<p>ಕೊಲ್ಲಿ ಯುದ್ಧದ ಕಾರಣಕ್ಕಾಗಿ ಜಾಗತಿಕ ಆರ್ಥಿಕತೆ ತಲ್ಲಣಗೊಂಡಿದೆ. ಅದರಲ್ಲೂ ತೈಲ ಬೇಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಆಮದಿನ ಮೂಲಕವೇ ಪೂರೈಸುವ ದೇಶಗಳಿಗೆ ಈ ಒತ್ತಡ ಅಗಾಧ. ಈ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆಯ ಮೇಲೆ ಕೊಲ್ಲಿ ಯುದ್ಧ ಪ್ರತಿಕೂಲ ಪರಿಣಾಮ ಬೀರಿದೆ. ಭಾರತದ ತೈಲ ಆಮದು ಒಟ್ಟು ಬೇಡಿಕೆಯ ಅಂದಾಜು ಶೇ 90ರಷ್ಟು ಇರುವುದರ ಜತೆಗೆ ದೇಶದ ಒಟ್ಟು ಆಮದಿನಲ್ಲಿ ತೈಲದ ಪಾಲು ಬಹಳ ದೊಡ್ಡದಾದ ಕಾರಣ ಆರ್ಥಿಕತೆಯ ಮೇಲೆ ಒತ್ತಡವನ್ನು ಸೃಷ್ಟಿ ಮಾಡುತ್ತದೆ.</p>.<p>ಸರ್ಕಾರಗಳು ಇಂಥ ಸಮಯದಲ್ಲಿ ಅನಿವಾರ್ಯವಾಗಿ 1) ಬೆಲೆ ಏರಿಕೆ 2) ವಸ್ತುಗಳ ಪಡಿತರ ಹಾಗೂ 3) ಆಮದು ಶುಲ್ಕ ಹಾಕುವುದು ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮೇಲಿನ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಮೊದಲು, ಆರೇಳು ವಿನಂತಿಗಳನ್ನು ದೇಶದ ಮುಂದೆ ಇಡುವ ಮೂಲಕ ರಾಜಕೀಯವಾಗಿ ಸವಾಲು ಎನಿಸಿದರೂ ತಮ್ಮ ಜನಪ್ರಿಯತೆಯನ್ನು ಪಣವಾಗಿ ಇಡುವ ಧೈರ್ಯ ಮಾಡಿದ್ದಾರೆ. ಇದಕ್ಕೆ ಜನ ಪೂರಕವಾಗಿ ಸ್ಪಂದಿಸಿ, ಪರಿಸ್ಥಿತಿಯ ಮೇಲೆ ಸ್ವಲ್ಪ ಹತೋಟಿ ದೊರೆತರೆ ನಂತರ ಅನಿವಾರ್ಯ ಎನಿಸಿದರೆ ಮೇಲಿನ ಹೆಜ್ಜೆಗಳನ್ನು ತೆಗೆದುಕೊಳ್ಳುವ ಯೋಚನೆ ಮಾಡಿದ್ದಾರೆ.</p>.<p>ಪ್ರಸಿದ್ಧ ಅರ್ಥಶಾಸ್ತ್ರಜ್ಞ ಗುನ್ನಾರ್ ಮೈರ್ಡಾಲ್, ‘ಆರ್ಥಿಕ ನೀತಿಗಳ ಮೇಲೆ ಸ್ವಾಭಾವಿಕವಾಗಿಯೇ ರಾಜಕೀಯದ ಪ್ರಭಾವ ಹೆಚ್ಚು ಇರುವ ಕಾರಣ, ಅದು ಪರಿಪೂರ್ಣ ಪಲಿತಾಂಶ ಕೊಡಲು ವಿಫಲ ಆಗುತ್ತದೆ ಹಾಗೂ ಆ ಸಮಯದಲ್ಲಿ ಅರ್ಥಶಾಸ್ತ್ರವನ್ನು ವಿಜ್ಞಾನ ಎಂದು ಕರೆಯುವುದು ಕಷ್ಟ ಎನಿಸುತ್ತದೆ’ ಎಂದು ಹೇಳಿದ್ದರು. ರಾಜಕೀಯ ನಾಯಕರು ಗಣನೀಯ ಆರ್ಥಿಕ ಸಲಹೆಗಳ ಬಗ್ಗೆ ಮೊದಲಿಗೆ ರಾಜಕೀಯ ಲಾಭನಷ್ಟಗಳ ದೃಷ್ಟಿಯಲ್ಲಿ ತುಲನೆ ಮಾಡಿ ನಂತರ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಇದಕ್ಕೆ ಕಾರಣ. ಆದರೆ, ಮೋದಿ ಅವರು ಅಂದು ಅಡುಗೆ ಅನಿಲ (ಎಲ್ಪಿಜಿ) ಸಬ್ಸಿಡಿ ಬಿಡಿ ಎಂದು ವಿನಂತಿ ಮಾಡಿದಾಗ ಸಿಕ್ಕ ಬಹು ದೊಡ್ಡ ಬೆಂಬಲದ ರೀತಿಯಲ್ಲಿ ಈ ಬಾರಿಯೂ ಜನರಿಂದ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದಾರೆ.</p>.