<p><strong>ಅಲಿಪುರ್ದೌರ್: </strong>ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯವನ್ನು ಗಲಭೆ, ಭ್ರಷ್ಟಾಚಾರ ಮತ್ತು ಅರಾಜಕತೆಯು ತೀವ್ರವಾಗಿ ಬಾಧಿಸುತ್ತಿದೆ ಎಂದು ಗುಡುಗಿದ್ದಾರೆ.</p><p>ಅಲಿಪುರ್ದೌರ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ಮುರ್ಷಿದಾಬಾದ್ ಮತ್ತು ಮಾಲ್ದಾದಲ್ಲಿ ಇತ್ತೀಚೆಗೆ ನಡೆದ ಗಲಭೆಗಳು ಟಿಎಂಸಿ ಆಡಳಿತದ ನಿಷ್ಕರುಣೆ ಮತ್ತು ಉದಾಸೀನತೆಗೆ ಸಾಕ್ಷಿ ಎಂದು ಪ್ರತಿಪಾದಿಸಿದ್ದಾರೆ.</p><p>'ಪಶ್ಚಿಮ ಬಂಗಾಳವು ಇಂದು ಸರಣಿ ಬಿಕ್ಕಟ್ಟುಗಳನ್ನು ಎದರಿಸುತ್ತಿದೆ. ಜನರಿಗೆ 'ಕ್ರೂರ ಸರ್ಕಾರ' ಬೇಡವಾಗಿದೆ. ಅವರು ಬದಲಾವಣೆ ಬಯಸಿದ್ದು, ಉತ್ತಮ ಆಡಳಿತವನ್ನು ಎದುರು ನೋಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ, ಕ್ರೌರ್ಯ ಮತ್ತು ಭ್ರಷ್ಟಾಚಾರ ಬೇಕಾಗಿಲ್ಲ ಎಂದು ಇಡೀ ಬಂಗಾಳ ಹೇಳುತ್ತಿದೆ' ಎಂದು ಹೇಳಿದ್ದಾರೆ.</p>.‘ಆಪರೇಷನ್ ಸಿಂಧೂರ’ ಯಶಸ್ಸು: ಬಿಜೆಪಿ–ಕಾಂಗ್ರೆಸ್ ಮಧ್ಯೆ ರ್ಯಾಲಿ ಪೈಪೋಟಿ.ಬಿಆರ್ಎಸ್ ಅನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ಯತ್ನ ನಡೆಯುತ್ತಿದೆ: ಕವಿತಾ.<p>'ಮೊದಲನೆಯದಾಗಿ, ಹಿಂಸಾಚಾರ ಮತ್ತು ಅವ್ಯವಸ್ಥೆಯು ಸಮಾಜದ ಚೌಕಟ್ಟನ್ನು ಹರಿದುಹಾಕುತ್ತಿದೆ. ಎರಡನೆಯದ್ದು, ತಮ್ಮ ವಿರುದ್ಧ ನಡೆದ ಅಪರಾಧ ಕೃತ್ಯಗಳಿಂದಾಗಿ ರಾಜ್ಯದ ತಾಯಂದಿರು ಮತ್ತು ಸಹೋದರಿಯರಲ್ಲಿ ಅಭದ್ರತೆಯ ಭಾವನೆ ಗಟ್ಟಿಯಾಗುತ್ತಿದೆ' ಎಂದು ವಿವರಿಸಿದ್ದಾರೆ.</p><p>ಮುಂದುವರಿದು, ನಿರುದ್ಯೋಗದ ಏರಿಕೆ ಹಾಗೂ ಅವಕಾಶಗಳ ಕೊರತೆಯಿಂದಾಗಿ ಯುವಕರಲ್ಲಿ ಹತಾಶೆ ಭಾವನೆ ಹೆಚ್ಚುತ್ತಿರುವುದು ಮೂರನೇ ಸಮಸ್ಯೆಯಾಗಿದೆ. ವ್ಯವಸ್ಥೆಯ ಮೇಲೆ ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳುವುದಕ್ಕೆ ಕಾರಣವಾಗಿರುವ 'ವ್ಯಾಪಕ ಭ್ರಷ್ಟಾಚಾರ' ನಾಲ್ಕನೇಯದು ಎಂದು ಪ್ರತಿಪಾದಿಸಿದ್ದಾರೆ.