<p><strong>ನಾಗ್ಪುರ</strong>: ಜಗತ್ತಿನಲ್ಲಿ ಘರ್ಷಣೆ ಮತ್ತು ಬಿಕ್ಕಟ್ಟುಗಳಿಗೆ ಸ್ವಾರ್ಥ ಹಿತಾಸಕ್ತಿಗಳು, ಪ್ರಾಬಲ್ಯದ ಬಯಕೆಯೇ ಮೂಲ ಕಾರಣ ಎಂದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.</p><p>ಏಕತೆ, ಶಿಸ್ತು ಮತ್ತು ಧರ್ಮದ ಅನುಸರಣೆಯಿಂದ ಶಾಂತಿ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.</p><p>ನಾಗ್ಪುರದಲ್ಲಿ ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ವಿದರ್ಭ ಪ್ರಾಂತ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸಭೆಯಲ್ಲಿ ಮಾತನಾಡಿದರು. </p><p>ಸುಮಾರು 2,000 ವರ್ಷಗಳಿಂದಲೂ ಜಗತ್ತು ಸಂಘರ್ಷಗಳನ್ನು ತಡೆಯಲು, ಪರಿಹರಿಸಲು ವಿವಿಧ ವಿಚಾರಗಳನ್ನು ಪ್ರಯೋಗಿಸಿದೆ. ಆದರೆ ಯಶಸ್ಸು ಕಂಡಿರುವುದು ಅಲ್ಪ ಮಾತ್ರ ಎಂದು ಅವರು ಬೇಸರ ವ್ಯಕ್ತಪಡಿಸಿದರು. </p> .‘ಧುರಂಧರ್’ನಿಂದ ನಾನು ತುಂಬಾ ದೂರ ಇದ್ದೇನೆ: ಬಹುಭಾಷಾ ನಟ ಪ್ರಕಾಶ್ ರಾಜ್.ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ಶೇಕ್ ಇಟ್ ಪುಷ್ಪವತಿ’ ನಿಮಿಕಾ ರತ್ನಾಕರ್ .<p>ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರ, ಶ್ರೇಷ್ಠತೆ ಮತ್ತು ಕೀಳರಿಮೆಯ ವಿಚಾರಗಳು ಇನ್ನೂ ಅಸ್ತಿತ್ವದಲ್ಲಿವೆ ಎಂದ ಅವರು, ಸಂಘರ್ಷ ಬಿಟ್ಟು ಸಾಮರಸ್ಯ ಮತ್ತು ಸಹಕಾರದಿಂದ ಮುನ್ನಡೆಯುವಂತೆ ಕರೆ ನೀಡಿದರು. </p><p>‘ಭಾರತವು ಮಾನವೀಯತೆಯನ್ನು ನಂಬುತ್ತದೆ. ಆದರೆ ಇತರರು ಶ್ರೇಷ್ಠತೆಯ ಅಸ್ತಿತ್ವ ಮತ್ತು ಉಳಿವಿಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಜಗತ್ತಿಗೆ ಬೇಕಿರುವುದು ಸಾಮರಸ್ಯವೇ ಹೊರತು ಸಂಘರ್ಷವಲ್ಲ’ ಎಂದು ಅವರು ಪುನರುಚ್ಚರಿಸಿದರು.</p><p>ಬಿಕ್ಕಟ್ಟು, ಸಂಘರ್ಷಗಳ ಮೂಲಕ ಎಡವಿ ಬೀಳುತ್ತಿರುವ ಜಗತ್ತಿನಲ್ಲಿ ಸಮತೋಲನ ಸ್ಥಾಪಿಸುವುದು ಭಾರತದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. </p>.ಖತೀಬ್, ಲಾರಿಜಾನಿ ಹತ್ಯೆ: ಇರಾನ್ನ ಈ 4 ಪ್ರಭಾವಿ ನಾಯಕರೇ ಅಮೆರಿಕದ ಮುಂದಿನ ಗುರಿ.ಟೆಕ್ ಥೆರಪಿ: ನಮ್ಮನ್ನೇ ‘ಉತ್ಪನ್ನ’ವಾಗಿಸುವ ಟೆಕ್ ದೈತ್ಯರ ಅಸಲಿಯತ್ತು ಗೊತ್ತೇ?.ವಿಶ್ವ ಬಾಯಿ ಆರೋಗ್ಯ ದಿನ: ನಿಮ್ಮ ದಂತವನ್ನು ಕಾಪಾಡಿಕೊಳ್ಳಲು ಸಲಹೆಗಳು ಇಲ್ಲಿವೆ.