<p>ಹಾಗಾದರೆ, ಕೊಲ್ಲಿ ಯುದ್ಧ ಯಾವ ರೀತಿಯಲ್ಲಿ ನಮ್ಮ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತಿದೆ ಎನ್ನುವುದನ್ನು ವಿಶ್ಲೇಷಣೆ ಮಾಡುವುದು ಸೂಕ್ತ. ಕೋವಿಡ್ ಸಮಯದಲ್ಲಿ ಅನಿವಾರ್ಯವಾಗಿ ವಿತ್ತೀಯ ಕೊರತೆಯನ್ನು ಹೆಚ್ಚುವರಿ ಸಾಲಗಳ ಮೂಲಕ ಸರ್ಕಾರ ಏರಿಸಬೇಕಾಗಿ ಬಂದಿತ್ತು. 2023ರ ನಂತರ ಸರ್ಕಾರ ವಿತ್ತೀಯ ಶಿಸ್ತು (fiscal discipline) ಪಾಲನೆಯ ದೃಢಸಂಕಲ್ಪ ಮಾಡಿ ಸಾಲದ ಪ್ರಮಾಣವನ್ನು ಕಡಿತಗೊಳಿಸುತ್ತಾ ಬಂದಿದೆ. ಶೇ 7ಕ್ಕಿಂತಲೂ ಮೇಲೆ ಹೋಗಿದ್ದ ವಿತ್ತೀಯ ಕೊರತೆಯನ್ನು ಈ ವರ್ಷ ಶೇ 4.4ಕ್ಕೆ ಇಳಿಸಿದೆ. ರಾಜಕೀಯವಾಗಿ ಇದು ಪೂರಕ ಅಲ್ಲವಾದರೂ ಸರ್ಕಾರ ಇದರಲ್ಲಿ ಯಾವುದೇ ರಾಜಿಗೆ ಹೋಗಿಲ್ಲ.</p>.<p>ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗಿರುವುದು ಮಾತ್ರವಲ್ಲದೇ ಅದು ಸದ್ಯದಲ್ಲಿ ಇಳಿಯಬಹುದು ಎನ್ನುವ ನಿರೀಕ್ಷೆಯೂ ಕಾಣಿಸುತ್ತಿಲ್ಲ. ಹಾಗಾಗಿ, ಸರ್ಕಾರ ಭರಿಸಬೇಕಾದ ತೈಲ ಆಮದಿನ ಖರ್ಚು ತುಂಬಾ ಏರುತ್ತಿದೆ. ಅಂದರೆ, ಈ ವರ್ಷದ ಬಜೆಟ್ ಲೆಕ್ಕಾಚಾರ ಬುಡಮೇಲು ಆಗಿ ಸಾಲದ ಪ್ರಮಾಣ ಮತ್ತೆ ಏರಬಹುದು ಎನ್ನುವ ಸ್ಥಿತಿ ಇದೆ. ಈಗಾಗಲೇ ಅಮೆರಿಕವು ರಷ್ಯಾ ತೈಲ ಆಮದಿನ ಕಾರಣಕ್ಕಾಗಿ ನಮಗೆ ಹಲವು ಸಮಸ್ಯೆಗಳನ್ನು ಒಡ್ಡಿದ ಮೇಲೆ ಈಗ ರಷ್ಯಾ ತೈಲ ಕೂಡ ಸುಲಭದಲ್ಲಿ ಬರುತ್ತಿಲ್ಲ ಮತ್ತು ಬಂದರೂ ಅದರಲ್ಲಿ ವರಮಾನ ಮೊದಲಿಗಿಂತ ಕಡಿಮೆಯಾಗಿದೆ.</p>.<p>ಎರಡನೆಯದಾಗಿ, ತೈಲ ಆಮದಿಗೆ ನಾವು ಡಾಲರ್ ಕೊಡಬೇಕಾಗಿ ಬರುವಾಗ ನಮ್ಮ ವಿದೇಶಿ ವಿನಿಮಯದ ಸಂಗ್ರಹ ಕಡಿಮೆಯಾಗುತ್ತಿರುವುದು ಸ್ಪಷ್ಟ. ಅಲ್ಲದೇ ಡಾಲರ್ ಬೇಡಿಕೆ ನಮ್ಮ ಮಟ್ಟಿಗೆ ಏರಿಕೆಯಾದಂತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಬಂದು, ಈಗ ಅದು ₹96ರ ಆಸುಪಾಸಿನಲ್ಲಿದೆ. ಇದಕ್ಕೆ ಇನ್ನೊಂದು ಕಾರಣ, ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟಕ್ಕೆ ಅಡ್ಡಿಯಾಗಿರುವುದು. ಹಡಗುಗಳ ಸಂಚಾರದಲ್ಲಿ ಕಡಿತ ಆಗಿರುವುದರಿಂದ ನಮಗೆ ರಫ್ತು ಮಾಡಲೂ ತೊಡಕಾಗಿದೆ. ಸಹಜವಾಗಿಯೇ ಇದು ಡಾಲರ್ ಬೇಡಿಕೆಯನ್ನು ಹೆಚ್ಚಿಸಿದೆ.</p>.<p>ಮೂರನೆಯದಾಗಿ, ತೈಲದ ದರ ಏರಿಕೆಯ ಜತೆ ಸರಬರಾಜು ಕೂಡ ಸಂಕಷ್ಟದಲ್ಲಿ ಇರುವ ಕಾರಣ ನಿತ್ಯದ ತೈಲ ಬೇಡಿಕೆ ಪೂರೈಸುವುದೂ ಸರ್ಕಾರದ ಎದುರಿನ ದೊಡ್ಡ ಸವಾಲು. ಎಚ್ಚರಿಕೆ ವಹಿಸಿಲ್ಲವಾದರೆ ನಮ್ಮ ತೈಲ ಸಂಗ್ರಹದಿಂದ ಪೂರೈಕೆ ಮಾಡಬೇಕಾಗಬಹುದು. ಹಾಗಾದರೆ, ಅದು ಅಪಾಯಕಾರಿ. ಅಲ್ಲದೇ ನಮ್ಮ ತೈಲ ದಾಸ್ತಾನು ಚೀನಾದಂತಹ ದೇಶಕ್ಕೆ ಹೋಲಿಸಿದರೆ ಬಹಳ ಕಡಿಮೆ.