<p><strong>ಮುಂಬೈ:</strong> ಕ್ರಿಕೆಟ್ ಪ್ಯಾಡ್ಗಳು ಮತ್ತು ಕೈಗವಸುಗಳ ಒಳಗೆ ಬಚ್ಚಿಟ್ಟು, ವೇರ್ಹೌಸ್ ಮತ್ತು ಲಾಜಿಸ್ಟಿಕ್ ಹಬ್ಗಳನ್ನು ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಮಾದಕವಸ್ತು ಕಳ್ಳಸಾಗಾಣಿಕೆ– ವಿತರಣೆ ಜಾಲವನ್ನು ಭೇದಿಸಿರುವ ಮಾದಕವಸ್ತು ನಿಯಂತ್ರಣ ಬ್ಯೂರೊ(ಎನ್ಸಿಬಿ) ಅಧಿಕಾರಿಗಳು, ಶುಕ್ರವಾರ ಸುಮಾರು ₹1,745 ಕೋಟಿ ಮೊತ್ತದ 349 ಕೆ.ಜಿಯಷ್ಟು ಕೊಕೇನ್ ಅನ್ನು ಮುಂಬೈನಲ್ಲಿ ವಶಕ್ಕೆ ಪಡೆದಿದ್ದಾರೆ.</p>.<p>ಇತ್ತೀಚಿನ ವರ್ಷಗಳಲ್ಲಿ ಎನ್ಸಿಬಿ ನಡೆಸಿರುವ ಅತಿ ದೊಡ್ಡ ದಾಳಿ ಇದಾಗಿದೆ. ಭಾರತದಲ್ಲಿ ವಾರ್ಷಿಕ ಸರಾಸರಿ 200ರಿಂದ 300 ಕೆ.ಜಿಯಷ್ಟು ಕೊಕೇನ್ ವಶಪಡಿಸಿಕೊಳ್ಳಲಾಗುತ್ತದೆ. ಆದರೆ, ಈಗ ಎನ್ಸಿಬಿ ಬಲೆಗೆ ಬಿದ್ದಿರುವ ಕೊಕೇನ್ ಪ್ರಮಾಣ ಇದನ್ನು ಮೀರಿಸಿದೆ.</p>.<p>‘ಆಪರೇಷನ್ ವೈಟ್ ಸ್ಟ್ರೈಕ್’ ಹೆಸರಿನಲ್ಲಿ ಎನ್ಸಿಬಿ ನಡೆಸಿದ ಈ ಕಾರ್ಯಾಚರಣೆಗೆ ಆರು ತಿಂಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನವಿ ಮುಂಬೈ, ಥಾಣೆ, ಕಲಾಂಬೋಲಿ –ಭಿವಂಡಿ ವ್ಯಾಪ್ತಿಯಲ್ಲಿ ಕೆಲವು ವೇರ್ಹೌಸ್ ಮತ್ತು ಲಾಜಿಸ್ಟಿಕ್ ಹಬ್ಗಳನ್ನು ಕಳ್ಳಸಾಗಾಣಿಕೆಗೆ ಸುರಕ್ಷಿತ ಮಾರ್ಗವನ್ನಾಗಿ ಬಳಸಿಕೊಳ್ಳಲಾಗಿತ್ತು.</p>.<p>ವಿದೇಶಗಳಿಂದ ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳ ಒಳಗೆ ಮಾದಕ ವಸ್ತುಗಳನ್ನು ಒಂಬತ್ತು ಪದರಗಳ ಪಾಲಿಥಿನ್ ಚೀಲದಲ್ಲಿ ಸುತ್ತಿ, ಈ ಚೀಲಕ್ಕೆ ಕಪ್ಪು ಜಿಡ್ಡಿನ ಪದಾರ್ಥದ ಲೇಪಿಸಿ, ಪರಿಶೀಲನೆ ವೇಳೆ ಪತ್ತೆಯಾಗದಂತೆ ಭಾರತಕ್ಕೆ ತರಲಾಗುತ್ತಿತ್ತು. ಲಾಜಿಸ್ಟಿಕ್ ಹಬ್ ಮತ್ತು ವೇರ್ ಹೌಸ್ನಿಂದ ಇದು ಕ್ರಿಕೆಟ್ ಪ್ಯಾಡ್, ಕೈಗವಸುಗಳಲ್ಲಿ ಬಚ್ಚಿಟ್ಟು ದೇಶದ ವಿವಿಧೆಡೆ ಪೂರೈಕೆ ಆಗುತ್ತಿತ್ತು.</p>.