<p><strong>ಇಂದೋರ್</strong>: ವಿದೇಶಿ ನ್ಯಾಯಾಲಯದ ಆದೇಶದಂತೆ ಮಗಳನ್ನು ತನ್ನ ವಶಕ್ಕೆ ನೀಡಬೇಕೆಂದು ಕೋರಿದ್ದ ತಂದೆಗೆ ರಾಮಾಯಣದ ಲವ–ಕುಶರ ಕಥೆ ಹೇಳಿದ ನ್ಯಾಯಾಲಯ, ಮಗಳನ್ನು ಅವರ ಸುಪರ್ದಿಗೆ ನೀಡಲು ನಿರಾಕರಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ನಲ್ಲಿ ನಡೆದಿದೆ.</p><p>ವಿದೇಶಿ ನ್ಯಾಯಾಲಯದ ಆದೇಶವಲ್ಲ, ಮಗುವಿನ ಕಲ್ಯಾಣವೇ ಮುಖ್ಯ ಎಂದು ಹೇಳಿದ ಹೈಕೋರ್ಟ್ ನ್ಯಾಯಮೂರ್ತಿಗಳು, ಲವ–ಕುಶರು ಸೀತೆ ಜೊತೆ ಬೆಳೆದಂತೆ ಮಕ್ಕಳು ತಾಯಿ ಜೊತೆ ಇರುವುದೇ ಕ್ಷೇಮ ಎಂದು ಹೇಳಿದ್ದಾರೆ.</p><p>ಈ ಸಂಬಂಧ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿದ ಇಂದೋರ್ ಪೀಠದ ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಬಿನೋದ್ ಕುಮಾರ್ ದ್ವಿವೇದಿ ಅವರು, ಮಾತೆ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ದೊಡ್ಡದು ಎಂಬ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದ್ದಾರೆ.</p><p>ಕೆನಡಾದ ಒಂಟಾರಿಯೊದ ಸುಪೀರಿಯರ್ ಕೋರ್ಟ್ ಆಫ್ ಜಸ್ಟೀಸ್ನ ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಮಗಳನ್ನು ತನ್ನ ಸುಪರ್ದಿಗೆ ಒಪ್ಪಿಸಿ, ಕೆನಡಾಕ್ಕೆ ಕರೆದೊಯ್ಯಲು ಅನುಮತಿ ನಿಡಬೇಕೆಂದು ತಂದೆ ಕೋರಿದ್ದರು.</p><p>ಮಗಳ ಸುಪರ್ದಿ ಸಂಬಂಧ ಆದೇಶ ಹೊರಡಿಸಿರುವ ನ್ಯಾಯಾಲಯ, ಇಂತಹ ಪ್ರಕರಣಗಳಲ್ಲಿ ಮಗುವಿನ ಹಿತಾಸಕ್ತಿ ಮತ್ತು ಕ್ಷೇಮವನ್ನು ಪರಿಗಣಿಸಲಾಗುತ್ತದೆಯೇ ಹೊರತು ವಿದೇಶಿ ನ್ಯಾಯಾಲಯದ ಆದೇಶ ಅಥವಾ ಪೋಷಕರ ಕಾನೂನುಬದ್ಧ ಹಕ್ಕನ್ನಲ್ಲ ಎಂದು ಹೇಳಿದೆ.</p><p>ಈ ಸಂಬಂಧ ವಾಲ್ಮೀಕಿ ರಾಮಾಯಣವನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಸೀತಾ ಮಾತೆ ಶ್ರೀರಾಮನಿಂದ ಬೇರ್ಪಟ್ಟ ಸಂದರ್ಭದಲ್ಲಿ ಲವ–ಕುಶರು ವಾಲ್ಮೀಕಿ ಮಹರ್ಷಿಯ ಆಶ್ರಮದಲ್ಲಿ ಸೀತಾ ಮಾತೆಯ ಆರೈಕೆಯಲ್ಲೇ ಬೆಳೆದರು. ರಾಮ ರಾಜನಾಗಿದ್ದರೂ ಮಕ್ಕಳು ತಾಯಿಯ ಜೊತೆಯಲ್ಲೇ ಇದ್ದರು ಎಂದಿದ್ದಾರೆ. ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ, ಭಾವನಾತ್ಮಕ ರಕ್ಷಣೆಯ ಮಹತ್ವವನ್ನು ನ್ಯಾಯಾಲಯ ಒತ್ತಿ ಹೇಳಿತು.</p><p>ಅರ್ಜಿಯ ಪ್ರಕಾರ, ಬಾಲಕಿಯ ಪೋಷಕರು 2014ರಲ್ಲಿ ಮಹಾರಾಷ್ಟ್ರದಲ್ಲಿ ವಿವಾಹವಾಗಿ, ಅಮೆರಿಕಕ್ಕೆ ತೆರಳಿದ್ದರು. 2016ರಲ್ಲಿ ಷಿಕಾಗೊದಲ್ಲಿ ಹೆಣ್ಣು ಮಗು ಜನಿಸಿತ್ತು. ಬಳಿಕ, ಕೆನಡಾಗೆ ಶಿಫ್ಟ್ ಆಗಿದ್ದರು. 2022ರಲ್ಲಿ ಮಗಳ ಜೊತೆ ತಾಯಿ ಭಾರತಕ್ಕೆ ವಾಪಸ್ ಆಗಿದ್ದರು. ಬಳಿಕ, ಕೆನಡಾಗೆ ಹಿಂದಿರುಗದೇ ಇಂದೋರ್ನಲ್ಲಿ ಮಗಳನ್ನು ಶಾಲೆಗೆ ಸೇರಿಸಿದ್ದರು. ಇದು ದಂಪತಿ ನಡುವೆ ಬಿರುಕು ಮೂಡಲು ಕಾರಣವಾಗಿತ್ತು. ಮಗಳನ್ನು ಕೆನಡಾಗೆ ಕರೆದೊಯ್ಯಲು ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.</p><p>ವಿದೇಶಿ ನ್ಯಾಯಾಲಯದ ಅದೇಶದ ಹೊರತಾಗಿಯೂ ಮಗುವಿನ ಹಿತಾಸಕ್ತಿಯೇ ಮುಖ್ಯ ಎಂಬ ಸುಪ್ರೀಂ ಕೋರ್ಟ್ನ ಹಿಂದಿನ ಆದೇಶವನ್ನು ಹೈಕೋರ್ಟ್ ಪರಿಗಣಿಸಿತು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂದೋರ್</strong>: ವಿದೇಶಿ ನ್ಯಾಯಾಲಯದ ಆದೇಶದಂತೆ ಮಗಳನ್ನು ತನ್ನ ವಶಕ್ಕೆ ನೀಡಬೇಕೆಂದು ಕೋರಿದ್ದ ತಂದೆಗೆ ರಾಮಾಯಣದ ಲವ–ಕುಶರ ಕಥೆ ಹೇಳಿದ ನ್ಯಾಯಾಲಯ, ಮಗಳನ್ನು ಅವರ ಸುಪರ್ದಿಗೆ ನೀಡಲು ನಿರಾಕರಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ನಲ್ಲಿ ನಡೆದಿದೆ.</p><p>ವಿದೇಶಿ ನ್ಯಾಯಾಲಯದ ಆದೇಶವಲ್ಲ, ಮಗುವಿನ ಕಲ್ಯಾಣವೇ ಮುಖ್ಯ ಎಂದು ಹೇಳಿದ ಹೈಕೋರ್ಟ್ ನ್ಯಾಯಮೂರ್ತಿಗಳು, ಲವ–ಕುಶರು ಸೀತೆ ಜೊತೆ ಬೆಳೆದಂತೆ ಮಕ್ಕಳು ತಾಯಿ ಜೊತೆ ಇರುವುದೇ ಕ್ಷೇಮ ಎಂದು ಹೇಳಿದ್ದಾರೆ.</p><p>ಈ ಸಂಬಂಧ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿದ ಇಂದೋರ್ ಪೀಠದ ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಬಿನೋದ್ ಕುಮಾರ್ ದ್ವಿವೇದಿ ಅವರು, ಮಾತೆ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ದೊಡ್ಡದು ಎಂಬ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದ್ದಾರೆ.