</p>.<p>ಈ ಎಲ್ಲ ಕಾರಣಕ್ಕಾಗಿ ಪ್ರಧಾನಿಯವರು ಜನರೇ ಸಹಕಾರ ನೀಡಿ ತೈಲ ಬೇಡಿಕೆಯನ್ನು ಕಡಿತಗೊಳಿಸಿದರೆ ದೇಶಕ್ಕೆ ಅನುಕೂಲ ಸ್ಥಿತಿ ಲಭ್ಯ ಆಗುವುದನ್ನು ಮನಗಂಡು ತಮ್ಮ ಜನಪ್ರಿಯತೆಯನ್ನು ಉಪಯೋಗಿಸಿ ಜನ ಬೆಂಬಲಕ್ಕೆ ವಿನಂತಿ ಮಾಡಿರುವುದು ಸಕಾರಾತ್ಮಕ ಬೆಳವಣಿಗೆ.</p>.<p>ಆ ಕಾರಣಕ್ಕಾಗಿ ಸಾರ್ವಜನಿಕ ಸಾರಿಗೆ ಬಳಕೆ, ಕಾರು ಪೂಲಿಂಗ್ ಮೂಲಕ ಆರ್ಥಿಕತೆಗೆ ಸಾಮಾನ್ಯ ನಾಗರಿಕ ಕೂಡ ಅಳಿಲು ಸೇವೆ ಮಾಡಿದಂತಾಗುವುದು. ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಂ–ಡಬ್ಲ್ಯುಎಫ್ಎಚ್) ಅನ್ನುವ ಮಾದರಿ ಅಂದು ಕೋವಿಡ್ ಕಾಲದಲ್ಲಿ ಕಂಪನಿಗಳು ತಮ್ಮ ಚಟುವಟಿಕೆಯನ್ನು ನಿಲ್ಲಿಸದೇ ಮುಂದುವರಿಸುವಲ್ಲಿ ಬಹಳ ದೊಡ್ಡ ಕೊಡುಗೆ ನೀಡಿತ್ತು. ಅದಿಲ್ಲವಾಗಿದ್ರೆ ಆ ಸಮಯದಲ್ಲಿ ನಮ್ಮ ಐಟಿ ಕೆಲಸಗಳು ಬಹಳ ಮುದುಡಿ ಹೋಗಿ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳುತ್ತಿತ್ತು. ಈಗ ಮತ್ತೆ ಮನೆಯಿಂದ ಕೆಲಸ ಮಾಡುವ ಮಾದರಿ ಅನುಸರಿಸಿದರೆ, ತೈಲ ಆಮದಿನ ಹೊರೆಯನ್ನು ಕಡಿಮೆ ಮಾಡುವಲ್ಲಿ ಅನುಕೂಲ ಆಗಬಹುದು.</p>.<p>ಚಿನ್ನದ ಆಮದು ದೇಶದ ವಿದೇಶಿ ವಿನಿಮಯದ ಹೊರಹರಿವನ್ನು ಹೆಚ್ಚು ಮಾಡುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುವುದನ್ನು ಕಡಿಮೆ ಮಾಡಬೇಕಾದರೆ ಡಾಲರ್ ಅನ್ನು ನೇರವಾಗಿ ಬೇಡುವ ಚಿನ್ನದ ಆಮದು ಹಾಗೂ ವಿದೇಶಿ ಪ್ರವಾಸಗಳನ್ನು ಹತೋಟಿಗೆ ತರಬೇಕು. ಇದು ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ.</p>.<p>ಅರ್ಥಶಾಸ್ತ್ರದ ಪ್ರಕಾರ, ಕೆಲವು ಬಾರಿ ದೊಡ್ಡ ಗಂಡಾಂತರಗಳು ಬಂದಾಗ ವ್ಯವಸ್ಥೆ ಸುಧಾರಣೆಗೆ ಅನುಕೂಲ ಹಾಗೂ ಹಳೆಯ ವ್ಯವಸ್ಥೆಗಳು ಬದಲಾಗಲು ಒಳ್ಳೆಯ ಅವಕಾಶ. ಇದನ್ನು ‘ಕ್ರಿಯೇಟಿವ್ ಡಿಸ್ಟ್ರಕ್ಷನ್’ (Creative Destruction- ಹೊಸದರ ಸೃಷ್ಟಿಗೆ ಹಳೆಯದರ ನಿರ್ಮೂಲನೆ) ಎಂದು ಕರೆಯುತ್ತಾರೆ.</p>.