</p><p>'ಆಡಳಿತ ಪಕ್ಷದ ಸ್ವಾರ್ಥ ರಾಜಕಾರಣ ಐದನೇ ಬಿಕ್ಕಟ್ಟಾಗಿದೆ. ಇದು, ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಮುರ್ಷಿದಾಬಾದ್ ಹಾಗೂ ಮಾಲ್ದಾದಲ್ಲಿ ನಡೆದ ಘಟನೆಗಳು ಟಿಎಂಸಿ ಸರ್ಕಾರದ ಕ್ರೌರ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವುದಕ್ಕೆ ಉದಾಹರಣೆಗಳಾಗಿವೆ' ಎಂದು ಸಾರಿದ್ದಾರೆ.</p><p>ಶಿಕ್ಷಕರ ನೇಮಕಾತಿ ಹಗರಣದ ಕುರಿತೂ ಮಾತನಾಡಿರುವ ಮೋದಿ, ಭ್ರಷ್ಟಾಚಾರ ಮತ್ತು ಅಕ್ರಮದ ಮೂಲಕ ಟಿಎಂಸಿ ಸರ್ಕಾರವು ಸಾವಿರಾರು ಶಿಕ್ಷಕರು ಮತ್ತು ಅವರ ಕುಟುಂಬಗಳ ಭವಿಷ್ಯವನ್ನು ನಾಶ ಮಾಡಿದೆ ಎಂದು ಕಿಡಿಕಾರಿದ್ದಾರೆ.</p>.ಅಬ್ದುಲ್ ರಹಿಮಾನ್ ಹತ್ಯೆ: ಮೂವರು ಆರೋಪಿಗಳ ಬಂಧನ.ಚಿನ್ನದ ಬೆಲೆ ಏರಿಕೆ | ಈ ಆರ್ಥಿಕ ವರ್ಷದಲ್ಲಿ ಶೇ 10ರಷ್ಟು ಬೇಡಿಕೆ ಕುಸಿತ: ವರದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಲಿಪುರ್ದೌರ್: </strong>ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯವನ್ನು ಗಲಭೆ, ಭ್ರಷ್ಟಾಚಾರ ಮತ್ತು ಅರಾಜಕತೆಯು ತೀವ್ರವಾಗಿ ಬಾಧಿಸುತ್ತಿದೆ ಎಂದು ಗುಡುಗಿದ್ದಾರೆ.</p><p>ಅಲಿಪುರ್ದೌರ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ಮುರ್ಷಿದಾಬಾದ್ ಮತ್ತು ಮಾಲ್ದಾದಲ್ಲಿ ಇತ್ತೀಚೆಗೆ ನಡೆದ ಗಲಭೆಗಳು ಟಿಎಂಸಿ ಆಡಳಿತದ ನಿಷ್ಕರುಣೆ ಮತ್ತು ಉದಾಸೀನತೆಗೆ ಸಾಕ್ಷಿ ಎಂದು ಪ್ರತಿಪಾದಿಸಿದ್ದಾರೆ.</p><p>'ಪಶ್ಚಿಮ ಬಂಗಾಳವು ಇಂದು ಸರಣಿ ಬಿಕ್ಕಟ್ಟುಗಳನ್ನು ಎದರಿಸುತ್ತಿದೆ. ಜನರಿಗೆ 'ಕ್ರೂರ ಸರ್ಕಾರ' ಬೇಡವಾಗಿದೆ. ಅವರು ಬದಲಾವಣೆ ಬಯಸಿದ್ದು, ಉತ್ತಮ ಆಡಳಿತವನ್ನು ಎದುರು ನೋಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ, ಕ್ರೌರ್ಯ ಮತ್ತು ಭ್ರಷ್ಟಾಚಾರ ಬೇಕಾಗಿಲ್ಲ ಎಂದು ಇಡೀ ಬಂಗಾಳ ಹೇಳುತ್ತಿದೆ' ಎಂದು ಹೇಳಿದ್ದಾರೆ.