2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲು ವಿರೋಧ ಪಕ್ಷಗಳ ಒಗ್ಗೂಡಿಕೆ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ನಿತೀಶ್ ಕುಮಾರ್ ವಿರೋಧ ಪಕ್ಷದ ನಾಯಕರುಗಳನ್ನು ಭೇಟಿಯಾಗುತ್ತಿದ್ದಾರೆ. ಮಮತಾ ಬ್ಯಾನರ್ಜಿ ಕೂಡ ನಿತೀಶ್ ಕುಮಾರ್ ಹಾದಿಯಲ್ಲಿಯೇ ವಿರೋಧ ಪಕ್ಷದ ಒಗ್ಗೂಡಿಕೆ ಪ್ರಯತ್ನಿಸುತ್ತಿದ್ದಾರೆ.