<p>ಈ ಅಂತರರಾಷ್ಟ್ರಿಯ ಜಾಲದ ಪ್ರಮುಖ ಸೂತ್ರಧಾರ, ನಿರ್ವಾಹಕರು, ಹಣಕಾಸುದಾರರು, ಬಳಕೆಗಾರರನ್ನು ಗುರಿಯಾಗಿಸಿ ಎನ್ಸಿಬಿ ತನಿಖೆ ಚುರುಕುಗೊಳಿಸಿದೆ. ಕುಖ್ಯಾತ ಮಾದಕವಸ್ತು ಕಳ್ಳ ಸಾಗಣೆದಾರ, ದಾವೂದ್ ಇಬ್ರಾಹಿಂನ ಸಹಚರ ಸಲೀಂ ಡೋಲಾನನ್ನು ದೇಶದಿಂದ ಗಡಿಪಾರು ಮಾಡಲಾದ ಕೆಲವು ದಿನಗಳ ಅಂತರದಲ್ಲೇ ಎನ್ಸಿಬಿ ಈ ದಾಳಿ ನಡೆಸಿದೆ.</p>.<p>‘ಅದ್ಭುತ ಕಾರ್ಯಾಚರಣೆ’: ಕಲಾಂ ಬೋಲಿ ಪ್ರದೇಶದ ವೇರ್ಹೌಸ್ ಮುಂದೆ ನಿಲ್ಲಿಸಲಾಗಿದ್ದ ಮಾರುತಿ ಸುಜುಕಿಯ ಕಾರೊಂದನ್ನು ಪರಿಶೀಲಿಸಿದಾಗ ಅದರಲ್ಲಿ ತಲಾ 1 ಕೆ.ಜಿ ತೂಕದ, 136 ಪ್ಯಾಕೆಟ್ನಷ್ಟು ಕೊಕೇನ್ ಕ್ರಿಕೆಟ್ ಪ್ಯಾಡ್ ಮತ್ತು ಕೈಗವಸುಗಳಲ್ಲಿ ಪತ್ತೆಯಾಗಿದೆ. ಈ ದಾಳಿಯ ಬೆನ್ನಲ್ಲೇ ಭಿವಂಡಿ ಬಳಿಯ ವೇರ್ಹೌಸ್ನಲ್ಲಿ ನಡೆಸಿದ ಇನ್ನೊಂದು ದಾಳಿಯಲ್ಲಿ 213 ಕೆ.ಜಿಯಷ್ಟು ಕೊಕೇನ್ ಪತ್ತೆಯಾಗಿದೆ. ’ಅದ್ಭುತ ಕಾರ್ಯಾಚರಣೆ ನಡೆಸಿದ ಎನ್ಸಿಬಿಗೆ ಅಭಿನಂದನೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಕ್ರಿಕೆಟ್ ಪ್ಯಾಡ್ಗಳು ಮತ್ತು ಕೈಗವಸುಗಳ ಒಳಗೆ ಬಚ್ಚಿಟ್ಟು, ವೇರ್ಹೌಸ್ ಮತ್ತು ಲಾಜಿಸ್ಟಿಕ್ ಹಬ್ಗಳನ್ನು ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಮಾದಕವಸ್ತು ಕಳ್ಳಸಾಗಾಣಿಕೆ– ವಿತರಣೆ ಜಾಲವನ್ನು ಭೇದಿಸಿರುವ ಮಾದಕವಸ್ತು ನಿಯಂತ್ರಣ ಬ್ಯೂರೊ(ಎನ್ಸಿಬಿ) ಅಧಿಕಾರಿಗಳು, ಶುಕ್ರವಾರ ಸುಮಾರು ₹1,745 ಕೋಟಿ ಮೊತ್ತದ 349 ಕೆ.ಜಿಯಷ್ಟು ಕೊಕೇನ್ ಅನ್ನು ಮುಂಬೈನಲ್ಲಿ ವಶಕ್ಕೆ ಪಡೆದಿದ್ದಾರೆ.</p>.<p>ಇತ್ತೀಚಿನ ವರ್ಷಗಳಲ್ಲಿ ಎನ್ಸಿಬಿ ನಡೆಸಿರುವ ಅತಿ ದೊಡ್ಡ ದಾಳಿ ಇದಾಗಿದೆ. ಭಾರತದಲ್ಲಿ ವಾರ್ಷಿಕ ಸರಾಸರಿ 200ರಿಂದ 300 ಕೆ.ಜಿಯಷ್ಟು ಕೊಕೇನ್ ವಶಪಡಿಸಿಕೊಳ್ಳಲಾಗುತ್ತದೆ. ಆದರೆ, ಈಗ ಎನ್ಸಿಬಿ ಬಲೆಗೆ ಬಿದ್ದಿರುವ ಕೊಕೇನ್ ಪ್ರಮಾಣ ಇದನ್ನು ಮೀರಿಸಿದೆ.</p>.