<p>ಭಾರತದ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಅತಿಯಾಗಿದೆ. ಇದು ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಹಾಗೂ ನಮ್ಮ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ತೊಡಕಾಗಿದೆ. ಹಾಗಾಗಿ ಈಗ ತೈಲ ಬೆಲೆ ಏರಿಕೆಯ ಕಾರಣಕ್ಕಾಗಿ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಿದಾಗ ತೈಲ ಬೇಡಿಕೆಯೂ ಹತೋಟಿಗೆ ಬರುತ್ತದೆ. ಜತೆಯಲ್ಲಿ ಸುಧಾರಿತ ಅಥವಾ ಸುಸ್ಥಿರ ಕೃಷಿಗೆ ಒಂದು ಹೊಸ ಅವಕಾಶ ಆಗಬಹುದು. ಆ ಹಿನ್ನೆಲೆಯಲ್ಲಿ ಕೃಷಿಕರು ರಸಗೊಬ್ಬರಗಳನ್ನು ಎಷ್ಟರ ಮಟ್ಟಕ್ಕೆ ತ್ಯಜಿಸಲು ಮುಂದೆ ಬರುತ್ತಾರೆ ಅನ್ನೋದು ಕುತೂಹಲಕಾರಿ. ಆದರೆ, ಇಂದಿನಂತೆ ರಸಗೊಬ್ಬರಗಳಿಗೆ ಪರ್ಯಾಯವಾದ ಬದಲಿ ಗೊಬ್ಬರಗಳು ಇನ್ನೂ ಸಾಕಷ್ಟು ಚಾಲ್ತಿ ಆಗದಿರುವ ಕಾರಣ ರೈತರಿಗೆ ಈ ಬದಲಾವಣೆಯಿಂದ ಸ್ವಲ್ಪ ಮಟ್ಟಿಗೆ ಕಷ್ಟವೂ ಆದೀತು.</p>.<p>ಇದೇ ರೀತಿ, ವೆಚ್ಚ ಸ್ಪರ್ಧಾತ್ಮಕತೆಯ (Cost Competitiveness) ಕಾರಣಕ್ಕಾಗಿ ನಾವು ತಾಳೆ ಎಣ್ಣೆ ಸಹಿತ ವಿದೇಶಿ ಅಡುಗೆ ಎಣ್ಣೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಿದ್ದೇವೆ. ಈ ಕಾರಣದಿಂದ ನಮ್ಮಲ್ಲಿ ಎಣ್ಣೆಕಾಳು ಬೆಳೆಗಾಗಿ ಮೀಸಲಾಗಿದ್ದ ಗದ್ದೆಗಳಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಇತರ ಕೃಷಿಗಳನ್ನು ಮಾಡಲಾಗುತ್ತಿದೆ. ದೇಶದ ಅಡುಗೆ ಎಣ್ಣೆ ಉತ್ಪಾದನೆಯ ಕೃಷಿ ಪದ್ದತಿಯನ್ನು ಸುಧಾರಣೆ ಮಾಡಿದರೆ ನಾವು ಎಣ್ಣೆ ಆಮದು ಮಾಡುವುದರ ಬದಲು ಸುಲಭವಾಗಿ ಮಾತ್ರವಲ್ಲ, ದೊಡ್ಡ ಪ್ರಮಾಣದಲ್ಲಿ ರಫ್ತನ್ನೂ ಮಾಡಬಹುದು.</p>.<p>ಚುಟುಕಾಗಿ ಹೇಳುವುದಾದರೆ, ನಮ್ಮ ಆರ್ಥಿಕತೆಯ ತಕ್ಷಣದ ಸವಾಲುಗಳೆಂದರೆ,</p>.<p>1) ಹಲವು ಯುದ್ಧಗಳ ಕಾರಣ ಎಲ್ಲ ಕಡೆ ಪೂರೈಕೆ ವ್ಯವಸ್ಥೆಯಲ್ಲಿ ಆಗಿರುವ ಅಡಚಣೆ (supply chain blockage)</p>.<p>2) ಆಮದು ಮತ್ತು ರಫ್ತಿನಲ್ಲಿ ತೀವ್ರ ಅಸಮತೋಲನ</p>.<p>3) ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಮತ್ತೆ ಸ್ಥಿರತೆಗೆ ತರುವುದು</p>.<p>4) ಈ ಮೂರು ಕಾರಣಗಳಿಂದ ಬರಬಹುದಾದ ತೀವ್ರ ಬೆಲೆ ಏರಿಕೆಯನ್ನು (inflationary pressure) ಮುಂದಾಗಿ ಹತೋಟಿ ಮಾಡುವುದು</p>.<p>5) ಇಂಧನದ ತೀವ್ರ ಪರಾವಲಂಬಿತನವನ್ನು ಕಡಿಮೆ ಮಾಡುವುದು.</p>.