ಈ ವರ್ಷ ನಡೆದ 74ನೇ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾರತವು ತನ್ನ ಮಿಲಿಟರಿ ಶಕ್ತಿಯ ಜೊತೆಗೆ ಸಾಂಸ್ಕೃತಿಕ ಪರಂಪರೆಯನ್ನೂ ಪ್ರದರ್ಶಿಸಿತ್ತು. ಈ ಪರೇಡ್ನಲ್ಲಿ, ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ತ್ರಿಪುರದ ಕೋಷ್ಟಕಗಳಲ್ಲಿ ‘ನಾರಿ ಶಕ್ತಿ’ ಪ್ರಮುಖ ವಿಷಯವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಈಚೆಗಷ್ಟೇ ಇದೇ ಪ್ರಥಮ ಬಾರಿಗೆ ಭಾರತೀಯ ಸೇನೆಯು ಐವರು ಮಹಿಳಾ ಅಧಿಕಾರಿಗಳನ್ನು ತನ್ನ ಫಿರಂಗಿ ದಳಕ್ಕೆ ನೇಮಕ ಮಾಡಿಕೊಂಡಿದೆ.