<p>‘ಆಪರೇಷನ್ ವೈಟ್ ಸ್ಟ್ರೈಕ್’ ಹೆಸರಿನಲ್ಲಿ ಎನ್ಸಿಬಿ ನಡೆಸಿದ ಈ ಕಾರ್ಯಾಚರಣೆಗೆ ಆರು ತಿಂಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನವಿ ಮುಂಬೈ, ಥಾಣೆ, ಕಲಾಂಬೋಲಿ –ಭಿವಂಡಿ ವ್ಯಾಪ್ತಿಯಲ್ಲಿ ಕೆಲವು ವೇರ್ಹೌಸ್ ಮತ್ತು ಲಾಜಿಸ್ಟಿಕ್ ಹಬ್ಗಳನ್ನು ಕಳ್ಳಸಾಗಾಣಿಕೆಗೆ ಸುರಕ್ಷಿತ ಮಾರ್ಗವನ್ನಾಗಿ ಬಳಸಿಕೊಳ್ಳಲಾಗಿತ್ತು.</p>.<p>ವಿದೇಶಗಳಿಂದ ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳ ಒಳಗೆ ಮಾದಕ ವಸ್ತುಗಳನ್ನು ಒಂಬತ್ತು ಪದರಗಳ ಪಾಲಿಥಿನ್ ಚೀಲದಲ್ಲಿ ಸುತ್ತಿ, ಈ ಚೀಲಕ್ಕೆ ಕಪ್ಪು ಜಿಡ್ಡಿನ ಪದಾರ್ಥದ ಲೇಪಿಸಿ, ಪರಿಶೀಲನೆ ವೇಳೆ ಪತ್ತೆಯಾಗದಂತೆ ಭಾರತಕ್ಕೆ ತರಲಾಗುತ್ತಿತ್ತು. ಲಾಜಿಸ್ಟಿಕ್ ಹಬ್ ಮತ್ತು ವೇರ್ ಹೌಸ್ನಿಂದ ಇದು ಕ್ರಿಕೆಟ್ ಪ್ಯಾಡ್, ಕೈಗವಸುಗಳಲ್ಲಿ ಬಚ್ಚಿಟ್ಟು ದೇಶದ ವಿವಿಧೆಡೆ ಪೂರೈಕೆ ಆಗುತ್ತಿತ್ತು.</p>.<p>ಈ ಅಂತರರಾಷ್ಟ್ರಿಯ ಜಾಲದ ಪ್ರಮುಖ ಸೂತ್ರಧಾರ, ನಿರ್ವಾಹಕರು, ಹಣಕಾಸುದಾರರು, ಬಳಕೆಗಾರರನ್ನು ಗುರಿಯಾಗಿಸಿ ಎನ್ಸಿಬಿ ತನಿಖೆ ಚುರುಕುಗೊಳಿಸಿದೆ. ಕುಖ್ಯಾತ ಮಾದಕವಸ್ತು ಕಳ್ಳ ಸಾಗಣೆದಾರ, ದಾವೂದ್ ಇಬ್ರಾಹಿಂನ ಸಹಚರ ಸಲೀಂ ಡೋಲಾನನ್ನು ದೇಶದಿಂದ ಗಡಿಪಾರು ಮಾಡಲಾದ ಕೆಲವು ದಿನಗಳ ಅಂತರದಲ್ಲೇ ಎನ್ಸಿಬಿ ಈ ದಾಳಿ ನಡೆಸಿದೆ.</p>.<p>‘ಅದ್ಭುತ ಕಾರ್ಯಾಚರಣೆ’: ಕಲಾಂ ಬೋಲಿ ಪ್ರದೇಶದ ವೇರ್ಹೌಸ್ ಮುಂದೆ ನಿಲ್ಲಿಸಲಾಗಿದ್ದ ಮಾರುತಿ ಸುಜುಕಿಯ ಕಾರೊಂದನ್ನು ಪರಿಶೀಲಿಸಿದಾಗ ಅದರಲ್ಲಿ ತಲಾ 1 ಕೆ.ಜಿ ತೂಕದ, 136 ಪ್ಯಾಕೆಟ್ನಷ್ಟು ಕೊಕೇನ್ ಕ್ರಿಕೆಟ್ ಪ್ಯಾಡ್ ಮತ್ತು ಕೈಗವಸುಗಳಲ್ಲಿ ಪತ್ತೆಯಾಗಿದೆ. ಈ ದಾಳಿಯ ಬೆನ್ನಲ್ಲೇ ಭಿವಂಡಿ ಬಳಿಯ ವೇರ್ಹೌಸ್ನಲ್ಲಿ ನಡೆಸಿದ ಇನ್ನೊಂದು ದಾಳಿಯಲ್ಲಿ 213 ಕೆ.ಜಿಯಷ್ಟು ಕೊಕೇನ್ ಪತ್ತೆಯಾಗಿದೆ. ’ಅದ್ಭುತ ಕಾರ್ಯಾಚರಣೆ ನಡೆಸಿದ ಎನ್ಸಿಬಿಗೆ ಅಭಿನಂದನೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>