</p>.‘ಆಪರೇಷನ್ ಸಿಂಧೂರ’ ಯಶಸ್ಸು: ಬಿಜೆಪಿ–ಕಾಂಗ್ರೆಸ್ ಮಧ್ಯೆ ರ್ಯಾಲಿ ಪೈಪೋಟಿ.ಬಿಆರ್ಎಸ್ ಅನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ಯತ್ನ ನಡೆಯುತ್ತಿದೆ: ಕವಿತಾ.<p>'ಮೊದಲನೆಯದಾಗಿ, ಹಿಂಸಾಚಾರ ಮತ್ತು ಅವ್ಯವಸ್ಥೆಯು ಸಮಾಜದ ಚೌಕಟ್ಟನ್ನು ಹರಿದುಹಾಕುತ್ತಿದೆ. ಎರಡನೆಯದ್ದು, ತಮ್ಮ ವಿರುದ್ಧ ನಡೆದ ಅಪರಾಧ ಕೃತ್ಯಗಳಿಂದಾಗಿ ರಾಜ್ಯದ ತಾಯಂದಿರು ಮತ್ತು ಸಹೋದರಿಯರಲ್ಲಿ ಅಭದ್ರತೆಯ ಭಾವನೆ ಗಟ್ಟಿಯಾಗುತ್ತಿದೆ' ಎಂದು ವಿವರಿಸಿದ್ದಾರೆ.</p><p>ಮುಂದುವರಿದು, ನಿರುದ್ಯೋಗದ ಏರಿಕೆ ಹಾಗೂ ಅವಕಾಶಗಳ ಕೊರತೆಯಿಂದಾಗಿ ಯುವಕರಲ್ಲಿ ಹತಾಶೆ ಭಾವನೆ ಹೆಚ್ಚುತ್ತಿರುವುದು ಮೂರನೇ ಸಮಸ್ಯೆಯಾಗಿದೆ. ವ್ಯವಸ್ಥೆಯ ಮೇಲೆ ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳುವುದಕ್ಕೆ ಕಾರಣವಾಗಿರುವ 'ವ್ಯಾಪಕ ಭ್ರಷ್ಟಾಚಾರ' ನಾಲ್ಕನೇಯದು ಎಂದು ಪ್ರತಿಪಾದಿಸಿದ್ದಾರೆ.</p><p>'ಆಡಳಿತ ಪಕ್ಷದ ಸ್ವಾರ್ಥ ರಾಜಕಾರಣ ಐದನೇ ಬಿಕ್ಕಟ್ಟಾಗಿದೆ. ಇದು, ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಮುರ್ಷಿದಾಬಾದ್ ಹಾಗೂ ಮಾಲ್ದಾದಲ್ಲಿ ನಡೆದ ಘಟನೆಗಳು ಟಿಎಂಸಿ ಸರ್ಕಾರದ ಕ್ರೌರ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವುದಕ್ಕೆ ಉದಾಹರಣೆಗಳಾಗಿವೆ' ಎಂದು ಸಾರಿದ್ದಾರೆ.</p><p>ಶಿಕ್ಷಕರ ನೇಮಕಾತಿ ಹಗರಣದ ಕುರಿತೂ ಮಾತನಾಡಿರುವ ಮೋದಿ, ಭ್ರಷ್ಟಾಚಾರ ಮತ್ತು ಅಕ್ರಮದ ಮೂಲಕ ಟಿಎಂಸಿ ಸರ್ಕಾರವು ಸಾವಿರಾರು ಶಿಕ್ಷಕರು ಮತ್ತು ಅವರ ಕುಟುಂಬಗಳ ಭವಿಷ್ಯವನ್ನು ನಾಶ ಮಾಡಿದೆ ಎಂದು ಕಿಡಿಕಾರಿದ್ದಾರೆ.</p>.ಅಬ್ದುಲ್ ರಹಿಮಾನ್ ಹತ್ಯೆ: ಮೂವರು ಆರೋಪಿಗಳ ಬಂಧನ.ಚಿನ್ನದ ಬೆಲೆ ಏರಿಕೆ | ಈ ಆರ್ಥಿಕ ವರ್ಷದಲ್ಲಿ ಶೇ 10ರಷ್ಟು ಬೇಡಿಕೆ ಕುಸಿತ: ವರದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>