<p><strong>ನಾಗ್ಪುರ</strong>: ನಾಗ್ಪುರದ ಸರ್ಕಾರಿ ಡಾಗಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಹೆರಿಗೆ ಮಾಡಿಸಲು ಸುದೀರ್ಘ 9 ಗಂಟೆ ಕಾಯಿಸಿದ ಪರಿಣಾಮ ಮಗು ಮೃತಪಟ್ಟಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.</p><p> ಪತ್ನಿ ದೀಪಲತಾ ಬನೋಟೆರಳನ್ನು ಆಸ್ಪತ್ರೆಗೆ ಕರೆದೊಯ್ದು ಸುಮಾರು ಒಂಬತ್ತು ಗಂಟೆಗಳ ನಂತರ ಹೆರಿಗೆಗೆ ಕರೆದೊಯ್ಯಲಾಗಿದೆ. ಅಷ್ಟು ಸಮಯವೂ ಆಕೆ ನೋವಿನಿಂದ ಬಳಲುತ್ತಿದ್ದಳು ಎಂದು ಪತಿ ಸುರೇಂದ್ರ ಬಾನೋಟೆ ಆರೋಪಿಸಿದ್ದಾರೆ.</p><p>ಹೆರಿಗೆ ಸಮಯದಲ್ಲಿ ಮಹಿಳಾ ಸಹಾಯಕರೊಬ್ಬರು ಗರ್ಭಿಣಿಯ ಎದೆಯ ಮೇಲೆ ಕುಳಿತು ಮೊಣಕಾಲುಗಳ ಮೂಲಕ ಹೊಟ್ಟೆ ಮೇಲೆ ಒತ್ತಡ ಹಾಕುವ ಮೂಲಕ ಪ್ರಸವಕ್ಕೆ ಯತ್ನಿಸಿದ್ದಾರೆ ಎಂದೂ ಸುರೇಂದ್ರ ಬನೋಟೆ ಆರೋಪಿಸಿದ್ದಾರೆ.</p><p>ಹೆರಿಗೆಯು ಸಹಜವಾಗಿಯೇ ಆಯಿತು ಎಂದು ವರದಿಗಳು ಸೂಚಿಸಿವೆಯಾದರೂ, ಮಗು ಜನಿಸಿದಾಗಲೇ ಮೃತಪಟ್ಟಿತ್ತು ಎಂದು ಕುಟುಂಬ ತಿಳಿಸಿದೆ.</p><p>ಈ ಘಟನೆಯು ನಾಗ್ಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮತ್ತು ಹೆರಿಗೆ ಪದ್ಧತಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.</p><p>ಅಂತಹ ಘಟನೆ ನಡೆಯಲು ಸಾಧ್ಯವಿಲ್ಲ ಎಂದಿರುವ ವೈದ್ಯಕೀಯ ಅಧೀಕ್ಷಕ ದಿಲೀಪ್ ಮಾಧವಿ, ಕ್ಯಾಮೆರಾ ಎದುರು ವಿವರವಾದ ಹೇಳಿಕೆಯನ್ನು ನೀಡಲು ನಿರಾಕರಿಸಿದ್ದಾರೆ.</p><p>ಸರ್ಕಾರಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ಮತ್ತು ಸಿಬ್ಬಂದಿ ವರ್ತನೆ ಬಗ್ಗೆ ಆಗಾಗ್ಗೆ ದೂರು ದಾಖಲಾಗುತ್ತಿರುತ್ತವೆ ಎಂದು ಕೌನ್ಸಿಲರ್ ವಾಸೀಂ ಕಾನ್ ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ</strong>: ನಾಗ್ಪುರದ ಸರ್ಕಾರಿ ಡಾಗಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಹೆರಿಗೆ ಮಾಡಿಸಲು ಸುದೀರ್ಘ 9 ಗಂಟೆ ಕಾಯಿಸಿದ ಪರಿಣಾಮ ಮಗು ಮೃತಪಟ್ಟಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.</p><p> ಪತ್ನಿ ದೀಪಲತಾ ಬನೋಟೆರಳನ್ನು ಆಸ್ಪತ್ರೆಗೆ ಕರೆದೊಯ್ದು ಸುಮಾರು ಒಂಬತ್ತು ಗಂಟೆಗಳ ನಂತರ ಹೆರಿಗೆಗೆ ಕರೆದೊಯ್ಯಲಾಗಿದೆ. ಅಷ್ಟು ಸಮಯವೂ ಆಕೆ ನೋವಿನಿಂದ ಬಳಲುತ್ತಿದ್ದಳು ಎಂದು ಪತಿ ಸುರೇಂದ್ರ ಬಾನೋಟೆ ಆರೋಪಿಸಿದ್ದಾರೆ.</p><p>ಹೆರಿಗೆ ಸಮಯದಲ್ಲಿ ಮಹಿಳಾ ಸಹಾಯಕರೊಬ್ಬರು ಗರ್ಭಿಣಿಯ ಎದೆಯ ಮೇಲೆ ಕುಳಿತು ಮೊಣಕಾಲುಗಳ ಮೂಲಕ ಹೊಟ್ಟೆ ಮೇಲೆ ಒತ್ತಡ ಹಾಕುವ ಮೂಲಕ ಪ್ರಸವಕ್ಕೆ ಯತ್ನಿಸಿದ್ದಾರೆ ಎಂದೂ ಸುರೇಂದ್ರ ಬನೋಟೆ ಆರೋಪಿಸಿದ್ದಾರೆ.</p><p>ಹೆರಿಗೆಯು ಸಹಜವಾಗಿಯೇ ಆಯಿತು ಎಂದು ವರದಿಗಳು ಸೂಚಿಸಿವೆಯಾದರೂ, ಮಗು ಜನಿಸಿದಾಗಲೇ ಮೃತಪಟ್ಟಿತ್ತು ಎಂದು ಕುಟುಂಬ ತಿಳಿಸಿದೆ.</p><p>ಈ ಘಟನೆಯು ನಾಗ್ಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮತ್ತು ಹೆರಿಗೆ ಪದ್ಧತಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.</p><p>ಅಂತಹ ಘಟನೆ ನಡೆಯಲು ಸಾಧ್ಯವಿಲ್ಲ ಎಂದಿರುವ ವೈದ್ಯಕೀಯ ಅಧೀಕ್ಷಕ ದಿಲೀಪ್ ಮಾಧವಿ, ಕ್ಯಾಮೆರಾ ಎದುರು ವಿವರವಾದ ಹೇಳಿಕೆಯನ್ನು ನೀಡಲು ನಿರಾಕರಿಸಿದ್ದಾರೆ.</p><p>ಸರ್ಕಾರಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ಮತ್ತು ಸಿಬ್ಬಂದಿ ವರ್ತನೆ ಬಗ್ಗೆ ಆಗಾಗ್ಗೆ ದೂರು ದಾಖಲಾಗುತ್ತಿರುತ್ತವೆ ಎಂದು ಕೌನ್ಸಿಲರ್ ವಾಸೀಂ ಕಾನ್ ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>