ಮಹಾಯುದ್ಧದ ಸ್ಮಾರಕದೆದುರು ನೃತ್ಯ ಮಾಡಿದ ಭಾರತ ಮೂಲದ ಟೆಕ್ಕಿಯ ಗಡೀಪಾರಿಗೆ ಆಗ್ರಹ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ</strong>: ಜಗತ್ತಿನಲ್ಲಿ ಘರ್ಷಣೆ ಮತ್ತು ಬಿಕ್ಕಟ್ಟುಗಳಿಗೆ ಸ್ವಾರ್ಥ ಹಿತಾಸಕ್ತಿಗಳು, ಪ್ರಾಬಲ್ಯದ ಬಯಕೆಯೇ ಮೂಲ ಕಾರಣ ಎಂದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.</p><p>ಏಕತೆ, ಶಿಸ್ತು ಮತ್ತು ಧರ್ಮದ ಅನುಸರಣೆಯಿಂದ ಶಾಂತಿ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.</p><p>ನಾಗ್ಪುರದಲ್ಲಿ ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ವಿದರ್ಭ ಪ್ರಾಂತ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸಭೆಯಲ್ಲಿ ಮಾತನಾಡಿದರು. </p><p>ಸುಮಾರು 2,000 ವರ್ಷಗಳಿಂದಲೂ ಜಗತ್ತು ಸಂಘರ್ಷಗಳನ್ನು ತಡೆಯಲು, ಪರಿಹರಿಸಲು ವಿವಿಧ ವಿಚಾರಗಳನ್ನು ಪ್ರಯೋಗಿಸಿದೆ. ಆದರೆ ಯಶಸ್ಸು ಕಂಡಿರುವುದು ಅಲ್ಪ ಮಾತ್ರ ಎಂದು ಅವರು ಬೇಸರ ವ್ಯಕ್ತಪಡಿಸಿದರು. </p> .‘ಧುರಂಧರ್’ನಿಂದ ನಾನು ತುಂಬಾ ದೂರ ಇದ್ದೇನೆ: ಬಹುಭಾಷಾ ನಟ ಪ್ರಕಾಶ್ ರಾಜ್.ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ಶೇಕ್ ಇಟ್ ಪುಷ್ಪವತಿ’ ನಿಮಿಕಾ ರತ್ನಾಕರ್ .<p>ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರ, ಶ್ರೇಷ್ಠತೆ ಮತ್ತು ಕೀಳರಿಮೆಯ ವಿಚಾರಗಳು ಇನ್ನೂ ಅಸ್ತಿತ್ವದಲ್ಲಿವೆ ಎಂದ ಅವರು, ಸಂಘರ್ಷ ಬಿಟ್ಟು ಸಾಮರಸ್ಯ ಮತ್ತು ಸಹಕಾರದಿಂದ ಮುನ್ನಡೆಯುವಂತೆ ಕರೆ ನೀಡಿದರು. </p><p>‘ಭಾರತವು ಮಾನವೀಯತೆಯನ್ನು ನಂಬುತ್ತದೆ. ಆದರೆ ಇತರರು ಶ್ರೇಷ್ಠತೆಯ ಅಸ್ತಿತ್ವ ಮತ್ತು ಉಳಿವಿಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಜಗತ್ತಿಗೆ ಬೇಕಿರುವುದು ಸಾಮರಸ್ಯವೇ ಹೊರತು ಸಂಘರ್ಷವಲ್ಲ’ ಎಂದು ಅವರು ಪುನರುಚ್ಚರಿಸಿದರು.</p><p>ಬಿಕ್ಕಟ್ಟು, ಸಂಘರ್ಷಗಳ ಮೂಲಕ ಎಡವಿ ಬೀಳುತ್ತಿರುವ ಜಗತ್ತಿನಲ್ಲಿ ಸಮತೋಲನ ಸ್ಥಾಪಿಸುವುದು ಭಾರತದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. </p>.ಖತೀಬ್, ಲಾರಿಜಾನಿ ಹತ್ಯೆ: ಇರಾನ್ನ ಈ 4 ಪ್ರಭಾವಿ ನಾಯಕರೇ ಅಮೆರಿಕದ ಮುಂದಿನ ಗುರಿ.ಟೆಕ್ ಥೆರಪಿ: ನಮ್ಮನ್ನೇ ‘ಉತ್ಪನ್ನ’ವಾಗಿಸುವ ಟೆಕ್ ದೈತ್ಯರ ಅಸಲಿಯತ್ತು ಗೊತ್ತೇ?.ವಿಶ್ವ ಬಾಯಿ ಆರೋಗ್ಯ ದಿನ: ನಿಮ್ಮ ದಂತವನ್ನು ಕಾಪಾಡಿಕೊಳ್ಳಲು ಸಲಹೆಗಳು ಇಲ್ಲಿವೆ.ಮಹಾಯುದ್ಧದ ಸ್ಮಾರಕದೆದುರು ನೃತ್ಯ ಮಾಡಿದ ಭಾರತ ಮೂಲದ ಟೆಕ್ಕಿಯ ಗಡೀಪಾರಿಗೆ ಆಗ್ರಹ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>