವಾರ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಏಪ್ರಿಲ್ 19ರಂದು ಜಾರ್ಗ್ರಾಮ ಪಟ್ಟಣದ ರಾಜ್ ಕಾಲೇಜ್ ವೃತ್ತದ ಬಳಿ ಬಿಕ್ರಮ್ ಕುಮಾರ್ ಸೌ ಅವರು ನಡೆಸುತ್ತಿದ್ದ ಅಂಗಡಿಯಲ್ಲಿ ಪ್ರಧಾನಿ ಮೋದಿ ಜಾಲ್ಮುರಿ ತಿಂದಿದ್ದರು.</p>.<p>‘ಮೇ 17ರಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರೆಂದು ಹೇಳಿಕೊಂಡು ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಕರೆ ಮಾಡಿದವರು ನನ್ನನ್ನು ಕೊಲೆ ಮಾಡುವುದಾಗಿಯೂ, ಅಂಗಡಿಯನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿಯೂ ಬೆದರಿಸುತ್ತಿದ್ದಾರೆ’ ಎಂದು ಜಾರ್ಗ್ರಾಮ ಪೊಲೀಸ್ ಠಾಣೆಗೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ ಬಿಕ್ರಮ್ ಅವರು ಹೇಳಿದ್ದಾರೆ.</p>.<p>ಅಲ್ಲದೆ, ಕೆಲವರು ವಾಟ್ಸ್ಆ್ಯಪ್ ವಿಡಿಯೊ ಕಾಲ್ಗಳಲ್ಲಿ ಬಂದೂಕುಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಪದೇ ಪದೇ ಬೆದರಿಕೆ ಕರೆಗಳು ಬಂದ ನಂತರ ನಾನು ಮತ್ತು ನನ್ನ ಕುಟುಂಬಸ್ಥರು ಭಯಭೀತರಾಗಿದ್ದೇವೆ. ಅಲ್ಲದೆ, ಈ ಭಯದಿಂದ ಕೆಲವು ದಿನ ಅಂಗಡಿಯನ್ನೂ ಮುಚ್ಚಿದ್ದೆ’ ಎಂದು ಅವರು ಹೇಳಿದ್ದಾರೆ.</p>.<p>ಈ ಬಗ್ಗೆ ದೂರು ದಾಖಲಾಗಿದ್ದು, ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆದರಿಕೆ ಕರೆ ಮತ್ತು ಸಂದೇಶಗಳ ಮೂಲವನ್ನು ಪತ್ತೆಹಚ್ಚಲು ಸೈಬರ್ ತಜ್ಞರು ಸಹಾಯ ಮಾಡುತ್ತಿದ್ದಾರೆ ಅವರು ಹೇಳಿದ್ದಾರೆ.</p>.<p>ಬೆದರಿಕೆ ಕಾರಣದಿಂದ ಅಧಿಕಾರಿಗಳು ಬಿಕ್ರಮ್ ಅವರ ಅಂಗಡಿಯ ಹೊರಗೆ ನಾಲ್ವರು ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಮತ್ತು ಆ ಪ್ರದೇಶದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದ ‘ಜಾಲ್ಮುರಿ’ ಅಂಗಡಿಯ ಮಾಲೀಕನಿಗೆ ಜೀವ ಬೆದರಿಕೆ ಬಂದಿರುವ ಕಾರಣ ಶನಿವಾರ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಏಪ್ರಿಲ್ 19ರಂದು ಜಾರ್ಗ್ರಾಮ ಪಟ್ಟಣದ ರಾಜ್ ಕಾಲೇಜ್ ವೃತ್ತದ ಬಳಿ ಬಿಕ್ರಮ್ ಕುಮಾರ್ ಸೌ ಅವರು ನಡೆಸುತ್ತಿದ್ದ ಅಂಗಡಿಯಲ್ಲಿ ಪ್ರಧಾನಿ ಮೋದಿ ಜಾಲ್ಮುರಿ ತಿಂದಿದ್ದರು.</p>.<p>‘ಮೇ 17ರಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರೆಂದು ಹೇಳಿಕೊಂಡು ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಕರೆ ಮಾಡಿದವರು ನನ್ನನ್ನು ಕೊಲೆ ಮಾಡುವುದಾಗಿಯೂ, ಅಂಗಡಿಯನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿಯೂ ಬೆದರಿಸುತ್ತಿದ್ದಾರೆ’ ಎಂದು ಜಾರ್ಗ್ರಾಮ ಪೊಲೀಸ್ ಠಾಣೆಗೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ ಬಿಕ್ರಮ್ ಅವರು ಹೇಳಿದ್ದಾರೆ.</p>.<p>ಅಲ್ಲದೆ, ಕೆಲವರು ವಾಟ್ಸ್ಆ್ಯಪ್ ವಿಡಿಯೊ ಕಾಲ್ಗಳಲ್ಲಿ ಬಂದೂಕುಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಪದೇ ಪದೇ ಬೆದರಿಕೆ ಕರೆಗಳು ಬಂದ ನಂತರ ನಾನು ಮತ್ತು ನನ್ನ ಕುಟುಂಬಸ್ಥರು ಭಯಭೀತರಾಗಿದ್ದೇವೆ. ಅಲ್ಲದೆ, ಈ ಭಯದಿಂದ ಕೆಲವು ದಿನ ಅಂಗಡಿಯನ್ನೂ ಮುಚ್ಚಿದ್ದೆ’ ಎಂದು ಅವರು ಹೇಳಿದ್ದಾರೆ.</p>.<p>ಈ ಬಗ್ಗೆ ದೂರು ದಾಖಲಾಗಿದ್ದು, ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆದರಿಕೆ ಕರೆ ಮತ್ತು ಸಂದೇಶಗಳ ಮೂಲವನ್ನು ಪತ್ತೆಹಚ್ಚಲು ಸೈಬರ್ ತಜ್ಞರು ಸಹಾಯ ಮಾಡುತ್ತಿದ್ದಾರೆ ಅವರು ಹೇಳಿದ್ದಾರೆ.</p>.<p>ಬೆದರಿಕೆ ಕಾರಣದಿಂದ ಅಧಿಕಾರಿಗಳು ಬಿಕ್ರಮ್ ಅವರ ಅಂಗಡಿಯ ಹೊರಗೆ ನಾಲ್ವರು ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಮತ್ತು ಆ ಪ್ರದೇಶದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>