ನವದೆಹಲಿ: ‘ನನ್ನ ನವ ಭಾರತವು ಕೇಸರಿಯಲ್ಲ, ಛಿದ್ರವಾದುದಲ್ಲ, ಅಸಹಿಷ್ಣುವೂ ಅಲ್ಲ’ ಎಂದು ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ.
‘ನೂತನ ಸಂಸತ್ ಭವನ ದೇಶದ ಪ್ರಗತಿಯಲ್ಲಿ ಅಮರವಾದ ಸ್ಮಾರಕವಾಗಿದೆ’ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಟ್ವೀಟ್ ಮಾಡಿದ್ದಾರೆ.
‘ನನ್ನ ನವ ಭಾರತವು 140 ಕೋಟಿ ಭಾರತೀಯರ ಮಹತ್ವಾಕಾಂಕ್ಷೆಯ ಆಶಯಗಳನ್ನು ಆಧರಿಸಿದ್ದಾಗಿದೆ. ಅದು, ಇಟ್ಟಿಗೆ ಮತ್ತು ಗಾರೆಯನ್ನು ಆಧರಿಸಿದ್ದಲ್ಲ’ ಎಂದಿದ್ದಾರೆ.