</p><p>ಕೆನಡಾದ ಒಂಟಾರಿಯೊದ ಸುಪೀರಿಯರ್ ಕೋರ್ಟ್ ಆಫ್ ಜಸ್ಟೀಸ್ನ ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಮಗಳನ್ನು ತನ್ನ ಸುಪರ್ದಿಗೆ ಒಪ್ಪಿಸಿ, ಕೆನಡಾಕ್ಕೆ ಕರೆದೊಯ್ಯಲು ಅನುಮತಿ ನಿಡಬೇಕೆಂದು ತಂದೆ ಕೋರಿದ್ದರು.</p><p>ಮಗಳ ಸುಪರ್ದಿ ಸಂಬಂಧ ಆದೇಶ ಹೊರಡಿಸಿರುವ ನ್ಯಾಯಾಲಯ, ಇಂತಹ ಪ್ರಕರಣಗಳಲ್ಲಿ ಮಗುವಿನ ಹಿತಾಸಕ್ತಿ ಮತ್ತು ಕ್ಷೇಮವನ್ನು ಪರಿಗಣಿಸಲಾಗುತ್ತದೆಯೇ ಹೊರತು ವಿದೇಶಿ ನ್ಯಾಯಾಲಯದ ಆದೇಶ ಅಥವಾ ಪೋಷಕರ ಕಾನೂನುಬದ್ಧ ಹಕ್ಕನ್ನಲ್ಲ ಎಂದು ಹೇಳಿದೆ.</p><p>ಈ ಸಂಬಂಧ ವಾಲ್ಮೀಕಿ ರಾಮಾಯಣವನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಸೀತಾ ಮಾತೆ ಶ್ರೀರಾಮನಿಂದ ಬೇರ್ಪಟ್ಟ ಸಂದರ್ಭದಲ್ಲಿ ಲವ–ಕುಶರು ವಾಲ್ಮೀಕಿ ಮಹರ್ಷಿಯ ಆಶ್ರಮದಲ್ಲಿ ಸೀತಾ ಮಾತೆಯ ಆರೈಕೆಯಲ್ಲೇ ಬೆಳೆದರು. ರಾಮ ರಾಜನಾಗಿದ್ದರೂ ಮಕ್ಕಳು ತಾಯಿಯ ಜೊತೆಯಲ್ಲೇ ಇದ್ದರು ಎಂದಿದ್ದಾರೆ. ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ, ಭಾವನಾತ್ಮಕ ರಕ್ಷಣೆಯ ಮಹತ್ವವನ್ನು ನ್ಯಾಯಾಲಯ ಒತ್ತಿ ಹೇಳಿತು.</p><p>ಅರ್ಜಿಯ ಪ್ರಕಾರ, ಬಾಲಕಿಯ ಪೋಷಕರು 2014ರಲ್ಲಿ ಮಹಾರಾಷ್ಟ್ರದಲ್ಲಿ ವಿವಾಹವಾಗಿ, ಅಮೆರಿಕಕ್ಕೆ ತೆರಳಿದ್ದರು. 2016ರಲ್ಲಿ ಷಿಕಾಗೊದಲ್ಲಿ ಹೆಣ್ಣು ಮಗು ಜನಿಸಿತ್ತು. ಬಳಿಕ, ಕೆನಡಾಗೆ ಶಿಫ್ಟ್ ಆಗಿದ್ದರು. 2022ರಲ್ಲಿ ಮಗಳ ಜೊತೆ ತಾಯಿ ಭಾರತಕ್ಕೆ ವಾಪಸ್ ಆಗಿದ್ದರು. ಬಳಿಕ, ಕೆನಡಾಗೆ ಹಿಂದಿರುಗದೇ ಇಂದೋರ್ನಲ್ಲಿ ಮಗಳನ್ನು ಶಾಲೆಗೆ ಸೇರಿಸಿದ್ದರು. ಇದು ದಂಪತಿ ನಡುವೆ ಬಿರುಕು ಮೂಡಲು ಕಾರಣವಾಗಿತ್ತು. ಮಗಳನ್ನು ಕೆನಡಾಗೆ ಕರೆದೊಯ್ಯಲು ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.</p><p>ವಿದೇಶಿ ನ್ಯಾಯಾಲಯದ ಅದೇಶದ ಹೊರತಾಗಿಯೂ ಮಗುವಿನ ಹಿತಾಸಕ್ತಿಯೇ ಮುಖ್ಯ ಎಂಬ ಸುಪ್ರೀಂ ಕೋರ್ಟ್ನ ಹಿಂದಿನ ಆದೇಶವನ್ನು ಹೈಕೋರ್ಟ್ ಪರಿಗಣಿಸಿತು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>