<p>ನವದೆಹಲಿ (ಪಿಟಿಐ): ‘ಭಾರತದ ಪ್ರತಿಯೊಂದು ಭಾಗವು ಪವಿತ್ರವಾದುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಲ್ಲೇಖಿಸಿದ್ದಾರೆ.</p>.<p>ಸೋಮನಾಥ ದೇಗುಲವು ಜೀರ್ಣೋದ್ಧಾರಗೊಂಡು ಭಕ್ತರಿಗೆದರ್ಶನ ನೀಡಲಿಕ್ಕಾಗಿ ಪುನರಾರಂಭಗೊಂಡ 75ನೇ ವಾರ್ಷಿಕೋತ್ಸವದ (ಮೇ 11) ಅಂಗವಾಗಿ ಬರೆದಿರುವ ಲೇಖನದಲ್ಲಿ ಪ್ರಧಾನಿಯು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.</p>.<p>‘ಭೌಗೋಳಿಕತೆಯನ್ನು ಮೀರಿದ ಏಕತೆಯ ಪ್ರಜ್ಞೆಯಿಂದ ಭಾರತ ಒಂದಾಗಿದೆ’ ಎಂದಿರುವ ಮೋದಿ, ‘ವಿಭಜನೆಗಳಿಂದ ಗುರುತಿಸಲ್ಪಟ್ಟಿರುವ ಜಗತ್ತಿನಲ್ಲಿ, ಭಾರತದ ಏಕತೆಯ ಮನೋಭಾವವು ಎಂದಿಗಿಂತಲೂ ಇದೀಗ ಹೆಚ್ಚು ಪ್ರಸ್ತುತವಾಗಿದೆ’ ಎಂದಿದ್ದಾರೆ.</p>.<p>‘ಸೋಮನಾಥನು ತನ್ನ ಸಕಲ ವೈಭವದಲ್ಲಿ ಎತ್ತರಕ್ಕೆ ನಿಂತಿದ್ದಾನೆ. ಏಕೆಂದರೆ, ಏಕತೆ ಹಾಗೂ ನಾಗರಿಕತೆಯ ಪ್ರಜ್ಞೆಯು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲಸಿದೆ’ ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.</p>.<p>ದೇಗುಲದ ರಕ್ಷಣೆಗಾಗಿ ಗುಜರಾತ್ನಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದವರ ಹೋರಾಟ, ತ್ಯಾಗವನ್ನು ಮರೆಯಲಾಗಲ್ಲ ಎಂದಿದ್ದಾರೆ.</p>.<p>‘ಭಾರತೀಯರು ಸೋಮನಾಥನ ದರ್ಶನ ಪಡೆಯಬೇಕು’ ಎಂದೂ ಮನವಿ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-51-1489260499</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ‘ಭಾರತದ ಪ್ರತಿಯೊಂದು ಭಾಗವು ಪವಿತ್ರವಾದುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಲ್ಲೇಖಿಸಿದ್ದಾರೆ.</p>.<p>ಸೋಮನಾಥ ದೇಗುಲವು ಜೀರ್ಣೋದ್ಧಾರಗೊಂಡು ಭಕ್ತರಿಗೆದರ್ಶನ ನೀಡಲಿಕ್ಕಾಗಿ ಪುನರಾರಂಭಗೊಂಡ 75ನೇ ವಾರ್ಷಿಕೋತ್ಸವದ (ಮೇ 11) ಅಂಗವಾಗಿ ಬರೆದಿರುವ ಲೇಖನದಲ್ಲಿ ಪ್ರಧಾನಿಯು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.</p>.<p>‘ಭೌಗೋಳಿಕತೆಯನ್ನು ಮೀರಿದ ಏಕತೆಯ ಪ್ರಜ್ಞೆಯಿಂದ ಭಾರತ ಒಂದಾಗಿದೆ’ ಎಂದಿರುವ ಮೋದಿ, ‘ವಿಭಜನೆಗಳಿಂದ ಗುರುತಿಸಲ್ಪಟ್ಟಿರುವ ಜಗತ್ತಿನಲ್ಲಿ, ಭಾರತದ ಏಕತೆಯ ಮನೋಭಾವವು ಎಂದಿಗಿಂತಲೂ ಇದೀಗ ಹೆಚ್ಚು ಪ್ರಸ್ತುತವಾಗಿದೆ’ ಎಂದಿದ್ದಾರೆ.</p>.<p>‘ಸೋಮನಾಥನು ತನ್ನ ಸಕಲ ವೈಭವದಲ್ಲಿ ಎತ್ತರಕ್ಕೆ ನಿಂತಿದ್ದಾನೆ. ಏಕೆಂದರೆ, ಏಕತೆ ಹಾಗೂ ನಾಗರಿಕತೆಯ ಪ್ರಜ್ಞೆಯು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲಸಿದೆ’ ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.</p>.<p>ದೇಗುಲದ ರಕ್ಷಣೆಗಾಗಿ ಗುಜರಾತ್ನಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದವರ ಹೋರಾಟ, ತ್ಯಾಗವನ್ನು ಮರೆಯಲಾಗಲ್ಲ ಎಂದಿದ್ದಾರೆ.</p>.<p>‘ಭಾರತೀಯರು ಸೋಮನಾಥನ ದರ್ಶನ ಪಡೆಯಬೇಕು’ ಎಂದೂ ಮನವಿ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-51-1489260499</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>