<p><strong>ಮಲಪ್ಪುರಂ:</strong> ಚಹಾ ಕೊಡುವ ವಿಚಾರಕ್ಕೆ ಜಗಳ ನಡೆದು ಅತ್ತೆಯೊಬ್ಬರು ಸೊಸೆಯನ್ನು ಕೊಲೆ ಮಾಡಿರುವ ಪ್ರಕರಣದ ಕೇರಳದ ನಿಲಂಬೂರು ಬಳಿಯ ಕೂಟ್ಟಂಪಾರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.</p><p>ಸುನಿಲ್ ಬಾಬು ಎಂಬವರ ಪತ್ನಿ ರಜೀಲಾ (28) ಮೃತ ಮಹಿಳೆ.</p><p>ಶಾಂತಾ (70) ಚಹಾ ಕೊಡುವ ವಿಚಾರದಲ್ಲಿ ತನ್ನ ಸೊಸೆ ರಜೀಲಾ ಜತೆ ಗಲಾಟೆ ಮಾಡಿದ್ದಾರೆ. ಈ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಶಾಂತಾ ಅವರು ರಜೀಲಾಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. </p><p>ಸಂತ್ರಸ್ತೆ ತೀವ್ರವಾಗಿ ಗಾಯಗೊಂಡಿದ್ದರು. ಹಲ್ಲೆ ಮಾಡುವಾಗ ರಜೀಲಾಳ ಮಕ್ಕಳು ತಡೆಯಲು ಪ್ರಯತ್ನಿಸಿದಾದರೂ ವಿಫಲರಾದರು. </p>.ಬಾಲ್ಯ ವಿವಾಹ ನಿರ್ಮೂಲನೆಗೆ ಸಮಾಜ ಸನ್ನದ್ಧವಾಗಲಿ: ಹೈಕೋರ್ಟ್.ಮಾತೃತ್ವ ರಜೆ ನಂತರ ಮರಳುವ ಶಿಕ್ಷಕಿಗೆ ಇಚ್ಚಿಸಿದ ಶಾಲೆಯಲ್ಲೇ 5 ವರ್ಷ ಕೆಲಸ: ಸಚಿವ. <p>ಮಕ್ಕಳು ಚೀರಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ, ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p><p>ಘಟನೆ ನಡೆದಾಗ ರಜೀಲಾ ಅವರ ಪತಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.</p><p>ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.ಎಲ್ಪಿಜಿ ಗ್ರಾಹಕರಿಗೆ ಬಯೊಮೆಟ್ರಿಕ್ ದೃಢೀಕರಣ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ.ಕೊಂಕಣಿ ಸಾಹಿತಿ ಎಚ್.ಎಂ.ಪೆರ್ನಾಲ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲಪ್ಪುರಂ:</strong> ಚಹಾ ಕೊಡುವ ವಿಚಾರಕ್ಕೆ ಜಗಳ ನಡೆದು ಅತ್ತೆಯೊಬ್ಬರು ಸೊಸೆಯನ್ನು ಕೊಲೆ ಮಾಡಿರುವ ಪ್ರಕರಣದ ಕೇರಳದ ನಿಲಂಬೂರು ಬಳಿಯ ಕೂಟ್ಟಂಪಾರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.</p><p>ಸುನಿಲ್ ಬಾಬು ಎಂಬವರ ಪತ್ನಿ ರಜೀಲಾ (28) ಮೃತ ಮಹಿಳೆ.</p><p>ಶಾಂತಾ (70) ಚಹಾ ಕೊಡುವ ವಿಚಾರದಲ್ಲಿ ತನ್ನ ಸೊಸೆ ರಜೀಲಾ ಜತೆ ಗಲಾಟೆ ಮಾಡಿದ್ದಾರೆ. ಈ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಶಾಂತಾ ಅವರು ರಜೀಲಾಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. </p><p>ಸಂತ್ರಸ್ತೆ ತೀವ್ರವಾಗಿ ಗಾಯಗೊಂಡಿದ್ದರು. ಹಲ್ಲೆ ಮಾಡುವಾಗ ರಜೀಲಾಳ ಮಕ್ಕಳು ತಡೆಯಲು ಪ್ರಯತ್ನಿಸಿದಾದರೂ ವಿಫಲರಾದರು. </p>.ಬಾಲ್ಯ ವಿವಾಹ ನಿರ್ಮೂಲನೆಗೆ ಸಮಾಜ ಸನ್ನದ್ಧವಾಗಲಿ: ಹೈಕೋರ್ಟ್.ಮಾತೃತ್ವ ರಜೆ ನಂತರ ಮರಳುವ ಶಿಕ್ಷಕಿಗೆ ಇಚ್ಚಿಸಿದ ಶಾಲೆಯಲ್ಲೇ 5 ವರ್ಷ ಕೆಲಸ: ಸಚಿವ. <p>ಮಕ್ಕಳು ಚೀರಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ, ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p><p>ಘಟನೆ ನಡೆದಾಗ ರಜೀಲಾ ಅವರ ಪತಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.</p><p>ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.ಎಲ್ಪಿಜಿ ಗ್ರಾಹಕರಿಗೆ ಬಯೊಮೆಟ್ರಿಕ್ ದೃಢೀಕರಣ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ.ಕೊಂಕಣಿ ಸಾಹಿತಿ ಎಚ್.ಎಂ.ಪೆರ್ನಾಲ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>