<p>ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಾಡಿದ ವಿನಂತಿಗಳು ಪ್ರಥಮ ಹೆಜ್ಜೆಗಳು ಎಂದರೆ ತಪ್ಪಾಗಲಾರದು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-51-590340418</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಲ್ಲಿ ಯುದ್ಧದ ಕಾರಣಕ್ಕಾಗಿ ಜಾಗತಿಕ ಆರ್ಥಿಕತೆ ತಲ್ಲಣಗೊಂಡಿದೆ. ಅದರಲ್ಲೂ ತೈಲ ಬೇಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಆಮದಿನ ಮೂಲಕವೇ ಪೂರೈಸುವ ದೇಶಗಳಿಗೆ ಈ ಒತ್ತಡ ಅಗಾಧ. ಈ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆಯ ಮೇಲೆ ಕೊಲ್ಲಿ ಯುದ್ಧ ಪ್ರತಿಕೂಲ ಪರಿಣಾಮ ಬೀರಿದೆ. ಭಾರತದ ತೈಲ ಆಮದು ಒಟ್ಟು ಬೇಡಿಕೆಯ ಅಂದಾಜು ಶೇ 90ರಷ್ಟು ಇರುವುದರ ಜತೆಗೆ ದೇಶದ ಒಟ್ಟು ಆಮದಿನಲ್ಲಿ ತೈಲದ ಪಾಲು ಬಹಳ ದೊಡ್ಡದಾದ ಕಾರಣ ಆರ್ಥಿಕತೆಯ ಮೇಲೆ ಒತ್ತಡವನ್ನು ಸೃಷ್ಟಿ ಮಾಡುತ್ತದೆ.</p>.<p>ಸರ್ಕಾರಗಳು ಇಂಥ ಸಮಯದಲ್ಲಿ ಅನಿವಾರ್ಯವಾಗಿ 1) ಬೆಲೆ ಏರಿಕೆ 2) ವಸ್ತುಗಳ ಪಡಿತರ ಹಾಗೂ 3) ಆಮದು ಶುಲ್ಕ ಹಾಕುವುದು ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮೇಲಿನ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಮೊದಲು, ಆರೇಳು ವಿನಂತಿಗಳನ್ನು ದೇಶದ ಮುಂದೆ ಇಡುವ ಮೂಲಕ ರಾಜಕೀಯವಾಗಿ ಸವಾಲು ಎನಿಸಿದರೂ ತಮ್ಮ ಜನಪ್ರಿಯತೆಯನ್ನು ಪಣವಾಗಿ ಇಡುವ ಧೈರ್ಯ ಮಾಡಿದ್ದಾರೆ. ಇದಕ್ಕೆ ಜನ ಪೂರಕವಾಗಿ ಸ್ಪಂದಿಸಿ, ಪರಿಸ್ಥಿತಿಯ ಮೇಲೆ ಸ್ವಲ್ಪ ಹತೋಟಿ ದೊರೆತರೆ ನಂತರ ಅನಿವಾರ್ಯ ಎನಿಸಿದರೆ ಮೇಲಿನ ಹೆಜ್ಜೆಗಳನ್ನು ತೆಗೆದುಕೊಳ್ಳುವ ಯೋಚನೆ ಮಾಡಿದ್ದಾರೆ.</p>.<p>ಪ್ರಸಿದ್ಧ ಅರ್ಥಶಾಸ್ತ್ರಜ್ಞ ಗುನ್ನಾರ್ ಮೈರ್ಡಾಲ್, ‘ಆರ್ಥಿಕ ನೀತಿಗಳ ಮೇಲೆ ಸ್ವಾಭಾವಿಕವಾಗಿಯೇ ರಾಜಕೀಯದ ಪ್ರಭಾವ ಹೆಚ್ಚು ಇರುವ ಕಾರಣ, ಅದು ಪರಿಪೂರ್ಣ ಪಲಿತಾಂಶ ಕೊಡಲು ವಿಫಲ ಆಗುತ್ತದೆ ಹಾಗೂ ಆ ಸಮಯದಲ್ಲಿ ಅರ್ಥಶಾಸ್ತ್ರವನ್ನು ವಿಜ್ಞಾನ ಎಂದು ಕರೆಯುವುದು ಕಷ್ಟ ಎನಿಸುತ್ತದೆ’ ಎಂದು ಹೇಳಿದ್ದರು. ರಾಜಕೀಯ ನಾಯಕರು ಗಣನೀಯ ಆರ್ಥಿಕ ಸಲಹೆಗಳ ಬಗ್ಗೆ ಮೊದಲಿಗೆ ರಾಜಕೀಯ ಲಾಭನಷ್ಟಗಳ ದೃಷ್ಟಿಯಲ್ಲಿ ತುಲನೆ ಮಾಡಿ ನಂತರ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಇದಕ್ಕೆ ಕಾರಣ. ಆದರೆ, ಮೋದಿ ಅವರು ಅಂದು ಅಡುಗೆ ಅನಿಲ (ಎಲ್ಪಿಜಿ) ಸಬ್ಸಿಡಿ ಬಿಡಿ ಎಂದು ವಿನಂತಿ ಮಾಡಿದಾಗ ಸಿಕ್ಕ ಬಹು ದೊಡ್ಡ ಬೆಂಬಲದ ರೀತಿಯಲ್ಲಿ ಈ ಬಾರಿಯೂ ಜನರಿಂದ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದಾರೆ.</p>.