<p class="title"><strong>ಮಟ್ಟನ್, ಜಮ್ಮು–ಕಾಶ್ಮೀರ:</strong> ಮಹಾಶಿವರಾತ್ರಿ ಆಚರಣೆ ವೇಳೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮಾರ್ತಾಂಡ್ ಸೂರ್ಯ ದೇವಾಲಯದಲ್ಲಿ ಹಿಂದೂ ದೇವರು ಶಿವನಿಗೆ ನೀರು ಅರ್ಪಿಸಿದ ಭಕ್ತರಲ್ಲಿ ರಾಜಸ್ಥಾನದ ಮುಸ್ಲಿಂ ದಂಪತಿ ಸಹ ಸೇರಿದ್ದರು.</p>.<p class="title">‘ಇದು ಹಿಂದೂಗಳಿಗೆ (ಮಹಾಶಿವರಾತ್ರಿ) ಮತ್ತು ಮುಸ್ಲಿಮರಿಗೆ (ಶಬ್-ಎ-ಮೆ ರಾಜ್) ಶುಭ ಸಂದರ್ಭವಾಗಿದೆ. ನಾವು ಮಹಮ್ಮದೀಯರು (ಮುಸ್ಲಿಮರು) ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಿಲ್ಲವೆಂದಲ್ಲ’ ಎಂದು ಹರಿಯಾಣದ ಕುರುಕ್ಷೇತ್ರ ಮೂಲದ ಜೋಯಾ ಖಾನ್ ತಿಳಿಸಿದರು.</p>.<p class="title">‘ಶಿವರಾತ್ರಿ ನಮಗೆ ಪ್ರಾರ್ಥನೆಯ ದಿನ. ಭಕ್ತರು ಅದನ್ನು ಇಲ್ಲಿ ಹೇಗೆ ಆಚರಿಸುತ್ತಾರೆ ಎಂಬುದನ್ನು ನಾವು ನೋಡುತ್ತೇವೆ’ ಎಂದು ರಾಜಸ್ಥಾನದ ಫೈಜಾನ್ ಖಾನ್ ಅವರನ್ನು ಮದುವೆಯಾಗಿರುವ ಜೋಯಾ ಹೇಳಿದರು.</p>.<p class="title">‘ನಾನು ಶಿವನಿಗೆ ಜಲಾಭಿಷೇಕ ಮಾಡಿದ್ದೇನೆ. ಇದು ದಂಪತಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನನ್ನ ತಾಯಿ ಕೂಡ ಈ ಬಗ್ಗೆ ಹೇಳಿದ್ದಾರೆ. ನಾವು ಮುಸ್ಲಿಮರು. ಆದರೆ ಈ ಸಂಪ್ರದಾಯ ಇಷ್ಟಪಡುತ್ತೇವೆ. ಕಾಶ್ಮೀರಕ್ಕೆ ಬರುವ ಮೊದಲು ಕಣಿವೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಉದ್ವಿಗ್ನತೆ ಇದೆ ಎಂಬ ಭಾವನೆ ಇತ್ತು. ಆದರೆ ಅಂತಹದ್ದೇನೂ ಇಲ್ಲ. ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ’ ಎಂದು ಜೋಯಾ ಹೇಳಿದರು. </p>.<p>ಶ್ರೀನಗರದ ದಾಲ್ಗೇಟ್ನಲ್ಲಿರುವ ಶಂಕರಾಚಾರ್ಯ ದೇವಸ್ಥಾನ ಸಹಿತ ರಾಜ್ಯದ ಹಲವೆಡೆ ಶಿವರಾತ್ರಿ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಮಟ್ಟನ್, ಜಮ್ಮು–ಕಾಶ್ಮೀರ:</strong> ಮಹಾಶಿವರಾತ್ರಿ ಆಚರಣೆ ವೇಳೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮಾರ್ತಾಂಡ್ ಸೂರ್ಯ ದೇವಾಲಯದಲ್ಲಿ ಹಿಂದೂ ದೇವರು ಶಿವನಿಗೆ ನೀರು ಅರ್ಪಿಸಿದ ಭಕ್ತರಲ್ಲಿ ರಾಜಸ್ಥಾನದ ಮುಸ್ಲಿಂ ದಂಪತಿ ಸಹ ಸೇರಿದ್ದರು.</p>.<p class="title">‘ಇದು ಹಿಂದೂಗಳಿಗೆ (ಮಹಾಶಿವರಾತ್ರಿ) ಮತ್ತು ಮುಸ್ಲಿಮರಿಗೆ (ಶಬ್-ಎ-ಮೆ ರಾಜ್) ಶುಭ ಸಂದರ್ಭವಾಗಿದೆ. ನಾವು ಮಹಮ್ಮದೀಯರು (ಮುಸ್ಲಿಮರು) ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಿಲ್ಲವೆಂದಲ್ಲ’ ಎಂದು ಹರಿಯಾಣದ ಕುರುಕ್ಷೇತ್ರ ಮೂಲದ ಜೋಯಾ ಖಾನ್ ತಿಳಿಸಿದರು.</p>.<p class="title">‘ಶಿವರಾತ್ರಿ ನಮಗೆ ಪ್ರಾರ್ಥನೆಯ ದಿನ. ಭಕ್ತರು ಅದನ್ನು ಇಲ್ಲಿ ಹೇಗೆ ಆಚರಿಸುತ್ತಾರೆ ಎಂಬುದನ್ನು ನಾವು ನೋಡುತ್ತೇವೆ’ ಎಂದು ರಾಜಸ್ಥಾನದ ಫೈಜಾನ್ ಖಾನ್ ಅವರನ್ನು ಮದುವೆಯಾಗಿರುವ ಜೋಯಾ ಹೇಳಿದರು.</p>.<p class="title">‘ನಾನು ಶಿವನಿಗೆ ಜಲಾಭಿಷೇಕ ಮಾಡಿದ್ದೇನೆ. ಇದು ದಂಪತಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನನ್ನ ತಾಯಿ ಕೂಡ ಈ ಬಗ್ಗೆ ಹೇಳಿದ್ದಾರೆ. ನಾವು ಮುಸ್ಲಿಮರು. ಆದರೆ ಈ ಸಂಪ್ರದಾಯ ಇಷ್ಟಪಡುತ್ತೇವೆ. ಕಾಶ್ಮೀರಕ್ಕೆ ಬರುವ ಮೊದಲು ಕಣಿವೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಉದ್ವಿಗ್ನತೆ ಇದೆ ಎಂಬ ಭಾವನೆ ಇತ್ತು. ಆದರೆ ಅಂತಹದ್ದೇನೂ ಇಲ್ಲ. ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲ’ ಎಂದು ಜೋಯಾ ಹೇಳಿದರು. </p>.<p>ಶ್ರೀನಗರದ ದಾಲ್ಗೇಟ್ನಲ್ಲಿರುವ ಶಂಕರಾಚಾರ್ಯ ದೇವಸ್ಥಾನ ಸಹಿತ ರಾಜ್ಯದ ಹಲವೆಡೆ ಶಿವರಾತ್ರಿ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>