<p><strong>ಸೆರೈಕೆಲಾ:</strong> ಜಾರ್ಖಂಡ್ನ ಸೆರೈಕೆಲಾ–ಖಾರ್ಸವನ್ನಲ್ಲಿ ಚಲಿಸುತ್ತಿರುವ ರೈಲಿನಿಂದ ಮಗುವನ್ನು ಎಸೆದು ಕೊಲೆ ಮಾಡಿದ ತಾಯಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಜಾರ್ಖಂಡ್: ನಕ್ಸಲರೊಂದಿಗೆ ಗುಂಡಿನ ಚಕಮಕಿ.<p>ಖರ್ಸಾವನ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಖರ್ಸಾವನ್ ಮತ್ತು ಮಹಾಲಿಮರುಪ್ ನಿಲ್ದಾಣಗಳ ನಡುವೆ ಬುಧವಾರ ರಾತ್ರಿ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲು ಚಲಿಸುತ್ತಿರುವಾಗಲೇ ಒಂದೂವರೆ ತಿಂಗಳ ಮಗುವನ್ನು ಎಸೆಯಲಾಗಿದೆ.</p><p>ಮಗುವಿನ ಮೃತದೇಹ ರೈಲು ಹಳಿಗಳ ಸಮೀಪ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.</p><p>ಹೌರಾ–ಬಾರ್ಬಿಲ್ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಇದು ನಡೆದಿದೆ. ಮೂರನೇ ವರ್ಷದ ಮತ್ತೊಂದು ಮಗುವನ್ನು ಎಸೆಯಲು ಪ್ರಯತ್ನಿಸಿದಾಗ ಸಹಪ್ರಯಾಣಿಕರು ಆಕೆಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಖರ್ಸಾವನ್ ಪೊಲೀಸ್ ಠಾಣೆಯ ಅಧಿಕಾರಿ ಗೌರವ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.</p>.ಜಾರ್ಖಂಡ್: ₹5 ಲಕ್ಷ ಇನಾಮು ಘೋಷಣೆಯಾಗಿದ್ದ ಇಬ್ಬರು ನಕ್ಸಲರ ಶರಣಾಗತಿ.<p>ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಮಜ್ಗಾಂವ್ ಮುದ್ರಾವತಿ ಗೋಪಿ ಆರೋಪಿ. ಸಹಪ್ರಯಾಣಿಕರು ಅವರನ್ನು ರೈಲ್ವೆ ರಕ್ಷಣಾ ದಳಕ್ಕೆ ಒಪ್ಪಿಸಿದ್ದಾರೆ.</p><p>ಆರೋಪಿ ಮಹಿಳೆಯು 4 ವರ್ಷದ ಹಿಂದೆ ಪಶ್ಚಿಮ ಬಂಗಾಳದ ಮೊಹಮ್ಮದ್ ಸಹಾಬುದ್ದೀನ್ ಎಂಬುವವರೊಂದಿಗೆ ಪರಾರಿಯಾಗಿದ್ದರು. ಸಹಜೀವನ ನಡೆಸುತ್ತಿದ್ದ ಅವರು ಬಳಿಕ ವಿವಾಹವಾಗಿದ್ದರು. ತನ್ನ ತವರಿಗೆ ಹಿಂದಿರುಗಬೇಕು ಎಂದು ಪತಿ ಒತ್ತಾಯ ಮಾಡುತ್ತಿದ್ದರಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದರು. ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.ದೆಹಲಿ ಪೊಲೀಸರು, ಜಾರ್ಖಂಡ್ ATS ಜಂಟಿ ಕಾರ್ಯಾಚರಣೆ: ಇಬ್ಬರು ಐಸಿಸ್ ಉಗ್ರರ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೆರೈಕೆಲಾ:</strong> ಜಾರ್ಖಂಡ್ನ ಸೆರೈಕೆಲಾ–ಖಾರ್ಸವನ್ನಲ್ಲಿ ಚಲಿಸುತ್ತಿರುವ ರೈಲಿನಿಂದ ಮಗುವನ್ನು ಎಸೆದು ಕೊಲೆ ಮಾಡಿದ ತಾಯಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಜಾರ್ಖಂಡ್: ನಕ್ಸಲರೊಂದಿಗೆ ಗುಂಡಿನ ಚಕಮಕಿ.<p>ಖರ್ಸಾವನ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಖರ್ಸಾವನ್ ಮತ್ತು ಮಹಾಲಿಮರುಪ್ ನಿಲ್ದಾಣಗಳ ನಡುವೆ ಬುಧವಾರ ರಾತ್ರಿ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲು ಚಲಿಸುತ್ತಿರುವಾಗಲೇ ಒಂದೂವರೆ ತಿಂಗಳ ಮಗುವನ್ನು ಎಸೆಯಲಾಗಿದೆ.</p><p>ಮಗುವಿನ ಮೃತದೇಹ ರೈಲು ಹಳಿಗಳ ಸಮೀಪ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.</p><p>ಹೌರಾ–ಬಾರ್ಬಿಲ್ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಇದು ನಡೆದಿದೆ. ಮೂರನೇ ವರ್ಷದ ಮತ್ತೊಂದು ಮಗುವನ್ನು ಎಸೆಯಲು ಪ್ರಯತ್ನಿಸಿದಾಗ ಸಹಪ್ರಯಾಣಿಕರು ಆಕೆಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಖರ್ಸಾವನ್ ಪೊಲೀಸ್ ಠಾಣೆಯ ಅಧಿಕಾರಿ ಗೌರವ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.</p>.ಜಾರ್ಖಂಡ್: ₹5 ಲಕ್ಷ ಇನಾಮು ಘೋಷಣೆಯಾಗಿದ್ದ ಇಬ್ಬರು ನಕ್ಸಲರ ಶರಣಾಗತಿ.<p>ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಮಜ್ಗಾಂವ್ ಮುದ್ರಾವತಿ ಗೋಪಿ ಆರೋಪಿ. ಸಹಪ್ರಯಾಣಿಕರು ಅವರನ್ನು ರೈಲ್ವೆ ರಕ್ಷಣಾ ದಳಕ್ಕೆ ಒಪ್ಪಿಸಿದ್ದಾರೆ.</p><p>ಆರೋಪಿ ಮಹಿಳೆಯು 4 ವರ್ಷದ ಹಿಂದೆ ಪಶ್ಚಿಮ ಬಂಗಾಳದ ಮೊಹಮ್ಮದ್ ಸಹಾಬುದ್ದೀನ್ ಎಂಬುವವರೊಂದಿಗೆ ಪರಾರಿಯಾಗಿದ್ದರು. ಸಹಜೀವನ ನಡೆಸುತ್ತಿದ್ದ ಅವರು ಬಳಿಕ ವಿವಾಹವಾಗಿದ್ದರು. ತನ್ನ ತವರಿಗೆ ಹಿಂದಿರುಗಬೇಕು ಎಂದು ಪತಿ ಒತ್ತಾಯ ಮಾಡುತ್ತಿದ್ದರಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದರು. ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.ದೆಹಲಿ ಪೊಲೀಸರು, ಜಾರ್ಖಂಡ್ ATS ಜಂಟಿ ಕಾರ್ಯಾಚರಣೆ: ಇಬ್ಬರು ಐಸಿಸ್ ಉಗ್ರರ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>