<p>ಹಾಗಾದರೆ, ಕೊಲ್ಲಿ ಯುದ್ಧ ಯಾವ ರೀತಿಯಲ್ಲಿ ನಮ್ಮ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತಿದೆ ಎನ್ನುವುದನ್ನು ವಿಶ್ಲೇಷಣೆ ಮಾಡುವುದು ಸೂಕ್ತ. ಕೋವಿಡ್ ಸಮಯದಲ್ಲಿ ಅನಿವಾರ್ಯವಾಗಿ ವಿತ್ತೀಯ ಕೊರತೆಯನ್ನು ಹೆಚ್ಚುವರಿ ಸಾಲಗಳ ಮೂಲಕ ಸರ್ಕಾರ ಏರಿಸಬೇಕಾಗಿ ಬಂದಿತ್ತು. 2023ರ ನಂತರ ಸರ್ಕಾರ ವಿತ್ತೀಯ ಶಿಸ್ತು (fiscal discipline) ಪಾಲನೆಯ ದೃಢಸಂಕಲ್ಪ ಮಾಡಿ ಸಾಲದ ಪ್ರಮಾಣವನ್ನು ಕಡಿತಗೊಳಿಸುತ್ತಾ ಬಂದಿದೆ. ಶೇ 7ಕ್ಕಿಂತಲೂ ಮೇಲೆ ಹೋಗಿದ್ದ ವಿತ್ತೀಯ ಕೊರತೆಯನ್ನು ಈ ವರ್ಷ ಶೇ 4.4ಕ್ಕೆ ಇಳಿಸಿದೆ. ರಾಜಕೀಯವಾಗಿ ಇದು ಪೂರಕ ಅಲ್ಲವಾದರೂ ಸರ್ಕಾರ ಇದರಲ್ಲಿ ಯಾವುದೇ ರಾಜಿಗೆ ಹೋಗಿಲ್ಲ.</p>.<p>ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗಿರುವುದು ಮಾತ್ರವಲ್ಲದೇ ಅದು ಸದ್ಯದಲ್ಲಿ ಇಳಿಯಬಹುದು ಎನ್ನುವ ನಿರೀಕ್ಷೆಯೂ ಕಾಣಿಸುತ್ತಿಲ್ಲ. ಹಾಗಾಗಿ, ಸರ್ಕಾರ ಭರಿಸಬೇಕಾದ ತೈಲ ಆಮದಿನ ಖರ್ಚು ತುಂಬಾ ಏರುತ್ತಿದೆ. ಅಂದರೆ, ಈ ವರ್ಷದ ಬಜೆಟ್ ಲೆಕ್ಕಾಚಾರ ಬುಡಮೇಲು ಆಗಿ ಸಾಲದ ಪ್ರಮಾಣ ಮತ್ತೆ ಏರಬಹುದು ಎನ್ನುವ ಸ್ಥಿತಿ ಇದೆ. ಈಗಾಗಲೇ ಅಮೆರಿಕವು ರಷ್ಯಾ ತೈಲ ಆಮದಿನ ಕಾರಣಕ್ಕಾಗಿ ನಮಗೆ ಹಲವು ಸಮಸ್ಯೆಗಳನ್ನು ಒಡ್ಡಿದ ಮೇಲೆ ಈಗ ರಷ್ಯಾ ತೈಲ ಕೂಡ ಸುಲಭದಲ್ಲಿ ಬರುತ್ತಿಲ್ಲ ಮತ್ತು ಬಂದರೂ ಅದರಲ್ಲಿ ವರಮಾನ ಮೊದಲಿಗಿಂತ ಕಡಿಮೆಯಾಗಿದೆ.</p>.<p>ಎರಡನೆಯದಾಗಿ, ತೈಲ ಆಮದಿಗೆ ನಾವು ಡಾಲರ್ ಕೊಡಬೇಕಾಗಿ ಬರುವಾಗ ನಮ್ಮ ವಿದೇಶಿ ವಿನಿಮಯದ ಸಂಗ್ರಹ ಕಡಿಮೆಯಾಗುತ್ತಿರುವುದು ಸ್ಪಷ್ಟ. ಅಲ್ಲದೇ ಡಾಲರ್ ಬೇಡಿಕೆ ನಮ್ಮ ಮಟ್ಟಿಗೆ ಏರಿಕೆಯಾದಂತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಬಂದು, ಈಗ ಅದು ₹96ರ ಆಸುಪಾಸಿನಲ್ಲಿದೆ. ಇದಕ್ಕೆ ಇನ್ನೊಂದು ಕಾರಣ, ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟಕ್ಕೆ ಅಡ್ಡಿಯಾಗಿರುವುದು. ಹಡಗುಗಳ ಸಂಚಾರದಲ್ಲಿ ಕಡಿತ ಆಗಿರುವುದರಿಂದ ನಮಗೆ ರಫ್ತು ಮಾಡಲೂ ತೊಡಕಾಗಿದೆ. ಸಹಜವಾಗಿಯೇ ಇದು ಡಾಲರ್ ಬೇಡಿಕೆಯನ್ನು ಹೆಚ್ಚಿಸಿದೆ.</p>.<p>ಮೂರನೆಯದಾಗಿ, ತೈಲದ ದರ ಏರಿಕೆಯ ಜತೆ ಸರಬರಾಜು ಕೂಡ ಸಂಕಷ್ಟದಲ್ಲಿ ಇರುವ ಕಾರಣ ನಿತ್ಯದ ತೈಲ ಬೇಡಿಕೆ ಪೂರೈಸುವುದೂ ಸರ್ಕಾರದ ಎದುರಿನ ದೊಡ್ಡ ಸವಾಲು. ಎಚ್ಚರಿಕೆ ವಹಿಸಿಲ್ಲವಾದರೆ ನಮ್ಮ ತೈಲ ಸಂಗ್ರಹದಿಂದ ಪೂರೈಕೆ ಮಾಡಬೇಕಾಗಬಹುದು. ಹಾಗಾದರೆ, ಅದು ಅಪಾಯಕಾರಿ. ಅಲ್ಲದೇ ನಮ್ಮ ತೈಲ ದಾಸ್ತಾನು ಚೀನಾದಂತಹ ದೇಶಕ್ಕೆ ಹೋಲಿಸಿದರೆ ಬಹಳ ಕಡಿಮೆ.</p>.<p>ಈ ಎಲ್ಲ ಕಾರಣಕ್ಕಾಗಿ ಪ್ರಧಾನಿಯವರು ಜನರೇ ಸಹಕಾರ ನೀಡಿ ತೈಲ ಬೇಡಿಕೆಯನ್ನು ಕಡಿತಗೊಳಿಸಿದರೆ ದೇಶಕ್ಕೆ ಅನುಕೂಲ ಸ್ಥಿತಿ ಲಭ್ಯ ಆಗುವುದನ್ನು ಮನಗಂಡು ತಮ್ಮ ಜನಪ್ರಿಯತೆಯನ್ನು ಉಪಯೋಗಿಸಿ ಜನ ಬೆಂಬಲಕ್ಕೆ ವಿನಂತಿ ಮಾಡಿರುವುದು ಸಕಾರಾತ್ಮಕ ಬೆಳವಣಿಗೆ.</p>.<p>ಆ ಕಾರಣಕ್ಕಾಗಿ ಸಾರ್ವಜನಿಕ ಸಾರಿಗೆ ಬಳಕೆ, ಕಾರು ಪೂಲಿಂಗ್ ಮೂಲಕ ಆರ್ಥಿಕತೆಗೆ ಸಾಮಾನ್ಯ ನಾಗರಿಕ ಕೂಡ ಅಳಿಲು ಸೇವೆ ಮಾಡಿದಂತಾಗುವುದು. ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಂ–ಡಬ್ಲ್ಯುಎಫ್ಎಚ್) ಅನ್ನುವ ಮಾದರಿ ಅಂದು ಕೋವಿಡ್ ಕಾಲದಲ್ಲಿ ಕಂಪನಿಗಳು ತಮ್ಮ ಚಟುವಟಿಕೆಯನ್ನು ನಿಲ್ಲಿಸದೇ ಮುಂದುವರಿಸುವಲ್ಲಿ ಬಹಳ ದೊಡ್ಡ ಕೊಡುಗೆ ನೀಡಿತ್ತು. ಅದಿಲ್ಲವಾಗಿದ್ರೆ ಆ ಸಮಯದಲ್ಲಿ ನಮ್ಮ ಐಟಿ ಕೆಲಸಗಳು ಬಹಳ ಮುದುಡಿ ಹೋಗಿ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳುತ್ತಿತ್ತು. ಈಗ ಮತ್ತೆ ಮನೆಯಿಂದ ಕೆಲಸ ಮಾಡುವ ಮಾದರಿ ಅನುಸರಿಸಿದರೆ, ತೈಲ ಆಮದಿನ ಹೊರೆಯನ್ನು ಕಡಿಮೆ ಮಾಡುವಲ್ಲಿ ಅನುಕೂಲ ಆಗಬಹುದು.</p>.<p>ಚಿನ್ನದ ಆಮದು ದೇಶದ ವಿದೇಶಿ ವಿನಿಮಯದ ಹೊರಹರಿವನ್ನು ಹೆಚ್ಚು ಮಾಡುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುವುದನ್ನು ಕಡಿಮೆ ಮಾಡಬೇಕಾದರೆ ಡಾಲರ್ ಅನ್ನು ನೇರವಾಗಿ ಬೇಡುವ ಚಿನ್ನದ ಆಮದು ಹಾಗೂ ವಿದೇಶಿ ಪ್ರವಾಸಗಳನ್ನು ಹತೋಟಿಗೆ ತರಬೇಕು. ಇದು ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ.</p>.<p>ಅರ್ಥಶಾಸ್ತ್ರದ ಪ್ರಕಾರ, ಕೆಲವು ಬಾರಿ ದೊಡ್ಡ ಗಂಡಾಂತರಗಳು ಬಂದಾಗ ವ್ಯವಸ್ಥೆ ಸುಧಾರಣೆಗೆ ಅನುಕೂಲ ಹಾಗೂ ಹಳೆಯ ವ್ಯವಸ್ಥೆಗಳು ಬದಲಾಗಲು ಒಳ್ಳೆಯ ಅವಕಾಶ. ಇದನ್ನು ‘ಕ್ರಿಯೇಟಿವ್ ಡಿಸ್ಟ್ರಕ್ಷನ್’ (Creative Destruction- ಹೊಸದರ ಸೃಷ್ಟಿಗೆ ಹಳೆಯದರ ನಿರ್ಮೂಲನೆ) ಎಂದು ಕರೆಯುತ್ತಾರೆ.</p>.<p>ಭಾರತದ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಅತಿಯಾಗಿದೆ. ಇದು ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಹಾಗೂ ನಮ್ಮ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ತೊಡಕಾಗಿದೆ. ಹಾಗಾಗಿ ಈಗ ತೈಲ ಬೆಲೆ ಏರಿಕೆಯ ಕಾರಣಕ್ಕಾಗಿ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಿದಾಗ ತೈಲ ಬೇಡಿಕೆಯೂ ಹತೋಟಿಗೆ ಬರುತ್ತದೆ. ಜತೆಯಲ್ಲಿ ಸುಧಾರಿತ ಅಥವಾ ಸುಸ್ಥಿರ ಕೃಷಿಗೆ ಒಂದು ಹೊಸ ಅವಕಾಶ ಆಗಬಹುದು. ಆ ಹಿನ್ನೆಲೆಯಲ್ಲಿ ಕೃಷಿಕರು ರಸಗೊಬ್ಬರಗಳನ್ನು ಎಷ್ಟರ ಮಟ್ಟಕ್ಕೆ ತ್ಯಜಿಸಲು ಮುಂದೆ ಬರುತ್ತಾರೆ ಅನ್ನೋದು ಕುತೂಹಲಕಾರಿ. ಆದರೆ, ಇಂದಿನಂತೆ ರಸಗೊಬ್ಬರಗಳಿಗೆ ಪರ್ಯಾಯವಾದ ಬದಲಿ ಗೊಬ್ಬರಗಳು ಇನ್ನೂ ಸಾಕಷ್ಟು ಚಾಲ್ತಿ ಆಗದಿರುವ ಕಾರಣ ರೈತರಿಗೆ ಈ ಬದಲಾವಣೆಯಿಂದ ಸ್ವಲ್ಪ ಮಟ್ಟಿಗೆ ಕಷ್ಟವೂ ಆದೀತು.</p>.<p>ಇದೇ ರೀತಿ, ವೆಚ್ಚ ಸ್ಪರ್ಧಾತ್ಮಕತೆಯ (Cost Competitiveness) ಕಾರಣಕ್ಕಾಗಿ ನಾವು ತಾಳೆ ಎಣ್ಣೆ ಸಹಿತ ವಿದೇಶಿ ಅಡುಗೆ ಎಣ್ಣೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಿದ್ದೇವೆ. ಈ ಕಾರಣದಿಂದ ನಮ್ಮಲ್ಲಿ ಎಣ್ಣೆಕಾಳು ಬೆಳೆಗಾಗಿ ಮೀಸಲಾಗಿದ್ದ ಗದ್ದೆಗಳಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಇತರ ಕೃಷಿಗಳನ್ನು ಮಾಡಲಾಗುತ್ತಿದೆ. ದೇಶದ ಅಡುಗೆ ಎಣ್ಣೆ ಉತ್ಪಾದನೆಯ ಕೃಷಿ ಪದ್ದತಿಯನ್ನು ಸುಧಾರಣೆ ಮಾಡಿದರೆ ನಾವು ಎಣ್ಣೆ ಆಮದು ಮಾಡುವುದರ ಬದಲು ಸುಲಭವಾಗಿ ಮಾತ್ರವಲ್ಲ, ದೊಡ್ಡ ಪ್ರಮಾಣದಲ್ಲಿ ರಫ್ತನ್ನೂ ಮಾಡಬಹುದು.</p>.<p>ಚುಟುಕಾಗಿ ಹೇಳುವುದಾದರೆ, ನಮ್ಮ ಆರ್ಥಿಕತೆಯ ತಕ್ಷಣದ ಸವಾಲುಗಳೆಂದರೆ,</p>.<p>1) ಹಲವು ಯುದ್ಧಗಳ ಕಾರಣ ಎಲ್ಲ ಕಡೆ ಪೂರೈಕೆ ವ್ಯವಸ್ಥೆಯಲ್ಲಿ ಆಗಿರುವ ಅಡಚಣೆ (supply chain blockage)</p>.<p>2) ಆಮದು ಮತ್ತು ರಫ್ತಿನಲ್ಲಿ ತೀವ್ರ ಅಸಮತೋಲನ</p>.<p>3) ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಮತ್ತೆ ಸ್ಥಿರತೆಗೆ ತರುವುದು</p>.<p>4) ಈ ಮೂರು ಕಾರಣಗಳಿಂದ ಬರಬಹುದಾದ ತೀವ್ರ ಬೆಲೆ ಏರಿಕೆಯನ್ನು (inflationary pressure) ಮುಂದಾಗಿ ಹತೋಟಿ ಮಾಡುವುದು</p>.<p>5) ಇಂಧನದ ತೀವ್ರ ಪರಾವಲಂಬಿತನವನ್ನು ಕಡಿಮೆ ಮಾಡುವುದು.</p>.<p>ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಾಡಿದ ವಿನಂತಿಗಳು ಪ್ರಥಮ ಹೆಜ್ಜೆಗಳು ಎಂದರೆ ತಪ್ಪಾಗಲಾರದು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-51-590340418</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>